AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬದುಕು ನಡೆಸಲು ನಾನಾ ಕಷ್ಟ ಪಡುತ್ತಿದ್ದ ನಾಗೇಂದ್ರ ಪ್ರಸಾದ್​ಗೆ ಸಾಹಿತ್ಯ ಕೈಹಿಡಿದಿದ್ದು ಹೇಗೆ?

Weekend With Ramesh: ಬದುಕು ನಡೆಸಲು ನಾನಾ ಕಷ್ಟಪಡುತ್ತಿದ್ದ ನಾಗೇಂದ್ರ ಪ್ರಸಾದ್ ಅವರನ್ನು ಸಾಹಿತ್ಯ ಇಷ್ಟು ದೂರ ಕರೆತಂದಿದೆ. ಅವರ ಜೀವನ ಹೇಗಿತ್ತು? ವೀಕೆಂಡ್​ ವಿತ್ ರಮೇಶ್​ನಲ್ಲಿ ಕತೆ ಅನಾವರಣಗೊಂಡಿದೆ.

ಬದುಕು ನಡೆಸಲು ನಾನಾ ಕಷ್ಟ ಪಡುತ್ತಿದ್ದ ನಾಗೇಂದ್ರ ಪ್ರಸಾದ್​ಗೆ ಸಾಹಿತ್ಯ ಕೈಹಿಡಿದಿದ್ದು ಹೇಗೆ?
ನಾಗೇಂದ್ರ ಪ್ರಸಾದ್
ಮಂಜುನಾಥ ಸಿ.
|

Updated on: May 21, 2023 | 8:47 AM

Share

ವೀಕೆಂಡ್ ವಿತ್ ರಮೇಶ್​ (Weekend With Ramesh) ಐದನೇ ಸೀಸನ್​ನ ಈ ವಾರದ ಅತಿಥಿಯಾಗಿ ಆಗಮಿಸಿದ್ದ ಗೀತ ಸಾಹಿತಿ ವಿ ನಾಗೇಂದ್ರ ಪ್ರಸಾದ್ ತಮ್ಮ ಜೀವನ ಪಯಣವನ್ನು ಭಾವುಕವಾಗಿ ನೆನಪು ಮಾಡಿಕೊಂಡರು. ಇಜ್ಜಲಘಟ್ಟ ಹೆಸರಿನ ಸಣ್ಣ ಗ್ರಾಮದ ಬಡತನದ ಕುಟುಂಬದ ನಾಗೇಂದ್ರ ಪ್ರಸಾದ್, ಬಾಲ್ಯದಲ್ಲಿ ಸಾಕಷ್ಟು ಕಷ್ಟಗಳನ್ನು ಕಂಡವರು. ತಮ್ಮ ಸಹೋದರರೊಟ್ಟಿಗೆ ಸೇರಿಕೊಂಡು ಊದುಬತ್ತಿ ಪ್ಯಾಕೆಟ್ ಮಾಡುವುದು, ಮೆಡಿಕಲ್ ಶಾಪ್​ಗಳಿಗೆ ಪೊಟ್ಟಣಗಳನ್ನು ಮಾಡಿಕೊಡುವುದು, ಅಜ್ಜಿಯೊಟ್ಟಿಗೆ ತೆರಳಿ ಬಳೆ ಮಾಡುವುದು ಮಾಡುತ್ತಿದ್ದವರು. ಇದೆಲ್ಲದರ ನಡುವೆ ಶೈಕ್ಷಣಿಕವಾಗಿಯೂ ಮುಂಚೂಣಿಯಲ್ಲಿದ್ದವರು.

ತಮ್ಮ ಗ್ರಾಮದಲ್ಲಿ ನಡೆಯುತ್ತಿದ್ದ ಜನಪದ ಹಾಡು, ನೃತ್ಯಗಳ ಬಗೆಗೆ, ನಾಟಕಗಳ ಬಗ್ಗೆ ಬಹಳ ಆಸಕ್ತಿ ಇರಿಸಿಕೊಂಡಿದ್ದ ನಾಗೇಂದ್ರ ಪ್ರಸಾದ್ ಶಾಲೆ, ಕಾಲೇಜುಗಳಲ್ಲಿ ಅದನ್ನೇ ಹವ್ಯಾಸವಾಗಿ ರೂಢಿಸಿಕೊಂಡು ನಾಟಕಗಳನ್ನು ಬರೆಯುತ್ತಿದ್ದರಂತೆ. ಹೈಸ್ಕೂಲು, ಕಾಲೇಜಿನ ಸಮಯದಲ್ಲಿ ತುಸು ತುಂಟತನದ ವಿದ್ಯಾರ್ಥಿಯಾಗಿದ್ದ ನಾಗೇಂದ್ರ ಪ್ರಸಾದ್ ತಮ್ಮ ಸಹಪಾಠಿಗಳಿಗೆ ಲವ್ ಲೆಟರ್ ಬರೆದುಕೊಡುತ್ತಿದ್ದರಂತೆ ಸಹ. ಕನ್ನಡ ವಿದ್ಯಾರ್ಥಿಯಾಗಿದ್ದ ನಾಗೇಂದ್ರ ಪ್ರಸಾದರಿಗೆ ಪಾರ್ಕ್​ ಒಂದರಲ್ಲಿ ನಿರ್ದೇಶಕ ಕೆವಿ ಜಯರಾಂ ಸಿಕ್ಕು ಅವರ ಗಾಜಿನ ಮನೆ ಸಿನಿಮಾಕ್ಕೆ ಹಾಡು ಬರೆದುಕೊಡಲು ಸೂಚಿಸಿದ್ದಾರೆ. ಅವಕಾಶವನ್ನು ಸದುಪಯೋಗಪಡಿಸಿಕೊಂಡ ನಾಗೇಂದ್ರ ಪ್ರಸಾದ್, ಸಾಧಿಸಿದರೆ ಸಿನಿಮಾ ರಂಗದಲ್ಲಿಯೇ ಎಂದುಕೊಂಡು ಇದ್ದ ಕೆಲಸಕ್ಕೆ ರಾಜೀನಾಮೆ ನೀಡಿ ಚಿತ್ರರಂಗಕ್ಕೆ ಹಾರಿದ್ದಾರೆ. ಅವರಿಗೆ ಮೊದಲ ಸಿಕ್ಕ ಅವಕಾಶವೇ ಶ್ರೀ ಮಂಜುನಾಥ ಸಿನಿಮಾ. ಆ ಸಿನಿಮಾದ ಬಳಿಕ ನಾಗೇಂದ್ರ ಪ್ರಸಾದ್ ಹಿಂತಿರುಗಿ ನೋಡಿದ್ದೇ ಇಲ್ಲ.

ಸಿನಿಮಾ ರಂಗಕ್ಕೆ ಬಂದ ನಂತರವೂ ಕಷ್ಟಗಳು ಅವರ ಬೆನ್ನು ಬಿಡಲಿಲ್ಲವಂತೆ. ಎಷ್ಟೋ ಬಾರಿ ಕೆಲಸಗಳೇ ಇರುತ್ತಿರಲಿಲ್ಲವಂತೆ, ಜೇಬಿನಲ್ಲಿ ದುಡ್ಡು ಸಹ ಇರುತ್ತಿರಲಿಲ್ಲವಂತೆ. ಪತ್ನಿ ಗರ್ಭಿಣಿ ಆದಾಗ ಅವರಿಗೆ ಇಷ್ಟದ ಮಸಾಲೆ ದೋಸೆ, ಮಲ್ಲಿಗೆ ಹೂವು ಕೊಡಿಸಲು ಸಹ ಹಣವಿರಲಿಲ್ಲ ಎಂದು ಭಾವುಕರಾದರು ನಾಗೇಂದ್ರ ಪ್ರಸಾದ್. ಆದರೆ ಅವರ ಪತ್ನಿ, ನನಗೆ ಇವರು ಎಲ್ಲವನ್ನೂ ನೀಡಿದ್ದಾರೆ ಎಂದರು ಆದರೆ ಕುಟುಂಬಕ್ಕೆ ಸರಿಯಾಗಿ ಸಮಯವೊಂದನ್ನು ನೀಡಲಾಗುತ್ತಿಲ್ಲ ಅವರಿಗೆ ಎಂದು ಬೇಸರ ವ್ಯಕ್ತಪಡಿಸಿದರು. ಶೋನ ಕೊನೆಯಲ್ಲಿ ಆ ಬಗ್ಗೆ ಕ್ಷಮೆಯನ್ನೂ ಕೇಳಿದರು ನಾಗೇಂದ್ರ ಪ್ರಸಾದ್.

ಇದನ್ನೂ ಓದಿ:ನಾಗೇಂದ್ರ ಪ್ರಸಾದ್ ಬದುಕು ಬದಲಾಯಿಸಿದ ‘ಶ್ರೀ ಮಂಜುನಾಥ’ ಅವಕಾಶ ದೊರಕಿದ್ದು ಹೇಗೆ?

ತಮ್ಮ ಪ್ರಿಯ ಶಿಷ್ಯರಲ್ಲಿ ಒಬ್ಬರಾಗಿರುವ ನಾಗೇಂದ್ರ ಪ್ರಸಾದರ ಬಗ್ಗೆ ಹಂಸಲೇಖ ಅವರಿಗೆ ವಿಶೇಷ ಪ್ರೇಮ. ”ನಾನು ಕೂರಬೇಕಾದ ಜಾಗಗಳಲ್ಲಿ ನಾಗೇಂದ್ರ ಪ್ರಸಾದ್ ಕೂರಬೇಕು, ನಾನು ಸಾಧಿಸಿದ್ದನ್ನು ಸಾಧಿಸಿ ಇನ್ನಷ್ಟು ಜನರನ್ನು ಸಾಧಕರ ಕುರ್ಚಿಯಲ್ಲಿ ಕೂರಿಸಬೇಕು” ಎಂದು ವೀಕೆಂಡ್ ವಿತ್ ರಮೇಶ್​ಗೆ ಕರೆ ಮಾಡಿ ಹರಸಿದರು ಹಂಸಲೇಖ. ಗುರುಗಳ ಮಾತಿನಿಂದ ಭಾವುಕರಾದ ನಾಗೇಂದ್ರ ಪ್ರಸಾದ್, ಹಂಸಲೇಖ ಅವರು ಒಮ್ಮೆ, ನಾಗೇಂದ್ರ ಪ್ರಸಾದ್ ನನ್ನ ಉತ್ತರಾಧಿಕಾರಿ ಎಂದಿದ್ದು ನೆನಪು ಮಾಡಿಕೊಂಡರು.

ಹರಿಕೃಷ್ಣ, ಅನೂಪ್ ಸಿಳಿನ್, ರವಿ ಬಸ್ರೂರು, ಅರ್ಜುನ್ ಜನ್ಯ ಇನ್ನೂ ಹಲವು ಸಂಗೀತ ನಿರ್ದೇಶಕರು ನಾಗೇಂದ್ರ ಪ್ರಸಾದ್​ರ ಬಗ್ಗೆ ಬಹು ಆತ್ಮೀಯವಾಗಿ ಮಾತನಾಡಿದರು. ನಾಗೇಂದ್ರ ಪ್ರಸಾದ್ ಒಂದು ಹಾಡಿನ ಎಷ್ಟು ವರ್ಷನ್​ಗಳನ್ನು ಬೇಕಾದರೂ ಕೆಲವೇ ನಿಮಿಷಗಳಲ್ಲಿ ಬರೆದುಕೊಡಬಲ್ಲರು ಎಂದರು. ಆರಂಭದ ದಿನಗಳಿಂದ ಇಂದಿನ ವರೆಗೂ ಅದೇ ವಿನಯತೆಯನ್ನು ಕೆಲಸದ ಬಗ್ಗೆ ಶ್ರದ್ಧೆಯನ್ನು ಇಟ್ಟುಕೊಂಡ ವ್ಯಕ್ತಿಯೆಂದು ಪ್ರಶಂಸಿದರು. ವೀಕೆಂಡ್ ವಿತ್ ರಮೇಶ್ ವೇದಿಕೆ ಮೇಲೆ ಕೂತು ಕೆಲವೇ ನಿಮಿಷಗಳಲ್ಲಿ ಅದೇ ಶೋ ಬಗ್ಗೆ ನಾಗೇಂದ್ರ ಪ್ರಸಾದ್ ಹಾಡು ಬರೆದು ಅದನ್ನು ಹಾಡಿಸಿ ಎಲ್ಲರೂ ಹುಬ್ಬೇರುವಂತೆ ಮಾಡಿದರು!

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
RSS, ಬಿಜೆಪಿ ಹಿಂದೂ ರಾಷ್ಟ್ರ ಮಾಡಲು ಹೊರಟಿಲ್ಲ, ಈಗಾಗಲೇ ಇದೆ: ಜೋಶಿ
RSS, ಬಿಜೆಪಿ ಹಿಂದೂ ರಾಷ್ಟ್ರ ಮಾಡಲು ಹೊರಟಿಲ್ಲ, ಈಗಾಗಲೇ ಇದೆ: ಜೋಶಿ
ಆರ್​ಎಸ್​ಎಸ್​ನವರು ಪುಕ್ಕಲರು, ಧೈರ್ಯವೇ ಇಲ್ಲ ಎಂದ ಹರಿಪ್ರಸಾದ್!
ಆರ್​ಎಸ್​ಎಸ್​ನವರು ಪುಕ್ಕಲರು, ಧೈರ್ಯವೇ ಇಲ್ಲ ಎಂದ ಹರಿಪ್ರಸಾದ್!
ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದ ಸಿದ್ದರಾಮಯ್ಯ
ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದ ಸಿದ್ದರಾಮಯ್ಯ
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!