Thalapathy Vijay: ಚಿತ್ರರಂಗಕ್ಕೆ ವಿದಾಯ ಹೇಳಲಿರುವ ದಳಪತಿ ವಿಜಯ್​? ರಾಜಕೀಯದ ಎಂಟ್ರಿಗೆ 3 ವರ್ಷ ತಯಾರಿ

| Updated By: ರಾಜೇಶ್ ದುಗ್ಗುಮನೆ

Updated on: Jul 04, 2023 | 7:22 AM

ತಮಿಳುನಾಡಿನಲ್ಲಿ ರಾಜಕೀಯಕ್ಕೂ ಚಿತ್ರರಂಗಕ್ಕೂ ಬಹಳ ನಂಟಿದೆ. ರಾಜಕೀಯದ ಸುದ್ದಿಯಲ್ಲಿ ಈಗ ದಳಪತಿ ವಿಜಯ್​ ಅವರ ಹೆಸರು ತಳುಕು ಹಾಕಿಕೊಂಡಿದೆ.

Thalapathy Vijay: ಚಿತ್ರರಂಗಕ್ಕೆ ವಿದಾಯ ಹೇಳಲಿರುವ ದಳಪತಿ ವಿಜಯ್​? ರಾಜಕೀಯದ ಎಂಟ್ರಿಗೆ 3 ವರ್ಷ ತಯಾರಿ
ದಳಪತಿ ವಿಜಯ್​
Follow us on

ಖ್ಯಾತ ನಟ ದಳಪತಿ ವಿಜಯ್​ (Thalapathy Vijay) ಅವರು ಬಹಳ ವೇಗವಾಗಿ ಸಿನಿಮಾ ಕೆಲಸಗಳನ್ನು ಮುಗಿಸುತ್ತಾರೆ. ಈಗ ಅವರು ‘ಲಿಯೋ’ ಸಿನಿಮಾದ (Leo Movie) ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಆದರೆ ಈ ನಡುವೆ ಅವರು ರಾಜಕೀಯಕ್ಕೆ ಎಂಟ್ರಿ ನೀಡುತ್ತಾರೆ ಎಂಬ ಸುದ್ದಿ ಕೂಡ ಜೋರಾಗಿ ಕೇಳಿಬರುತ್ತಿದೆ. ದಳಪತಿ ವಿಜಯ್​ ಅವರು ರಾಜಕೀಯಕ್ಕೆ (Thalapathy Vijay Politics) ಎಂಟ್ರಿ ನೀಡಲಿ ಎಂಬುದು ಅಭಿಮಾನಿಗಳ ಆಸೆಯೂ ಹೌದು. ಅವರಿಂದ ಸಮಾಜದಲ್ಲಿ ಬದಲಾವಣೆ ಬರಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ. ಅದಕ್ಕಾಗಿ ದಳಪತಿ ವಿಜಯ್​ ಅವರು ಸಿನಿಮಾ ರಂಗಕ್ಕೆ ವಿದಾಯ ಹೇಳಿ ರಾಜಕೀಯಕ್ಕೆ ಎಂಟ್ರಿ ನೀಡುತ್ತಾರೆ ಎನ್ನಲಾಗಿದೆ. ಅದಕ್ಕಾಗಿ ಅವರು ಮೂರು ವರ್ಷ ತಯಾರಿ ನಡೆಸಲಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದೆ.

ಕಾಲಿವುಡ್​ನಲ್ಲಿ ದಳಪತಿ ವಿಜಯ್​ ಅವರಿಗೆ ಸಖತ್​ ಬೇಡಿಕೆ ಇದೆ. ಅವರ ಸಿನಿಮಾಗಳು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತವೆ. ಹಾಗಿದ್ದರೂ ಕೂಡ ಅವರು ರಾಜಕೀಯದ ಕಡೆಗೆ ಒಲವು ತೋರಿಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ‘ಲಿಯೋ’ ಕೆಲಸಗಳು ಮುಗಿದ ಬಳಿಕ ನಿರ್ದೇಶಕ ವೆಂಕಟ್​ ಪ್ರಭು ಜೊತೆ ಅವರೊಂದು ಸಿನಿಮಾ ಮಾಡಲಿದ್ದಾರೆ. ಆ ನಂತರ ಅವರು ಯಾವುದೇ ಸಿನಿಮಾವನ್ನು ಒಪ್ಪಿಕೊಳ್ಳುವುದಿಲ್ಲ. ನೇರವಾಗಿ ಅವರು ರಾಜಕೀಯಕ್ಕೆ ಪ್ರವೇಶ ಪಡೆಯಲಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Thalapathy Vijay: ಡ್ರಗ್ಸ್​ ಸೇವನೆಗೆ ಪ್ರಚೋದನೆ ನೀಡಿದ ಆರೋಪ: ನಟ ದಳಪತಿ ವಿಜಯ್​ ಮೇಲೆ ಕೇಸ್​ ದಾಖಲು

ಈ ಬಗ್ಗೆ ದಳಪತಿ ವಿಜಯ್​ ಅವರು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಅವರು ಹೊಸ ಪಕ್ಷ ಶುರು ಮಾಡುತ್ತಾರೋ ಅಥವಾ ಈಗ ಇರುವ ಯಾವುದಾದರೂ ಪಕ್ಷದ ಜೊತೆ ಕೈ ಜೋಡಿಸುತ್ತಾರೋ ಎಂಬುದು ಕೂಡ ಇನ್ನೂ ಖಚಿತವಾಗಿಲ್ಲ. ಸಿನಿಮಾದಿಂದ ಮೂರು ವರ್ಷ ಬ್ರೇಕ್​ ಪಡೆದುಕೊಂಡು, ರಾಜಕೀಯದ ಬಗ್ಗೆ ಎಲ್ಲ ವಿವರಗಳನ್ನು ತಿಳಿದುಕೊಂಡು ಅವರು ಪ್ಯ್ಲಾನ್​ ರೂಪಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ‘ಲಿಯೋ’ ನಿರ್ದೇಶಕನಿಗೆ ದಳಪತಿ ವಿಜಯ್​ ಅಭಿಮಾನಿಗಳಿಂದ ಬಹಿರಂಗ ಪತ್ರ; ಏನಿದೆ ಇದರಲ್ಲಿ?

ತಮಿಳುನಾಡಿನಲ್ಲಿ ರಾಜಕೀಯಕ್ಕೂ ಚಿತ್ರರಂಗಕ್ಕೂ ಬಹಳ ನಂಟಿದೆ. ಈಗಾಗಲೇ ಅನೇಕ ಸ್ಟಾರ್​ ನಟ-ನಟಿಯರು ರಾಜಕೀಯಕ್ಕೆ ಎಂಟ್ರಿ ನೀಡಿ ಯಶಸ್ಸು ಕಂಡಿದ್ದುಂಟು. ಈಗ ವಿಜಯ್​ ಅವರು ಅದೇ ಮಾರ್ಗದಲ್ಲಿ ಸಾಗಲಿದ್ದಾರೆ ಎಂದು ಊಹಿಸಲಾಗುತ್ತಿದೆ. ಸದ್ಯ ಅವರ ‘ಲಿಯೋ’ ಸಿನಿಮಾ ಮೇಲೆ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಲೋಕೇಶ್​ ಕನಗರಾಜ್​ ಅವರು ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:27 pm, Mon, 3 July 23