AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮಾನವೀಯ ಕೃತ್ಯ; ವೀಕ್ಷಕರ ಈ ಪ್ರಶ್ನೆಗೆ ವಿನಯ್, ಮೈಕಲ್ ಬಳಿ ಉತ್ತರವಿದೆಯೇ?

ನಂತರ ಸಂಗೀತಾ, ಪ್ರತಾಪ್ ಚೇರ್​ನಲ್ಲಿ ಕುಳಿತಾಗ ಮೈಕಲ್, ವಿನಯ್ ಸೋಪಿನ ನೀರು, ಬಟ್ಟೆ ತೊಳೆಯಲು ಬಳಕೆ ಮಾಡುವ ಪೌಡರ್, ಶೇವ್ ಮಾಡಲು ಬಳಕೆ ಮಾಡುವ ಕ್ರೀಮ್ ಮತ್ತಿತ್ಯಾದಿ ಕೆಮಿಕಲ್​ನ ಬಳಕೆ ಮಾಡಿದ್ದಾರೆ.

ಅಮಾನವೀಯ ಕೃತ್ಯ; ವೀಕ್ಷಕರ ಈ ಪ್ರಶ್ನೆಗೆ ವಿನಯ್, ಮೈಕಲ್ ಬಳಿ ಉತ್ತರವಿದೆಯೇ?
ವಿನಯ್-ಪ್ರತಾಪ್
Follow us
ರಾಜೇಶ್ ದುಗ್ಗುಮನೆ
|

Updated on:Dec 09, 2023 | 8:48 AM

ಈ ವಾರ ರಾಕ್ಷಸರು ಹಾಗೂ ಗಂಧರ್ವರು ಟಾಸ್ಕ್​ನಲ್ಲಿ ಎರಡು ತಂಡದ ಮಧ್ಯೆ ಟಫ್ ಕಾಂಪಿಟೇಷನ್ ನಡೆಯಿತು. ಸ್ಪರ್ಧಿಗಳು ನಡೆದುಕೊಂಡ ರೀತಿ ಅನೇಕರಿಗೆ ಇಷ್ಟವೇ ಆಗಲಿಲ್ಲ. ವಿನಯ್ (Vinay Gowda), ಮೈಕಲ್ ತೋರಿದ ಅಮಾನವೀಯ ಆಟಕ್ಕೆ ಸಂಗೀತಾ ಹಾಗೂ ಪ್ರತಾಪ್ ಆಸ್ಪತ್ರೆ ಸೇರಿದ್ದಾರೆ. ‘ಅವರು ಮಾಡಿದ್ದನ್ನೇ ನಾವು ಮಾಡಿದ್ದು’ ಎಂದು ವಿನಯ್ ಸಮಜಾಯಿಶಿ ನೀಡುವ ಕೆಲಸ ಮಾಡಿದ್ದಾರೆ. ಆದರೆ, ವೀಕ್ಷಕರು ಕೇಳುತ್ತಿರುವ ಈ ಪ್ರಶ್ನೆಗೆ ಅವರಲ್ಲಿ ಉತ್ತರ ಇದೆಯೇ?

ಪ್ರತಾಪ್, ಅವಿನಾಶ್ ಮೊದಲಾದವರು ಸಂಗೀತಾ ತಂಡದಲ್ಲಿ ಇದ್ದರು. ವಿನಯ್, ನಮ್ರತಾ, ಮೈಕಲ್, ಮೊದಲಾದವರು ವರ್ತೂರು ಸಂತೋಷ್ ತಂಡದಲ್ಲಿ ಇದ್ದರು. ಚೇರ್ ಟಾಸ್ಕ್​ನ ಬಿಗ್ ಬಾಸ್ ನೀಡಿದ್ದರು. ಇದರ ಪ್ರಕಾರ ನಾಲ್ಕು ಜನ ಚೇರ್​ನಲ್ಲಿ ಕೂರಬೇಕು. ಅವರಿಗೆ ನೀರು ಹೊಡೆದು ಅವರನ್ನು ಎಬ್ಬಿಸಬೇಕು. ಮೊದಲು ವಿನಯ್ ತಂಡದವರು ಚೇರ್ ಮೇಲೆ ಕುಳಿತರು. ಸಂಗೀತಾ ತಂಡದವರು ನೀರು ಎರಚಿದರು. ಅವರು ಒಮ್ಮೆ ಸೋಪಿನ ನೀರನ್ನು ಬಳಸಿದ್ದರು. ಇದನ್ನು ವಿನಯ್ ಆ್ಯಂಡ್ ಟೀಂನ ಮನಸ್ಸಿನಲ್ಲಿ ಇಟ್ಟುಕೊಂಡಿದೆ.

ನಂತರ ಸಂಗೀತಾ, ಪ್ರತಾಪ್ ಚೇರ್​ನಲ್ಲಿ ಕುಳಿತಾಗ ಮೈಕಲ್, ವಿನಯ್ ಸೋಪಿನ ನೀರು, ಬಟ್ಟೆ ತೊಳೆಯಲು ಬಳಕೆ ಮಾಡುವ ಪೌಡರ್, ಶೇವ್ ಮಾಡಲು ಬಳಕೆ ಮಾಡುವ ಕ್ರೀಮ್ ಮತ್ತಿತ್ಯಾದಿ ಕೆಮಿಕಲ್​ನ ಬಳಕೆ ಮಾಡಿದ್ದಾರೆ. ಇದರಿಂದ ಪ್ರತಾಪ್ ಹಾಗೂ ಸಂಗೀತಾ ಕಣ್ಣಿಗೆ ಸಾಕಷ್ಟು ಹಾನಿ ಆಗಿದೆ. ಅವರು ಆಸ್ಪತ್ರೆ ಸೇರಿದ್ದಾರೆ.

ಇದನ್ನೂ ಓದಿ: ಸಿಡಿದೆದ್ದ ನಮ್ರತಾ ಗೌಡ; ಕಣ್ಣೀರು ಹಾಕಿದ ಸಂಗೀತಾ ಶೃಂಗೇರಿ; ಬಿಗ್​ ಬಾಸ್​ ಮನೆಯಲ್ಲಿ ಎಲ್ಲರಿಗೂ ಶಾಕ್​

‘ಅವರು ಮಾಡಿದ್ದನ್ನೇ ನಾವು ಮಾಡಿದ್ದು’ ಎಂದು ವಿನಯ್ ಹೇಳಿಕೊಂಡಿದ್ದಾರೆ. ಹಾಗಾದರೆ, ಚೇರ್​ನಲ್ಲಿ ಕುಳಿತ ಅವರ ತಂಡದ ಪವಿಗಾಗಲಿ, ವರ್ತೂರು ಸಂತೋಷ್​ಗಾಗಲಿ ಈ ರೀತಿಯ ತೊಂದರೆ ಏಕಾಗಿಲ್ಲ ಎಂಬುದು ಅನೇಕರ ಪ್ರಶ್ನೆ. ವೀಕೆಂಡ್​ನಲ್ಲಿ ಈ ವಿಚಾರವನ್ನು ಸುದೀಪ್ ಮುಖ್ಯವಾಗಿ ಪ್ರಶ್ನೆ ಮಾಡಲಿದ್ದಾರೆ. ಅಸಮರ್ಥವಾಗಿ ಕ್ಯಾಪ್ಟನ್ಸಿ ನಡೆಸಿದ ಸ್ನೇಹಿತ್ ಅವರ ನಡೆಯ ಬಗ್ಗೆಯೂ ಸುದೀಪ್ ಪ್ರಶ್ನೆ ಮಾಡುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:41 am, Sat, 9 December 23

ನೀವು ನೋಡಿರದ ಸುಂದರವಾದ ಈಶಾನ್ಯ ರಾಜ್ಯಗಳ ಕಿರುನೋಟ ಇಲ್ಲಿದೆ
ನೀವು ನೋಡಿರದ ಸುಂದರವಾದ ಈಶಾನ್ಯ ರಾಜ್ಯಗಳ ಕಿರುನೋಟ ಇಲ್ಲಿದೆ
ಈಶಾನ್ಯ ರಾಜ್ಯಗಳು ಹೂಡಿಕೆಯ ಕೇಂದ್ರವಾಗುತ್ತಿದೆ; ಜ್ಯೋತಿರಾದಿತ್ಯ ಸಿಂಧಿಯಾ
ಈಶಾನ್ಯ ರಾಜ್ಯಗಳು ಹೂಡಿಕೆಯ ಕೇಂದ್ರವಾಗುತ್ತಿದೆ; ಜ್ಯೋತಿರಾದಿತ್ಯ ಸಿಂಧಿಯಾ
ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ತಕ್ಕ ಉತ್ತರ; ಅಮಿತ್ ಶಾ ಶ್ಲಾಘನೆ
ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ತಕ್ಕ ಉತ್ತರ; ಅಮಿತ್ ಶಾ ಶ್ಲಾಘನೆ
ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು ಯಾರ ಬೆಂಬಲದಿಂದ?
ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು ಯಾರ ಬೆಂಬಲದಿಂದ?
‘ನನ್ನ ಗಂಡನ ಪರ ನಿಲ್ಲುತ್ತೇನೆ’; ಮನು ಪತ್ನಿ ಅಚಲ ನಿರ್ಧಾರ
‘ನನ್ನ ಗಂಡನ ಪರ ನಿಲ್ಲುತ್ತೇನೆ’; ಮನು ಪತ್ನಿ ಅಚಲ ನಿರ್ಧಾರ
ತಾಳಿ ಕಟ್ಟುವಷ್ಟರಲ್ಲಿ ಲವರ್ ಕಾಲ್: ಮದುವೆ ರದ್ದು ಬಗ್ಗೆ ಸಂಬಂಧಿಕರೇನಂದ್ರು?
ತಾಳಿ ಕಟ್ಟುವಷ್ಟರಲ್ಲಿ ಲವರ್ ಕಾಲ್: ಮದುವೆ ರದ್ದು ಬಗ್ಗೆ ಸಂಬಂಧಿಕರೇನಂದ್ರು?
‘ಮೌನ ಹಾಗೂ ನಗು’; ಉತ್ತರಿಸಲು ಹೊಸ ತಂತ್ರ ಕಂಡುಕೊಂಡ ಪವಿತ್ರಾ ಗೌಡ
‘ಮೌನ ಹಾಗೂ ನಗು’; ಉತ್ತರಿಸಲು ಹೊಸ ತಂತ್ರ ಕಂಡುಕೊಂಡ ಪವಿತ್ರಾ ಗೌಡ
ತಾಳಿ‌ ಕಟ್ಟುವ ಸಮಯದಲ್ಲಿ ಹಸೆಮಣೆಯಿಂದ ಹೊರ ನಡೆದ ವಧು
ತಾಳಿ‌ ಕಟ್ಟುವ ಸಮಯದಲ್ಲಿ ಹಸೆಮಣೆಯಿಂದ ಹೊರ ನಡೆದ ವಧು
ಶೋಲೆಯ ರಾಮಗಢ ಇನ್ನಿಲ್ಲ, ಶುರುವಾಯ್ತು ಹೆಸರು ಬದಲಾವಣೆ
ಶೋಲೆಯ ರಾಮಗಢ ಇನ್ನಿಲ್ಲ, ಶುರುವಾಯ್ತು ಹೆಸರು ಬದಲಾವಣೆ
ನೀವು ನೀರು ನಿಲ್ಲಿಸಿದ್ರೆ, ನಾವು ನಿಮ್ಮ ಉಸಿರು ನಿಲ್ಲಿಸ್ತೇವೆ: ಪಾಕ್
ನೀವು ನೀರು ನಿಲ್ಲಿಸಿದ್ರೆ, ನಾವು ನಿಮ್ಮ ಉಸಿರು ನಿಲ್ಲಿಸ್ತೇವೆ: ಪಾಕ್