ಡ್ರೋನ್ ಪ್ರತಾಪ್​ಗೆ ಫಿನಾಲೆ ಟಿಕೆಟ್ ಕೊಟ್ಟಿಲ್ಲವೇಕೆ? ಸುದೀಪ್ ಕೊಟ್ಟರು ಅಭಿಪ್ರಾಯ

Bigg Boss Kannada: ಟಾಸ್ಕ್​ಗಳಲ್ಲಿ ಹೆಚ್ಚು ಅಂಕ ಗಳಿಸಿದ ಡ್ರೋನ್ ಪ್ರತಾಪ್​ಗೆ ಏಕೆ ನೇರ ಫಿನಾಲೆ ಟಿಕೆಟ್ ನೀಡಲಿಲ್ಲ, ಮತಚಲಾವಣೆ ನಡೆಸಿ ಸಂಗೀತಾಗೆ ಕೊಟ್ಟಿದ್ದೇಕೆ? ಸುದೀಪ್ ಕೊಟ್ಟರು ಸ್ಪಷ್ಟನೆ.

ಡ್ರೋನ್ ಪ್ರತಾಪ್​ಗೆ ಫಿನಾಲೆ ಟಿಕೆಟ್ ಕೊಟ್ಟಿಲ್ಲವೇಕೆ? ಸುದೀಪ್ ಕೊಟ್ಟರು ಅಭಿಪ್ರಾಯ
ಬಿಗ್​ಬಾಸ್
Follow us
|

Updated on:Jan 13, 2024 | 11:55 PM

ಬಿಗ್​ಬಾಸ್ (BiggBoss)​ ಕನ್ನಡ ಸೀಸನ್ 10ರಲ್ಲಿ ಈ ವಾರ ಆಟಗಾರರ ನಡುವೆ ಸ್ಪರ್ಧೆ ಜೋರಾಗಿತ್ತು ಅದಕ್ಕೆ ಕಾರಣ ಫಿನಾಲೆ ಟಿಕೆಟ್. ಈ ವಾರ ಹೆಚ್ಚು ಟಾಸ್ಕ್​ಗಳಲ್ಲಿ ಗೆದ್ದು ಮುಂಚೂಣಿಯಲ್ಲಿರುವವರು ಫಿನಾಲೆಗೆ ನೇರ ಟಿಕೆಟ್ ಪಡೆಯುತ್ತಾರೆಂಬ ಕಾರಣಕ್ಕೆ ಎಲ್ಲರೂ ಸಹ ಶಕ್ತಿ ಮೀರಿ ಆಟ ಆಡಿದರು. ಅಂತಿಮವಾಗಿ ಡ್ರೋನ್ ಪ್ರತಾಪ್ ಅತಿ ಹೆಚ್ಚು ಅಂಕ ಗಳಿಸಿದರು. ಡ್ರೋನ್ ಪ್ರತಾಪ್​ ನೇರವಾಗಿ ಫಿನಾಲೆಗೆ ಹೋದರು ಎಂದು ಮನೆಯ ಸದಸ್ಯರು ಅಂದುಕೊಂಡಿದ್ದರು. ಆದರೆ ಕೊನೆಯಲ್ಲಿ ಟ್ವಿಸ್ಟ್ ಕೊಟ್ಟ ಬಿಗ್​ಬಾಸ್ ಮನೆಯವರಿಂದ ಮತದಾನ ನಡೆಸಿ ಅದರಲ್ಲಿ ಗೆದ್ದ ಸಂಗೀತಾಗೆ ಫಿನಾಲೆ ಟಿಕೆಟ್ ನೀಡಿದರು.

ಈ ಬಗ್ಗೆ ಹೊರಗಡೆ ಹಲವರು ಪ್ರಶ್ನೆ ಮಾಡಿದರು. ವೋಟಿಂಗ್ ಮೂಲಕ ಟಿಕೆಟ್ ನೀಡುವುದಾದರೆ ಟಾಸ್ಕ್ ನಡೆಸಿದ್ದು ಏಕೆ? ಹೆಚ್ಚು ಮತ ಗಳಿಸಿದ ಡ್ರೋನ್ ಪ್ರತಾಪ್​ಗೆ ನೇರವಾಗಿ ಟಿಕೆಟ್ ನೀಡಲಿಲ್ಲ ಏಕೆ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ಶನಿವಾರದ ಎಪಿಸೋಡ್​ಗೆ ಬಂದ ಸುದೀಪ್, ಇದೇ ಪ್ರಶ್ನೆಯನ್ನಿಟ್ಟುಕೊಂಡೇ ಎಪಿಸೋಡ್ ಪ್ರಾರಂಭ ಮಾಡಿದರು.

ಇದನ್ನೂ ಓದಿ:ಆಪ್ತ ಗೆಳೆಯ ವರ್ತೂರು ಸಂತು ಬೆನ್ನಿಗೆ ಚೂರಿ ಹಾಕಿದರೇ ತುಕಾಲಿ ಸಂತೋಷ್?

ಮೊದಲಿಗೆ ಮನೆಯ ಸದಸ್ಯರ ಅಭಿಪ್ರಾಯಗಳನ್ನು ಕೇಳಿದರು. ಆಗ ಡ್ರೋನ್ ಪ್ರತಾಪ್ ಸೇರಿದಂತೆ ಎಲ್ಲರೂ ಬಿಗ್​ಬಾಸ್ ನಿರ್ಣಯ ಸರಿಯಾಗಿಯೇ ಇತ್ತು ಎಂದರು. ಬಹುತೇಕರು, ಪ್ರತಾಪ್ ಇಷ್ಟು ದಿನ ಸರಿಯಾಗಿ ಆಡಲಿಲ್ಲ, ಆದರೆ ಈ ವಾರ ಮಾತ್ರವೇ ಚೆನ್ನಾಗಿ ಆಡಿದರು. ಅವರಿಗೆ ಟಿಕೆಟ್ ಕೊಟ್ಟಿದ್ದರೆ ಮೊದಲಿನಿಂದಲೂ ಚೆನ್ನಾಗಿ ಆಡಿಕೊಂಡು ಬಂದವರಿಗೆ ಅನ್ಯಾಯವಾಗುತ್ತದೆ ಎಂಬ ಅಭಿಪ್ರಾಯ ಮೂಡಿಬಂತು. ಕೇವಲ ಒಂದು ವಾರದ ಪ್ರದರ್ಶನದಿಂದ ಫಿನಾಲೆಗೆ ಹೋಗುವುದು ನ್ಯಾಯವಲ್ಲ ಎನಿಸಿತು ಎಂದು ಹಲವರು ಅಭಿಪ್ರಾಯಪಟ್ಟರು.

ಸುದೀಪ್ ಸಹ ಮಾತನಾಡುತ್ತಾ, ಬಿಗ್​ಬಾಸ್ ಎಂಬುದು ಒಂದು ವಾರದ ಆಟವಷ್ಟೆ ಅಲ್ಲ, ಅಲ್ಲದೇ ಕೇವಲ ಆಟ ಮಾತ್ರವೇ ಅಲ್ಲ ಮನೆಯಲ್ಲಿ ಇಷ್ಟು ದಿನಗಳ ಆಟಗಾರರ ವ್ಯಕ್ತಿತ್ವವೂ ಅದಕ್ಕೆ ಸೇರಿರುತ್ತದೆ. ವೀಕ್ಷಕರ ಅಭಿಪ್ರಾಯದ ಜೊತೆಗೆ, ಮನೆಯ ಒಳಗಿರುವವರ ಅಭಿಪ್ರಾಯವೂ ಮುಖ್ಯವಾಗುತ್ತದೆ. ಅದೆಲ್ಲದಕ್ಕಿಂತಲೂ ಮುಖ್ಯವಾಗಿ, ಬಿಗ್​ಬಾಸ್ ಘೋಷಣೆ ಮಾಡಿದಾಗಲೇ ಹೆಚ್ಚು ಅಂಕ ಗಳಿಸಿದವರಲ್ಲಿ ಒಬ್ಬರು ಫಿನಾಲೆಗೆ ಟಿಕೆಟ್ ಪಡೆಯಲಿದ್ದಾರೆ ಎಂದೇ ಘೋಷಿಸಿದ್ದರು. ಮನೆಯಲ್ಲಿರುವವರಿಗೆ ಹಾಗೂ ಪ್ರೇಕ್ಷಕರಿಗೆ ಈ ಸ್ಪಷ್ಟನೆ ನನಗೆ ಕೊಡಬೇಕು ಅನ್ನಿಸುತ್ತಿದೆ ಹಾಗಾಗಿ ಕೊಡುತ್ತಿದ್ದೇನೆ ಎಂದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:51 pm, Sat, 13 January 24

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!