AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅರ್ಹರಿಗೇ ಸಿಕ್ತು ಫೈನಲ್ ಟಿಕೆಟ್, ಫೈಟರ್ ಸಂಗೀತಾ ಫಿನಾಲೆಗೆ

Bigg Boss Finale: ಬಿಗ್​ಬಾಸ್​ ಮನೆಯ ಈ ವಾರದ ಟಾಸ್ಕ್​ ಅತ್ಯಂತ ಮಹತ್ವದ್ದಾಗಿತ್ತು. ಗೆದ್ದವರು ಫಿನಾಲೆಗೆ ಪ್ರವೇಶ ಪಡೆಯುವವರಿದ್ದರು. ಅದರಂತೆ ಅದ್ಭುತವಾಗಿ ಆಡಿದ ಹಾಗೂ ಅರ್ಹ ಸ್ಪರ್ಧಿಯೂ ಆದ ಸಂಗೀತಾ ನೇರವಾಗಿ ಫಿನಾಲೆಗೆ ಪ್ರವೇಶ ಪಡೆದರು.

ಅರ್ಹರಿಗೇ ಸಿಕ್ತು ಫೈನಲ್ ಟಿಕೆಟ್, ಫೈಟರ್ ಸಂಗೀತಾ ಫಿನಾಲೆಗೆ
ಸಂಗೀತಾ ಶೃಂಗೇರಿ
ಮಂಜುನಾಥ ಸಿ.
|

Updated on: Jan 12, 2024 | 11:24 PM

Share

ಬಿಗ್​ಬಾಸ್ (BiggBoss) ಮನೆಯಲ್ಲಿ ಈ ವಾರ ಅತ್ಯಂತ ರೋಚಕವಾಗಿತ್ತು. ಈ ವಾರ ಟಾಸ್ಕ್​ಗಳು ಸದಸ್ಯರ ಪ್ರತಿಭೆ, ತಾಳ್ಮೆ, ದೈಹಿಕ ಕ್ಷಮತೆ, ಮಾನಸಿಕ ಕ್ಷಮತೆಗಳನ್ನು ಪರೀಕ್ಷೆಗೆ ಒಡ್ಡಿದವು. ಅದರ ಜೊತೆಗೆ ತಂತ್ರ-ಪ್ರತಿತಂತ್ರಕ್ಕೆ ಅವಕಾಶವನ್ನು ನೀಡಿದವು. ಮನೆಯ ಕೆಲ ಸದಸ್ಯರ ನಿಜ ಮುಖಗಳ ಅನಾವರಣ ಮಾಡಿದವು. ಯಾರು ನಿಜವಾಗಿಯೂ ಸ್ನೇಹಿತರು, ಯಾರು ಮುಖವಾಡದ ಸ್ನೇಹಿತರು, ಯಾರಿಗೆ ಯಾರ ಮೇಲೆ ನಂಬಿಕೆ ಇದೆ, ಯಾರಿಗೆ ಇಲ್ಲ ಎಲ್ಲವನ್ನು ಪ್ರೇಕ್ಷಕರ ಮುಂದೆ ತಂದಿಟ್ಟವು ಟಾಸ್ಕ್​ಗಳು. ಅಂತಿಮವಾಗಿ ಅರ್ಹ ಸದಸ್ಯರೇ ಫಿನಾಲೆಗೆ ನೇರವಾಗಿ ಆಯ್ಕೆ ಆದರು.

ಈ ವಾರ ಆಡುವ ಟಾಸ್ಕ್​ಗಳಲ್ಲಿ ಅತಿ ಹೆಚ್ಚು ಅಂಕ ಪಡೆದವರು ಫಿನಾಲೆಗೆ ಪ್ರವೇಶ ಪಡೆಯುತ್ತಾರೆ ಎಂದು ಮೊದಲೇ ಬಿಗ್​ಬಾಸ್ ಘೋಷಿಸಿದ್ದರು. ಹಾಗಾಗಿ ಮನೆಯ ಎಲ್ಲ ಸದಸ್ಯರು ಹೆಚ್ಚು ಅಂಕ ಗಳಿಸಲು ಪ್ರಯತ್ನ ಮಾಡುವ ಜೊತೆಗೆ ಇತರೆ ಸ್ಪರ್ಧಿಗಳು ಕಡಿಮೆ ಅಂಕ ಪಡೆಯುವಂತೆ ಮಾಡುವ ಸತತ ಪ್ರಯತ್ನ ಮಾಡಿದರು. ಎಲ್ಲರಿಗೂ ಸಮಾನ ಅವಕಾಶ ಸಿಗುವಂತೆಯೇ ಟಾಸ್ಕ್​ ಗಳನ್ನು ಡಿಸೈನ್ ಮಾಡಲಾಗಿತ್ತಾದರೂ ಮನೆಯ ಸದಸ್ಯರ ತಂತ್ರ-ಪ್ರತಿತಂತ್ರದಿಂದ ಕೆಲವರಿಗೆ ಅವಕಾಶ ಸಿಗಲಿಲ್ಲ, ಅವಕಾಶ ಸಿಗದವರೂ ಸಹ ಪಾಯಿಂಟ್ಸ್ ಗಳಿಸುವ ಅವಕಾಶವನ್ನು ಬಿಗ್​ಬಾಸ್ ನೀಡಿದ್ದರು. ಕೆಲವರು ಇದನ್ನು ಅದ್ಭುತವಾಗಿ ಬಳಸಿಕೊಂಡರು.

ಇದನ್ನೂ ಓದಿ:ಮುರಿದು ಬಿತ್ತು ಬಿಗ್​ಬಾಸ್ ಮನೆಯ ಗಾಢ ಸ್ನೇಹ: ದೂರಾದ ಸಂತು-ಪಂತು

ಶುಕ್ರವಾರದ ಎಪಿಸೋಡ್​ನಲ್ಲಿ ವಾರದ ಕಡೆಯ ಹಾಗೂ ಡಿಸೈಡಿಂಗ್ ಟಾಸ್ಕ್ ಆಡಿಸಲಾಯ್ತು. ಕೊನೆಯ ಟಾಸ್ಕ್​ಗೆ ಮುನ್ನ ಪ್ರತಾಪ್ ಮುನ್ನಡೆಯಲ್ಲಿದ್ದರು, ಅವರಿಗೂ ಸಂಗೀತಾಗೂ ಅತ್ಯಂತ ಕಡಿಮೆ ಅಂತರ ಇತ್ತು. ಟಾಸ್ಕ್​ನ ನಾಯಕ ತುಕಾಲಿ ಸಂಗೀತಾ ಹಾಗೂ ವರ್ತೂರು ಸಂತುವನ್ನು ಆಯ್ಕೆ ಮಾಡಿಕೊಂಡರು. ವಿನಯ್​ಗೆ ಅಡ್ವಾಂಟೇಜ್ ಇದ್ದು ಆಡುವ ಅವಕಾಶ ಸಿಕ್ಕಿತು. ಆದರೆ ಡ್ರೋನ್ ಪ್ರತಾಪ್, ತಮಗೆ ಆಪ್ತರಾಗಿದ್ದ ಸಂಗೀತಾ ಅನ್ನು ಹೊರಗೆ ಇಟ್ಟು ತಾವೇ ಆಡಿದರು. ಆಡಿ ಗೆದ್ದು ಮನೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸ್ಪರ್ಧಿಯಾಗಿ ಹೊರಹೊಮ್ಮಿದರು.

ಆದರೆ ಹೊರಗೆ ಕೂತಿದ್ದ ಸಂಗೀತಾ, ಬುದ್ಧಿವಂತಿಕೆ ಹಾಗೂ ತಮ್ಮನ್ನು ಆಟದಿಂದ ತೆಗೆದರೂ ಪ್ರತಾಪ್​ ಮೇಲೆ ನಂಬಿಕೆ ಕಳೆದುಕೊಳ್ಳದೆ ಅವರೇ ಗೆಲ್ಲುತ್ತಾರೆಂದು ಮೊದಲೇ ಊಹಿಸಿದ್ದರಿಂದ 80 ಅಂಕಗಳನ್ನು ಪಡೆದು ತಾವೂ ಸಹ ಮುನ್ನಡೆ ಕಾಯ್ದುಕೊಂಡರು. ಅಂತಿಮವಾಗಿ ಪ್ರತಾಪ್ ಹಾಗೂ ಸಂಗೀತಾ ಮೊದಲು ಹಾಗೂ ಎರಡನೇ ಸ್ಥಾನ ಗಳಿಸಿದರೆ, ನಮ್ರತಾ ಮೂರನೇ ಸ್ಥಾನ ಗಳಿಸಿದರು. ಆದರೆ ಬಿಗ್​ಬಾಸ್ ಟ್ವಿಸ್ಟ್ ಒಂದನ್ನು ನೀಡಿ, ಮೊದಲ ಮೂವರಲ್ಲಿ ಯಾರು ಉತ್ತಮವೆಂದು ನಿರ್ಣಯಿಸಿ, ಉತ್ತಮರಾದವರನ್ನು ಫೈನಲ್​ಗೆ ಕಳಿಸುವಂತೆ ಸೂಚಿಸಿದರು.

ಆಗ ವಿನಯ್ ನಮ್ರತಾಗೆ ಮತ ಚಲಾಯಿಸಿದರು. ವರ್ತೂರು ಸಂತೋಷ್ ಡ್ರೋನ್ ಪ್ರತಾಪ್​ಗೆ ಮತ ಚಲಾಯಿಸಿದರು. ಸಂಗೀತಾ ಜೊತೆ ಜಗಳ ಮಾಡಿಕೊಂಡು ದೂರಾಗಿರುವ ತನಿಷಾ ಹಾಗೂ ಕಾರ್ತಿಕ್ ಅವರು ಸಂಗೀತಾರಿಗೆ ಮತ ಹಾಕಿದರು. ತುಕಾಲಿ ಸಂತು ಸಹ ಸಂಗೀತಾಗೆ ಮತ ಹಾಕುವ ಮೂಲಕ ಸಂಗೀತಾ ನೇರವಾಗಿ ಫಿನಾಲೆಗೆ ಹೋದರು. ಮಾತ್ರವಲ್ಲದೆ ಬಿಗ್​ಬಾಸ್ ಕನ್ನಡ ಸೀಸನ್ 10 ರ ಕಟ್ಟ ಕಡೆಯ ಕ್ಯಾಪ್ಟನ್ ಆದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?