AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಸ್ಯ ನಟ ಅಯ್ಯಪ್ಪನ್​ ಗೋಪಿ ಹೃದಯಾಘಾತದಿಂದ ನಿಧನ; ಚಿತ್ರರಂಗಕ್ಕೆ ಮತ್ತೊಂದು ಆಘಾತ

ಸೆಲೆಬ್ರಿಟಿಗಳ ಸಾವಿನಿಂದಾಗಿ ಕಾಲಿವುಡ್​ಗೆ ಮೇಲಿಂದ ಮೇಲೆ ಆಘಾತ ಆಗುತ್ತಲೇ ಇದೆ. ನಿರ್ದೇಶಕ ಕೆವಿ ಆನಂದ್​, ಖ್ಯಾತ ನಟ ವಿವೇಕ್, ಹಾಸ್ಯ ನಟ ಪಾಂಡು ನಿಧನರಾದ ಬೆನ್ನಲ್ಲೇ ಅಯ್ಯಪ್ಪನ್​ ಗೋಪಿ ಮತ್ತು ಪವನ್​ರಾಜ್​ ಅಸುನೀಗಿದ್ದಾರೆ.

ಹಾಸ್ಯ ನಟ ಅಯ್ಯಪ್ಪನ್​ ಗೋಪಿ ಹೃದಯಾಘಾತದಿಂದ ನಿಧನ; ಚಿತ್ರರಂಗಕ್ಕೆ ಮತ್ತೊಂದು ಆಘಾತ
ಅಯ್ಯಪ್ಪನ್ ಗೋಪಿ
ಮದನ್​ ಕುಮಾರ್​
|

Updated on: May 17, 2021 | 7:56 AM

Share

ತಮಿಳು ಚಿತ್ರರಂಗದ ಖ್ಯಾತ ಹಾಸ್ಯ ನಟ ಅಯ್ಯಪ್ಪನ್​ ಗೋಪಿ ನಿಧನರಾಗಿದ್ದಾರೆ. ಮೇ 15ರಂದು ಅವರು ಹೃದಯಾಘಾತದಿಂದ ಇಹಲೋಕ ತ್ಯಜಿಸಿದರು ಎಂದು ವರದಿ ಆಗಿದೆ. ಅಯ್ಯಪ್ಪನ್​ ಗೋಪಿ ನಿಧನಕ್ಕೆ ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ. ಇತ್ತೀಚೆನ ದಿನಗಳಲ್ಲಿ ಕಾಲಿವುಡ್​ ಅನೇಕ ಸೆಲೆಬ್ರಿಟಿಗಳು ನಿಧನರಾದರು. ನಿರ್ದೇಶಕ ಕೆ.ವಿ. ಆನಂದ್​, ನಟ ವಿವೇಕ್​ ಮುಂತಾದವರ ಸಾವಿನ ಬಳಿಕ ಅಯ್ಯಪ್ಪನ್​ ಗೋಪಿ ಅಸುನೀಗಿರುವ ಸುದ್ದಿ ಕೇಳಿ ಕಾಲಿವುಡ್​ಗೆ ಆಘಾತ ಆಗಿದೆ.

ಶಿವಕಾರ್ತಿಕೇಯನ್​ ಮತ್ತು ಕೀರ್ತಿ ಸುರೇಶ್​ ನಟನೆಯ ‘ರಜನಿ ಮುರುಗನ್​’ ಸಿನಿಮಾದಲ್ಲಿ ಅಯ್ಯಪ್ಪನ್​ ಗೋಪಿ ಅಭಿನಯಿಸಿದ್ದರು. ‘ದಿಲ್ಲುಕು ದುಡ್ಡು’ ಚಿತ್ರದಲ್ಲಿಯೂ ಅವರು ಕಾಣಿಸಿಕೊಂಡಿದ್ದರು. ನಟನೆಯ ಬಗ್ಗೆ ಅಯ್ಯಪ್ಪನ್​ ಗೋಪಿ ತೀವ್ರ ಒಲವು ಹೊಂದಿದ್ದರು. ನಾನು ಬಣ್ಣ ಹಚ್ಚಿ ಅಭಿನಯಿಸುತ್ತಿರುವಾಗಲೇ ಸಾಯಬೇಕು ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ಹಲವು ಸಿನಿಮಾಗಳಲ್ಲಿ ಸಹ-ನಿರ್ದೇಶಕನಾಗಿ ಕೆಲಸ ಮಾಡಿದ್ದ ಪವನ್​ ರಾಜ್​ ಕೂಡ ನಿಧನರಾದರು ಎಂಬ ಸುದ್ದಿಯನ್ನು ನಿರ್ದೇಶಕ ಪೋನ್​ ರಾಮ್​ ಶನಿವಾರವಷ್ಟೇ (ಮೇ 15) ತಿಳಿಸಿದ್ದರು. ‘ನನ್ನ ಜೊತೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದ ಹಾಗೂ ಕೆಲವು ಸಿನಿಮಾಗಳಲ್ಲಿ ನಟಿಸಿದ್ದ ಪವನ್​ರಾಜ್​ ಅವರು ಹೃದಯಾಘಾತದಿಂದ ಅಸುನೀಗಿದ್ದಾರೆ’ ಎಂದು ಪೋನ್​ರಾಮ್​ ಟ್ವೀಟ್​ ಮಾಡಿದ್ದರು. ಅದರ ಬೆನ್ನಲ್ಲೇ ಅಯ್ಯಪ್ಪನ್​ ಗೋಪಿ ನಿಧನರಾಗಿರುವ ಶಾಕಿಂಗ್​ ಸುದ್ದಿ ಕೇಳಿಬಂದಿದೆ.

ತಮಿಳು ಚಿತ್ರರಂಗಕ್ಕೆ ಮೇಲಿಂದ ಮೇಲೆ ಆಘಾತ ಆಗುತ್ತಲೇ ಇದೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಕೆವಿ ಆನಂದ್​, ಖ್ಯಾತ ನಟ ವಿವೇಕ್, ಹಾಸ್ಯ ನಟ ಪಾಂಡು ಸೇರಿದಂತೆ ಅನೇಕರು ಇತ್ತೀಚೆಗೆ ಮೃತರಾದರು. ಈಗ ಅಯ್ಯಪ್ಪನ್​ ಗೋಪಿ ಮತ್ತು ಪವನ್​ರಾಜ್​ ನಿಧನರಾಗಿದ್ದಾರೆ. ಇನ್ನೊಂದೆಡೆ ಕೊರೊನಾ ಹಾವಳಿಯಿಂದಲೂ ಅನೇಕ ಸೆಲೆಬ್ರಿಟಿಗಳು ಅಸುನೀಗುತ್ತಿದ್ದಾರೆ.

ಇದನ್ನೂ ಓದಿ:

ಕೊರೊನಾ ವೈರಸ್​ನಿಂದ ಕಾಲಿವುಡ್​ನ ಜನಪ್ರಿಯ ಹಾಸ್ಯ ನಟ ಪಾಂಡು ನಿಧನ

KV Anand Death: ಖ್ಯಾತ ನಿರ್ದೇಶಕ ಕೆ.ವಿ. ಆನಂದ್​ ನಿಧನ; ಕಾಲಿವುಡ್​ಗೆ ಮತ್ತೊಂದು ಆಘಾತ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್