AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಪ್ಪಲಿ ಎಸೆತ ಪ್ರಕರಣ: ‘ಕಾರ್ತಿಕ್ ತಪ್ಪಿಲ್ಲ’ ಎಂದ ಮೈಕಲ್; ವಿನಯ್ ಕೆಂಡಾಮಂಡಲ

ಕಾರ್ತಿಕ್ ಹಾಗೂ ವಿನಯ್ ಮಧ್ಯೆ ಕಿರಿಕ್ ಆಗಿದೆ. ಈ ವೇಳೆ ಕಾರ್ತಿಕ್ ಅವರು ಧರಿಸಿದ್ದ ಚಪ್ಪಲಿಯನ್ನು ನೆಲಕ್ಕೆ ಬೀಸೆ ಎಸೆದಿದ್ದಾರೆ. ದುರಾದೃಷ್ಟಕ್ಕೆ ಅದು ನಿಲಕ್ಕೆ ಬಡಿದು ವಿನಯ್​ಗೆ ತಾಗಿದೆ. ಇದರಿಂದ ವಿನಯ್ ಸಿಟ್ಟಾಗಿದ್ದಾರೆ.

ಚಪ್ಪಲಿ ಎಸೆತ ಪ್ರಕರಣ: ‘ಕಾರ್ತಿಕ್ ತಪ್ಪಿಲ್ಲ’ ಎಂದ ಮೈಕಲ್; ವಿನಯ್ ಕೆಂಡಾಮಂಡಲ
ಸ್ನೇಹಿತ್-ಮೈಕಲ್
ರಾಜೇಶ್ ದುಗ್ಗುಮನೆ
|

Updated on: Dec 08, 2023 | 8:14 AM

Share

ಬಿಗ್ ಬಾಸ್ ಮನೆಯಲ್ಲಿ ವಿನಯ್ (Vinay Gowda) ಅವರು ಕೆಂಡಾಮಂಡಲ ಆಗಿದ್ದಾರೆ. ಇದಕ್ಕೆ ಕಾರಣ ಆಗಿದ್ದು ಚಪ್ಪಲಿ ಎಸೆತ ಪ್ರಕರಣ. ಕಾರ್ತಿಕ್ ಕೋಪದಲ್ಲಿ ಎಸೆದಿದ್ದ ಚಪ್ಪಲಿ ವಿನಯ್​ಗೆ ತಾಗಿದೆ. ‘ನನಗೆ ಚಪ್ಪಲಿಯಲ್ಲಿ ಹೊಡೆದೆಯಾ’ ಎಂದು ವಿನಯ್ ಕೂಗಾಡಿದ್ದಾರೆ. ಆದರೆ, ಇದರಲ್ಲಿ ಕಾರ್ತಿಕ್ ಅವರ ತಪ್ಪಿಲ್ಲ ಎಂದು ವಿನಯ್​ಗೆ ಮನವರಿಕೆ ಮಾಡಿಕೊಡುವ ಕೆಲಸವನ್ನು ಮೈಕಲ್ ಮಾಡಿದ್ದಾರೆ. ಇದರಿಂದ ವಿನಯ್ ಮತ್ತಷ್ಟು ಸಿಟ್ಟಾಗಿದ್ದಾರೆ.

ವಿನಯ್ ಹಾಗೂ ಕಾರ್ತಿಕ್ ಈ ಬಾರಿ ಒಂದೇ ತಂಡದಲ್ಲಿ ಇದ್ದಾರೆ. ಆದರೆ, ಮೈಕಲ್ ಉಳಿದವರಂತೆ ಅಲ್ಲ. ವಿನಯ್ ಟೀಂನಲ್ಲಿ ಇದ್ದ ಮಾತ್ರಕ್ಕೆ ಅವರು ಹೇಳಿದ್ದೆಲ್ಲ ಸರಿ ಎಂದು ಕುಣಿಯುವುದಿಲ್ಲ. ತಪ್ಪಿದ್ದರೆ ಅದನ್ನು ತಪ್ಪು ಎಂದೇ ಹೇಳುತ್ತಾರೆ. ಕಾರ್ತಿಕ್ ಎಸೆದ ಚಪ್ಪಲ್ಲಿ ಆಕಸ್ಮಿಕವಾಗಿ ತಾಗಿದೆ ಎಂಬುದನ್ನು ಮೈಕಲ್ ಮನವರಿಕೆ ಮಾಡಲು ಪ್ರಯತ್ನಿಸಿದ್ದಾರೆ. ಇದು ವಿನಯ್​ಗೆ ಖುಷಿ ನೀಡಿಲ್ಲ.

ಕಾರ್ತಿಕ್ ಹಾಗೂ ವಿನಯ್ ಮಧ್ಯೆ ಕಿರಿಕ್ ಆಗಿದೆ. ಈ ವೇಳೆ ಕಾರ್ತಿಕ್ ಅವರು ಧರಿಸಿದ್ದ ಚಪ್ಪಲಿಯನ್ನು ನೆಲಕ್ಕೆ ಬೀಸಿ ಎಸೆದಿದ್ದಾರೆ. ದುರಾದೃಷ್ಟಕ್ಕೆ ಅದು ನಿಲಕ್ಕೆ ಬಡಿದು ವಿನಯ್​ಗೆ ತಾಗಿದೆ. ಇದರಿಂದ ವಿನಯ್ ಸಿಟ್ಟಾಗಿದ್ದಾರೆ. ಕಾರ್ತಿಕ್​ಗೆ ಹೊಡೆಯಬೇಕು ಎಂಬಷ್ಟರಮಟ್ಟಿಗೆ ಅವರಿಗೆ ಕೋಪ ನೆತ್ತಿಗೆ ಏರಿತ್ತು. ಈ ಮಧ್ಯೆ ಮೈಕಲ್ ಆಡಿದ ಮಾತು ವಿನಯ್ ಅವರ ಕೋಪವನ್ನು ಹೆಚ್ಚಿಸಿದೆ.

ಇದನ್ನೂ ಓದಿ: ‘ಲೇ ತಗಡು ಎದೆಮೇಲೆ ಕಾಲಿಟ್ಟೇ ನಿನ್ನ ತುಳಿಯೋದು’; ಕಾರ್ತಿಕ್​ಗೆ ವಿನಯ್ ಎಚ್ಚರಿಕೆ

‘ಆ ಮೈಕಲ್ ಮಾತನಾಡೋದು ನೋಡು, ಕಾರ್ತಿಕ್ ಚಪ್ಪಲಿಯನ್ನು ನೆಲಕ್ಕೆ ಎಸೆದಿದ್ದು, ಅದು ರಿಬೌಂಡ್ ಆಗಿ ನಿಮಗೆ ಬಂದಿದ್ದು ಎನ್ನುತ್ತಾನೆ’ ಎಂದು ವಿನಯ್ ಕೂಗಾಡಿದ್ದಾರೆ. ವಿನಯ್ ಅವರು ವಿಕ್ಟಿಮ್ ಕಾರ್ಡ್ ಪ್ಲೇ ಮಾಡಲು ಮುಂದಾಗಿದ್ದರು. ಇದಕ್ಕೆ ಮೈಕಲ್ ಬ್ರೇಕ್ ಹಾಕಿದ್ದಾರೆ. ಮೈಕಲ್ ಅವರನ್ನು ಎಲ್ಲರೂ ಈ ಕಾರಣಕ್ಕೆ ಪ್ರಶಂಸಿಸುತ್ತಿದ್ದಾರೆ. ಸದ್ಯ ಬಿಗ್ ಬಾಸ್ ಮನೆ ರಣರಂಗ ಆಗಿದೆ. ಗೇಮ್​ವೇಳೆ ಮನೆಯ ಸದಸ್ಯರಿಗೆ ಸಾಕಷ್ಟು ತೊಂದರೆಗಳು ಆಗಿವೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಕಾಣುತ್ತದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ಕೂಡ ವಿಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ