‘ಫಿನಾಲೆಗೆ ವಿನಯ್​ ಬರಬಾರದು’: ಸುದೀಪ್​ ಮುಂದೆ ಪೂರ್ತಿ ಅಸಮಾಧಾನ ಹೊರಹಾಕಿದ ಸಂಗೀತಾ

‘ವಿನಯ್​ ಅವರಿಂದ ಆಟ ಹಾಳಾಗಿದೆ. ಇಂಥ ವ್ಯಕ್ತಿತ್ವದವರನ್ನು ಬಿಗ್​ ಬಾಸ್​ ವಿನ್ನರ್​ ಆಗಿ ನೋಡಲು ನಾನು ಇಷ್ಟಪಡುವುದಿಲ್ಲ. ಫೈನಲಿಸ್ಟ್​ಗಳಲ್ಲಿ ಅವರು ಒಬ್ಬರಾಗಿ ಇರುವುದು ನನಗೆ ಇಷ್ಟ ಇಲ್ಲ’ ಎಂದು ಸಂಗೀತಾ ಶೃಂಗೇರಿ ಅವರು ನೇರವಾಗಿ ಹೇಳಿದ್ದಾರೆ. ಫಿನಾಲೆ ವಾರಕ್ಕೆ ಸಂಗೀತಾ ಈಗಾಗಲೇ ಟಿಕೆಟ್​ ಪಡೆದಿದ್ದಾರೆ.

‘ಫಿನಾಲೆಗೆ ವಿನಯ್​ ಬರಬಾರದು’: ಸುದೀಪ್​ ಮುಂದೆ ಪೂರ್ತಿ ಅಸಮಾಧಾನ ಹೊರಹಾಕಿದ ಸಂಗೀತಾ
ಸಂಗೀತಾ ಶೃಂಗೇರಿ, ವಿನಯ್​ ಗೌಡ
Follow us
|

Updated on: Jan 14, 2024 | 8:39 AM

ಬಿಗ್ ಬಾಸ್​ ಮನೆಯಲ್ಲಿ ಸಂಗೀತಾ ಶೃಂಗೇರಿ ಮತ್ತು ವಿನಯ್​ ಗೌಡ (Vinay Gowda) ಅವರು ಹಲವು ಬಾರಿ ಜಗಳ ಮಾಡಿಕೊಂಡಿದ್ದಾರೆ. ನಡುವೆ ಒಂದಷ್ಟು ದಿನ ಸ್ನೇಹ ಬೆಳೆಸಿಕೊಂಡಿದ್ದ ಅವರು ನಂತರ ಮತ್ತೆ ಕಿತ್ತಾಡಲು ಆರಂಭಿಸಿದರು. ಈಗ ಫಿನಾಲೆ ವಾರ ಹತ್ತಿರ ಆಗಿದೆ. ಸಂಗೀತಾ ಶೃಂಗೇರಿ (Sangeetha Sringeri) ಅವರು ನೇರವಾಗಿ ಫಿನಾಲೆ ವಾರಕ್ಕೆ ಟಿಕೆಟ್​ ಪಡೆದಿದ್ದಾರೆ. ವೀಕೆಂಡ್​ ಪಂಚಾಯ್ತಿಯಲ್ಲಿ ಹೊಸ ವಿಚಾರ ಚರ್ಚೆಗೆ ಬಂದಿದೆ. ‘ಯಾವ ವ್ಯಕ್ತಿ ಫಿನಾಲೆ (Bigg Boss Finale) ತಲುವುದು ನಿಮಗೆ ಇಷ್ಟ ಇಲ್ಲ’ ಎಂದು ಕಿಚ್ಚ ಸುದೀಪ್​ ಎಲ್ಲರಿಗೂ ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಸಂಗೀತಾ ಶೃಂಗೇರಿ ಅವರು ವಿನಯ್​ ಗೌಡ ಹೆಸರು ಹೇಳಿದ್ದಾರೆ. ತಮ್ಮ ಈ ಅಭಿಪ್ರಾಯಕ್ಕೆ ಕಾರಣ ಏನು ಎಂಬುದನ್ನು ಕೂಡ ಅವರು ವಿವರಿಸಿದ್ದಾರೆ.

‘ನನ್ನ ಪ್ರಕಾರ ಬಿಗ್​ ಬಾಸ್​ ಎಂಬುದು ಒಂದು ವ್ಯಕ್ತಿತ್ವದ ಸ್ಪರ್ಧೆ. ಖಂಡಿತವಾಗಿಯೂ ವಿನಯ್​ ಅವರು ಗೇಮ್​ನಲ್ಲಿ ತುಂಬ ಚೆನ್ನಾಗಿ ಆಡಿದ್ದಾರೆ. ಆದರೆ ಅವರು ತಮ್ಮ ಅಭಿಪ್ರಾಯವನ್ನು ಹೇರುತ್ತಾರೆ. ಇದನ್ನು ಮೋಸ ಅಥವಾ ಸ್ಮಾರ್ಟ್​ ಪ್ಲೇ ಅಂತ ಹೇಳಬಹುದು. ಹಲವು ಬಾರಿ ಅನೇಕರ ಮನಸ್ಸು ಬದಲಾಗಿದೆ. ನನಗೆ ಎಮೋಷನಲಿ ತುಂಬ ಪರಿಣಾಮ ಬೀರಿದೆ’ ಎಂದು ಸಂಗೀತಾ ಶೃಂಗೇರಿ ಹೇಳಿದ್ದಾರೆ.

ಇದನ್ನೂ ಓದಿ: ಅರ್ಹರಿಗೇ ಸಿಕ್ತು ಫೈನಲ್ ಟಿಕೆಟ್, ಫೈಟರ್ ಸಂಗೀತಾ ಫಿನಾಲೆಗೆ

‘ಬೇರೆ ಗೇಮ್ಸ್​ ಆಡುವಾಗ ವಿನಯ್​ ಅವರ ಅಗ್ರೆಷನ್​ ಕಾರಣದಿಂದ ಆಟ ಹಾಳಾಗಿದೆ. ಇಂಥ ವ್ಯಕ್ತಿತ್ವದವರನ್ನು ಬಿಗ್​ ಬಾಸ್​ ವಿನ್ನರ್​ ಆಗಿ ನೋಡಲು ನಾನು ಇಷ್ಟಪಡುವುದಿಲ್ಲ. ಫೈನಲಿಸ್ಟ್​ಗಳಲ್ಲಿ ಅವರು ಒಬ್ಬರಾಗಿ ಇರುವುದು ನನಗೆ ಇಷ್ಟ ಇಲ್ಲ’ ಎಂದು ಸಂಗೀತಾ ಶೃಂಗೇರಿ ಅವರು ನೇರವಾಗಿ ಹೇಳಿದ್ದಾರೆ. ಇನ್ನು, ‘ಡ್ರೋನ್​ ಪ್ರತಾಪ್​ ಅವರು ಒಂದು ವಾರ ಕಾದು ನೋಡಬೇಕು. ನಮ್ರತಾ ಗೌಡ ಅವರು ನೇರವಾಗಿ ಫಿನಾಲೆ ವಾರಕ್ಕೆ ಬರಬೇಕು’ ಎಂದು ಸಂಗೀತಾ ಹೇಳಿದ್ದಾರೆ.

ಇದನ್ನೂ ಓದಿ: ಸಂಗೀತಾಗೆ ಫಿನಾಲೆ ಟಿಕೆಟ್ ಜೊತೆ ಮತ್ತೊಂದು ದೊಡ್ಡ ಅಡ್ವಾಂಟೇಜ್ ಕೊಟ್ಟ ಬಿಗ್ ಬಾಸ್

‘ನಮ್ರತಾ ಗೌಡ ತುಂಬ ಸ್ಟ್ರಾಂಗ್ ಆಗಿದ್ದಾರೆ. ಮೊದಲಿನಿಂದ ನನಗೂ ನಮ್ರತಾಗೂ ಆಗಿಬರುತ್ತಿರಲಿಲ್ಲ. ಆದರೆ ಎಲ್ಲೇ ಇದ್ದರೂ ಅವರು ಪ್ರಾಮಾಣಿಕವಾಗಿ ಅಭಿಪ್ರಾಯ ತಿಳಿಸಿದ್ದಾರೆ. ಅವರು ಫೈನಲಿಸ್ಟ್​ ಆಗಲು ಸಾಮರ್ಥ್ಯ ಹೊಂದಿದ್ದಾರೆ’ ಎಂದು ನಮ್ರತಾ ಪರವಾಗಿ ಸಂಗೀತಾ ಮಾತನಾಡಿದ್ದಾರೆ. ಅಂತಿಮವಾಗಿ ಯಾರು ಫಿನಾಲೆಗೆ ತಲುಪುತ್ತಾರೆ? ಟ್ರೋಫಿ ಯಾರಿಗೆ ಸಿಗಲಿದೆ? ರನ್ನರ್​ಅಪ್​ ಯಾರು ಆಗಲಿದ್ದಾರೆ ಎಂಬುದನ್ನು ತಿಳಿಯಲು ಪ್ರೇಕ್ಷಕರು ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?
Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು