Sign In

By signing in or creating an account, you agree with Associated Broadcasting Company's Terms & Conditions and Privacy Policy.

2 ಹೊಸ ಕಾರ್ಯಕ್ರಮಗಳ ಮೂಲಕ ಮನರಂಜನೆಯ ಭರವಸೆ ನೀಡಿದ ‘ಸಿರಿ ಕನ್ನಡ’ ವಾಹಿನಿ

‘ಸಿರಿ ಕನ್ನಡ’ ವಾಹಿನಿಯು 2 ಹೊಸ ಕಾರ್ಯಕ್ರಮಗಳ ಮೂಲಕ ಮನರಂಜನೆ ನೀಡಲು ಸಜ್ಜಾಗಿದೆ. ‘ಹಾಸ್ಯ ದರ್ಬಾರ್ ಸೀಸನ್ 2’ ಶೋನಲ್ಲಿ ಕಾಮಿಡಿ ದಿಗ್ಗಜರು ಇರಲಿದ್ದಾರೆ. ಭರ್ಜರಿ ಮನರಂಜನೆಯ ಭರವಸೆಯೊಂದಿಗೆ ‘ಲಿಟಲ್ ಕಿಲಾಡೀಸ್’ ಕಾರ್ಯಕ್ರಮ ಕೂಡ ಪ್ರಸಾರಕ್ಕೆ ಸಿದ್ಧವಾಗಿದೆ. ಈ ಎರಡು ಶೋಗಳ ಬಗ್ಗೆ ಇಲ್ಲಿದೆ ಮಾಹಿತಿ..

2 ಹೊಸ ಕಾರ್ಯಕ್ರಮಗಳ ಮೂಲಕ ಮನರಂಜನೆಯ ಭರವಸೆ ನೀಡಿದ ‘ಸಿರಿ ಕನ್ನಡ’ ವಾಹಿನಿ
‘ಸಿರಿ ಕನ್ನಡ’ ವಾಹಿನಿಯ ಹೊಸ ಶೋಗಳು
Follow us
ಮದನ್​ ಕುಮಾರ್​
|

Updated on: Aug 25, 2023 | 6:03 PM

ಕನ್ನಡ ಕಿರುತೆರೆಯ ಮನರಂಜನಾ ಲೋಕದಲ್ಲಿ ‘ಸಿರಿ ಕನ್ನಡ’ ವಾಹಿನಿ (Siri Kannada) ಕೂಡ ಗಮನ ಸೆಳೆಯುತ್ತಿದೆ. ಈಗಾಗಲೇ ಅನೇಕ ವಿಶಿಷ್ಟ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಮೂಲಕ ನೋಡುಗರಿಗೆ ರಂಜನೆ ನೀಡಿದೆ. ಈಗ ‘ಸಿರಿ ಕನ್ನಡ’ ವಾಹಿನಿಯು 2 ಹೊಸ ಕಾರ್ಯಕ್ರಮಗಳ ಮೂಲಕ ಮತ್ತೆ ಕರುನಾಡಿನಲ್ಲಿ ಮನರಂಜನೆಯ ಮಳೆ ಸುರಿಸಲು ಸಜ್ಜಾಗಿದೆ. ಈ ಚಾನೆಲ್​ನ ಜನಪ್ರಿಯ ಶೋ ಆಗಿದ್ದ ‘ಹಾಸ್ಯ ದರ್ಬಾರ್’ (Hasya Darbar) ಕಾರ್ಯಕ್ರಮವು ನೋಡುಗರ ಒತ್ತಾಯದ ಮೇರೆಗೆ ನೂತನ ರೂಪದಲ್ಲಿ ಹೊಸ ಆವೃತ್ತಿಯನ್ನು ಆರಂಭಿಸುತ್ತಿದೆ. ಇದರಲ್ಲಿ ಅನೇಕ ಖ್ಯಾತನಾಮರು ಭಾಗವಹಿಸಲಿದ್ದಾರೆ. ಆ ಮೂಲಕ ಈ ಕಾರ್ಯಕ್ರಮದ ಬಗ್ಗೆ ಕುತೂಹಲ ಹೆಚ್ಚಾಗಿದೆ. ಈ ಹೊಸ ಸೀಸನ್​ ಬಗ್ಗೆ ಇಲ್ಲಿದೆ ಮಾಹಿತಿ..

‘ಹಾಸ್ಯ ದರ್ಬಾರ್ ಸೀಸನ್ 2’ ಶೋನಲ್ಲಿ ಕಾಮಿಡಿ ದಿಗ್ಗಜರಾದ ಪ್ರಾಣೇಶ್, ಸುಧಾ ಬರಗೂರು, ಪ್ರೊ. ಕೃಷ್ಣೇಗೌಡ, ರಿಚರ್ಡ್ ಲೂಯಿಸ್, ಎಮ್.ಎಸ್. ನರಸಿಂಹಮೂರ್ತಿ, ಮುಖ್ಯಮಂತ್ರಿ ಚಂದ್ರು, ಗುಂಡೂರಾವ್, ಮಿಮಿಕ್ರಿ ದಯಾನಂದ್ ಅವರು ಭಾಗವಹಿಸಲಿದ್ದಾರೆ. ಹಿರೇಮಗಳೂರು ಕಣ್ಣನ್ ಅವರು ಈ ಶೋ ನಡೆಸಿಕೊಡಲಿದ್ದಾರೆ ಎಂಬುದು ವಿಶೇಷ. ‘ಹಾಸ್ಯದರ್ಬಾರ್ ಸೀಸನ್ 2’ ಕಾರ್ಯಕ್ರಮಕ್ಕೆ ವಿಭಿನ್ನವಾದ ರೀತಿಯಲ್ಲಿ ಸೆಟ್​ ಹಾಕಲಾಗಿದೆ. ಅದ್ದೂರಿ ಸೆಟ್​ನಲ್ಲಿ ಈ ಶೋ ಶೂಟಿಂಗ್​ ಆಗಲಿದೆ.

ಆಗಸ್ಟ್ 28ರಿಂದ ಸೋಮವಾರದಿಂದ ಶುಕ್ರವಾರದವರಗೆ ಪ್ರತಿ ರಾತ್ರಿ 8 ಗಂಟೆಯಿಂದ 9 ಗಂಟೆಯ ತನಕ ಈ ಕಾರ್ಯಕ್ರಮ ಪ್ರಸಾರ ಆಗಲಿದೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಈ ಕಾರ್ಯಕ್ರಮದ ಶೂಟಿಂಗ್​ ನಡೆಯುತ್ತಿದೆ. ಇದರ ಉಚಿತ ಇ-ಪಾಸ್ ಪಡೆಯಲು ‘ಸಿರಿ ಕನ್ನಡ’ ವಾಹಿನಿಯನ್ನು ಸಂಪರ್ಕಿಸಬಹುದು ಎಂದು ಚಾನೆಲ್​ ಮುಖ್ಯಸ್ಥ ರಾಜೇಶ್ ರಾಜಘಟ್ಟ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಎರಡನೇ ಸ್ಥಾನಕ್ಕೆ ಜಿಗಿದ ‘ಸೀತಾ ರಾಮ’; ಟಿಆರ್​ಪಿ ರೇಸ್​ನಲ್ಲಿ ಯಾವ ಧಾರಾವಾಹಿಗೆ ಯಾವ ಸ್ಥಾನ? ಇಲ್ಲಿದೆ ವಿವರ

ಇನ್ನೊಂದು ಶೋ ಮಕ್ಕಳಿಗೆ ಸಂಬಂಧಿಸಿದ್ದು. ಪುಟಾಣಿ ಮಕ್ಕಳ ಧಮಾಕೆಧಾರ್​ ಮನರಂಜನೆಯ ಕಾರ್ಯಕ್ರಮ ‘ಲಿಟಲ್ ಕಿಲಾಡೀಸ್’. ಇದು ಕೂಡ ಸೋಮವಾರದಿಂದ ಶುಕ್ರವಾರದ ತನಕ ಸಂಜೆ 6ಕ್ಕೆ ಪ್ರಸಾರ ಆಗಲಿದೆ. ಈ ಕಾರ್ಯಕ್ರಮವನ್ನು ಇದೇ ಮೊದಲ ಬಾರಿಗೆ ಝಗಮಗಿಸುವ ಸೆಟ್​ನಲ್ಲಿ ಹಲವು ಬಗೆಯ ಕಾನ್ಸೆಪ್ಟ್​ಗಳ ಮೂಲಕ ರೂಪಿಸಲಾಗುತ್ತಿದೆ. ಒಂದು ವಾರಗಳ ಚಿಲ್ರನ್​ ಚಾಂಪಿಯನ್ ಸಿರೀಸ್ ಭಾರಿ ಮನರಂಜನೆ ನೀಡಲಿದೆ ಎಂದು ವಾಹಿನಿ ಹೇಳಿಕೊಂಡಿದೆ.

ಇದನ್ನೂ ಓದಿ: ಕನ್ನಡದ ಈ ಕಿರುತೆರೆ ನಟಿ ಯಾರೆಂದು ಗುರುತಿಸುತ್ತೀರಾ?

ಈ ಎರಡು ಹೊಸ ಶೋಗಳ ಜೊತೆ ವೀಕ್ಷಕರಿಂದ ಮೆಚ್ಚುಗೆ ಪಡೆದು 100ನೇ ಎಪಿಸೋಡ್​ನತ್ತ ಮುನ್ನುಗ್ಗುತ್ತಿರುವ ‘ಊರ್ಮಿಳ’ ಧಾರಾವಾಹಿ ಈಗ ಬದಲಾದ ಸಮಯದಲ್ಲಿ ಪ್ರಸಾರ ಆಗಲಿದೆ. ಇನ್ಮುಂದೆ ಇದು ರಾತ್ರಿ 7 ಗಂಟೆಗೆ ಮೂಡಿಬರಲಿದೆ ಎಂದು ‘ಸಿರಿಕನ್ನಡ’ ವಾಹಿನಿಯ ಸಂಸ್ಥಾಪಕ ನಿರ್ದೇಶಕರಾದ ಸಂಜಯ್ ಶಿಂಧೆ ಹಾಗೂ ರಾಜೇಶ್ ರಾಜಘಟ್ಟ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು