‘ಸೀನಿಯರ್ ಹೀರೋಗಳೇ ಹಾಗೆ ನಡೆದುಕೊಂಡಾಗ’; ಯಶ್ ಹಳೆಯ ವಿಡಿಯೋ ವೈರಲ್

ಪುನೀತ್ ರಾಜ್​ಕುಮಾರ್ ನಿಧನ ಹೊಂದುವುದಕ್ಕೂ ಕೆಲವೇ ದಿನ ಮೊದಲು ಯಶ್ ಹಾಗೂ ಪುನೀತ್ ಭೇಟಿ ಆಗಿದ್ದರು. ‘ಭಜರಂಗಿ 2’ ವೇದಿಕೆ ಮೇಲೆ ಯಶ್, ಶಿವಣ್ಣ ಹಾಗೂ ಪುನೀತ್ ಒಟ್ಟಾಗಿ ಡ್ಯಾನ್ಸ್ ಮಾಡಿದ್ದರು. ಆ ವಿಡಿಯೋ ವೈರಲ್ ಆಗಿ ಗಮನ ಸೆಳೆದಿತ್ತು. ಈ ವೇದಿಕೆ ಮೇಲೆ ಪುನೀತ್ ಅವರನ್ನು ಹೊಗಳುವ ಕೆಲಸವನ್ನು ಯಶ್ ಅವರು ಮಾಡಿದ್ದರು.

‘ಸೀನಿಯರ್ ಹೀರೋಗಳೇ ಹಾಗೆ ನಡೆದುಕೊಂಡಾಗ’; ಯಶ್ ಹಳೆಯ ವಿಡಿಯೋ ವೈರಲ್
ಯಶ್-ಪುನೀತ್
Edited By:

Updated on: Nov 06, 2025 | 8:02 AM

ಯಶ್ (Yash) ಅವರು ಇಂದು ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಅವರು ಈಗ ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಹೀಗಿರುವಾಗಲೇ ಯಶ್ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ಪುನೀತ್ ರಾಜ್​ಕುಮಾರ್ ಬಗ್ಗೆ ಮಾತನಾಡಿದ್ದರು. ಪುನೀತ್ ರಾಜ್​ಕುಮಾರ್ ಅವರನ್ನು ಹಾಡಿ ಹೊಗಳುವ ಕೆಲಸವನ್ನು ಅವರು ಮಾಡಿದ್ದರು. ಆ ವಿಡಿಯೋ ಇಲ್ಲಿದೆ.

ಪುನೀತ್ ರಾಜ್​ಕುಮಾರ್ ನಿಧನ ಹೊಂದುವುದಕ್ಕೂ ಕೆಲವೇ ದಿನ ಮೊದಲು ಯಶ್ ಹಾಗೂ ಪುನೀತ್ ಭೇಟಿ ಆಗಿದ್ದರು. ‘ಭಜರಂಗಿ 2’ ವೇದಿಕೆ ಮೇಲೆ ಯಶ್, ಶಿವಣ್ಣ ಹಾಗೂ ಪುನೀತ್ ಒಟ್ಟಾಗಿ ಡ್ಯಾನ್ಸ್ ಮಾಡಿದ್ದರು. ಆ ವಿಡಿಯೋ ವೈರಲ್ ಆಗಿ ಗಮನ ಸೆಳೆದಿತ್ತು. ಈ ವೇದಿಕೆ ಮೇಲೆ ಪುನೀತ್ ಅವರನ್ನು ಹೊಗಳುವ ಕೆಲಸವನ್ನು ಯಶ್ ಅವರು ಮಾಡಿದ್ದರು. ಈಗ ಯಶ್ ಅವರ ಹಳೆಯ ವಿಡಿಯೋ ವೈರಲ್ ಆಗಿದೆ.

‘ಕೆಜಿಎಫ್’ ಯಶಸ್ಸು ಕಂಡಾಗ ಯಶ್ ಆಡಿದ ಮಾತು ಇದಾಗಿದೆ. ಆಗ ಪುನೀತ್ ಕರೆ ಮಾಡಿದ್ರಾ ಎಂಬ ಪ್ರಶ್ನೆಗೆ ಯಶ್ ಅವರು ಉತ್ತರ ನೀಡಿದ್ದರು. ಕೇವಲ ಕೆಜಿಎಫ್ ಮಾತ್ರವಲ್ಲ, ಅದಕ್ಕೂ ಮೊದಲೇ ಪುನೀತ್ ಅವರು ಯಶ್​ಗೆ ಕರೆ ಮಾಡಿ ಹೊಗಳಿದ್ದರಂತೆ.

‘ರಾಮಾಚಾರಿ ಸಕ್ಸಸ್ ಆದಾಗ ಪುನೀತ್ ಕರೆ ಮಾಡಿ, ಏನ್ ಕಲೆಕ್ಷನ್ ಯಶ್, ಏನಿದು ರೆಕಾರ್ಡ್ ಎಂದು ಹೇಳಿದ್ದರು. ಸೀನಿಯರ್  ಈ ರೀತಿ ನಡೆದುಕೊಂಡಾಗ ಖುಷಿ ಆಗುತ್ತದೆ. ಆ ವ್ಯಕ್ತಿ ಇದ್ದಾಗಲೇ ಮಾತನಾಡಿದೀನಿ. ಅಪ್ಪು ಹೋದ್ಮೇಲೆ ಅಪ್ಸೆಟ್ ಆದೆ. ಆ ವ್ಯಕ್ತಿ ಹೃದಯದಲ್ಲಿದ್ದಾರೆ. ಇದು ಮೋಸ. ಇದ್ದಾಗ ಬೆಲೆ ತಿಳಿದುಕೊಳ್ಳಬೇಕು, ಗೌರವ ಕೊಡಬೇಕು. ಪ್ರೀತಿ ಸಂಬಂಧ ಹೃದಯದಲ್ಲಿದೆ’ ಎಂದು ಯಶ್ ಅವರು ಪ್ರೀತಿಯಿಂದ ಮಾತನಾಡಿದ್ದರು. ಈ ವಿಡಿಯೋಗಳನ್ನು ಈಗ ವೈರಲ್ ಮಾಡಲಾಗುತ್ತಾ ಇದೆ.

ಇದನ್ನೂ ಓದಿ: ಯಶ್​ಗೆ ಹೆದರಿದ ಬನ್ಸಾಲಿ; ‘ಟಾಕ್ಸಿಕ್’ ಚಿತ್ರದ ಎದುರು ಬರಲು ‘ಲವ್ ಆ್ಯಂಡ್ ವಾರ್’ ಹಿಂದೇಟು

ಯಶ್ ಅವರು ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರ. ಇದರ ಜೊತೆಗೆ ರಾಮಾಯಣ ಸಿನಿಮಾದಲ್ಲೂ ಅವರು ಬ್ಯುಸಿ ಇದ್ದಾರೆ. ಈ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us