AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಪ್ಪಲಿ ಎಸೆತ ಪ್ರಕರಣ: ‘ಕಾರ್ತಿಕ್ ತಪ್ಪಿಲ್ಲ’ ಎಂದ ಮೈಕಲ್; ವಿನಯ್ ಕೆಂಡಾಮಂಡಲ

ಕಾರ್ತಿಕ್ ಹಾಗೂ ವಿನಯ್ ಮಧ್ಯೆ ಕಿರಿಕ್ ಆಗಿದೆ. ಈ ವೇಳೆ ಕಾರ್ತಿಕ್ ಅವರು ಧರಿಸಿದ್ದ ಚಪ್ಪಲಿಯನ್ನು ನೆಲಕ್ಕೆ ಬೀಸೆ ಎಸೆದಿದ್ದಾರೆ. ದುರಾದೃಷ್ಟಕ್ಕೆ ಅದು ನಿಲಕ್ಕೆ ಬಡಿದು ವಿನಯ್​ಗೆ ತಾಗಿದೆ. ಇದರಿಂದ ವಿನಯ್ ಸಿಟ್ಟಾಗಿದ್ದಾರೆ.

ಚಪ್ಪಲಿ ಎಸೆತ ಪ್ರಕರಣ: ‘ಕಾರ್ತಿಕ್ ತಪ್ಪಿಲ್ಲ’ ಎಂದ ಮೈಕಲ್; ವಿನಯ್ ಕೆಂಡಾಮಂಡಲ
ಸ್ನೇಹಿತ್-ಮೈಕಲ್
ರಾಜೇಶ್ ದುಗ್ಗುಮನೆ
|

Updated on: Dec 08, 2023 | 8:14 AM

Share

ಬಿಗ್ ಬಾಸ್ ಮನೆಯಲ್ಲಿ ವಿನಯ್ (Vinay Gowda) ಅವರು ಕೆಂಡಾಮಂಡಲ ಆಗಿದ್ದಾರೆ. ಇದಕ್ಕೆ ಕಾರಣ ಆಗಿದ್ದು ಚಪ್ಪಲಿ ಎಸೆತ ಪ್ರಕರಣ. ಕಾರ್ತಿಕ್ ಕೋಪದಲ್ಲಿ ಎಸೆದಿದ್ದ ಚಪ್ಪಲಿ ವಿನಯ್​ಗೆ ತಾಗಿದೆ. ‘ನನಗೆ ಚಪ್ಪಲಿಯಲ್ಲಿ ಹೊಡೆದೆಯಾ’ ಎಂದು ವಿನಯ್ ಕೂಗಾಡಿದ್ದಾರೆ. ಆದರೆ, ಇದರಲ್ಲಿ ಕಾರ್ತಿಕ್ ಅವರ ತಪ್ಪಿಲ್ಲ ಎಂದು ವಿನಯ್​ಗೆ ಮನವರಿಕೆ ಮಾಡಿಕೊಡುವ ಕೆಲಸವನ್ನು ಮೈಕಲ್ ಮಾಡಿದ್ದಾರೆ. ಇದರಿಂದ ವಿನಯ್ ಮತ್ತಷ್ಟು ಸಿಟ್ಟಾಗಿದ್ದಾರೆ.

ವಿನಯ್ ಹಾಗೂ ಕಾರ್ತಿಕ್ ಈ ಬಾರಿ ಒಂದೇ ತಂಡದಲ್ಲಿ ಇದ್ದಾರೆ. ಆದರೆ, ಮೈಕಲ್ ಉಳಿದವರಂತೆ ಅಲ್ಲ. ವಿನಯ್ ಟೀಂನಲ್ಲಿ ಇದ್ದ ಮಾತ್ರಕ್ಕೆ ಅವರು ಹೇಳಿದ್ದೆಲ್ಲ ಸರಿ ಎಂದು ಕುಣಿಯುವುದಿಲ್ಲ. ತಪ್ಪಿದ್ದರೆ ಅದನ್ನು ತಪ್ಪು ಎಂದೇ ಹೇಳುತ್ತಾರೆ. ಕಾರ್ತಿಕ್ ಎಸೆದ ಚಪ್ಪಲ್ಲಿ ಆಕಸ್ಮಿಕವಾಗಿ ತಾಗಿದೆ ಎಂಬುದನ್ನು ಮೈಕಲ್ ಮನವರಿಕೆ ಮಾಡಲು ಪ್ರಯತ್ನಿಸಿದ್ದಾರೆ. ಇದು ವಿನಯ್​ಗೆ ಖುಷಿ ನೀಡಿಲ್ಲ.

ಕಾರ್ತಿಕ್ ಹಾಗೂ ವಿನಯ್ ಮಧ್ಯೆ ಕಿರಿಕ್ ಆಗಿದೆ. ಈ ವೇಳೆ ಕಾರ್ತಿಕ್ ಅವರು ಧರಿಸಿದ್ದ ಚಪ್ಪಲಿಯನ್ನು ನೆಲಕ್ಕೆ ಬೀಸಿ ಎಸೆದಿದ್ದಾರೆ. ದುರಾದೃಷ್ಟಕ್ಕೆ ಅದು ನಿಲಕ್ಕೆ ಬಡಿದು ವಿನಯ್​ಗೆ ತಾಗಿದೆ. ಇದರಿಂದ ವಿನಯ್ ಸಿಟ್ಟಾಗಿದ್ದಾರೆ. ಕಾರ್ತಿಕ್​ಗೆ ಹೊಡೆಯಬೇಕು ಎಂಬಷ್ಟರಮಟ್ಟಿಗೆ ಅವರಿಗೆ ಕೋಪ ನೆತ್ತಿಗೆ ಏರಿತ್ತು. ಈ ಮಧ್ಯೆ ಮೈಕಲ್ ಆಡಿದ ಮಾತು ವಿನಯ್ ಅವರ ಕೋಪವನ್ನು ಹೆಚ್ಚಿಸಿದೆ.

ಇದನ್ನೂ ಓದಿ: ‘ಲೇ ತಗಡು ಎದೆಮೇಲೆ ಕಾಲಿಟ್ಟೇ ನಿನ್ನ ತುಳಿಯೋದು’; ಕಾರ್ತಿಕ್​ಗೆ ವಿನಯ್ ಎಚ್ಚರಿಕೆ

‘ಆ ಮೈಕಲ್ ಮಾತನಾಡೋದು ನೋಡು, ಕಾರ್ತಿಕ್ ಚಪ್ಪಲಿಯನ್ನು ನೆಲಕ್ಕೆ ಎಸೆದಿದ್ದು, ಅದು ರಿಬೌಂಡ್ ಆಗಿ ನಿಮಗೆ ಬಂದಿದ್ದು ಎನ್ನುತ್ತಾನೆ’ ಎಂದು ವಿನಯ್ ಕೂಗಾಡಿದ್ದಾರೆ. ವಿನಯ್ ಅವರು ವಿಕ್ಟಿಮ್ ಕಾರ್ಡ್ ಪ್ಲೇ ಮಾಡಲು ಮುಂದಾಗಿದ್ದರು. ಇದಕ್ಕೆ ಮೈಕಲ್ ಬ್ರೇಕ್ ಹಾಕಿದ್ದಾರೆ. ಮೈಕಲ್ ಅವರನ್ನು ಎಲ್ಲರೂ ಈ ಕಾರಣಕ್ಕೆ ಪ್ರಶಂಸಿಸುತ್ತಿದ್ದಾರೆ. ಸದ್ಯ ಬಿಗ್ ಬಾಸ್ ಮನೆ ರಣರಂಗ ಆಗಿದೆ. ಗೇಮ್​ವೇಳೆ ಮನೆಯ ಸದಸ್ಯರಿಗೆ ಸಾಕಷ್ಟು ತೊಂದರೆಗಳು ಆಗಿವೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಕಾಣುತ್ತದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ಕೂಡ ವಿಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ