AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಾಲ ಹಿಡ್ಕೊಂಡು ಓಡಾಡೋದಲ್ಲ’; ಹಳೆಯ ಚಾಳಿ ಮುಂದುವರಿಸಿದ ವಿನಯ್ ಆ್ಯಂಡ್ ಗ್ಯಾಂಗ್​ಗೆ ತನಿಷಾ ಎಚ್ಚರಿಕೆ

ನಮ್ರತಾಗೆ ಅತಿ ಹೆಚ್ಚು ಹಾಗೂ ಸಂಗೀತಾ-ತನಿಷಾಗೆ ಅತಿ ಕಡಿಮೆ ರೇಟಿಂಗ್ ನೀಡಿದ್ದಾರೆ ಸ್ನೇಹಿತ್. ಇದನ್ನು ತನಿಷಾ ಹಾಗೂ ಸಂಗೀತಾ ಪ್ರಶ್ನಿಸಿದ್ದಾರೆ. ‘ನಾವು ಫ್ಲರ್ಟ್ ಮಾಡೋಕೆ ಅವಕಾಶ ನೀಡಿಲ್ಲ, ಅದಕ್ಕೆ ನಿಮ್ಮ ಪ್ರೀತಿ ಪಾತ್ರರಾಗಿಲ್ಲ’ ಎಂದು ಸಂಗೀತಾ ಓಪನ್ ಆಗಿಯೇ ಹೇಳಿದರು. ‘

‘ಬಾಲ ಹಿಡ್ಕೊಂಡು ಓಡಾಡೋದಲ್ಲ’; ಹಳೆಯ ಚಾಳಿ ಮುಂದುವರಿಸಿದ ವಿನಯ್ ಆ್ಯಂಡ್ ಗ್ಯಾಂಗ್​ಗೆ ತನಿಷಾ ಎಚ್ಚರಿಕೆ
ವಿನಯ್-ತನಿಷಾ
ರಾಜೇಶ್ ದುಗ್ಗುಮನೆ
|

Updated on:Nov 07, 2023 | 8:18 AM

Share

ಕಳೆದ ವಾರ ವಿನಯ್ ಅವರು ಒಂದು ಗ್ಯಾಂಗ್ ಮಾಡಿಕೊಂಡಿದ್ದರು. ಈ ಗ್ಯಾಂಗ್​ನಲ್ಲಿ ನಮ್ರತಾ (Namratha Gowda), ಸಂತೋಷ್ ಸೇರಿ ಅನೇಕರು ಇದ್ದರು. ‘ಇದೊಂದು ಹೊಲಸು ಗುಂಪುಗಾರಿಕೆ’ ಎಂದು ಸುದೀಪ್ ಹೇಳಿದ್ದರು. ಇವರು ಎಲ್ಲರೂ ಬದಲಾಗಬಹುದು ಎಂದು ಭಾವಿಸಿದ್ದರು. ಆದರೆ, ಆ ರೀತಿ ಆಗೋ ರೀತಿ ಕಾಣುತ್ತಿಲ್ಲ. ವಿನಯ್ ಗುಂಪುಗಾರಿಕೆ ಮುಂದುವರಿಸಿದ್ದಾರೆ. ಈ ವಿಚಾರವನ್ನು ತನಿಷಾ ತೆಗೆದುಕೊಂಡಿದ್ದಾರೆ. ವಿನಯ್ ಆ್ಯಂಡ್ ಗ್ಯಾಂಗ್​ಗೆ ಎಚ್ಚರಿಕೆ ಕೊಟ್ಟಿದ್ದಾರೆ.

ಬಿಗ್ ಬಾಸ್​ನಲ್ಲಿ ಈ ವಾರ ಒಂದು ಚಟುವಟಿಕೆ ನೀಡಲಾಗಿತ್ತು. ಬೋರ್ಡ್ ಮೇಲೆ ಒಂದೊಂದು ಹೆಸರು ಇರುತ್ತದೆ. ಆ ಹೆಸರು ಲಕೋಟೆಯಲ್ಲಿ ಬರೆದಿರುತ್ತದೆ. ಪ್ರತಿ ಸ್ಪರ್ಧಿ ಬಂದು ಲಕೋಟೆ ಎತ್ತಬೇಕು. ಅಲ್ಲಿ ಬಂದಿರುವ ಹೆಸರನ್ನು ಓದಿಕೊಂಡು ಅತಿ ಹೆಚ್ಚು ಹಾಗೂ ಅತೀ ಕಡಿಮೆ ಎಂದು ಸ್ಪರ್ಧಿಗಳನ್ನು ನಿಲ್ಲಿಸಬೇಕು. ಸ್ನೇಹಿತ್​ಗೆ ಪ್ರೀತಿ ಪಾತ್ರರು ಎನ್ನುವ ಲಕೋಟೆ ಬಂದಿತ್ತು.

ನಮ್ರತಾಗೆ ಅತಿ ಹೆಚ್ಚು ಹಾಗೂ ಸಂಗೀತಾ-ತನಿಷಾಗೆ ಅತಿ ಕಡಿಮೆ ರೇಟಿಂಗ್ ನೀಡಿದ್ದಾರೆ ಸ್ನೇಹಿತ್. ಇದನ್ನು ತನಿಷಾ ಹಾಗೂ ಸಂಗೀತಾ ಪ್ರಶ್ನಿಸಿದ್ದಾರೆ. ‘ನಾವು ಫ್ಲರ್ಟ್ ಮಾಡೋಕೆ ಅವಕಾಶ ನೀಡಿಲ್ಲ, ಅದಕ್ಕೆ ನಿಮ್ಮ ಪ್ರೀತಿ ಪಾತ್ರರಾಗಿಲ್ಲ’ ಎಂದು ಸಂಗೀತಾ ಓಪನ್ ಆಗಿಯೇ ಹೇಳಿದರು. ‘ನೀವು ಕ್ಲಾಸ್ ಮಾನಿಟರ್ ತರ ಆಡ್ತೀರಾ’ ಎಂದು ಸ್ನೇಹಿತ್ ಹೇಳಿದರು. ಆದರೆ, ಇದನ್ನು ತನಿಷಾ ಹಾಗೂ ಸಂಗೀತಾ ಒಪ್ಪಲಿಲ್ಲ.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಪ್ರತಾಪ್​ಗಿಲ್ಲ ಧೈರ್ಯ? ಎಲ್ಲರದ್ದೂ ಇದೇ ಅಭಿಪ್ರಾಯ

ಇಲ್ಲಿ ಉದಾಹರಣೆ ಕೊಡುವಾಗ ತನಿಷಾ ವಿನಯ್ ಹೆಸರು ತೆಗೆದುಕೊಂಡರು. ಆಗ ವಿನಯ್ ‘ಶ್​​.. ಶ್​’ ಎಂದು ಬಾಯಮೇಲೆ ಬೆರಳಿಟ್ಟರು. ‘ಏನು’ ಎಂದು ತನಿಷಾ ಜೋರಾಗಿಯೇ ಕೇಳಿದರು. ಇದಕ್ಕೆ ವಿನಯ್, ‘ನಾನು ಹುಳದ ಜೊತೆ ಮಾತಾಡ್ತಾ ಇದೀನಿ’ ಎಂದರು. ಆಗ ವಿನಯ್ ಆ್ಯಂಡ್ ಗ್ಯಾಂಗ್ ಜೋರಾಗಿ ನಕ್ಕಿತು. ‘ಅತಿಯಾಗಿ ಆಟ ಆಡಿದ್ರೆ ಏನಾಗುತ್ತದೆ ಅಂತ ಎಲ್ಲರಿಗೂ ಗೊತ್ತು. ಎಕ್ಸ್​ಪ್ರೆಷನ್ ಕೊಡೋರು ಒಂದಿನ ಹಳ್ಳಕ್ಕೆ ಬೀಳ್ತೀರಲ್ಲ ಆಗ ಗೊತ್ತಾಗುತ್ತದೆ. ಆನೆ ಬಾಲ ಹಿಡ್ಕೊಂಡು ಓಡಾಡೋದಲ್ಲ. ಮಾತಾಡೋಕು ತಾಕತ್ ಬೇಕು’ ಎಂದು ತನಿಷಾ ಹೇಳಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಕಾಣುತ್ತದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ಕೂಡ ವಿಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:15 am, Tue, 7 November 23

ಇಂದು ಈ ರಾಶಿಯವರು ಎಚ್ಚರಿಕೆಯಿಂದಿರಬೇಕು
ಇಂದು ಈ ರಾಶಿಯವರು ಎಚ್ಚರಿಕೆಯಿಂದಿರಬೇಕು
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ