ಲಿವರ್ ಫೇಲ್ ಆಗುವ ಮೊದಲು ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ
ಇತ್ತೀಚಿನ ದಿನಗಳಲ್ಲಿ, ಯಕೃತ್ತಿನ ಸಮಸ್ಯೆಗಳು ಹೆಚ್ಚುತ್ತಿವೆ. ಕೊಬ್ಬಿನ ಪಿತ್ತಜನಕಾಂಗ, ಯಕೃತ್ತಿನ ಸಿರೋಸಿಸ್ ಮತ್ತು ಯಕೃತ್ತು ವೈಫಲ್ಯದ ಪ್ರಕರಣಗಳು ಹೆಚ್ಚುತ್ತಿವೆ. ಆದರೆ ಯಕೃತ್ತು ಅಥವಾ ಲಿವರ್ ವೈಫಲ್ಯವಾಗುವ ಮೊದಲು ದೇಹದಲ್ಲಿ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆ ಲಕ್ಷಣಗಳು ಯಾವುವು ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಉತ್ತಮ. ಏಕೆಂದರೆ ಇದರಿಂದ ನಿಮ್ಮ ಜೀವಕ್ಕೆ ಅಪಾಯಕಾರಿಯಾದಂತಹ ಸ್ಥಿತಿಯನ್ನು ತಡೆಯಬಹುದಾಗಿದೆ. ಹಾಗಾದರೆ ಆ ಲಕ್ಷಣಗಳು ಯಾವವು? ಯಾವ ಸಂದರ್ಭದಲ್ಲಿ ವೈದ್ಯರನ್ನು ಸಂಪರ್ಕಿಸಬೇಕು ಎಂಬುದನ್ನು ತಿಳಿದುಕೊಳ್ಳಿ.

ಯಕೃತ್ತು ಅಥವಾ ಲಿವರ್ (Liver) ದೇಹದ ಒಂದು ಪ್ರಮುಖ ಭಾಗ. ಇದು ದೇಹದ ಅನೇಕ ಕಾರ್ಯಗಳನ್ನು ನಿರ್ವಹಿಸುತ್ತದೆ. ಪಿತ್ತರಸವನ್ನು ಉತ್ಪಾದಿಸುತ್ತದೆ, ರಕ್ತದಿಂದ ವಿಷವನ್ನು ಹೊರಹಾಕುತ್ತದೆ. ರಕ್ತ ಹೆಪ್ಪುಗಟ್ಟುವಿಕೆಗೆ ಅಗತ್ಯವಾದ ಪ್ರೋಟೀನ್ಗಳನ್ನು ಉತ್ಪಾದಿಸುತ್ತದೆ. ಇಷ್ಟೆಲ್ಲಾ ಕೆಲಸ ಮಾಡಿ ನಮ್ಮ ಆರೋಗ್ಯ (Health) ಕಾಪಾಡುವ ಯಕೃತ್ತನ್ನು ರಕ್ಷಿಸಿಕೊಳ್ಳುವುದು ನಮ್ಮ ಕೈಯಲ್ಲಿದೆ. ಆದರೆ, ಇತ್ತೀಚಿನ ದಿನಗಳಲ್ಲಿ, ಜೀವನಶೈಲಿ (Lifestyle) ಮತ್ತು ಕೆಟ್ಟ ಅಭ್ಯಾಸಗಳಿಂದಾಗಿ ಯಕೃತ್ತಿನ ಸಮಸ್ಯೆಗಳು ಹೆಚ್ಚುತ್ತಿವೆ. ಯಕೃತ್ತು ಹಾನಿಗೊಳಗಾದಾಗ ಅಥವಾ ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ, ಹಲವಾರು ಆರೋಗ್ಯ ಸಮಸ್ಯೆಗಳು ಕಂಡುಬರುತ್ತದೆ. ಕೊಬ್ಬಿನ ಯಕೃತ್ತು, ಯಕೃತ್ತಿನ ಸಿರೋಸಿಸ್, ಯಕೃತ್ತಿನ ಕ್ಯಾನ್ಸರ್ ಮತ್ತು ಹೆಪಟೈಟಿಸ್ನಂತಹ ಸಮಸ್ಯೆಗಳು ಉಂಟಾಗುತ್ತವೆ. ಅಲ್ಲದೆ ಯಕೃತ್ತು ವೈಫಲ್ಯವು ಗಂಭೀರವಾದ ಜೀವಕ್ಕೆ ಅಪಾಯಕಾರಿ ಸ್ಥಿತಿಯಾಗಿದೆ. ಈ ಕಾಯಿಲೆಯಲ್ಲಿ, ಯಕೃತ್ತು ಇದ್ದಕ್ಕಿದ್ದಂತೆ ಸರಿಯಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ. ಆದರೆ ಅದಕ್ಕೂ ಮೊದಲು ದೇಹದಲ್ಲಿ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆ ಲಕ್ಷಣಗಳು ಯಾವುವು ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಉತ್ತಮ. ಏಕೆಂದರೆ ಇದರಿಂದ ನಿಮ್ಮ ಜೀವಕ್ಕೆ ಅಪಾಯಕಾರಿಯಾದಂತಹ ಸ್ಥಿತಿಯನ್ನು ತಡೆಯಬಹುದಾಗಿದೆ. ಹಾಗಾದರೆ ಆ ಲಕ್ಷಣಗಳು ಯಾವವು? ಯಾವ ಸಂದರ್ಭದಲ್ಲಿ ವೈದ್ಯರನ್ನು ಸಂಪರ್ಕಿಸಬೇಕು ಎಂಬುದನ್ನು ತಿಳಿದುಕೊಳ್ಳಿ.
ಆಯಾಸ, ದೌರ್ಬಲ್ಯ
ಸಣ್ಣ ಕೆಲಸ ಮಾಡಿದರೂ ಸುಸ್ತಾಗುವುದು, ಮೆಟ್ಟಿಲು ಹತ್ತಿದ ನಂತರ ಅಥವಾ ಸ್ವಲ್ಪ ದೂರ ನಡೆದ ನಂತರವೂ ಆಯಾಸವಾದಂತೆ ಅನುಭವಾಗುತ್ತಾ? ಹಾಗಿದ್ದಲ್ಲಿ, ಈ ಲಕ್ಷಣವನ್ನು ನಿರ್ಲಕ್ಷಿಸಬೇಡಿ. ಇವು ಯಕೃತ್ತಿನ ವೈಫಲ್ಯಕ್ಕೂ ಮೊದಲು ಕಾಣಿಸಿಕೊಳ್ಳುತ್ತದೆ. ನೀವು ವಿಶ್ರಾಂತಿ ಪಡೆದ ನಂತರವೂ ದಣಿದ ಅಥವಾ ಸುಸ್ತಾದ ಭಾವನೆ ಉಂಟಾಗುವುದು ಲಿವರ್ ಫೇಲ್ ಆಗುವುದರ ಸಂಕೇತವಾಗಿದೆ.
ಚರ್ಮ, ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗುವುದು
ಇದು ಯಕೃತ್ತು ವೈಫಲ್ಯಕ್ಕೂ ಮುನ್ನ ಕಂಡುಬರುವಂತಹ ಸಾಮಾನ್ಯ ಲಕ್ಷಣವಾಗಿದೆ. ತೀವ್ರವಾದ ಲಿವರ್ ವೈಫಲ್ಯ ಸಂಭವಿಸಿದಾಗ, ಯಕೃತ್ತು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಪರಿಣಾಮವಾಗಿ, ಬಿಲಿರುಬಿನ್ ಸಂಗ್ರಹವಾಗುತ್ತದೆ. ಇದರಿಂದ ಚರ್ಮ ಮತ್ತು ಕಣ್ಣುಗಳ ಬಿಳಿ ಭಾಗ ಹಳದಿ ಬಣ್ಣಕ್ಕೆ ತಿರುಗುತ್ತದೆ. ಇದನ್ನು ಕಾಮಾಲೆ ಎಂದು ಕರೆಯಲಾಗುತ್ತದೆ. ಹಾಗಾಗಿ ಈ ರೀತಿ ಆಗುವಾಗ ಅದನ್ನು ನಿರ್ಲಕ್ಷ್ಯ ಮಾಡಬೇಡಿ.
ಗಾಢ ಬಣ್ಣದ ಮೂತ್ರ
ಯಕೃತ್ತು ವೈಫಲ್ಯ ಅಥವಾ ಲಿವರ್ ಫೇಲ್ ಆಗುವ ಮೊದಲು, ಮೂತ್ರದ ಬಣ್ಣ ಬದಲಾಗುತ್ತದೆ. ಯಕೃತ್ತು ವೈಫಲ್ಯದ ಸಮಸ್ಯೆ ಇದ್ದಾಗ, ಯಕೃತ್ತು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಪರಿಣಾಮವಾಗಿ, ಬಿಲಿರುಬಿನ್ ಸಂಗ್ರಹವಾಗುತ್ತದೆ. ಸಾಮಾನ್ಯವಾಗಿ, ಯಕೃತ್ತು ಬಿಲಿರುಬಿನ್ ಅನ್ನು ಶೋಧಿಸುತ್ತದೆ. ಆದರೆ ಈ ಸಮಯದಲ್ಲಿ, ಯಕೃತ್ತಿನ ವೈಫಲ್ಯವು ಮೂತ್ರಪಿಂಡಗಳ ಮೇಲೆ ಒತ್ತಡವನ್ನು ಬೀರುತ್ತದೆ. ಮೂತ್ರಪಿಂಡಗಳ ಮೂಲಕ ಹೊರಹಾಕಲ್ಪಡುವ ಹೆಚ್ಚುವರಿ ಬಿಲಿರುಬಿನ್ ನಿಮ್ಮ ಮೂತ್ರ ಗಾಢ ಬಣ್ಣಕ್ಕೆ ಬದಲಾಗಲು ಕಾರಣವಾಗಬಹುದು.
ಹೊಟ್ಟೆ ಉಬ್ಬುವುದು, ನೋವು
ಯಕೃತ್ತು ಪ್ರೋಟೀನ್ ಮಟ್ಟವನ್ನು ನಿಯಂತ್ರಿಸಲು ಅಸಮರ್ಥವಾದಾಗ, ಹೊಟ್ಟೆಯಲ್ಲಿ ದ್ರವವು ಸಂಗ್ರಹವಾಗುತ್ತದೆ. ಇದು ಹೊಟ್ಟೆಯ ಊತಕ್ಕೆ ಕಾರಣವಾಗುತ್ತದೆ. ಹೆಚ್ಚುವರಿಯಾಗಿ, ಆ ಪ್ರದೇಶದಲ್ಲಿ ತಡೆಯಲಾರದ ನೋವು ಕಂಡುಬರುತ್ತದೆ. ಈ ಲಕ್ಷಣ ಆಗಾಗ ಕಾಣಿಸಿಕೊಂಡರೆ, ಅದನ್ನು ನಿರ್ಲಕ್ಷಿಸಬೇಡಿ. ತಕ್ಷಣ ವೈದ್ಯರನ್ನು ಸಂಪರ್ಕಿಸಿ ಅಗತ್ಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳಿ.
ಇದನ್ನೂ ಓದಿ: ಯಕೃತ್ತಿನಲ್ಲಿ ಕಂಡುಬರುವ ಸಮಸ್ಯೆಗೆ ಈ 4 ಆಹಾರ ಪದ್ಧತಿ ರಾಮಬಾಣ
ಚರ್ಮದ ಮೇಲೆ ತುರಿಕೆ
ಯಕೃತ್ತು ಅಥವಾ ಲಿವರ್ ವಿಫಲವಾಗುವ ಮೊದಲು, ಚರ್ಮದ ಮೇಲೆ ತುರಿಕೆ ಕಾಣಿಸಿಕೊಳ್ಳುತ್ತದೆ. ಯಾವುದೇ ದದ್ದುಗಳಿಲ್ಲದೆ ನಿರಂತರ ತುರಿಕೆ ಇರುತ್ತದೆ. ಲಿವರ್ ಅಸಮರ್ಪಕವಾಗಿ ಕಾರ್ಯ ನಿರ್ವಹಿಸುವಾಗ ಚರ್ಮದ ಕೆಳಗೆ ಪಿತ್ತರಸ ಲವಣಗಳು ಸಂಗ್ರಹವಾಗುವುದರಿಂದ ಚರ್ಮದ ಮೇಲೆ ತುರಿಕೆ ಉಂಟಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಹಾಗಾಗಿ ಯಾವುದೇ ರೀತಿ ಕಾರಣವಿಲ್ಲದೆ ಚರ್ಮದ ಮೇಲೆ ತುರಿಕೆ ಉಂಟಾದರೆ ಅದನ್ನು ನಿರ್ಲಕ್ಷಿಸಬೇಡಿ. ಜೊತೆಗೆ ಹಸಿವಿನ ಕೊರತೆ, ವಾಕರಿಕೆ, ವಾಂತಿ, ಕಾಲು ಮತ್ತು ಕೀಲುಗಳಲ್ಲಿ ಊತ ಕಂಡು ಬಂದರೆ ವೈದ್ಯರನ್ನು ಭೇಟಿ ಮಾಡಿ ಸರಿಯಾಗಿ ಪರೀಕ್ಷೆ ಮಾಡಿಸಿಕೊಳ್ಳಿ. ಅದರ ಜೊತೆಗೆ ಮೇಲೆ ಹೇಳಿರುವ ಲಕ್ಷಣಗಳು ತೀವ್ರವಾಗಿದ್ದಾಗ, ನಿರ್ಲಕ್ಷ್ಯ ಮಾಡದೆಯೇ ವೈದ್ಯರನ್ನು ಸಂಪರ್ಕಿಸಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








