AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bird Flu : ಹಕ್ಕಿ ಜ್ವರ ಸೋಂಕಿತ ಹಸುವಿನ ಹಸಿ ಹಾಲು ಕುಡಿದ್ರೆ ಆರೋಗ್ಯಕ್ಕೆ ಅಪಾಯ ಖಂಡಿತ, ಅಧ್ಯಯನದಿಂದ ಬಹಿರಂಗ

ಜಗತ್ತಿನಾದಂತ್ಯ ಹಕ್ಕಿ ಜ್ವರವು ಆತಂಕವನ್ನು ಸೃಷ್ಟಿಸಿದೆ. ಆದರೆ ಇದೀಗ ಹಕ್ಕಿ ಜ್ವರದ ಅಧ್ಯಯನದ ವರದಿಯಲ್ಲಿ ಹಕ್ಕಿ ಜ್ವರ ಸೋಂಕಿತ ಹಸುವಿನ ಹಸಿ ಹಾಲು ಸೇವನೆಯಿಂದ ಆರೋಗ್ಯಕ್ಕೆ ಅಪಾಯಕಾರಿ ಎಂಬ ವಿಚಾರವೊಂದು ಬೆಳಕಿಗೆ ಬಂದಿದೆ.

Bird Flu : ಹಕ್ಕಿ ಜ್ವರ ಸೋಂಕಿತ ಹಸುವಿನ ಹಸಿ ಹಾಲು ಕುಡಿದ್ರೆ ಆರೋಗ್ಯಕ್ಕೆ ಅಪಾಯ ಖಂಡಿತ, ಅಧ್ಯಯನದಿಂದ ಬಹಿರಂಗ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: May 25, 2024 | 5:39 PM

ಇತ್ತೀಚೆಗಿನ ದಿನಗಳಲ್ಲಿ ಹಕ್ಕಿ ಜ್ವರವು ಎಲ್ಲೆಡೆ ಹರಡುತ್ತಿದೆ. ಈ ರೋಗದ ಬಗ್ಗೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವುದು ಉತ್ತಮ. ಈ ವೈರಸ್ ಪ್ರಾಥಮಿಕವಾಗಿ ಪಕ್ಷಿಗಳ ಮೇಲೆ ಮಾತ್ರವಲ್ಲದೇ ಮನುಷ್ಯರಿಗೆ ಕೂಡ ಹರಡಬಹುದು. ಆದರೆ ಇದೀಗ ಸಂಶೋಧನೆಯಿಂದ ಮತ್ತೊಂದು ವಿಚಾರ ಬೆಳಕಿಗೆ ಬಂದಿದ್ದು, ಹಕ್ಕಿ ಜ್ವರ ಸೋಂಕಿಗೆ ಒಳಗಾದ ಹಸುವಿನ ಹಸಿ ಹಾಲು ಕುಡಿಯುವುದರಿಂದ ಆರೋಗ್ಯಕ್ಕೆ ಅಪಾಯ ಹೆಚ್ಚು. ಈ ಹಾಲನ್ನು ಕುಡಿದರೆ ಶ್ವಾಸಕೋಶದಲ್ಲಿ ವೈರಸ್ ನ ಪರಿಣಾಮದ ಮಟ್ಟವು ತೀವ್ರವಾಗಿರುತ್ತದೆ ಎನ್ನಲಾಗಿದೆ.

ಹೊಸ ಅಧ್ಯಯನದಲ್ಲಿ, ವಿಸ್ಕಾನ್ಸಿನ್-ಮ್ಯಾಡಿಸನ್ ವಿಶ್ವವಿದ್ಯಾಲಯ ಮತ್ತು ಟೆಕ್ಸಾಸ್ ಎ & ಎಂ ಸಂಶೋಧಕರು ಸೋಂಕಿತ ಪ್ರಾಣಿಗಳ ಹಸಿ ಹಾಲಿನ ಹನಿಗಳನ್ನು ಐದು ಇಲಿಗಳಿಗೆ ನೀಡಲಾಯಿತು. ಈ ಹಾಲನ್ನು ಕುಡಿದ ಇಲಿಗಳಲ್ಲಿ ಆಲಸ್ಯ ಮತ್ತು ರೋಗದ ಲಕ್ಷಣಗಳು ಕಂಡು ಬಂದವು. ಈ ಜಾನುವಾರುಗಳನ್ನು ಅವುಗಳ ಅಂಗಗಳನ್ನು ಅಧ್ಯಯನ ಮಾಡಲು ಯೂಥನೈಸ್ ಮಾಡಲಾಯಿತು. ಈ ಅಧ್ಯಯನದ ಬಳಿಕ ಹಸುವಿನ ಹಸಿ ಹಾಲನ್ನು ಕುಡಿಯುವುದು ಆರೋಗ್ಯಕ್ಕೆ ಹಾನಿಕಾರಕ ಎನ್ನುವುದು ದೃಢವಾಗಿದೆ.

ಇದನ್ನೂ ಓದಿ: ಮಲೆನಾಡಿಗರ ಕೆಂಪು ಇರುವೆ ಚಟ್ನಿ ಸರ್ವ ರೋಗಕ್ಕೂ ರಾಮಬಾಣ, ಇದರಲ್ಲಿದೆ ಪ್ರೊಟೀನ್

ಕಳೆದ ಕೆಲವು ವರ್ಷಗಳಿಂದ ಎಚ್ 5 ಎನ್ 1 ಗೆ ಕಾರಣವಾಗುವ ಏವಿಯನ್ ಇನ್ಫ್ಲುಯೆನ್ಸ ವೈರಸ್ 50 ಕ್ಕೂ ಹೆಚ್ಚು ವಿವಿಧ ರೀತಿಯ ಪ್ರಾಣಿಗಳಿಗೆ ಸೋಂಕು ತಗುಲಿಸಿದೆ. ಈಗಾಗಲೇ ಈ ಸೋಂಕಿತ ಜಾನುವಾರುಗಳು ಯುಎಸ್ ನ ಡೈರಿಯಲ್ಲಿದೆ. ಹಕ್ಕಿ ಜ್ವರದಿಂದಾಗಿ ದೇಶಾದ್ಯಂತ ಇಲ್ಲಿಯವರೆಗೆ 52 ಜಾನುವಾರುಗಳ ಹಿಂಡುಗಳು ಸೋಂಕಿಗೆ ಒಳಗಾಗಿದ್ದು, ಈ ಸೋಂಕಿತ ಹಾಲನ್ನು ಕುಡಿದು ಇಬ್ಬರು ಕೃಷಿ ಕಾರ್ಮಿಕರಲ್ಲಿ ಹಕ್ಕಿ ಜ್ವರವು ಕಾಣಿಸಿಕೊಂಡಿದೆ. ಈ ವೈರಸ್ ಸೋಂಕಿನಿಂದಾಗಿ, ರೋಗಿಯ ಕಣ್ಣುಗಳು ಗುಲಾಬಿ ಬಣ್ಣಕ್ಕೆ ತಿರುಗುತ್ತವೆ ಹಾಗೂ ಇನ್ನಿತ್ತರ ಕೆಲವು ರೋಗಲಕ್ಷಣಗಳು ಸಹ ಬೆಳೆಯುತ್ತವೆ ಎನ್ನಲಾಗಿದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

5 ಲಕ್ಷ ರೂ ಮೌಲ್ಯದ ಸಿಕ್ಸರ್ ಬಾರಿಸಿದ ಮಿಚೆಲ್ ಮಾರ್ಷ್
5 ಲಕ್ಷ ರೂ ಮೌಲ್ಯದ ಸಿಕ್ಸರ್ ಬಾರಿಸಿದ ಮಿಚೆಲ್ ಮಾರ್ಷ್
ಜೈಲಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಆರೋಪಿ ಮೇಲೆ ದಾಳಿ: ವಿಡಿಯೋ ನೋಡಿ
ಜೈಲಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಆರೋಪಿ ಮೇಲೆ ದಾಳಿ: ವಿಡಿಯೋ ನೋಡಿ
ಏಕೆ ಎಫ್‌ಐಆರ್ ಹಾಕಿಲ್ಲ?; ನ್ಯಾ. ವರ್ಮಾ ವಿವಾದದ ಬಗ್ಗೆ ಉಪರಾಷ್ಟ್ರಪತಿ ಟೀಕೆ
ಏಕೆ ಎಫ್‌ಐಆರ್ ಹಾಕಿಲ್ಲ?; ನ್ಯಾ. ವರ್ಮಾ ವಿವಾದದ ಬಗ್ಗೆ ಉಪರಾಷ್ಟ್ರಪತಿ ಟೀಕೆ
ಅಧಿಕಾರಿಗಳ ನಿರ್ಲಕ್ಷ್ಯ, ಉಡಾಫೆ ಗೊತ್ತಾಗುತ್ತಿದೆ;ಸರ್ಕಾರವೇನು ಮಾಡುತ್ತಿದೆ?
ಅಧಿಕಾರಿಗಳ ನಿರ್ಲಕ್ಷ್ಯ, ಉಡಾಫೆ ಗೊತ್ತಾಗುತ್ತಿದೆ;ಸರ್ಕಾರವೇನು ಮಾಡುತ್ತಿದೆ?
ಬಿಡದಿ ದಿವ್ಯಾಂಗ ಬಾಲಕಿ ಸಾವಿನ ಬಗ್ಗೆ ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ SP
ಬಿಡದಿ ದಿವ್ಯಾಂಗ ಬಾಲಕಿ ಸಾವಿನ ಬಗ್ಗೆ ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ SP
ಇವತ್ತೂ ನಗರದಲ್ಲಿ ಮಳೆ, ಮುಂದಿನ ಎರಡು ದಿನಗಳಲ್ಲೂ ಮಳೆ; ಬವಣೆ ತಪ್ಪಿದ್ದಲ್ಲ
ಇವತ್ತೂ ನಗರದಲ್ಲಿ ಮಳೆ, ಮುಂದಿನ ಎರಡು ದಿನಗಳಲ್ಲೂ ಮಳೆ; ಬವಣೆ ತಪ್ಪಿದ್ದಲ್ಲ
ಹಬ್ಬಕ್ಕೆಂದು ಬೆಂಗಳೂರಿನಿಂದ ಬಂದವರು ಮಸಣಕ್ಕೆ: ಇಲ್ಲಿದೆ ಕೊನೆಯ ಕ್ಷಣ
ಹಬ್ಬಕ್ಕೆಂದು ಬೆಂಗಳೂರಿನಿಂದ ಬಂದವರು ಮಸಣಕ್ಕೆ: ಇಲ್ಲಿದೆ ಕೊನೆಯ ಕ್ಷಣ
ಹೊಸಪೇಟೆಯಿಂದ ಬೆಂಗಳೂರಿಗೆ ವಾಪಸ್ಸು ಹೋಗುತ್ತಿದ್ದೇನೆ: ಶಿವಕುಮಾರ್
ಹೊಸಪೇಟೆಯಿಂದ ಬೆಂಗಳೂರಿಗೆ ವಾಪಸ್ಸು ಹೋಗುತ್ತಿದ್ದೇನೆ: ಶಿವಕುಮಾರ್
ಹಂತಕನಿಗೆ ಕಠಿಣ ಶಿಕ್ಷೆಯಾಗಬೇಕು ಎನ್ನುತ್ತಾರೆ ಮೃತನ ಸಂಬಂಧಿ ಶಂಕರ್
ಹಂತಕನಿಗೆ ಕಠಿಣ ಶಿಕ್ಷೆಯಾಗಬೇಕು ಎನ್ನುತ್ತಾರೆ ಮೃತನ ಸಂಬಂಧಿ ಶಂಕರ್
ಗೃಹಲಕ್ಷ್ಮಿ ಹಣ ಪ್ರತಿ ತಿಂಗಳು ಕೊಡ್ತೀವಿ ಅಂತ ಹೇಳಿಲ್ಲ: ಡಿಕೆ ಶಿವಕುಮಾರ್​
ಗೃಹಲಕ್ಷ್ಮಿ ಹಣ ಪ್ರತಿ ತಿಂಗಳು ಕೊಡ್ತೀವಿ ಅಂತ ಹೇಳಿಲ್ಲ: ಡಿಕೆ ಶಿವಕುಮಾರ್​