AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿಕೆ ಶಿವಕುಮಾರ್ ಗೆದ್ದಾಗ ಇಡೀ ಮೆಜೆಸ್ಟಿಕ್ ಬಂದ್, ರೂಂಗೆ ಬರುತ್ತಿದ್ದು ಬಕೆಟ್​ಗಟ್ಟಲೆ ಆಹಾರ

Weekend With Ramesh: ರಾಜಕೀಯದ ಆರಂಭದ ದಿನಗಳಲ್ಲಿ ತೋಳ್ಬಲದ ರಾಜಕೀಯ ಮಾಡಿ ಬಂದ ಡಿಕೆ ಶಿವಕುಮಾರ್, ಜನರಲ್ ಹಾಸ್ಟೆಲ್ ದಿನಗಳನ್ನು ಸಣ್ಣದಾಗಿ ವೀಕೆಂಡ್ ವಿತ್ ರಮೇಶ್​ ನಲ್ಲಿ ನೆನಪಿಸಿಕೊಂಡಿದ್ದಾರೆ.

ಡಿಕೆ ಶಿವಕುಮಾರ್ ಗೆದ್ದಾಗ ಇಡೀ ಮೆಜೆಸ್ಟಿಕ್ ಬಂದ್, ರೂಂಗೆ ಬರುತ್ತಿದ್ದು ಬಕೆಟ್​ಗಟ್ಟಲೆ ಆಹಾರ
ಡಿಕೆ ಶಿವಕುಮಾರ್
ಮಂಜುನಾಥ ಸಿ.
|

Updated on: Jun 10, 2023 | 11:01 PM

Share

ಡಿಕೆ ಶಿವಕುಮಾರ್ (DK Shivakumar) ರಾಜಕೀಯದ ಆರಂಭದ ದಿನಗಳಲ್ಲಿ ತೋಳ್ಬಲದ, ಬುದ್ಧಿಬಲದ ರಾಜಕೀಯ ಮಾಡಿ ಬಂದವರು. ರಾಜಕೀಯದಲ್ಲಿ ವರ್ಷಗಳು ಕಳೆಯುತ್ತಾ ಕಾಲಕ್ಕೆ ತಕ್ಕಂತೆ ತಮ್ಮ ರಾಜಕೀಯ ನೀತಿಗಳನ್ನು, ಪದ್ಧತಿಗಳನ್ನು ಬದಲಿಸಿಕೊಂಡಿದ್ದಾರಾದರೂ ಆರಂಭದ ದಿನಗಳಲ್ಲಿ ಆಗಿನ ಸಂದರ್ಭಕ್ಕೆ ಅನುಸಾರವಾಗಿ ಶಕ್ತಿ-ಸಾಮರ್ಥ್ಯದ ರಾಜಕೀಯ ಮಾಡಿದ್ದಾರೆ ಅದನ್ನು ಅವರೂ ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಇದೀಗ ವೀಕೆಂಡ್ ವಿತ್ ರಮೇಶ್​ಗೆ ಆಗಮಿಸಿದ್ದ ಡಿಕೆ ಶಿವಕುಮಾರ್, ವಿದ್ಯಾರ್ಥಿ ಸಂಘಟನೆ (Student Election), ಚುನಾವಣೆ ಬಗ್ಗೆ ಮಾತನಾಡುತ್ತಾ ಜನರಲ್ ಹಾಸ್ಟೆಲ್ (General Hostle) ದಿನಗಳನ್ನು ಬಹಳ ಚುಟುಕಾಗಿ ನೆನಪು ಮಾಡಿಕೊಂಡರು.

ಕರ್ನಾಟಕದ ರಾಜಕೀಯಕ್ಕೆ ಅದರಲ್ಲೂ ಕಾಂಗ್ರೆಸ್ ಪಕ್ಷಕ್ಕೂ ಬೆಂಗಳೂರಿನ ಜನರಲ್ ಹಾಸ್ಟೆಲ್​ಗೂ ಬಹಳ ಗಾಢವಾದ ನಂಟಿದೆ. ಡಿಕೆ ಶಿವಕುಮಾರ್ ಸಹ ಅದೇ ಜನರಲ್ ಹಾಸ್ಟೆಲ್​ನಲ್ಲಿ ಇದ್ದು ರಾಜಕೀಯದ ಪಟ್ಟುಗಳನ್ನು ಕಲಿತವರು. ವೀಕೆಂಡ್ ವಿತ್ ರಮೇಶ್​ನಲ್ಲಿ ಜನರಲ್ ಹಾಸ್ಟೆಲ್​ನ ಉಲ್ಲೇಖ ಬಂದಿದ್ದು ಡಿಕೆ ಶಿವಕುಮಾರ್​ ಅವರಿಗಾಗಿ ಬರುತ್ತಿದ್ದ ಊಟದ ಕಾರಣಕ್ಕೆ.

ಹಾಸ್ಟೆಲ್​ನಲ್ಲಿದ್ದಾಗ ಡಿಕೆ ಶಿವಕುಮಾರ್ ಅವರಿಗಾಗಿ ದೊಡ್ಡ ಕ್ಯಾರಿಯರ್​ಗಳಲ್ಲಿ ಪುಲಾವ್, ಚಿಕನ್ ಇನ್ನಿತರೆ ಐಟಂಗಳು ಬರುತ್ತಿದ್ದವಂತೆ. ಡಿಕೆಶಿ ಜೊತೆ ಅವರ ಗೆಳೆಯರೆಲ್ಲರೂ ಸೇರಿ ಊಟ ಮಾಡುತ್ತಿದ್ದರಂತೆ. ಈ ಬಗ್ಗೆ ಮಾತನಾಡಿದ ಡಿಕೆ ಶಿವಕುಮಾರ್, ಆಗ ವಿದ್ಯಾರ್ಥಿ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಡಿಕೆ ಶಿವಕುಮಾರ್, ಮೆಜೆಸ್ಟಿಕ್​ನ ಪ್ರಮುಖ ಹೋಟೆಲ್​ಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಕಡಿಮೆ ದರದಲ್ಲಿ ಊಟ ನೀಡಬೇಕು ಎಂದು ಆಗ್ರಹಿಸಿದ್ದರಂತೆ. ಅಂತೆಯೇ ಆಗಿನ ಪ್ರಮುಖ ಹೋಟೆಲ್​ಗಳು ಬಹಳ ಕಡಿಮೆ ದರಕ್ಕೆ ವಿದ್ಯಾರ್ಥಿಗಳಿಗೆ ಊಟ ಕೊಡುತ್ತಿದ್ದರಂತೆ. ಡಿಕೆ ಶಿವಕುಮಾರ್ ಸಹ ಆಗಾಗ್ಗೆ ಹೋಟೆಲ್​ಗಳಿಗೆ ಹೋಗುತ್ತಿದ್ದರಂತೆ ಅವರು ಹೋದರೆ ಅವರೊಡನೆ ಸುಮಾರು 20 ಜನ ಜೊತೆಗೆ ಹೋಗುತ್ತಿದ್ದರಂತೆ. ಅದರಿಂದ ಹೋಟೆಲ್​ಗೆ ಬರುವ ಇತರೆ ಗ್ರಾಹಕರಿಗೆ ಸಮಸ್ಯೆ ಆಗುತ್ತದೆಂದು ಹೋಟೆಲ್ ನವರೇ ಹಾಸ್ಟೆಲ್​ಗೆ ಕ್ಯಾರಿಯರ್​ನಲ್ಲಿ ಊಟ ಕಳಿಸುತ್ತಿದ್ದರಂತೆ. ಆಗಲೇ ಆ ಮಾದರಿಯ ಹವಾ ಇಟ್ಟಿದ್ದರು ಡಿ.ಕೆ.ಶಿವಕುಮಾರ್.

ಇದನ್ನು ಓದಿ:‘ವೀಕೆಂಡ್ ವಿತ್ ರಮೇಶ್’ನಲ್ಲಿ ತಮ್ಮನ ಬಗ್ಗೆ ಮಾತನಾಡುತ್ತಾ ಕಣ್ಣೀರು ಹಾಕಿದ ಡಿಕೆ ಶಿವಕುಮಾರ್​

ಇನ್ನು ಅದೇ ಕಾರ್ಯಕ್ರಮದಲ್ಲಿ, ತಾವೊಮ್ಮೆ ಚುನಾವಣೆ ಗೆದ್ದಾಗ ಇಡೀಯ ಮೆಜೆಸ್ಟಿಕ್ ಏರಿಯಾವನ್ನೇ ಬಂದ್ ಮಾಡಿಬಿಟ್ಟಿದ್ದರು ಎಂಬುದನ್ನು ಡಿ.ಕೆ.ಸುರೇಶ್ ನೆನಪು ಮಾಡಿಕೊಂಡಿದ್ದಾರೆ. ಆಗೆಲ್ಲ ನನ್ನ ಬಗ್ಗೆ ಭಕ್ತಿಗಿಂತಲೂ ಭಯವೇ ಹೆಚ್ಚಿಗಿತ್ತು ಎಂದು ಸೂಚ್ಯವಾಗಿ ತಮ್ಮ ಅಂದಿನ ದಿನದ ಖದರ್ ಬಗ್ಗೆ ಶಿವಕುಮಾರ್ ಹೇಳಿದರು.

ಬಹಳ ಸಣ್ಣ ವಯಸ್ಸಿನಿಂದಲೇ ರಾಜಕೀಯದ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದ ಡಿ.ಕೆ.ಶಿವಕುಮಾರ್, ತಮ್ಮ ಏಳನೇ ವಯಸ್ಸಿನಲ್ಲಿಯೇ ಚುನಾವಣೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರಂತೆ. ವಿದ್ಯಾರ್ಥಿ ಜೀವನದಲ್ಲಿಯೇ ಸಾಕಷ್ಟು ಚುನಾವಣೆಗಳನ್ನು ಎದುರಿಸಿ ಗೆದ್ದ ಡಿ.ಕೆ.ಶಿವಕುಮಾರ್, ತಮಗೆ ಚುನಾವಣೆ ಗೆಲ್ಲುವ ತಂತ್ರಗಳ ಅರಿವು ಆಗಿನಿಂದಲೂ ಇತ್ತು ಚುನಾವಣೆ ಗೆಲ್ಲುವ ಕಲೆ ಕರಗತವಾಗಿತ್ತು ಎಂದಿದ್ದಾರೆ.‘

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!