Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿಕೆ ಶಿವಕುಮಾರ್ ಗೆದ್ದಾಗ ಇಡೀ ಮೆಜೆಸ್ಟಿಕ್ ಬಂದ್, ರೂಂಗೆ ಬರುತ್ತಿದ್ದು ಬಕೆಟ್​ಗಟ್ಟಲೆ ಆಹಾರ

Weekend With Ramesh: ರಾಜಕೀಯದ ಆರಂಭದ ದಿನಗಳಲ್ಲಿ ತೋಳ್ಬಲದ ರಾಜಕೀಯ ಮಾಡಿ ಬಂದ ಡಿಕೆ ಶಿವಕುಮಾರ್, ಜನರಲ್ ಹಾಸ್ಟೆಲ್ ದಿನಗಳನ್ನು ಸಣ್ಣದಾಗಿ ವೀಕೆಂಡ್ ವಿತ್ ರಮೇಶ್​ ನಲ್ಲಿ ನೆನಪಿಸಿಕೊಂಡಿದ್ದಾರೆ.

ಡಿಕೆ ಶಿವಕುಮಾರ್ ಗೆದ್ದಾಗ ಇಡೀ ಮೆಜೆಸ್ಟಿಕ್ ಬಂದ್, ರೂಂಗೆ ಬರುತ್ತಿದ್ದು ಬಕೆಟ್​ಗಟ್ಟಲೆ ಆಹಾರ
ಡಿಕೆ ಶಿವಕುಮಾರ್
Follow us
ಮಂಜುನಾಥ ಸಿ.
|

Updated on: Jun 10, 2023 | 11:01 PM

ಡಿಕೆ ಶಿವಕುಮಾರ್ (DK Shivakumar) ರಾಜಕೀಯದ ಆರಂಭದ ದಿನಗಳಲ್ಲಿ ತೋಳ್ಬಲದ, ಬುದ್ಧಿಬಲದ ರಾಜಕೀಯ ಮಾಡಿ ಬಂದವರು. ರಾಜಕೀಯದಲ್ಲಿ ವರ್ಷಗಳು ಕಳೆಯುತ್ತಾ ಕಾಲಕ್ಕೆ ತಕ್ಕಂತೆ ತಮ್ಮ ರಾಜಕೀಯ ನೀತಿಗಳನ್ನು, ಪದ್ಧತಿಗಳನ್ನು ಬದಲಿಸಿಕೊಂಡಿದ್ದಾರಾದರೂ ಆರಂಭದ ದಿನಗಳಲ್ಲಿ ಆಗಿನ ಸಂದರ್ಭಕ್ಕೆ ಅನುಸಾರವಾಗಿ ಶಕ್ತಿ-ಸಾಮರ್ಥ್ಯದ ರಾಜಕೀಯ ಮಾಡಿದ್ದಾರೆ ಅದನ್ನು ಅವರೂ ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಇದೀಗ ವೀಕೆಂಡ್ ವಿತ್ ರಮೇಶ್​ಗೆ ಆಗಮಿಸಿದ್ದ ಡಿಕೆ ಶಿವಕುಮಾರ್, ವಿದ್ಯಾರ್ಥಿ ಸಂಘಟನೆ (Student Election), ಚುನಾವಣೆ ಬಗ್ಗೆ ಮಾತನಾಡುತ್ತಾ ಜನರಲ್ ಹಾಸ್ಟೆಲ್ (General Hostle) ದಿನಗಳನ್ನು ಬಹಳ ಚುಟುಕಾಗಿ ನೆನಪು ಮಾಡಿಕೊಂಡರು.

ಕರ್ನಾಟಕದ ರಾಜಕೀಯಕ್ಕೆ ಅದರಲ್ಲೂ ಕಾಂಗ್ರೆಸ್ ಪಕ್ಷಕ್ಕೂ ಬೆಂಗಳೂರಿನ ಜನರಲ್ ಹಾಸ್ಟೆಲ್​ಗೂ ಬಹಳ ಗಾಢವಾದ ನಂಟಿದೆ. ಡಿಕೆ ಶಿವಕುಮಾರ್ ಸಹ ಅದೇ ಜನರಲ್ ಹಾಸ್ಟೆಲ್​ನಲ್ಲಿ ಇದ್ದು ರಾಜಕೀಯದ ಪಟ್ಟುಗಳನ್ನು ಕಲಿತವರು. ವೀಕೆಂಡ್ ವಿತ್ ರಮೇಶ್​ನಲ್ಲಿ ಜನರಲ್ ಹಾಸ್ಟೆಲ್​ನ ಉಲ್ಲೇಖ ಬಂದಿದ್ದು ಡಿಕೆ ಶಿವಕುಮಾರ್​ ಅವರಿಗಾಗಿ ಬರುತ್ತಿದ್ದ ಊಟದ ಕಾರಣಕ್ಕೆ.

ಹಾಸ್ಟೆಲ್​ನಲ್ಲಿದ್ದಾಗ ಡಿಕೆ ಶಿವಕುಮಾರ್ ಅವರಿಗಾಗಿ ದೊಡ್ಡ ಕ್ಯಾರಿಯರ್​ಗಳಲ್ಲಿ ಪುಲಾವ್, ಚಿಕನ್ ಇನ್ನಿತರೆ ಐಟಂಗಳು ಬರುತ್ತಿದ್ದವಂತೆ. ಡಿಕೆಶಿ ಜೊತೆ ಅವರ ಗೆಳೆಯರೆಲ್ಲರೂ ಸೇರಿ ಊಟ ಮಾಡುತ್ತಿದ್ದರಂತೆ. ಈ ಬಗ್ಗೆ ಮಾತನಾಡಿದ ಡಿಕೆ ಶಿವಕುಮಾರ್, ಆಗ ವಿದ್ಯಾರ್ಥಿ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಡಿಕೆ ಶಿವಕುಮಾರ್, ಮೆಜೆಸ್ಟಿಕ್​ನ ಪ್ರಮುಖ ಹೋಟೆಲ್​ಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಕಡಿಮೆ ದರದಲ್ಲಿ ಊಟ ನೀಡಬೇಕು ಎಂದು ಆಗ್ರಹಿಸಿದ್ದರಂತೆ. ಅಂತೆಯೇ ಆಗಿನ ಪ್ರಮುಖ ಹೋಟೆಲ್​ಗಳು ಬಹಳ ಕಡಿಮೆ ದರಕ್ಕೆ ವಿದ್ಯಾರ್ಥಿಗಳಿಗೆ ಊಟ ಕೊಡುತ್ತಿದ್ದರಂತೆ. ಡಿಕೆ ಶಿವಕುಮಾರ್ ಸಹ ಆಗಾಗ್ಗೆ ಹೋಟೆಲ್​ಗಳಿಗೆ ಹೋಗುತ್ತಿದ್ದರಂತೆ ಅವರು ಹೋದರೆ ಅವರೊಡನೆ ಸುಮಾರು 20 ಜನ ಜೊತೆಗೆ ಹೋಗುತ್ತಿದ್ದರಂತೆ. ಅದರಿಂದ ಹೋಟೆಲ್​ಗೆ ಬರುವ ಇತರೆ ಗ್ರಾಹಕರಿಗೆ ಸಮಸ್ಯೆ ಆಗುತ್ತದೆಂದು ಹೋಟೆಲ್ ನವರೇ ಹಾಸ್ಟೆಲ್​ಗೆ ಕ್ಯಾರಿಯರ್​ನಲ್ಲಿ ಊಟ ಕಳಿಸುತ್ತಿದ್ದರಂತೆ. ಆಗಲೇ ಆ ಮಾದರಿಯ ಹವಾ ಇಟ್ಟಿದ್ದರು ಡಿ.ಕೆ.ಶಿವಕುಮಾರ್.

ಇದನ್ನು ಓದಿ:‘ವೀಕೆಂಡ್ ವಿತ್ ರಮೇಶ್’ನಲ್ಲಿ ತಮ್ಮನ ಬಗ್ಗೆ ಮಾತನಾಡುತ್ತಾ ಕಣ್ಣೀರು ಹಾಕಿದ ಡಿಕೆ ಶಿವಕುಮಾರ್​

ಇನ್ನು ಅದೇ ಕಾರ್ಯಕ್ರಮದಲ್ಲಿ, ತಾವೊಮ್ಮೆ ಚುನಾವಣೆ ಗೆದ್ದಾಗ ಇಡೀಯ ಮೆಜೆಸ್ಟಿಕ್ ಏರಿಯಾವನ್ನೇ ಬಂದ್ ಮಾಡಿಬಿಟ್ಟಿದ್ದರು ಎಂಬುದನ್ನು ಡಿ.ಕೆ.ಸುರೇಶ್ ನೆನಪು ಮಾಡಿಕೊಂಡಿದ್ದಾರೆ. ಆಗೆಲ್ಲ ನನ್ನ ಬಗ್ಗೆ ಭಕ್ತಿಗಿಂತಲೂ ಭಯವೇ ಹೆಚ್ಚಿಗಿತ್ತು ಎಂದು ಸೂಚ್ಯವಾಗಿ ತಮ್ಮ ಅಂದಿನ ದಿನದ ಖದರ್ ಬಗ್ಗೆ ಶಿವಕುಮಾರ್ ಹೇಳಿದರು.

ಬಹಳ ಸಣ್ಣ ವಯಸ್ಸಿನಿಂದಲೇ ರಾಜಕೀಯದ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದ ಡಿ.ಕೆ.ಶಿವಕುಮಾರ್, ತಮ್ಮ ಏಳನೇ ವಯಸ್ಸಿನಲ್ಲಿಯೇ ಚುನಾವಣೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರಂತೆ. ವಿದ್ಯಾರ್ಥಿ ಜೀವನದಲ್ಲಿಯೇ ಸಾಕಷ್ಟು ಚುನಾವಣೆಗಳನ್ನು ಎದುರಿಸಿ ಗೆದ್ದ ಡಿ.ಕೆ.ಶಿವಕುಮಾರ್, ತಮಗೆ ಚುನಾವಣೆ ಗೆಲ್ಲುವ ತಂತ್ರಗಳ ಅರಿವು ಆಗಿನಿಂದಲೂ ಇತ್ತು ಚುನಾವಣೆ ಗೆಲ್ಲುವ ಕಲೆ ಕರಗತವಾಗಿತ್ತು ಎಂದಿದ್ದಾರೆ.‘

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !