Weekend With Ramesh: ಅಮವಾಸ್ಯೆಯಲ್ಲಿ ಮೂಡಿದ ಚಂದಿರ ಪ್ರಭುದೇವ!

ವೀಕೆಂಡ್ ವಿತ್ ರಮೇಶ್ ಐದನೇ ಸೀಸನ್​ನ ಎರಡನೇ ಅತಿಥಿಯಾಗಿ ಕನ್ನಡಿಗರೇ ಆದ ಆದರೆ ಪರಭಾಷೆಯಲ್ಲಿಯೇ ಮಿಂಚುತ್ತಿರುವ ನೃತ್ಯ ನಿರ್ದೇಶಕ, ನಟ, ನಿರ್ದೇಶಕ, ನಿರ್ಮಾಪಕ ಪ್ರಭುದೇವ ಅವರು ಅತಿಥಿಯಾಗಿ ಆಗಮಿಸಿದ್ದರು.

Weekend With Ramesh: ಅಮವಾಸ್ಯೆಯಲ್ಲಿ ಮೂಡಿದ ಚಂದಿರ ಪ್ರಭುದೇವ!
ಪ್ರಭುದೇವ
Follow us
|

Updated on:Apr 02, 2023 | 2:33 PM

ವೀಕೆಂಡ್ ವಿತ್ ರಮೇಶ್ (Weekend With Ramesh) ಐದನೇ ಸೀಸನ್​ನ ಎರಡನೇ ಅತಿಥಿಯಾಗಿ ಕನ್ನಡಿಗರೇ ಆದ ಆದರೆ ಪರಭಾಷೆಯಲ್ಲಿಯೇ ಮಿಂಚುತ್ತಿರುವ ನೃತ್ಯ ನಿರ್ದೇಶಕ, ನಟ, ನಿರ್ದೇಶಕ, ನಿರ್ಮಾಪಕ ಪ್ರಭುದೇವ ಅವರು ಅತಿಥಿಯಾಗಿ ಆಗಮಿಸಿದ್ದರು. ಅವರ ಬಾಲ್ಯ, ಶಿಕ್ಷಣ, ನೃತ್ಯದ ಬಗೆಗಿನ ಸೆಳೆತ, ವೃತ್ತಿಯಲ್ಲಿ ಪ್ರಗತಿ ಎಲ್ಲದರ ಬಗ್ಗೆ ಪ್ರಭುದೇವ ಹಾಗೂ ಅವರ ಆತ್ಮೀಯರು ಮಾಹಿತಿ ನೀಡಿದ್ದಾರೆ. ಅದರಲ್ಲಿಯೂ ಪ್ರಭುದೇವ ಅವರು ಜನಿಸಿದ ದಿನದ ಬಗ್ಗೆ ಅವರ ತಂದೆ ಮೂಗೂರು ಸುಂದರಂ ಆಡಿದ ಮಾತುಗಳು ಗಮನ ಸೆಳೆದವು.

ಅಮವಾಸ್ಯೆಯನ್ನು ಕೆಟ್ಟ ದಿನವನ್ನಾಗಿ ನೋಡಲಾಗುತ್ತದೆ. ಆದರೆ ಪ್ರಭುದೇವ ಜನಿಸಿದ್ದು ಅಮವಾಸ್ಯೆಯಂದೆ. ಅದೂ ಮಂಗಳವಾರದ ಅಮವಾಸ್ಯೆ, ಮಧ್ಯಾಹ್ನ 12 ಗಂಟೆಗೆ. ಅಮವಾಸ್ಯೆ ದಿನ ಹುಟ್ಟಿದ್ದಾನೆಂದು ಮೂಗೂರು ಸುಂದರಂ ಅವರ ಸಂಬಂಧಿಕರೆಲ್ಲರೂ ಮೂಗು ಮುರಿದರಂತೆ, ಆದರೆ ತಂದೆ ಸುಂದರಂಗೆ ಮಗನ ಮೇಲೆ ವಿಪರೀತ ಪ್ರೀತಿ, ಅಪಶಕುನಗಳನ್ನೆಲ್ಲ ನಂಬದೆ ಮಗುವನ್ನು ಒಪ್ಪಿ, ಅಪ್ಪಿಕೊಂಡಿದ್ದಾರೆ.

ಮೂಗೂರು ಸುಂದರಂ ಹಾಗೂ ಮಹದೇವಮ್ಮ ಸುಂದರಂ ಅವರಿಗೆ ಪ್ರಭುದೇವ ಎರಡನೇ ಪುತ್ರ. ಮೊದಲನೇ ಮಗನಿಗೆ ಪ್ರಭುದೇವ ಎಂದು ಹೆಸರಿಡುವ ಆಸೆ ಮೂಗೂರು ಸುಂದರಂ ಅವರಿಗೆ ಇತ್ತಂತೆ ಆದರೆ ಮೊದಲ ಮಗನ ಜಾತಕದ ಪ್ರಕಾರ ಬ ಅಕ್ಷರದಿಂದ ಹೆಸರಿಡಬೇಕು ಎಂದು ಹೇಳಿದರಾದ್ದನಿಗೆ ಅವನಿಗೆ ಬಸವರಾಜು ಎಂದು ಹೆಸರಿಡಲಾಯ್ತು. ಎರಡನೇ ಮಗನಿಗಾದರೂ ತನ್ನಿಷ್ಟದ ಹೆಸರಿಡಬೇಕೆಂದು ಪ್ರಭುದೇವ ಎಂದು ಸುಂದರಂ ಹೆಸರಿಟ್ಟರು. ಆದರೆ ಪ್ರಭುದೇವ ಅಸಲಿ ಹೆಸರು ಚೆನ್ನಮಲ್ಲಿಕಾರ್ಜುನ! ಹುಟ್ಟಿದ ಮಗುವಿಗೆ ದೇವರ ಹೆಸರಿಡಬೇಕೆಂದು ಹಠಮಾಡಿ ಅವರ ತಾಯಿ ಇಟ್ಟ ಹೆಸರಿದು.

ಪ್ರಭುದೇವ ತಮ್ಮ ಬಾಲ್ಯ ಕಳೆದಿದ್ದು ಮೈಸೂರಿನ ದೂರ ಎಂಬ ಊರಿನಲ್ಲಿ. ಬಹುತೇಕರ ಬಾಲ್ಯದಂತೆಯೇ ಬಹಳ ವರ್ಣಮಯವಾಗಿತ್ತು ಪ್ರಭುದೇವ ಅವರ ಬಾಲ್ಯ. ಬಹುತೇಕರ ಬಾಲ್ಯದಂತೆಯೇ ತುಂಟಾಟ, ಆಟ, ಸ್ನೇಹಿತರ ಒಡನಾಟಗಳಿಂದ ದುಂಬಿತ್ತು ಪ್ರಭುದೇವ ಬಾಲ್ಯ. ಪ್ರಭುದೇವ ಅವರ ಎಪಿಸೋಡ್ ವೀಕ್ಷಕರಿಗೆ ತಮ್ಮ ಬಾಲ್ಯವನ್ನು ನೆನಪಿಸುಂತಿತ್ತು.

ಗೆಳೆಯರೊಟ್ಟಿಗೆ ಗೋಳಿ ಆಡಿದ್ದು, ಟೈರು ಉರುಳಿಸಿದ್ದು, ಹಣ್ಣು, ಎಳನೀರು ಕದ್ದಿದ್ದು, ಮಾವನ ಹೆಗಲ ಮೇಲೆ ಕೂತು ಮೈಸೂರು ದಸರಾ ನೋಡಿದ್ದು, ಶಾಲೆಯಲ್ಲಿ ಏಟು ತಿಂದಿದ್ದು, ಹಳ್ಳಿ ಬಿಟ್ಟು ದೊಡ್ಡ ನಗರಕ್ಕೆ ಹೋದಾಗ ಅನುಭವಿಸಿದ ಬೇಸರ, ಏಕಾಂತ ಎಲ್ಲವನ್ನೂ ಪ್ರಭುದೇವ ಶೋನಲ್ಲಿ ನೆನಪಿಸಿಕೊಂಡರು. ಅವರ ಹಲವು ಗೆಳೆಯರು ಶೋಗೆ ಆಗಮಿಸಿ ಪ್ರಭುದೇವ ಕುರಿತಾಗಿ ಮಾತನಾಡಿದರು. ಭಾನುವಾರ ರಾತ್ರಿ ಪ್ರಭುದೇವ ಅವರ ಜೀವನ ಪಯಣದ ಎರಡನೇ ಎಪಿಸೋಡ್ ಪ್ರಸಾರವಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:56 pm, Sat, 1 April 23

ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು