‘ತಂದೆ ಭೇಟಿ ಮಾಡು, ಒಮ್ಮೆ ಕಳೆದುಕೊಂಡರೆ ಮತ್ತೆ ಸಿಗಲ್ಲ’; ಪ್ರತಾಪ್​ಗೆ ವಿನಯ್ ಕಿವಿಮಾತು

ಪ್ರತಾಪ್ ಆಟ ನೋಡಿ ವಿನಯ್​ಗೆ ಇಷ್ಟವಾಗಿದೆ. ಹೇಗಾದರೂ ಮಾಡಿ ಪ್ರತಾಪ್​ನ ತಮ್ಮ ತಂಡಕ್ಕೆ ಸೇರಿಸಿಕೊಳ್ಳಬೇಕು ಎಂದು ಅವರು ಪ್ರಯತ್ನ ಮಾಡುತ್ತಲೇ ಇದ್ದಾರೆ. ಇದಕ್ಕಾಗಿ ಪ್ರತಾಪ್​ನ ಹೊಗಳುವ ಕೆಲಸ ಆಗುತ್ತಿದೆ. ಅವರು ಪ್ರತಾಪ್​ ಬಗ್ಗೆ ಪಾಸಿಟಿವ್ ಆಗಿ ಮಾತನಾಡುತ್ತಿದ್ದಾರೆ.

‘ತಂದೆ ಭೇಟಿ ಮಾಡು, ಒಮ್ಮೆ ಕಳೆದುಕೊಂಡರೆ ಮತ್ತೆ ಸಿಗಲ್ಲ’; ಪ್ರತಾಪ್​ಗೆ ವಿನಯ್ ಕಿವಿಮಾತು
ಡ್ರೋನ್ ಪ್ರತಾಪ್
Follow us
|

Updated on: Nov 12, 2023 | 7:34 AM

ಡ್ರೋನ್ ಪ್ರತಾಪ್ (Drone Prathap) ಅವರು ಬಿಗ್ ಬಾಸ್ ಮನೆಯಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಅವರಿಗೆ ದಿನ ಕಳೆದಂತೆ ಅಭಿಮಾನಿ ವರ್ಗ ಹೆಚ್ಚುತ್ತಿದೆ. ಅವರ ಚಾಣಾಕ್ಷತೆಯ ಆಟವನ್ನು ಎಲ್ಲರೂ ಮೆಚ್ಚಿಕೊಳ್ಳುತ್ತಿದ್ದಾರೆ. ಅವರು ಪಾಲಕರನ್ನು ಭೇಟಿ ಮಾಡದೇ ಹಲವು ಸಮಯ ಕಳೆದಿದೆ. ಈ ಬಗ್ಗೆ ದೊಡ್ಮನೆಯಲ್ಲಿ ಅವರು ಮಾತನಾಡಿದ್ದಾರೆ. ವಿನಯ್ ಗೌಡಅವರು ಈ ಬಗ್ಗೆ ಮಾತನಾಡಿದ್ದಾರೆ. ಹೊರ ಹೋದ ತಕ್ಷಣ ಅವರನ್ನು ಮೀಟ್ ಮಾಡುವಂತೆ ವಿನಯ್ ಅವರು ಪ್ರತಾಪ್​ಗೆ ಕಿವಿಮಾತು ಹೇಳಿದ್ದಾರೆ.

ಪ್ರತಾಪ್ ಆಟ ನೋಡಿ ವಿನಯ್​ಗೆ ಇಷ್ಟವಾಗಿದೆ. ಹೇಗಾದರೂ ಮಾಡಿ ಪ್ರತಾಪ್​ನ ತಮ್ಮ ತಂಡಕ್ಕೆ ಸೇರಿಸಿಕೊಳ್ಳಬೇಕು ಎಂದು ಅವರು ಪ್ರಯತ್ನ ಮಾಡುತ್ತಲೇ ಇದ್ದಾರೆ. ಇದಕ್ಕಾಗಿ ಪ್ರತಾಪ್​ನ ಹೊಗಳುವ ಕೆಲಸ ಆಗುತ್ತಿದೆ. ಅವರು ಪ್ರತಾಪ್​ ಬಗ್ಗೆ ಪಾಸಿಟಿವ್ ಆಗಿ ಮಾತನಾಡುತ್ತಿದ್ದಾರೆ. ಅವರ ಬಗ್ಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಈ ಬಗ್ಗೆ ಪ್ರತಾಪ್​ಗೂ ಅರಿವಿದೆ. ಈಗ ತಂದೆಯ ವಿಚಾರಕ್ಕೆ ವಿನಯ್​ ಅವರು ಪ್ರತಾಪ್​ಗೆ ಕಿವಿಮಾತು ಹೇಳಿದ್ದಾರೆ.

‘ತಂದೆಯನ್ನು ಭೇಟಿ ಮಾಡದೇ ಎಷ್ಟು ಸಮಯ ಆಯಿತು’ ಎಂದು ಪ್ರತಾಪ್​ಗೆ ಕೇಳಲಾಯಿತು. ಇದಕ್ಕೆ ಅವರು ಮೂರು ವರ್ಷ ಎಂದರು. ಮೂರು ವರ್ಷವೇ ಎಂದು ಕೆಲವರು ಉದ್ಘಾರ ತೆಗೆದರು. ‘ನಾನು ತಂದೆ ತಾಯೀನ ಭೇಟಿ ಮಾಡುತ್ತೇನೆ. ಇದನ್ನು ಬಿಗ್ ಬಾಸ್​ಗೆ ಕೇಳಿದ್ದೇನೆ’ ಎಂದರು ಪ್ರತಾಪ್. ಆಗ ವಿನಯ್ ಅವರು ಕಿವಿಮಾತು ಹೇಳಿದರು.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಪ್ರತಾಪ್​ಗಿಲ್ಲ ಧೈರ್ಯ? ಎಲ್ಲರದ್ದೂ ಇದೇ ಅಭಿಪ್ರಾಯ

‘ನಾನು ನನ್ನ ತಂದೆಯನ್ನು 16 ವರ್ಷ ನೋಡಿರಲಿಲ್ಲ. ಆಮೇಲೆ ಅವರು ಸತ್ತು ಹೋದರು. ನೋಡಬೇಕು ಎಂದರೂ ಆಗಲಿಲ್ಲ. ಒಮ್ಮೆ ಕಳೆದುಕೊಂಡರೆ ಆ ಬಳಿಕ ಬೇಕು ಎಂದರೂ ಭೇಟಿ ಮಾಡೋಕೆ ಆಗಲ್ಲ. ಅವರು ಬಿಗ್ ಬಾಸ್​ನ ಖಂಡಿತವಾಗಿಯೂ ನೋಡುತ್ತಾ ಇರುತ್ತಾರೆ. ನಿನಗೆ ಉತ್ತಮ ಸಿಕ್ಕಿದ್ದು ಅವರಿಗೆ ಖುಷಿ ನೀಡಿರುತ್ತದೆ’ ಎಂದರು ವಿನಯ್. ಇದನ್ನು ಕೇಳಿ ಪ್ರತಾಪ್​ ಖುಷಿಪಟ್ಟಿದ್ದಾರೆ. ಕಲರ್ಸ ಕನ್ನಡದಲ್ಲಿ ಎಪಿಸೋಡ್ ಹಾಗೂ ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ನೋಡೋಕೆ ಅವಕಾಶ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ
ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ
ಜಕ್ಕೂರು ಮತ್ತು ಯಲಹಂಕಗಳಿಂದ ಹರಿದು ಮನೆಗಳಿಗೆ ನುಗ್ಗಿದ ನೀರು!
ಜಕ್ಕೂರು ಮತ್ತು ಯಲಹಂಕಗಳಿಂದ ಹರಿದು ಮನೆಗಳಿಗೆ ನುಗ್ಗಿದ ನೀರು!
ದೇವನಹಳ್ಳಿ: ಕಾಲುವೆ ನೀರಿನಲ್ಲಿ ಕೊಚ್ಚಿಹೋದ ಕಾರುಗಳು!
ದೇವನಹಳ್ಳಿ: ಕಾಲುವೆ ನೀರಿನಲ್ಲಿ ಕೊಚ್ಚಿಹೋದ ಕಾರುಗಳು!
ಬ್ರಿಕ್ಸ್​​ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ರಷ್ಯಾಗೆ ತೆರಳಿದ ಪ್ರಧಾನಿ ಮೋದಿ
ಬ್ರಿಕ್ಸ್​​ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ರಷ್ಯಾಗೆ ತೆರಳಿದ ಪ್ರಧಾನಿ ಮೋದಿ