
ತೆಲುಗು ಚಿತ್ರರಂಗದಲ್ಲಿ ‘ಇರುಮುಡಿ’ ಸಿನಿಮಾ (Irumudi Movie) ಹೊಸ ಇತಿಹಾಸ ಬರೆದಿದೆ. ನಟ ರವಿತೇಜ ಅಭಿನಯದ ಈ ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಎರಡನೇ ವಾರಾಂತ್ಯದಲ್ಲೂ ಚಿತ್ರಮಂದಿರಗಳು ಭರ್ತಿಯಾಗಿವೆ. ಈ ಚಿತ್ರದ ಅಭೂತಪೂರ್ವ ಯಶಸ್ಸಿನ ಬಗ್ಗೆ ಖ್ಯಾತ ನಿರ್ಮಾಪಕ ದಿಲ್ ರಾಜು ಮೊದಲ ಬಾರಿಗೆ ಮಾತನಾಡಿದ್ದಾರೆ.
‘ಟಾಕ್ಸಿಕ್’ ಸಿನಿಮಾನ ತೆಲುಗು ರಾಜ್ಯಗಳಲ್ಲಿ ಹಂಚಿಕೆ ಮಾಡಿದ್ದು ದಿಲ್ ರಾಜು. 80 ಕೋಟಿ ರೂಪಾಯಿಗೆ ಈ ಹಂಚಿಕೆ ಪಡೆದಿದ್ದಾರೆ ಎನ್ನಲಾಗಿದೆ. ‘ಟಾಕ್ಸಿಕ್’ ರಿಲೀಸ್ ಸಂದರ್ಭದಲ್ಲಿ ‘ಇರುಮುಡಿ’ ಸಿನಿಮಾಗೆ ಥಿಯೇಟರ್ ಸಿಗದೆ ತೊಂದರೆ ಆಗಿತ್ತು. ಹೀಗಾಗಿ, ದಿಲ್ ರಾಜು ಅವರು ‘ಇರುಮುಡಿ’ ಚಿತ್ರದ ಬಗ್ಗೆ ಒಂದೇ ಒಂದು ಮಾತನ್ನು ಆಡಿರಲಿಲ್ಲ. ಈಗ ‘ಟಾಕ್ಸಿಕ್’ ಸಿನಿಮಾದ ಗಳಿಕೆ ನೆಲಕಚ್ಚಿದೆ. ಈ ವೇಳೆ ಅವರು ‘ಇರುಮುಡಿ’ ಬಗ್ಗೆ ಮಾತನಾಡಿದ್ದಾರೆ.
‘ಇರುಮುಡಿ ಚಿತ್ರದ ಗೆಲುವು ಇಡೀ ಚಿತ್ರರಂಗಕ್ಕೆ ಹೊಸ ಚೈತನ್ಯ ನೀಡಿದೆ. ಚಿತ್ರತಂಡಕ್ಕೆ ಮಾತ್ರವಲ್ಲದೆ ಎಲ್ಲರಿಗೂ ಇದು ಹೊಸ ಭರವಸೆ ಮೂಡಿಸಿದೆ. ಚಿತ್ರರಂಗದ ಪ್ರತಿಯೊಬ್ಬರು ಈ ಯಶಸ್ಸನ್ನು ಸಂಭ್ರಮಿಸುತ್ತಿದ್ದಾರೆ. ಚಿತ್ರಮಂದಿರಕ್ಕೆ ಪ್ರೇಕ್ಷಕರು ಹರಿದು ಬರುತ್ತಿದ್ದಾರೆ. ಇದು ನಿರ್ಮಾಪಕರಿಗೆ ದೊಡ್ಡ ಧೈರ್ಯ ನೀಡಿದೆ’ ಎಂದು ದಿಲ್ ರಾಜು ಹೇಳಿದ್ದಾರೆ.
‘ಇಂತಹ ಸಿನಿಮಾಗಳು ಚಿತ್ರರಂಗದ ಬೆಳವಣಿಗೆಗೆ ಅತ್ಯಗತ್ಯ. ಪ್ರೇಕ್ಷಕರ ಬೆಂಬಲ ಕಂಡು ನಮಗೆ ಸಂತಸವಾಗಿದೆ. ಇದು ನಿರ್ಮಾಪಕರು ಮತ್ತು ನಿರ್ದೇಶಕರಿಗೆ ಪ್ರೇರಣೆ ನೀಡುತ್ತದೆ. ಹೊಸ ಕಥೆಗಳನ್ನು ಮಾಡಲು ಇದು ನಮಗೆ ಸ್ಪೂರ್ತಿ ತಂದಿದೆ. ನಟರಿಗೂ ಇದು ಹೊಸ ಉತ್ಸಾಹ ತುಂಬಿದೆ’ ಎಂದು ಅವರು ಶ್ಲಾಘಿಸಿದ್ದಾರೆ.
ಇದೇ ವೇಳೆ ರವಿತೇಜ ಅವರ ಮುಂದಿನ ಚಿತ್ರದ ಬಗ್ಗೆ ಮಾಹಿತಿ ಹೊರಬಿದ್ದಿದೆ. ಈ ಸಿನಿಮಾವನ್ನು ದಿಲ್ ರಾಜು ಅವರೇ ನಿರ್ಮಾಣ ಮಾಡುತ್ತಿದ್ದಾರೆ. ಹಸಿತ್ ಗೋಲಿ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಈ ಸಿನಿಮಾದಲ್ಲಿ ನಟ ಶ್ರೀವಿಷ್ಣು ಕೂಡ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಈ ವಿಷಯ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ‘ಇರುಮುಡಿ’ಗೆ ತೆಲುಗು ನಟರ ಜೈಕಾರ; ‘ಟಾಕ್ಸಿಕ್’ ವಿಚಾರದಲ್ಲಿ ಕನ್ನಡ ಚಿತ್ರರಂಗದ ಮೌನ ಏತಕ್ಕೆ?
ಈ ಹೊಸ ಸಿನಿಮಾ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ತೆರೆಗೆ ಬರಲಿದೆ. 2027ರ ಸಂಕ್ರಾಂತಿಗೆ ಸಿನಿಮಾ ಬಿಡುಗಡೆಯಾಗಲಿದೆ ಎಂದು ಮೂಲಗಳು ತಿಳಿಸಿವೆ. ‘ಇರುಮುಡಿ’ ಗೆಲುವಿನ ಬೆನ್ನಲ್ಲೇ ಈ ಹೊಸ ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ರವಿತೇಜ ಅವರ ಹೊಸ ಅವತಾರ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.