AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪವನ್ ಕಲ್ಯಾಣ್ ವಿರುದ್ಧ ಪಿತೂರಿ ಮಾಡಿದ ‘ಆ ನಾಲ್ವರು’ ಯಾರು?

Pawan Kalyan: ನಟ, ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ವಿರುದ್ಧ ಪಿತೂರಿ ನಡೆದಿದೆ. ಅವರನ್ನು ತುಳಿಯುವ ಪ್ರಯತ್ನ ನಡೆದಿದೆ. ಈ ಬಗ್ಗೆ ಸ್ವತಃ ಪವನ್ ಕಲ್ಯಾಣ್ ಬಹಿರಂಗ ಪತ್ರ ಬರೆದಿದ್ದಾರೆ. ಅಂದಹಾಗೆ ಪವನ್ ವಿರುದ್ಧ ಪಿತೂರಿ ಮಾಡಿರುವುದು ತೆಲುಗು ಚಿತ್ರರಂಗದ ‘ಆ ನಲುಗುರು’ ಅಂತೆ ಅಂದಹಾಗೆ ಆ ನಾಲ್ವರು ಯಾರು?

ಪವನ್ ಕಲ್ಯಾಣ್ ವಿರುದ್ಧ ಪಿತೂರಿ ಮಾಡಿದ ‘ಆ ನಾಲ್ವರು’ ಯಾರು?
Pawan Kalyan
ಮಂಜುನಾಥ ಸಿ.
|

Updated on: May 26, 2025 | 12:33 PM

Share

ಪವನ್ ಕಲ್ಯಾಣ್ (Pawan Kalyan), ತೆಲುಗು ಚಿತ್ರರಂಗಕ್ಕೆ ಬರೆದಿರುವ ಬಹಿರಂಗ ಪತ್ರ, ತೆಲುಗು ಚಿತ್ರರಂಗವನ್ನು ಅಲ್ಲಾಡಿಸಿಬಿಟ್ಟಿದೆ. ಪತ್ರದ ಮೂಲಕ ಒಂದು ರೀತಿಯ ಎಚ್ಚರಿಕೆಯನ್ನು ಪವನ್ ಕಲ್ಯಾಣ್ ನೀಡಿದ್ದಾರೆ. ಪವನ್ ಕಲ್ಯಾಣ್ ಅವರ ಪತ್ರ ವೈರಲ್ ಆಗುತ್ತಿದ್ದಂತೆ ನಿರ್ಮಾಪಕ ಅಲ್ಲು ಅರವಿಂದ್ ಪತ್ರಿಕಾಗೋಷ್ಠಿ ನಡೆಸಿ ‘ಆ ನಾಲುಗುರು’ (ಆ ನಾಲ್ವರು) ಗುಂಪಿನಲ್ಲಿ ನಾನಿಲ್ಲ, ನನ್ನದು ಏನೂ ತಪ್ಪಿಲ್ಲ ಎಂದು ಸ್ಪಷ್ಟೀಕರಣ ಕೊಟ್ಟಿದ್ದಾರೆ. ಅಸಲಿಗೆ ಪವನ್ ಕಲ್ಯಾಣ್ ವಿರುದ್ಧ ಪಿತೂರಿ ಮಾಡಿದ ಆ ನಾಲ್ವರು (ಆ ನಲುಗುರು) ಯಾರು?

ತೆಲುಗು ಚಿತ್ರರಂಗದ ಬೆಳ್ಳಿ ತೆರೆ ಮೇಲೆ ಎರಡು ಕುಟುಂಬಗಳ ಹಿಡಿತ ಜೋರಾಗಿದೆ. ನಂದಮೂರಿ ಕುಟುಂಬ ಮತ್ತು ಮೆಗಾಸ್ಟಾರ್ ಕುಟುಂಬ. ಈಗ ಈ ಎರಡೂ ಕುಟುಂಬದವರು ಸೇರಿ ಆಂಧ್ರ ಪ್ರದೇಶದಲ್ಲಿ ಸರ್ಕಾರ ನಡೆಸುತ್ತಿದ್ದಾರೆ. ಬೆಳ್ಳಿ ತೆರೆ ಮೇಲೆ ಎರಡು ಕುಟುಂಬಗಳ ಹಿಡಿತ ಇದೆ ಎಂಬುದು ಸರಿ ಆದರೆ ಸಿನಿಮಾಗಳ ವಿತರಣೆ, ಪ್ರದರ್ಶನ ಇವುಗಳ ಮೇಲೆ ಹಿಡಿತ ಸಾಧಿಸಿರುವುದು ‘ಆ ನಲುಗುರು’ ಎಂದೇ ಕರೆಯಲಾಗುವ ನಾಲ್ವರು ಸಿನಿಮಾ ನಿರ್ಮಾಪಕರು.

ದಿಲ್ ರಾಜು, ಸುರೇಶ್ ಬಾಬು, ಅಲ್ಲು ಅರವಿಂದ್ ಮತ್ತು ಏಷಿಯನ್ ಸುನಿಲ್. ಈ ನಾಲ್ವರು ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಸುಮಾರು 75% ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳನ್ನು ಲೀಸ್​ಗೆ ತೆಗೆದುಕೊಂಡಿದ್ದು ಇಡೀ ಚಿತ್ರರಂಗವನ್ನು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸುತ್ತಿದ್ದಾರೆ. ತಮಗೆ ಬೇಕಾದ ಸಿನಿಮಾಗಳನ್ನು ತೆಗೆದುಕೊಳ್ಳುತ್ತಾರೆ, ಬೇಡವಾದ ಸಿನಿಮಾಗಳನ್ನು ತುಳಿಯುತ್ತಿದ್ದಾರೆ. ಈ ನಾಲ್ವರ ಮಾಫಿಯಾ ಕಳೆದ ಕೆಲ ವರ್ಷಗಳಿಂದಲೂ ಪರೋಕ್ಷ ಚರ್ಚೆಗಳು ಚಾಲ್ತಿಯಲ್ಲಿಯೇ ಇವೆ.

ಇದೀಗ ಈ ನಾಲ್ವರು ಒಟ್ಟು ಸೇರಿಯೇ ಪವನ್ ಕಲ್ಯಾಣ್​ಗೆ ಬುದ್ಧಿ ಕಲಿಸಲೆಂದು, ‘ಹರಿ ಹರ ವೀರ ಮಲ್ಲು’ ಸಿನಿಮಾ ಬಿಡುಗಡೆ ವೇಳೆಗೆ ಸರಿಯಾಗಿ ಚಿತ್ರಮಂದಿರಗಳ ಬಂದ್​​ಗೆ ಮುಂದಾಗಿಸಿದ್ದರು ಎನ್ನಲಾಗುತ್ತಿದೆ. ಆದರೆ ಪವನ್ ಕಲ್ಯಾಣ್​ ತಮ್ಮ ಪ್ರಭಾವ ಬಳಸಿ ತೆಲುಗು ಫಿಲಂ ಚೇಂಬರ್​ ಮೂಲಕ ಒತ್ತಡ ಹಾಕಿಸಿ ಬಂದ್ ಅನ್ನು ಮುಂದಕ್ಕೆ ಹಾಕಿಸಿದ್ದಾರೆ. ಅದರ ಬೆನ್ನಲ್ಲೆ ಬಹಿರಂಗ ಪತ್ರ ಬರೆದು, ‘ನನಗೆ ಕೊಟ್ಟಿರುವ ರಿಟರ್ನ್ ಗಿಫ್ಟ್​ಗೆ ಧನ್ಯವಾದ’ ಎಂದು ಸಹ ಪರೋಕ್ಷವಾಗಿ ವ್ಯಂಗ್ಯವಾಗಿ ಹೇಳಿದ್ದಾರೆ.

ಇದನ್ನೂ ಓದಿ:ಪವನ್ ಕಲ್ಯಾಣ್​ ಎಚ್ಚರಿಕೆಗೆ ಬೆದರಿದ ಅಲ್ಲು ಅರವಿಂದ್, ತುರ್ತು ಸುದ್ದಿಗೋಷ್ಠಿ

ಆಂಧ್ರ ಮತ್ತು ತೆಲಂಗಾಣ ಎರಡೂ ರಾಜ್ಯಗಳಲ್ಲಿ ಏಷಿಯನ್ ಸುನಿಲ್ ಅವರದ್ದು ಸುಮಾರು 400 ಚಿತ್ರಮಂದಿರಗಳು ಲೀಸ್​ಗೆ ಇವೆಯಂತೆ. ದಿಲ್ ರಾಜು ಅವರ ಬಳಿ 200 ಚಿತ್ರಮಂದಿರಗಳು ಇದ್ದರೆ ಸುರೇಶ್ ಬಾಬು ಬಳಿ ಸುಮಾರು 700 ಚಿತ್ರಮಂದಿರಗಳು ಇವೆಯಂತೆ. ಅಲ್ಲು ಅರವಿಂದ್ ಬಳಿಯೂ ಸುಮಾರು 100ಕ್ಕೂ ಹೆಚ್ಚು ಚಿತ್ರಮಂದಿರಗಳು ಇವೆಯಂತೆ. ಚಿತ್ರಮಂದಿರಗಳ ಮೂಲಕ ಸಿನಿಮಾ ವಿತರಕರು, ಸಿನಿಮಾ ನಾಯಕರು, ನಿರ್ಮಾಪಕರು ಎಲ್ಲರನ್ನೂ ತಮ್ಮ ತಾಳಕ್ಕೆ ಕುಣಿಸುತ್ತಿದ್ದಾರಂತೆ ಈ ನಾಲ್ವರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!