Ayurveda For Dry Eyes: ಒಣ ಕಣ್ಣಿನ ಸಮಸ್ಯೆಗೆ ಇಲ್ಲಿದೆ ಆರ್ಯುವೇದದ ಪರಿಹಾರ

ಒಣ ಕಣ್ಣಿನ ಸಮಸ್ಯೆಯನ್ನು ಶಮನಗೊಳಿಸಲು ಪ್ರಾಣ ಹೆಲ್ತ್​​ ಕೇರ್​ ಸೆಂಟರ್​​ ಆರೋಗ್ಯ ತಜ್ಞರಾದ ಡಿಂಪಲ್​​ ಜಂಗ್ಡಾರವರು ಕೆಲವು ಆರ್ಯುವೇದದ ಸಲಹೆಗಳನ್ನು ನೀಡುತ್ತಾರೆ. ಕೇವಲ ಮೂರು ಪದಾರ್ಥಗಳಿಂದ ನಿಮ್ಮ ಒಣ ಕಣ್ಣಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ​​

Ayurveda For Dry Eyes: ಒಣ ಕಣ್ಣಿನ ಸಮಸ್ಯೆಗೆ ಇಲ್ಲಿದೆ ಆರ್ಯುವೇದದ ಪರಿಹಾರ
ಒಣ ಕಣ್ಣಿನ ಸಮಸ್ಯೆ
Follow us
|

Updated on:Feb 28, 2023 | 4:29 PM

ಇಂದಿನ ಬದಲಾದ ಜೀವನಶೈಲಿಯಿಂದಾಗಿ ಸಾಕಷ್ಟು ಹೊತ್ತು ಮೊಬೈಲ್​ ಫೋನ್​, ಲ್ಯಾಪ್​​ ಟಾಪ್​​ಗಳಲ್ಲಿ ಸಮಯ ಕಳೆಯುವುದು ಸಾಮಾನ್ಯವಾಗಿದೆ. ಇದು ಕಾಲಕ್ರಮೇಣ  ಕಣ್ಣಿನ ಆರೋಗ್ಯವನ್ನು ಕೆಡಿಸಬಹುದು.  ಕಣ್ಣಿನ ದೃಷ್ಟಿ ದೋಷದಿಂದ ಹಿಡಿದು, ತಲೆನೋವು, ಒನ ಕಣ್ಣಿನ ಮುಂತಾದ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ ಒಣ ಕಣ್ಣಿನ ಸಮಸ್ಯೆಯನ್ನು ಶಮನಗೊಳಿಸಲು ಪ್ರಾಣ ಹೆಲ್ತ್​​ ಕೇರ್​ ಸೆಂಟರ್​​ ಆರೋಗ್ಯ ತಜ್ಞರಾದ ಡಿಂಪಲ್​​ ಜಂಗ್ಡಾರವರು ಕೆಲವು ಆರ್ಯುವೇದದ ಸಲಹೆಗಳನ್ನು ನೀಡುತ್ತಾರೆ. ಕೇವಲ ಮೂರು ಪದಾರ್ಥಗಳಿಂದ ನಿಮ್ಮ ಒಣ ಕಣ್ಣಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ​​ ಒಣ ಕಣ್ಣು ಹೊಂದಿರುವ ಜನರು ತುರಿಕೆ, ನೋವು, ಆಯಾಸ, ಸುಡುವಿಕೆ ಅಥವಾ ಕಣ್ಣಿನ ಬಣ್ಣದಲ್ಲಿ ಬದಲಾವಣೆ, ಕೆಂಪು ಕಣ್ಣಿನ ಸಮಸ್ಯೆಯನ್ನು ಅನುಭವಿಸುತ್ತಾರೆ. ಈ ಸಮಸ್ಯೆಯನ್ನು ಶಾಶ್ವತವಾಗಿ ಗುಣಪಡಿಸಲಾಗುವುದಿಲ್ಲ. ಆದರೆ ಆರ್ಯುವೇದದ ಮೂಲಕ ಕಣ್ಣಿನ ಸಮಸ್ಯೆ ಹೆಚ್ಚಾಗದಂತೆ ಜಾಗ್ರತೆ ವಹಿಸಬಹುದಾಗಿದೆ.

ಆರೋಗ್ಯ ತಜ್ಞರಾದ ಡಿಂಪಲ್​​ ಜಂಗ್ಡಾರವರ ಕೆಲವು ಆರ್ಯುವೇದ ಸಲಹೆಗಳು:

ರೋಸ್ ವಾಟರ್:

ಈ ರೋಸ್ ವಾಟರ್ ಒಣ ಕಣ್ಣಿಬ ಸಮಸ್ಯೆಗೆ ಒಂದು ಉತ್ತಮ ಆರ್ಯುವೇದದ ಔಷಧಿಯಾಗಿದೆ ಎಂದು ಡಿಂಪಲ್​​ ಹೇಳುತ್ತಾರೆ. ಪ್ರತಿ ದಿನ ರಾತ್ರಿ ನೀವು ಮಲಗುವ ಮನ್ನ ನಿಮ್ಮ ಕಣ್ಣುಗಳಿಗೆ ಎರಡು ಹನಿ ರೋಸ್​​ ವಾಟರ್​​ ಹಾಕಿ. ಇದು ನಿಮ್ಮ ಆಯಾಸಗೊಂಡ ಮತ್ತು ದಣಿದ ಕಣ್ಣುಗಳಿಗೆ ಹೆಚ್ಚಿನ ವಿಶ್ರಾಂತಿ ನೀಡುತ್ತದೆ. ಇದಲ್ಲದೆ, ಇದು ವಿಟಮಿನ್ ಎ ಅಂಶವನ್ನು ಸಮೃದ್ಧವಾಗಿದೆ ಎಂದು ಹೇಳುತ್ತಾರೆ.

ಇದನ್ನೂ ಓದಿ: ಹೋಳಿ ಹಬ್ಬ ಸಮೀಪಿಸುತ್ತಿದೆ, ಬಣ್ಣಗಳನ್ನು ಎರಚಿ ಆಡುವ ಮೊದಲು, ನಿಮ್ಮ ಆರೋಗ್ಯದ ಬಗ್ಗೆ ಎಚ್ಚರವಹಿಸಿ

ತುಪ್ಪ:

ಒಣ ಕಣ್ಣಿನ ಸಮಸ್ಯೆಗೆ ಮಾತ್ರವಲದೇ ಕಣ್ಣಿನ ಆರೋಗ್ಯವನ್ನು ಕಾಪಾಡುವಲ್ಲಿ ತುಪ್ಪ ಅತ್ಯಂತ ಪ್ರಯೋಜನಕಾರಿಯಾಗಿದೆ. ತುಪ್ಪವನ್ನು ಸ್ವಲ್ಪ ಬಿಸಿ ಮಾಡಿ (ಉಗುರು ಬೆಚ್ಚಗೆ) ಮತ್ತು ನೀವು ಮಲಗುವ ಮುನ್ನ ಕಣ್ಣಿಗೆ ಹಚ್ಚಿ. ಇದು ನಿಮ್ಮ ಕಣ್ಣುಗಳಿಗೆ ಸಾಕಷ್ಟು ವಿಶ್ರಾಂತಿಯ ಅನುಭವವನ್ನು ನೀಡುತ್ತದೆ ಎಂದು ಡಾ. ಡಿಂಪಲ್​​ ಹೇಳುತ್ತಾರೆ.

ಅಲೋವೆರಾ ಜೆಲ್:

ಒಣ ಕಣ್ಣುಗಳಿಗೆ ಅಲೋವೆರಾ ಜೆಲ್ ಪರಿಣಾಮಕಾರಿ ಪರಿಹಾರವಾಗಿದೆ. 1/2 ಚಮಚ ಅಲೋವೆರಾ ಜೆಲ್​​ನ್ನು ಒಂದು ಕಪ್​​ ನೀರಿಗೆ ಹಾಕಿ ಮತ್ತು ಈ ನೀರಿನಿಂದ ಮುಖ ತೊಳೆಯಿರಿ. ಉರಿಯೂತದ ಗುಣಲಕ್ಷಣಗಳು ಕೆಂಪು ಮತ್ತು ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ಇದು ನಿಮ್ಮ ಕಣ್ಣುಗಳಿಗೆ ಸಾಕಷ್ಟು ಆರಾಮವನ್ನು ನೀಡುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 4:28 pm, Tue, 28 February 23

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ