Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅತಿಸಾರವನ್ನು ತಡೆಯುವ ಸುಲಭ ವಿಧಾನಗಳು ಇಲ್ಲಿವೆ

Loose Motion Home Remedies: ಅತಿಸಾರ ಅಥವಾ ಭೇದಿ ಉಂಟಾದಾಗ ತೀವ್ರವಾದ ಸುಸ್ತು, ಹೊಟ್ಟೆನೋವು, ವಾಂತಿ ಬಂದಂತಾಗುವುದು, ನಿರ್ಜಲೀಕರಣ ಹೀಗೆ ನಾನಾ ಸಮಸ್ಯೆಗಳಾಗುತ್ತವೆ. ಹೀಗಾಗಿ, ಕಲವು ಮನೆಮದ್ದುಗಳನ್ನು ಬಳಸುವ ಮೂಲಕ ಅತಿಸಾರವನ್ನು ನಿಯಂತ್ರಿಸಬಹುದು.

ಅತಿಸಾರವನ್ನು ತಡೆಯುವ ಸುಲಭ ವಿಧಾನಗಳು ಇಲ್ಲಿವೆ
ಅತಿಸಾರ
Follow us
ಸುಷ್ಮಾ ಚಕ್ರೆ
|

Updated on: Sep 25, 2023 | 7:05 PM

ಅತಿಸಾರ ಅಥವಾ ಭೇದಿ ಪ್ರತಿಯೊಬ್ಬರನ್ನೂ ಆಗಾಗ ಕಾಡುವ ಆರೋಗ್ಯ ಸಮಸ್ಯೆ. ಒಂದೇ ದಿನದಲ್ಲಿ 3 ಅಥವಾ ಅದಕ್ಕಿಂತ ಹೆಚ್ಚು ಬಾರಿ ಸಡಿಲವಾಗಿ ಮಲವಿಸರ್ಜನೆ ಆದರೆ ಅದನ್ನು ಅತಿಸಾರ ಎಂದು ಪರಿಗಣಿಸಲಾಗುತ್ತದೆ. ಈ ಭೇದಿ ಸಮಸ್ಯೆ ಸಾಮಾನ್ಯವಾಗಿ ಒಂದದೆರಡು ದಿನಗಳಲ್ಲಿ ತನ್ನಷ್ಟಕ್ಕೆ ತಾನೇ ವಾಸಿಯಾಗುತ್ತದೆ. ಆಹಾರದ ವ್ಯತ್ಯಾಸದಿಂದ ಭೇದಿ ಉಂಟಾಗುವ ಸಾಧ್ಯತೆಗಳು ಹೆಚ್ಚು. 2 ದಿನವಾದರೂ ಈ ಸಮಸ್ಯೆ ಬಗೆಹರಿಯದಿದ್ದರೆ ವೈದ್ಯರನ್ನು ಕಾಣಬೇಕು. ಆದರೂ ಕೆಲವು ಮನೆಮದ್ದುಗಳನ್ನು ಬಳಸುವ ಮೂಲಕ ಅತಿಸಾರವನ್ನು ನಿಯಂತ್ರಿಸಬಹುದು.

ಅತಿಸಾರಕ್ಕೆ ಕಾರಣಗಳು:

– ಜ್ವರ, ನೊರೊವೈರಸ್ ಅಥವಾ ರೋಟವೈರಸ್​ನಂತಹ ವೈರಸ್​ಗಳು.

– ಬ್ಯಾಕ್ಟೀರಿಯಾ ಅಥವಾ ಕಲುಷಿತವಾಗಿರುವ ಆಹಾರ, ನೀರು.

– ಮೆಗ್ನೀಸಿಯಮ್ ಹೊಂದಿರುವ ಪ್ರತಿಜೀವಕಗಳು, ಕ್ಯಾನ್ಸರ್ ಔಷಧಿಗಳು ಮತ್ತು ಆಂಟಾಸಿಡ್​ಗಳಂತಹ ಔಷಧಗಳು.

– ಕ್ರೋನ್ಸ್ ಕಾಯಿಲೆಯಂತಹ ಹೊಟ್ಟೆ, ಸಣ್ಣ ಕರುಳು ಅಥವಾ ದೊಡ್ಡ ಕರುಳಿನ ರೋಗಗಳು.

– ಆಹಾರ ಅಸಹಿಷ್ಣುತೆಗಳು.

– ಆಹಾರದ ಕಳಪೆ ಹೀರಿಕೊಳ್ಳುವಿಕೆ.

– ಜೀರ್ಣಾಂಗ ವ್ಯವಸ್ಥೆಗೆ ಅಡ್ಡಿಪಡಿಸುವ ಆಹಾರವನ್ನು ತಿನ್ನುವುದು.

ಇದನ್ನೂ ಓದಿ: ಫಂಗಲ್ ಇನ್​ಫೆಕ್ಷನ್ ಹೇಗೆ ಹರಡುತ್ತದೆ? ಇದನ್ನು ನಿಯಂತ್ರಿಸುವುದು ಹೇಗೆ?

ಅತಿಸಾರಕ್ಕೆ ಕೆಲವು ಮನೆಮದ್ದುಗಳು ಹೀಗಿವೆ:

1. ಸೇಬು, ತುಪ್ಪ, ಏಲಕ್ಕಿ ಮತ್ತು ಜಾಯಿಕಾಯಿ:

ತುಪ್ಪ, ಏಲಕ್ಕಿ ಮತ್ತು ಜಾಯಿಕಾಯಿಯೊಂದಿಗೆ ಸೇಬನ್ನು ಬೇಯಿಸಿ ಮತ್ತು ಈ ಮಿಶ್ರಣವನ್ನು ಸೇವಿಸಿ.

2. ಬಾಳೆಹಣ್ಣು, ತುಪ್ಪ, ಏಲಕ್ಕಿ ಮತ್ತು ಜಾಯಿಕಾಯಿ:

ಒಂದು ಅಥವಾ 2 ಬಾಳೆಹಣ್ಣನ್ನು ತುಪ್ಪದೊಂದಿಗೆ ಬೆರೆಸಿ, 1 ಚಿಟಿಕೆ ಏಲಕ್ಕಿ ಮತ್ತು ಜಾಯಿಕಾಯಿಯನ್ನು ಬೆರೆಸಿಕೊಂಡು ತಿನ್ನಿ.

3. ಅನ್ನ, ಮೊಸರು ಮತ್ತು ತುಪ್ಪ:

ಬಿಸಿ ಅನ್ನವನ್ನು ಮೊಸರಿನೊಂದಿಗೆ ಅಥವಾ ತುಪ್ಪದೊಂದಿಗೆ ತಿನ್ನುವುದರಿಂದ ಭೇದಿಯನ್ನು ನಿಯಂತ್ರಿಸಬಹುದು.

4. ಮೊಸರು, ಶುಂಠಿ ಮತ್ತು ನೀರು:

ತುರಿದ ಹಸಿ ಶುಂಠಿಯೊಂದಿಗೆ ನೀರು ಮತ್ತು ಮೊಸರನ್ನು ಮಿಶ್ರಣ ಮಾಡುವುದರಿಂದ ಭೇದಿ ಕಡಿಮೆಯಾಗುತ್ತದೆ.

ಇದನ್ನೂ ಓದಿ: Lychee Side Effects: ಅತಿಯಾಗಿ ಲಿಚಿ ಹಣ್ಣು ತಿಂದರೆ ಏನಾಗುತ್ತೆ?

5. ಶುಂಠಿ, ಸಕ್ಕರೆ ಮತ್ತು ಬೆಚ್ಚಗಿನ ನೀರು:

ಶುಂಠಿಯ ಪುಡಿ ಮತ್ತು ಸಕ್ಕರೆಯನ್ನು ಬೆಚ್ಚಗಿನ ನೀರಿನೊಂದಿಗೆ ಸೇವಿಸುವುದರಿಂದ ಭೇದಿಯನ್ನು ತಡೆಗಟ್ಟಲು ಸಹಾಯಕ.

6. ತುಪ್ಪ, ಜಾಯಿಕಾಯಿ, ಶುಂಠಿ ಮತ್ತು ಸಕ್ಕರೆ:

ತುಪ್ಪ, ಜಾಯಿಕಾಯಿ, ಶುಂಠಿ ಪುಡಿ ಮತ್ತು ಸಕ್ಕರೆಯ ಮಿಶ್ರಣವನ್ನು ದಿನಕ್ಕೆ 2ರಿಂದ 3 ಬಾರಿ 2-3 ದಿನಗಳವರೆಗೆ ಸೇವಿಸಬಹುದು.

7. ಸೋಂಪು ಮತ್ತು ಶುಂಠಿ ಪುಡಿ:

ಸೋಂಪಿನ ಪೌಡರ್ ಮತ್ತು ಶುಂಠಿ ಪುಡಿಯ ಮಿಶ್ರಣವನ್ನು ದಿನಕ್ಕೆ 2ರಿಂದ 3 ಬಾರಿ ಜಗಿಯುವುದು.

8. ಕಪ್ಪು ಚಹಾ, ನಿಂಬೆ ರಸ ಮತ್ತು ಏಲಕ್ಕಿ ಅಥವಾ ಜಾಯಿಕಾಯಿ:

1 ಚಿಟಿಕೆ ನಿಂಬೆ ರಸ ಮತ್ತು 1 ಚಿಟಿಕೆ ಏಲಕ್ಕಿ ಅಥವಾ ಜಾಯಿಕಾಯಿಯೊಂದಿಗೆ ಒಂದು ಕಪ್ ಬಿಸಿಯಾದ ಕಪ್ಪು ಚಹಾವನ್ನು ಕುಡಿಯಿರಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸನ್‌ರೈಸರ್ಸ್ ಹೈದರಾಬಾದ್ ತಂಡ ಉಳಿದುಕೊಂಡಿರುವ ಹೋಟೆಲ್‌ನಲ್ಲಿ ಬೆಂಕಿ ದುರಂತ
ಸನ್‌ರೈಸರ್ಸ್ ಹೈದರಾಬಾದ್ ತಂಡ ಉಳಿದುಕೊಂಡಿರುವ ಹೋಟೆಲ್‌ನಲ್ಲಿ ಬೆಂಕಿ ದುರಂತ
ಶಾಸಕರು ಬಯಸಿದರೆ ಶಿವಕುಮಾರ್ ಸಿಎಂ ಆಗುವುದನ್ನು ಯಾರು ತಡೆದಾರು? ರಾಯರೆಡ್ಡಿ
ಶಾಸಕರು ಬಯಸಿದರೆ ಶಿವಕುಮಾರ್ ಸಿಎಂ ಆಗುವುದನ್ನು ಯಾರು ತಡೆದಾರು? ರಾಯರೆಡ್ಡಿ
‘ಬ್ಯಾಂಕ್ ಕೆಲಸವನ್ನು ಜನಾರ್ದನ್ ಬಿಡಬಾರದಿತ್ತು’: ಕಣ್ಣೀರು ಹಾಕಿದ ಉಮೇಶ್
‘ಬ್ಯಾಂಕ್ ಕೆಲಸವನ್ನು ಜನಾರ್ದನ್ ಬಿಡಬಾರದಿತ್ತು’: ಕಣ್ಣೀರು ಹಾಕಿದ ಉಮೇಶ್
ವಿಧಾನಸೌಧ ಮುಂದೆ ಹಾಕಿದ್ದ ಪೆಂಡಾಲ್​​​ಗಳ ಕೆಳಗೆ ಆಶ್ರಯ ಪಡೆದ ಜನ
ವಿಧಾನಸೌಧ ಮುಂದೆ ಹಾಕಿದ್ದ ಪೆಂಡಾಲ್​​​ಗಳ ಕೆಳಗೆ ಆಶ್ರಯ ಪಡೆದ ಜನ
14 ವರ್ಷದ ಬಳಿಕ ರಾಮಪಾಲ್ ಕಶ್ಯಪ್ ಚಪ್ಪಲಿ ಧರಿಸುವಂತೆ ಮಾಡಿದ ಪಿಎಂ ಮೋದಿ
14 ವರ್ಷದ ಬಳಿಕ ರಾಮಪಾಲ್ ಕಶ್ಯಪ್ ಚಪ್ಪಲಿ ಧರಿಸುವಂತೆ ಮಾಡಿದ ಪಿಎಂ ಮೋದಿ
ಹೈದರಾಬಾದ್ ಆಟಗಾರರು ತಂಗಿದ್ದ ಹೋಟೆಲ್‌ನಲ್ಲಿ ಅಗ್ನಿ ಅವಘಡ
ಹೈದರಾಬಾದ್ ಆಟಗಾರರು ತಂಗಿದ್ದ ಹೋಟೆಲ್‌ನಲ್ಲಿ ಅಗ್ನಿ ಅವಘಡ
ಜಾತಿ ಗಣತಿ ಅವೈಜ್ಞಾನಿಕವಾಗಿದೆ, ಮತ್ತೊಮ್ಮೆ ಮಾಡಿಸಬೇಕು: ಸ್ವಾಮೀಜಿ
ಜಾತಿ ಗಣತಿ ಅವೈಜ್ಞಾನಿಕವಾಗಿದೆ, ಮತ್ತೊಮ್ಮೆ ಮಾಡಿಸಬೇಕು: ಸ್ವಾಮೀಜಿ
ಬೃಹತ್ ಜಾತಿ ಗಣತಿ ವರದಿಯನ್ನು ಯಾರೂ ಓದಿದಂತಿಲ್ಲ, ಓದಲು ಸಮಯ ಹಿಡಿಯಲಿದೆ
ಬೃಹತ್ ಜಾತಿ ಗಣತಿ ವರದಿಯನ್ನು ಯಾರೂ ಓದಿದಂತಿಲ್ಲ, ಓದಲು ಸಮಯ ಹಿಡಿಯಲಿದೆ
25 ವರ್ಷಗಳ ಹಿಂದೆಯೇ ಬ್ಯಾಂಕ್ ಜನಾರ್ದನ್​ಗೆ ಹಾರ್ಟ್ ಸಮಸ್ಯೆ: ಸಾಧು ಕೋಕಿಲ
25 ವರ್ಷಗಳ ಹಿಂದೆಯೇ ಬ್ಯಾಂಕ್ ಜನಾರ್ದನ್​ಗೆ ಹಾರ್ಟ್ ಸಮಸ್ಯೆ: ಸಾಧು ಕೋಕಿಲ
ಭಾರತದ ಲೇಸರ್ ವೆಪನ್ ಸಿಸ್ಟಂ ಪ್ರಯೋಗದ ವಿಡಿಯೋ
ಭಾರತದ ಲೇಸರ್ ವೆಪನ್ ಸಿಸ್ಟಂ ಪ್ರಯೋಗದ ವಿಡಿಯೋ