AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅವರು ಸಕತ್ ಸ್ವೀಟ್’; ಸಂಗೀತಾಗೆ ಕಂಡ್ತು ವಿನಯ್ ಅವರ ಮತ್ತೊಂದು ಮುಖ

ಆರಂಭದ ದಿನಗಳಲ್ಲಿ ವಿನಯ್ ಅವರು ಜೋರು ಧ್ವನಿಯಲ್ಲಿ ಮಾತನಾಡುತ್ತಿದ್ದಾರೆ ಎಂಬ ಕಾರಣಕ್ಕೆ ಸಂಗೀತಾ ಕೂಗಾಡಿದ್ದರು. ವಿನಯ್ ಮಾತು ಥ್ರೆಟ್ ಆಗುತ್ತಿದೆ ಎಂದು ಹೇಳಿದ್ದರು. ಈ ಸಂದರ್ಭದಲ್ಲಿ ಬೆಂಬಲಕ್ಕೆ ನಿಂತಿದ್ದು ಕಾರ್ತಿಕ್. ಈಗ ಕಾರ್ತಿಕ್​ನಿಂದ ದೂರವಾಗಿ ವಿನಯ್​ ಜೊತೆ ಆಪ್ತವಾಗಿದ್ದಾರೆ.

‘ಅವರು ಸಕತ್ ಸ್ವೀಟ್’; ಸಂಗೀತಾಗೆ ಕಂಡ್ತು ವಿನಯ್ ಅವರ ಮತ್ತೊಂದು ಮುಖ
ಸಂಗೀತಾ-ವಿನಯ್
ರಾಜೇಶ್ ದುಗ್ಗುಮನೆ
|

Updated on: Nov 24, 2023 | 8:08 AM

Share

ಬಿಗ್ ಬಾಸ್ (Bigg Boss) ಮನೆಯಲ್ಲಿ ಪರಿಸ್ಥಿತಿಗಳು ಯಾವಾಗ ಹೇಗೆ ಬೇಕಿದ್ದರೂ ಬದಲಾಗಬಹುದು. ಇಂದು ಆತ್ಮೀಯರು ಎನಿಸಿಕೊಂಡವರು ಮರುದಿನ ವೈರಿಗಳಾಗಬಹುದು. ಕನ್ನಡ ಬಿಗ್ ಬಾಸ್ ಮನೆಯಲ್ಲೂ ಇದೇ ಆಗುತ್ತಿದೆ. ಸಂಗೀತಾ, ಕಾರ್ತಿಕ್ ಹಾಗೂ ತನಿಷಾ ಬೆಸ್ಟ್ ಫ್ರೆಂಡ್ಸ್ ಎನಿಸಿಕೊಂಡಿದ್ದರು. ಆದರೆ, ಸಂಗೀತಾ ಈ ಗ್ರೂಪ್​ನಿಂದ ಹೊರ ಹೋಗಿದ್ದಾರೆ. ಇವರುಗಳು ಬದ್ಧ ವೈರಿಗಳಾಗಿದ್ದಾರೆ. ಅದೇ ರೀತಿ ಸಂಗೀತಾ ಹಾಗೂ ವಿನಯ್ ಬದ್ಧವೈರಿಗಳಂತೆ ವರ್ತಿಸುತ್ತಿದ್ದರು. ಇಬ್ಬರೂ ಬೆಸ್ಟ್ ಫ್ರೆಂಡ್ಸ್ ಆಗಿದ್ದಾರೆ.

ಸಣ್ಣ ಮಿಸ್​ಅಂಡರ್​ಸ್ಟ್ಯಾಂಡಿಂಗ್​ನಲ್ಲಿ ಸಂಗೀತಾ ಹಾಗೂ ಕಾರ್ತಿಕ್ ಮಧ್ಯೆ ಜಗಳ ಶುರುವಾಯಿತು. ಈಗ ಇಬ್ಬರ ಮಧ್ಯೆ ಸಾಕಷ್ಟು ಅಂತರ ಶುರುವಾಗಿದೆ. ಈಗ ಅವರು ಅನಿವಾರ್ಯವಾಗಿ ವಿನಯ್ ಗುಂಪು ಸೇರಿದ್ದಾರೆ. ನಮ್ರತಾ ಜೊತೆ ಕ್ಲೋಸ್ ಆಗಿದ್ದಾರೆ. ಅಷ್ಟೇ ಅಲ್ಲ, ವಿನಯ್ ಜೊತೆ ಫ್ರೆಂಡ್​ಶಿಪ್ ಬೆಳೆಸಿಕೊಂಡಿದ್ದಾರೆ.

ಆರಂಭದ ದಿನಗಳಲ್ಲಿ ವಿನಯ್ ಅವರು ಜೋರು ಧ್ವನಿಯಲ್ಲಿ ಮಾತನಾಡುತ್ತಿದ್ದಾರೆ ಎಂಬ ಕಾರಣಕ್ಕೆ ಸಂಗೀತಾ ಕೂಗಾಡಿದ್ದರು. ವಿನಯ್ ಮಾತು ಥ್ರೆಟ್ ಆಗುತ್ತಿದೆ ಎಂದು ಹೇಳಿದ್ದರು. ಈ ಸಂದರ್ಭದಲ್ಲಿ ಬೆಂಬಲಕ್ಕೆ ನಿಂತಿದ್ದು ಕಾರ್ತಿಕ್. ಈಗ ಕಾರ್ತಿಕ್​ನಿಂದ ದೂರವಾಗಿ ವಿನಯ್​ ಜೊತೆ ಆಪ್ತವಾಗಿದ್ದಾರೆ. ಈಗ ವಿನಯ್ ಅವರ ಮತ್ತೊಂದು ಮುಖ ಕಂಡಿದೆಯಂತೆ.

ಇದನ್ನೂ ಓದಿ: ‘ಇವರಿಗೆ ಮನುಷ್ಯತ್ವ ಇಲ್ವ?’; ಅಮಾನವೀಯ ಚಾಲೆಂಜ್ ನೀಡಿದ ವಿನಯ್-ಸಂಗೀತಾ ಟೀಂಗೆ ಛೀಮಾರಿ

ವಿನಯ್ ಅವರು ಸಂಗೀತಾಗೆ ಊಟ ಮಾಡಿಸಿದ್ದಾರೆ. ಅವರು ದುಃಖ ತೋಡಿಕೊಂಡಾಗ ಅದನ್ನು ಆಲಿಸಿದ್ದಾರೆ. ಹೀಗಾಗಿ, ವಿನಯ್ ಸ್ವೀಟ್ ಆಗಿ ಕಂಡಿದ್ದಾರೆ. ‘ವಿನಯ್ ಅವರಿಗೆ ಈ ಮುಖ ಇದೆ ಎಂದು ಗೊತ್ತೇ ಇರಲಿಲ್ಲ. ಇಷ್ಟು ಸ್ವೀಟ್ ಆಗಿರುವ ವ್ಯಕ್ತಿಯನ್ನು ಬಿಗ್ ಬಾಸ್ ಮನೆಯಲ್ಲಿ ನೋಡಿರಲೇ ಇಲ್ಲ’ ಎಂದು ಸಂಗೀತಾ ನಮ್ರತಾ ಬಳಿ ಹೇಳಿದರು. ‘ನಾನು ಮೊದಲಿನಿಂದಲೂ ಅವರ ಈ ಮುಖವನ್ನು ಮಾತ್ರ ನೋಡುತ್ತಿರುವುದು’ ಎಂದರು ನಮ್ರತಾ.

‘ಸಂಗೀತಾ ತಮಗೆ ತಾವೇ ಅಂತ್ಯ ಹಾಡಿಕೊಳ್ಳುತ್ತಿದ್ದಾರೆ’ ಎಂದು ಅನೇಕರು ಹೇಳಿದ್ದಾರೆ. ಇನ್ನೂ ಕೆಲವರು, ‘ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ’ ಎಂದು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ