AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ayurveda For Dry Eyes: ಒಣ ಕಣ್ಣಿನ ಸಮಸ್ಯೆಗೆ ಇಲ್ಲಿದೆ ಆರ್ಯುವೇದದ ಪರಿಹಾರ

ಒಣ ಕಣ್ಣಿನ ಸಮಸ್ಯೆಯನ್ನು ಶಮನಗೊಳಿಸಲು ಪ್ರಾಣ ಹೆಲ್ತ್​​ ಕೇರ್​ ಸೆಂಟರ್​​ ಆರೋಗ್ಯ ತಜ್ಞರಾದ ಡಿಂಪಲ್​​ ಜಂಗ್ಡಾರವರು ಕೆಲವು ಆರ್ಯುವೇದದ ಸಲಹೆಗಳನ್ನು ನೀಡುತ್ತಾರೆ. ಕೇವಲ ಮೂರು ಪದಾರ್ಥಗಳಿಂದ ನಿಮ್ಮ ಒಣ ಕಣ್ಣಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ​​

Ayurveda For Dry Eyes: ಒಣ ಕಣ್ಣಿನ ಸಮಸ್ಯೆಗೆ ಇಲ್ಲಿದೆ ಆರ್ಯುವೇದದ ಪರಿಹಾರ
ಒಣ ಕಣ್ಣಿನ ಸಮಸ್ಯೆ
Follow us
ಅಕ್ಷತಾ ವರ್ಕಾಡಿ
|

Updated on:Feb 28, 2023 | 4:29 PM

ಇಂದಿನ ಬದಲಾದ ಜೀವನಶೈಲಿಯಿಂದಾಗಿ ಸಾಕಷ್ಟು ಹೊತ್ತು ಮೊಬೈಲ್​ ಫೋನ್​, ಲ್ಯಾಪ್​​ ಟಾಪ್​​ಗಳಲ್ಲಿ ಸಮಯ ಕಳೆಯುವುದು ಸಾಮಾನ್ಯವಾಗಿದೆ. ಇದು ಕಾಲಕ್ರಮೇಣ  ಕಣ್ಣಿನ ಆರೋಗ್ಯವನ್ನು ಕೆಡಿಸಬಹುದು.  ಕಣ್ಣಿನ ದೃಷ್ಟಿ ದೋಷದಿಂದ ಹಿಡಿದು, ತಲೆನೋವು, ಒನ ಕಣ್ಣಿನ ಮುಂತಾದ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ ಒಣ ಕಣ್ಣಿನ ಸಮಸ್ಯೆಯನ್ನು ಶಮನಗೊಳಿಸಲು ಪ್ರಾಣ ಹೆಲ್ತ್​​ ಕೇರ್​ ಸೆಂಟರ್​​ ಆರೋಗ್ಯ ತಜ್ಞರಾದ ಡಿಂಪಲ್​​ ಜಂಗ್ಡಾರವರು ಕೆಲವು ಆರ್ಯುವೇದದ ಸಲಹೆಗಳನ್ನು ನೀಡುತ್ತಾರೆ. ಕೇವಲ ಮೂರು ಪದಾರ್ಥಗಳಿಂದ ನಿಮ್ಮ ಒಣ ಕಣ್ಣಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ​​ ಒಣ ಕಣ್ಣು ಹೊಂದಿರುವ ಜನರು ತುರಿಕೆ, ನೋವು, ಆಯಾಸ, ಸುಡುವಿಕೆ ಅಥವಾ ಕಣ್ಣಿನ ಬಣ್ಣದಲ್ಲಿ ಬದಲಾವಣೆ, ಕೆಂಪು ಕಣ್ಣಿನ ಸಮಸ್ಯೆಯನ್ನು ಅನುಭವಿಸುತ್ತಾರೆ. ಈ ಸಮಸ್ಯೆಯನ್ನು ಶಾಶ್ವತವಾಗಿ ಗುಣಪಡಿಸಲಾಗುವುದಿಲ್ಲ. ಆದರೆ ಆರ್ಯುವೇದದ ಮೂಲಕ ಕಣ್ಣಿನ ಸಮಸ್ಯೆ ಹೆಚ್ಚಾಗದಂತೆ ಜಾಗ್ರತೆ ವಹಿಸಬಹುದಾಗಿದೆ.

ಆರೋಗ್ಯ ತಜ್ಞರಾದ ಡಿಂಪಲ್​​ ಜಂಗ್ಡಾರವರ ಕೆಲವು ಆರ್ಯುವೇದ ಸಲಹೆಗಳು:

ರೋಸ್ ವಾಟರ್:

ಈ ರೋಸ್ ವಾಟರ್ ಒಣ ಕಣ್ಣಿಬ ಸಮಸ್ಯೆಗೆ ಒಂದು ಉತ್ತಮ ಆರ್ಯುವೇದದ ಔಷಧಿಯಾಗಿದೆ ಎಂದು ಡಿಂಪಲ್​​ ಹೇಳುತ್ತಾರೆ. ಪ್ರತಿ ದಿನ ರಾತ್ರಿ ನೀವು ಮಲಗುವ ಮನ್ನ ನಿಮ್ಮ ಕಣ್ಣುಗಳಿಗೆ ಎರಡು ಹನಿ ರೋಸ್​​ ವಾಟರ್​​ ಹಾಕಿ. ಇದು ನಿಮ್ಮ ಆಯಾಸಗೊಂಡ ಮತ್ತು ದಣಿದ ಕಣ್ಣುಗಳಿಗೆ ಹೆಚ್ಚಿನ ವಿಶ್ರಾಂತಿ ನೀಡುತ್ತದೆ. ಇದಲ್ಲದೆ, ಇದು ವಿಟಮಿನ್ ಎ ಅಂಶವನ್ನು ಸಮೃದ್ಧವಾಗಿದೆ ಎಂದು ಹೇಳುತ್ತಾರೆ.

ಇದನ್ನೂ ಓದಿ: ಹೋಳಿ ಹಬ್ಬ ಸಮೀಪಿಸುತ್ತಿದೆ, ಬಣ್ಣಗಳನ್ನು ಎರಚಿ ಆಡುವ ಮೊದಲು, ನಿಮ್ಮ ಆರೋಗ್ಯದ ಬಗ್ಗೆ ಎಚ್ಚರವಹಿಸಿ

ತುಪ್ಪ:

ಒಣ ಕಣ್ಣಿನ ಸಮಸ್ಯೆಗೆ ಮಾತ್ರವಲದೇ ಕಣ್ಣಿನ ಆರೋಗ್ಯವನ್ನು ಕಾಪಾಡುವಲ್ಲಿ ತುಪ್ಪ ಅತ್ಯಂತ ಪ್ರಯೋಜನಕಾರಿಯಾಗಿದೆ. ತುಪ್ಪವನ್ನು ಸ್ವಲ್ಪ ಬಿಸಿ ಮಾಡಿ (ಉಗುರು ಬೆಚ್ಚಗೆ) ಮತ್ತು ನೀವು ಮಲಗುವ ಮುನ್ನ ಕಣ್ಣಿಗೆ ಹಚ್ಚಿ. ಇದು ನಿಮ್ಮ ಕಣ್ಣುಗಳಿಗೆ ಸಾಕಷ್ಟು ವಿಶ್ರಾಂತಿಯ ಅನುಭವವನ್ನು ನೀಡುತ್ತದೆ ಎಂದು ಡಾ. ಡಿಂಪಲ್​​ ಹೇಳುತ್ತಾರೆ.

ಅಲೋವೆರಾ ಜೆಲ್:

ಒಣ ಕಣ್ಣುಗಳಿಗೆ ಅಲೋವೆರಾ ಜೆಲ್ ಪರಿಣಾಮಕಾರಿ ಪರಿಹಾರವಾಗಿದೆ. 1/2 ಚಮಚ ಅಲೋವೆರಾ ಜೆಲ್​​ನ್ನು ಒಂದು ಕಪ್​​ ನೀರಿಗೆ ಹಾಕಿ ಮತ್ತು ಈ ನೀರಿನಿಂದ ಮುಖ ತೊಳೆಯಿರಿ. ಉರಿಯೂತದ ಗುಣಲಕ್ಷಣಗಳು ಕೆಂಪು ಮತ್ತು ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ಇದು ನಿಮ್ಮ ಕಣ್ಣುಗಳಿಗೆ ಸಾಕಷ್ಟು ಆರಾಮವನ್ನು ನೀಡುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 4:28 pm, Tue, 28 February 23

ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ
ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ