AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BA Raju: ಹೃದಯಾಘಾತದಿಂದ ನಿರ್ಮಾಪಕ, ಪ್ರಚಾರಕ ಬಿಎ ರಾಜು ನಿಧನ; ಮಹೇಶ್​ ಬಾಬು ಸಂತಾಪ

BA Raju Death: ಬಿಎ ರಾಜು ನಿಧನಕ್ಕೆ ಮಹೇಶ್​ ಬಾಬು ಕಂಬನಿ ಮಿಡಿದಿದ್ದಾರೆ. ‘ರಾಜು ನಿಧನರಾಗಿರುವುದನ್ನು ಸಹಿಸಲಾಗುತ್ತಿಲ್ಲ. ನನ್ನ ಬಾಲ್ಯದಿಂದಲೂ ನಾನು ಅವರನ್ನು ಬಲ್ಲೆ. ಅವರ ಜೊತೆ ತುಂಬಾ ಹತ್ತಿರದಿಂದ ಕೆಲಸ ಮಾಡಿದ್ದೇನೆ’ ಎಂದು ಪ್ರಿನ್ಸ್​ ಟ್ವೀಟ್​ ಮಾಡಿದ್ದಾರೆ.

BA Raju: ಹೃದಯಾಘಾತದಿಂದ ನಿರ್ಮಾಪಕ, ಪ್ರಚಾರಕ ಬಿಎ ರಾಜು ನಿಧನ; ಮಹೇಶ್​ ಬಾಬು ಸಂತಾಪ
ಬಿಎ ರಾಜು - ಮಹೇಶ್ ಬಾಬು
Follow us
ಮದನ್​ ಕುಮಾರ್​
|

Updated on: May 22, 2021 | 12:37 PM

ಒಂದೆಡೆ ಕೊರೊನಾ, ಮತ್ತೊಂದೆಡೆ ಹೃದಯಾಘಾತದಿಂದಾಗಿ ಅನೇಕ ಸೆಲೆಬ್ರಿಟಿಗಳು ನಿಧನರಾಗುತ್ತಿದ್ದಾರೆ. ಟಾಲಿವುಡ್​ ನಿರ್ಮಾಪಕ ಹಾಗೂ ಸಿನಿಮಾ ಪ್ರಚಾರಕ ಬಿಎ ರಾಜು ಅವರು ಶುಕ್ರವಾರ (ಮೇ 21) ರಾತ್ರಿ ಹೈದರಾಬಾದ್​ನಲ್ಲಿ ಹೃದಯಾಘಾತದಿಂದ ಅಸುನೀಗಿದ್ದಾರೆ. ಈ ಸುದ್ದಿ ಕೇಳಿ ಇಡೀ ಟಾಲಿವುಡ್​ಗೆ ಆಘಾತ ಆಗಿದೆ. ಬಿಎ ರಾಜು ಅವರಿಗೆ 57 ವರ್ಷ ವಯಸ್ಸಾಗಿತ್ತು. ಹಲವು ವರ್ಷಗಳಿಂದ ಅವರು ಟಾಲಿವುಡ್​ ಸಿನಿಮಾಗಳಿಗೆ ಪ್ರಚಾರಕರಾಗಿ ಕೆಲಸ ಮಾಡುತ್ತಿದ್ದರು. ರಾಜು ನಿಧನಕ್ಕೆ ಮಹೇಶ್​ ಬಾಬು ಸೇರಿದಂತೆ ಹಲವು ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ.

ಇಬ್ಬರು ಪುತ್ರರನ್ನು ಬಿಎ ರಾಜು ಅಗಲಿದ್ದಾರೆ. 2018ರಲ್ಲಿ ಅವರ ಪತ್ನಿ, ನಿರ್ದೇಶಕಿ ಬಿ ಜಯಾ ನಿಧನರಾಗಿದ್ದರು. ಈಗ ರಾಜು ಸಾವಿನ ಸುದ್ದಿಯನ್ನು ಅವರ ಪುತ್ರ ಶಿವಕುಮಾರ್​ ಖಚಿತ ಪಡಿಸಿದ್ದಾರೆ. ‘ನಮ್ಮ ತಂದೆ ರಾಜು ಅವರು ಅಕಾಲಿಕ ಮರಣ ಹೊಂದಿದರು ಎಂಬುದನ್ನು ತೀವ್ರ ನೋವಿನೊಂದಿಗೆ ತಿಳಿಸುತ್ತಿದ್ದೇವೆ. ಹಠಾತ್​ ಡಯಾಬಿಟೀಸ್​ ಏರಿಳಿತ ಮತ್ತು ಹೃದಯಾಘಾತದಿಂದಾಗಿ ಅವರು ನಿಧನರಾದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಶಿವಕುಮಾರ್​ ಟ್ವೀಟ್​ ಮಾಡಿದ್ದಾರೆ.

ಸಿನಿಮಾ ಪತ್ರಕರ್ತನಾಗಿ, ಪ್ರಚಾರಕನಾಗಿ, ನಿರ್ಮಾಪಕನಾಗಿ ಹಲವು ವರ್ಷಗಳಿಂದ ಗುರುತಿಸಿಕೊಂಡಿದ್ದ ಅವರು ‘ಸೂಪರ್​ ಹಿಟ್​’ ಎಂಬ ಮ್ಯಾಗಜಿನ್​ ಕೂಡ ಪ್ರಕಟಿಸುತ್ತಿದ್ದರು. ಮಹೇಶ್​ ಬಾಬು ಮತ್ತು ಅವರ ಕುಟುಂಬಕ್ಕೆ ಪರ್ಸನಲ್​​ ಪ್ರಚಾರಕನಾಗಿಯೂ ತೊಡಗಿಕೊಂಡಿದ್ದರು. ನಾಲ್ಕು ದಶಕಗಳ ವೃತ್ತಿಜೀವನದಲ್ಲಿ ನೂರಾರು ಸಿನಿಮಾಗಳಿಗೆ ಅವರು ಪಿಆರ್​ಓ ಆಗಿದ್ದರು. ಪ್ರಭಾಸ್​, ನಾಗಾರ್ಜುನ, ಜ್ಯೂ. ಎನ್​ಟಿಆರ್​ ಮುಂತಾದ ಸ್ಟಾರ್​ ನಟರ ಜೊತೆಗೆ ಕೆಲಸ ಮಾಡಿದ್ದರು.

ರಾಜು ನಿಧನಕ್ಕೆ ಮಹೇಶ್​ ಬಾಬು ಕಂಬನಿ ಮಿಡಿದಿದ್ದಾರೆ. ‘ರಾಜು ಅವರು ನಿಧನರಾಗಿರುವುದನ್ನು ಸಹಿಸಲಾಗುತ್ತಿಲ್ಲ. ನನ್ನ ಬಾಲ್ಯದಿಂದಲೂ ನಾನು ಅವರನ್ನು ಬಲ್ಲೆ. ಅವರ ಜೊತೆ ತುಂಬಾ ಹತ್ತಿರದಿಂದ ಕೆಲಸ ಮಾಡಿದ್ದೇನೆ. ಹಲವು ವರ್ಷಗಳಿಂದ ಇಬ್ಬರೂ ಜೊತೆಯಾಗಿ ಪ್ರಯಾಣ ಮಾಡಿದ್ದೇವೆ’ ಎಂದು ರಾಜು ಜೊತೆಗಿನ ತಮ್ಮ ಒಡನಾಟವನ್ನು ಮಹೇಶ್​ ಬಾಬು ಸ್ಮರಿಸಿಕೊಂಡಿದ್ದಾರೆ.

‘ಸಿನಿಮಾ ಬಗ್ಗೆ ತೀವ್ರ ಒಲವು ಇದ್ದಂತಹ ಜಂಟಲ್​ಮನ್​ ಅವರು. ನಮ್ಮ ಕುಟುಂಬ ಎಂದರೆ ಅವರಿಗೆ ಪ್ರಪಂಚವಾಗಿತ್ತು. ನಮ್ಮ ಕುಟುಂಬ ಮತ್ತು ಮೀಡಿಯಾ ವಲಯಕ್ಕೆ ಇದು ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ರಾಜು ಅವರೇ, ನಿಮ್ಮನ್ನು ತುಂಬಾ ಮಿಸ್​ ಮಾಡಿಕೊಳ್ಳುತ್ತೇನೆ’ ಎಂದು ಮಹೇಶ್​ ಬಾಬು ಟ್ವೀಟ್​ ಮಾಡಿದ್ದಾರೆ.

ಮಹೇಶ್​ ಬಾಬು ಮಾತ್ರವಲ್ಲದೆ ಅನೇಕ ಸೆಲೆಬ್ರಿಟಿಗಳು, ಸ್ನೇಹಿತರು ಹಾಗೂ ಪತ್ರಕರ್ತರು ಬಿಎ ರಾಜು ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ಇದನ್ನೂ ಓದಿ:

ಹಾಸ್ಯ ನಟ ಅಯ್ಯಪ್ಪನ್​ ಗೋಪಿ ಹೃದಯಾಘಾತದಿಂದ ನಿಧನ; ಚಿತ್ರರಂಗಕ್ಕೆ ಮತ್ತೊಂದು ಆಘಾತ

Mahesh Babu: ಮಹೇಶ್​ ಬಾಬುಗೆ ಶಿಲ್ಪಾ ಶೆಟ್ಟಿ ಆಂಟಿ? ಇದು ಹೇಗೆ ಸಾಧ್ಯ ಎಂದು ತಲೆ ಕೆರೆದುಕೊಂಡ ಫ್ಯಾನ್ಸ್​

VIDEO: ಅತ್ಯಂತ ಕೆಟ್ಟ ದಾಖಲೆ: ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ವೈಭವ್
VIDEO: ಅತ್ಯಂತ ಕೆಟ್ಟ ದಾಖಲೆ: ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ವೈಭವ್
ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯಲ್ಲಿ ಸರಣಿ ಅಪಘಾತ, 4 ಕಾರುಗಳು ಜಖಂ
ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯಲ್ಲಿ ಸರಣಿ ಅಪಘಾತ, 4 ಕಾರುಗಳು ಜಖಂ
ಸ್ತ್ರೀಯರು ಗರ್ಭಾವಸ್ಥೆಯಲ್ಲಿ ನೀತಿಕತೆಗಳನ್ನು ಯಾಕೆ ಕೇಳಬೇಕು?
ಸ್ತ್ರೀಯರು ಗರ್ಭಾವಸ್ಥೆಯಲ್ಲಿ ನೀತಿಕತೆಗಳನ್ನು ಯಾಕೆ ಕೇಳಬೇಕು?
ಮೇಷ ರಾಶಿಯವರಿಗಿಂದು ಐದು ರಾಶಿಗಳ ಶುಭ ಫಲ: ಉಳಿದ ರಾಶಿಗಳ ಫಲಾಫಲವೂ ಇಲ್ಲಿದೆ
ಮೇಷ ರಾಶಿಯವರಿಗಿಂದು ಐದು ರಾಶಿಗಳ ಶುಭ ಫಲ: ಉಳಿದ ರಾಶಿಗಳ ಫಲಾಫಲವೂ ಇಲ್ಲಿದೆ
ಕಾಲು ನೋವಿದ್ದರೂ ವೈಭವ್ ಶತಕಕ್ಕೆ ದ್ರಾವಿಡ್ ಸಂಭ್ರಮ ನೋಡಿ
ಕಾಲು ನೋವಿದ್ದರೂ ವೈಭವ್ ಶತಕಕ್ಕೆ ದ್ರಾವಿಡ್ ಸಂಭ್ರಮ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್