AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಂದೆಯ ಕೊನೆ ಆಸೆ ಈಡೇರಿಸಲಾಗಿಲ್ಲ; ಬೇಸರ ಹೊರಹಾಕಿದ ವೆಂಕಟೇಶ್

ಆಹಾದಲ್ಲಿ ಪ್ರಸಾರವಾಗುತ್ತಿರುವ ಬಾಲಕೃಷ್ಣ ಅವರ 'ಅನ್‌ಸ್ಟಾಪಬಲ್' ಟಾಕ್ ಶೋದಲ್ಲಿ ವೆಂಕಟೇಶ್ ಮತ್ತು ಸುರೇಶ್ ಬಾಬು ಅವರ ಭಾಗವಹಿಸುವಿಕೆ ಭಾವುಕತೆಯಿಂದ ಕೂಡಿದೆ. ತಮ್ಮ ತಂದೆ ರಾಮನಾಯ್ಡು ಅವರ ನೆನಪುಗಳನ್ನು ಹಂಚಿಕೊಂಡು ಅವರು ಭಾವುಕರಾದರು. ವೆಂಕಟೇಶ್ ತಮ್ಮ ತಂದೆಯ ಕೊನೆಯ ದಿನಗಳನ್ನು ಮತ್ತು ಅಪೂರ್ಣ ಚಿತ್ರದ ಕನಸನ್ನು ಹಂಚಿಕೊಂಡರು.

ತಂದೆಯ ಕೊನೆ ಆಸೆ ಈಡೇರಿಸಲಾಗಿಲ್ಲ; ಬೇಸರ ಹೊರಹಾಕಿದ ವೆಂಕಟೇಶ್
ವೆಂಕಟೇಶ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Dec 29, 2024 | 6:30 AM

Share

ನಂದಮೂರಿ ಬಾಲಕೃಷ್ಣ ಸಿನಿಮಾದ ಜೊತೆಗೆ ಟಾಕ್ ಶೋ ನಡೆಸುತ್ತಿರುವುದು ಗೊತ್ತೇ ಇದೆ. ಜನಪ್ರಿಯ OTT ಫ್ಲಾಟ್​ಫಾರ್ಮ್ ಆಹಾದಲ್ಲಿ ‘ಅನ್‌ಸ್ಟಾಪಬಲ್’ ಹೆಸರಿನ ಟಾಕ್ ಶೋನ ಬಾಲಯ್ಯ ಮಾಡುತ್ತಿದ್ದಾರೆ. ಈಗಾಗಲೇ ಈ ಸೀಸನ್‌ನಲ್ಲಿ ಅನೇಕ ಸ್ಟಾರ್ ಹೀರೋಗಳು ಮತ್ತು ನಿರ್ದೇಶಕರು ಭಾಗವಹಿಸಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಹಾಗೂ ಕಾರ್ಯಕ್ರಮಕ್ಕೆ ಬಂದ ಅತಿಥಿಗಳಿಗೆ ಬಾಲಕೃಷ್ಣ ತಮ್ಮದೇ ಶೈಲಿಯಲ್ಲಿ ಮನರಂಜನೆ ನೀಡುತ್ತಿದ್ದಾರೆ. ಬಾಲಕೃಷ್ಣ ಅವರ ಸಿನಿಮಾ ವಿಷಯಗಳ ಜೊತೆಗೆ ವೈಯಕ್ತಿಕ ವಿಚಾರಗಳನ್ನೂ ಚರ್ಚೆ ಮಾಡುತ್ತಾರೆ. ಅವರು ಅತಿಥಿಗಳೊಂದಿಗೆ ಆಟಗಳನ್ನು ಆಡುತ್ತಿದ್ದಾರೆ ಮತ್ತು ಅವರೊಂದಿಗೆ ನೃತ್ಯ ಮಾಡುತ್ತಿದ್ದಾರೆ. ವೆಂಕಟೇಶ್ ಜತೆಗೆ ಬಾಲಕೃಷ್ಣ ಚರ್ಚೆ ಮಾಡಿದ್ದಾರೆ.

ವೆಂಕಟೇಶ್ ಎಪಿಸೋಡ್ ಪ್ರಸ್ತುತ ಆಹಾದಲ್ಲಿ ಪ್ರಸಾರವಾಗುತ್ತಿದೆ. ಈ ಸಂಚಿಕೆಯಲ್ಲಿ ಬಾಲಕೃಷ್ಣ ಅವರು ವೆಂಕಟೇಶ್ ಅವರನ್ನು ತಮಾಷೆ ಪ್ರಶ್ನೆಗಳ ಮೂಲಕ ಚುಡಾಯಿಸಿದರು. ಅಲ್ಲದೇ ಬಾಲಯ್ಯ ಕೇಳಿದ ಪ್ರಶ್ನೆಗಳಿಗೆ ವೆಂಕಟೇಶ್ ಸ್ವಾರಸ್ಯಕರ ಕಾಮೆಂಟ್ ಮಾಡಿದ್ದಾರೆ. ಚಿತ್ರದ ಜೊತೆಗೆ ವೆಂಕಟೇಶ್ ವೈಯಕ್ತಿಕ ವಿಚಾರಗಳು, ಕೌಟುಂಬಿಕ ವಿಚಾರಗಳ ಬಗ್ಗೆಯೂ ಮಾತನಾಡಿದ್ದಾರೆ. ಅಲ್ಲದೆ, ಈ ಸಂಚಿಕೆಯಲ್ಲಿ ಕೆಲವು ಭಾವನಾತ್ಮಕ ಸಂಭಾಷಣೆಗಳೂ ನಡೆದವು. ವೆಂಕಟೇಶ್ ಜೊತೆಗೆ ಅವರ ಸಹೋದರ ಸುರೇಶ್ ಬಾಬು ಕೂಡ ಬಾಲಯ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಬಾಲಯ್ಯ ಕಾರ್ಯಕ್ರಮದಲ್ಲಿ ವೆಂಕಟೇಶ್ ತಮ್ಮ ತಂದೆ ಲೆಜೆಂಡರಿ ಪ್ರೊಡ್ಯೂಸರ್ ರಾಮನಾಯ್ಡು ಬಗ್ಗೆ ಮಾತನಾಡಿ ಭಾವುಕರಾದರು. ಬಾಲಕೃಷ್ಣ ರಾಮನಾಯ್ಡು ಬಗ್ಗೆ ಕೇಳಿದಾಗ ವೆಂಕಟೇಶ್ ಮತ್ತು ಸುರೇಶ್ ಬಾಬು ರಾಮನಾಯ್ಡು ಅವರ ಕೊನೆಯ ದಿನಗಳನ್ನು ನೆನಪಿಸಿಕೊಂಡರು. ‘ನಮ್ಮ ತಂದೆಯಿಂದಲೇ ನಾವು ಇಲ್ಲಿದ್ದೇವೆ. ಅವರು ತಮ್ಮ ಇಡೀ ಜೀವನವನ್ನು ಸಿನಿಮಾಗಳಿಗೆ ನೀಡಿದರು. ಅಲ್ಲದೆ, ಕುಟುಂಬ ಮತ್ತು ಚಲನಚಿತ್ರವನ್ನು ಸಮತೋಲನಗೊಳಿಸಿದರು’ ಎಂದಿದ್ದಾರೆ ವೆಂಕಟೇಶ್.

ಇದನ್ನೂ ಓದಿ: ‘ರಾಷ್ಟ್ರ ಪ್ರಶಸ್ತಿ ವಿಚಾರದಲ್ಲಿ ನೋವಾಗಿತ್ತು’: ಬಾಲಯ್ಯ ಎದುರು ಅಲ್ಲು ಅರ್ಜುನ್ ಮಾತು

‘ಕೊನೆಯ ದಿನಗಳಲ್ಲೂ ಸಿನಿಮಾ ಸ್ಕ್ರಿಪ್ಟ್ ಓದುತ್ತಿದ್ದರು. ಅವರಿಗೆ ಒಂದು ಕಥೆ ಇಷ್ಟವಾಗಿದ್ದು, ಈ ಸಿನಿಮಾ ಮಾಡಿದರೆ ಚೆನ್ನಾಗಿರುತ್ತದೆ ಎಂದು ಹೇಳಿದ್ದರು. ಆ ಕಥೆಯಲ್ಲಿ ನನ್ನ ಜೊತೆ ನಟಿಸೋಣ ಎಂದುಕೊಂಡರು. ಆದರೆ ಆಗ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಹಾಗಾಗಿ ಆ ಸಿನಿಮಾ ಮಾಡಲು ಸಾಧ್ಯವಾಗಲಿಲ್ಲ. ನಮಗೆ ತುಂಬಾ ಬೇಸರವಾಗಿದ್ದು, ಸಿನಿಮಾ ಮಾಡಿದ್ದರೆ ಚೆನ್ನಾಗಿರುತ್ತಿತ್ತು. ಕೊನೆಯ ದಿನಗಳಲ್ಲೂ ಅವರು ಸಿನಿಮಾಗಾಗಿ ಬದುಕಿದ್ದರು’ ಎಂದು ಭಾವುಕರಾದರು. ‘ಸುರೇಶ್ ಬಾಬು ತಂದೆ ಬಗ್ಗೆ ಮಾತನಾಡಿದ್ದಾರೆ. ‘ಅಪ್ಪ ಒಳ್ಳೆಯದನ್ನು ಮಾಡಿದರೂ ಸಂಸದನಾಗಿ ಸೋತಿದ್ದಕ್ಕೆ ಬೇಸರವಾಗಿತ್ತು.

ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ