AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮಾನವೀಯ ಕೃತ್ಯ; ವೀಕ್ಷಕರ ಈ ಪ್ರಶ್ನೆಗೆ ವಿನಯ್, ಮೈಕಲ್ ಬಳಿ ಉತ್ತರವಿದೆಯೇ?

ನಂತರ ಸಂಗೀತಾ, ಪ್ರತಾಪ್ ಚೇರ್​ನಲ್ಲಿ ಕುಳಿತಾಗ ಮೈಕಲ್, ವಿನಯ್ ಸೋಪಿನ ನೀರು, ಬಟ್ಟೆ ತೊಳೆಯಲು ಬಳಕೆ ಮಾಡುವ ಪೌಡರ್, ಶೇವ್ ಮಾಡಲು ಬಳಕೆ ಮಾಡುವ ಕ್ರೀಮ್ ಮತ್ತಿತ್ಯಾದಿ ಕೆಮಿಕಲ್​ನ ಬಳಕೆ ಮಾಡಿದ್ದಾರೆ.

ಅಮಾನವೀಯ ಕೃತ್ಯ; ವೀಕ್ಷಕರ ಈ ಪ್ರಶ್ನೆಗೆ ವಿನಯ್, ಮೈಕಲ್ ಬಳಿ ಉತ್ತರವಿದೆಯೇ?
ವಿನಯ್-ಪ್ರತಾಪ್
ರಾಜೇಶ್ ದುಗ್ಗುಮನೆ
|

Updated on:Dec 09, 2023 | 8:48 AM

Share

ಈ ವಾರ ರಾಕ್ಷಸರು ಹಾಗೂ ಗಂಧರ್ವರು ಟಾಸ್ಕ್​ನಲ್ಲಿ ಎರಡು ತಂಡದ ಮಧ್ಯೆ ಟಫ್ ಕಾಂಪಿಟೇಷನ್ ನಡೆಯಿತು. ಸ್ಪರ್ಧಿಗಳು ನಡೆದುಕೊಂಡ ರೀತಿ ಅನೇಕರಿಗೆ ಇಷ್ಟವೇ ಆಗಲಿಲ್ಲ. ವಿನಯ್ (Vinay Gowda), ಮೈಕಲ್ ತೋರಿದ ಅಮಾನವೀಯ ಆಟಕ್ಕೆ ಸಂಗೀತಾ ಹಾಗೂ ಪ್ರತಾಪ್ ಆಸ್ಪತ್ರೆ ಸೇರಿದ್ದಾರೆ. ‘ಅವರು ಮಾಡಿದ್ದನ್ನೇ ನಾವು ಮಾಡಿದ್ದು’ ಎಂದು ವಿನಯ್ ಸಮಜಾಯಿಶಿ ನೀಡುವ ಕೆಲಸ ಮಾಡಿದ್ದಾರೆ. ಆದರೆ, ವೀಕ್ಷಕರು ಕೇಳುತ್ತಿರುವ ಈ ಪ್ರಶ್ನೆಗೆ ಅವರಲ್ಲಿ ಉತ್ತರ ಇದೆಯೇ?

ಪ್ರತಾಪ್, ಅವಿನಾಶ್ ಮೊದಲಾದವರು ಸಂಗೀತಾ ತಂಡದಲ್ಲಿ ಇದ್ದರು. ವಿನಯ್, ನಮ್ರತಾ, ಮೈಕಲ್, ಮೊದಲಾದವರು ವರ್ತೂರು ಸಂತೋಷ್ ತಂಡದಲ್ಲಿ ಇದ್ದರು. ಚೇರ್ ಟಾಸ್ಕ್​ನ ಬಿಗ್ ಬಾಸ್ ನೀಡಿದ್ದರು. ಇದರ ಪ್ರಕಾರ ನಾಲ್ಕು ಜನ ಚೇರ್​ನಲ್ಲಿ ಕೂರಬೇಕು. ಅವರಿಗೆ ನೀರು ಹೊಡೆದು ಅವರನ್ನು ಎಬ್ಬಿಸಬೇಕು. ಮೊದಲು ವಿನಯ್ ತಂಡದವರು ಚೇರ್ ಮೇಲೆ ಕುಳಿತರು. ಸಂಗೀತಾ ತಂಡದವರು ನೀರು ಎರಚಿದರು. ಅವರು ಒಮ್ಮೆ ಸೋಪಿನ ನೀರನ್ನು ಬಳಸಿದ್ದರು. ಇದನ್ನು ವಿನಯ್ ಆ್ಯಂಡ್ ಟೀಂನ ಮನಸ್ಸಿನಲ್ಲಿ ಇಟ್ಟುಕೊಂಡಿದೆ.

ನಂತರ ಸಂಗೀತಾ, ಪ್ರತಾಪ್ ಚೇರ್​ನಲ್ಲಿ ಕುಳಿತಾಗ ಮೈಕಲ್, ವಿನಯ್ ಸೋಪಿನ ನೀರು, ಬಟ್ಟೆ ತೊಳೆಯಲು ಬಳಕೆ ಮಾಡುವ ಪೌಡರ್, ಶೇವ್ ಮಾಡಲು ಬಳಕೆ ಮಾಡುವ ಕ್ರೀಮ್ ಮತ್ತಿತ್ಯಾದಿ ಕೆಮಿಕಲ್​ನ ಬಳಕೆ ಮಾಡಿದ್ದಾರೆ. ಇದರಿಂದ ಪ್ರತಾಪ್ ಹಾಗೂ ಸಂಗೀತಾ ಕಣ್ಣಿಗೆ ಸಾಕಷ್ಟು ಹಾನಿ ಆಗಿದೆ. ಅವರು ಆಸ್ಪತ್ರೆ ಸೇರಿದ್ದಾರೆ.

ಇದನ್ನೂ ಓದಿ: ಸಿಡಿದೆದ್ದ ನಮ್ರತಾ ಗೌಡ; ಕಣ್ಣೀರು ಹಾಕಿದ ಸಂಗೀತಾ ಶೃಂಗೇರಿ; ಬಿಗ್​ ಬಾಸ್​ ಮನೆಯಲ್ಲಿ ಎಲ್ಲರಿಗೂ ಶಾಕ್​

‘ಅವರು ಮಾಡಿದ್ದನ್ನೇ ನಾವು ಮಾಡಿದ್ದು’ ಎಂದು ವಿನಯ್ ಹೇಳಿಕೊಂಡಿದ್ದಾರೆ. ಹಾಗಾದರೆ, ಚೇರ್​ನಲ್ಲಿ ಕುಳಿತ ಅವರ ತಂಡದ ಪವಿಗಾಗಲಿ, ವರ್ತೂರು ಸಂತೋಷ್​ಗಾಗಲಿ ಈ ರೀತಿಯ ತೊಂದರೆ ಏಕಾಗಿಲ್ಲ ಎಂಬುದು ಅನೇಕರ ಪ್ರಶ್ನೆ. ವೀಕೆಂಡ್​ನಲ್ಲಿ ಈ ವಿಚಾರವನ್ನು ಸುದೀಪ್ ಮುಖ್ಯವಾಗಿ ಪ್ರಶ್ನೆ ಮಾಡಲಿದ್ದಾರೆ. ಅಸಮರ್ಥವಾಗಿ ಕ್ಯಾಪ್ಟನ್ಸಿ ನಡೆಸಿದ ಸ್ನೇಹಿತ್ ಅವರ ನಡೆಯ ಬಗ್ಗೆಯೂ ಸುದೀಪ್ ಪ್ರಶ್ನೆ ಮಾಡುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:41 am, Sat, 9 December 23

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು