AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಚ್ಚು ಹೊತ್ತು ಜಿಮ್‌ನಲ್ಲಿ ಸಮಯ ಕಳೆಯಬೇಡಿ, ಹೃದಯ ಸ್ತಂಭನ ಅಪಾಯದ ಬಗ್ಗೆ ಬೆಂಗಳೂರಿನ ಡಾ. ದೀಪಕ್ ಕೃಷ್ಣಮೂರ್ತಿ ಹೇಳೋದೇನು?

ಹೃದಯ ದೇಹದ ಸೂಕ್ಷ್ಮ ಭಾಗ, ಅದನ್ನು ಯಾವಾಗಲೂ ಕಾಳಜಿಯಿಂದ ನೋಡಿಕೊಳ್ಳಬೇಕು. ಹೃದಯ ಸ್ತಂಭನಕ್ಕೆ ಅಥವಾ ಹೃದಯಾಘಾತಕ್ಕೆ ಈ ವರ್ಕ್​ಔಟ್​​ ಕೂಡ ಕಾರಣವಾಗಬಹುದು. ಈ ಬಗ್ಗೆ ಬೆಂಗಳೂರಿನ ಡಾ. ದೀಪಕ್ ಕೃಷ್ಣಮೂರ್ತಿ ಕೆಲವೊಂದು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಹೃದಯ ಆರೋಗ್ಯಕ್ಕೆ ಎಷ್ಟು ಹೊತ್ತು ವರ್ಕ್ ಔಟ್ ಮಾಡಬೇಕು? ಹೃದಯ ಸ್ತಂಭನ ಅಪಾಯಕ್ಕೆ ಕಾರಣ ಏನು ಎಂಬ ಬಗ್ಗೆ ಇಲ್ಲಿ ತಿಳಿಸಲಾಗಿದೆ ನೋಡಿ.

ಹೆಚ್ಚು ಹೊತ್ತು ಜಿಮ್‌ನಲ್ಲಿ ಸಮಯ ಕಳೆಯಬೇಡಿ, ಹೃದಯ ಸ್ತಂಭನ ಅಪಾಯದ ಬಗ್ಗೆ ಬೆಂಗಳೂರಿನ ಡಾ. ದೀಪಕ್ ಕೃಷ್ಣಮೂರ್ತಿ ಹೇಳೋದೇನು?
Heart Attack
ಸಾಯಿನಂದಾ
|

Updated on: Jun 20, 2025 | 4:44 PM

Share

ಫಿಟ್‌ನೆಸ್​​ಗಾಗಿ ಜಿಮ್​​ಗೆ ಹೋಗುವುದು ಸಹಜ, ಇದು ಆರೋಗ್ಯಕ್ಕೂ ಒಳ್ಳೆಯದು, ಆದರೆ ಜಿಮ್​ನಲ್ಲಿ ಹೆಚ್ಚು ಹೊತ್ತು ಕಾಲ ಕಳೆಯುವುದು ಸರಿಯಲ್ಲ, ಎಷ್ಟು ಬೇಕು ಅಷ್ಟೇ ವರ್ಕ್​​ ಔಟ್​​ ಮಾಡುವುದು ಒಳ್ಳೆಯದು. ವರ್ಕ್​​​​​ಔಟ್​​​ ಹೆಚ್ಚು ಹೊತ್ತು ಮಾಡಿದ್ರೆ ಇದು ಹೃದಯ ಆರೋಗ್ಯಕ್ಕೆ (heart attack causes) ಹೆಚ್ಚು ಅಪಾಯವನ್ನು ಉಂಟು ಮಾಡುತ್ತಿದೆ. ಹಿಮಾಚಲ ಪ್ರದೇಶದ 35 ವರ್ಷದ ವ್ಯಕ್ತಿಯೊಬ್ಬ ಜಿಮ್​​​​ ಮಾಡಿ ಸಾವನ್ನಪ್ಪಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್​​ ಆಗಿತ್ತು. ವ್ಯಾಯಾಮದ ತೀವ್ರತೆ , ಪೂರಕ ಬಳಕೆ ಮತ್ತು ಸ್ನಾಯುಗಳ ಮೈಕಟ್ಟುಗಳ ಹಿಂದೆ ಒಂದು ಮೌನವಾದ ಅಪಾಯ ಇದೆ ಎಂಬುದು ಯಾರಿಗೂ ಗೊತ್ತಿಲ್ಲ.

ಬೆಂಗಳೂರು ಮೂಲದ ಪ್ರಸಿದ್ಧ ಹೃದ್ರೋಗ ತಜ್ಞ ಡಾ. ದೀಪಕ್ ಕೃಷ್ಣಮೂರ್ತಿ ಈ ಬಗ್ಗೆ ಕೆಲವೊಂದು ಸಲಹೆಗಳನ್ನು ಹಾಗೂ ಎಚ್ಚರಿಕೆಯನ್ನು ನೀಡಿದ್ದಾರೆ. ಡಾ. ದೀಪಕ್ ಕೃಷ್ಣಮೂರ್ತಿ ಅವರು ತಮ್ಮ ಎಕ್ಸ್​ ಖಾತೆ ಬಗ್ಗೆ ಹೇಳಿದ್ದಾರೆ. ಒಬ್ಬ ವ್ಯಕ್ತಿಯ ಮರಣದ ಅಕಾಲಿಕ ಅಥವಾ ಹೃದಯಾಘಾತದ ನಂತರ ಮರಣೋತ್ತರ ಪರೀಕ್ಷೆಯ ಮಾಡಲಾಗುತ್ತದೆ. ಅಲ್ಲಿ ಯಾವ ಕಾರಣದಿಂದ ಈ ಮರಣ ಸಂಭವಿಸುತ್ತದೆ ಎಂದು ಹೇಳಿದ್ದಾರೆ. ಹಠಾತ್ ಸಾವು ಹೃದಯಾಘಾತ ಅಥವಾ ಹೃದಯ ಸ್ತಂಭನದಿಂದ ಹಿಡಿದು ಕಾರ್ಡಿಯೊಮಯೋಪತಿ ಅಥವಾ ಚಾನೆಲೋಪತಿಯಂತಹ ಆಧಾರ ಮೇಲೆ ಹೇಳಲಾಗುತ್ತದೆ. ಸ್ಟೀರಾಯ್ಡ್ ಬಳಕೆ, ಮನರಂಜನಾ ಔಷಧಗಳು, ಧೂಮಪಾನ ಅಥವಾ ಮದ್ಯ ಸೇವನೆಯಂತಹ ಅಂಶಗಳಿಂದಲೂ ಕೂಡ ಈ ಹೃದಯಾಘಾತ ಸಂಭವಿಸಬಹುದು.

ಇದನ್ನೂ ಓದಿ
Image
ಜೂನ್‌ 21 ರಂದೇ ಯೋಗ ದಿನಾಚರಣೆ ಆಚರಿಸುವುದರ ಹಿಂದಿದೆ ಅಚ್ಚರಿಯ ಕಾರಣ
Image
ಮೊದಲ ಬಾರಿಗೆ ಯೋಗ ಮಾಡುವವರು ಈ ವಿಷಯಗಳನ್ನು ಮರೆಯಬೇಡಿ
Image
ಯೋಗಾಭ್ಯಾಸ ವೇಳೆ ಈ ತಪ್ಪು ಬೇಡ; ಇಲ್ಲಿದೆ ಕೆಲ ಮುಖ್ಯ ಯೋಗ ಟಿಪ್ಸ್
Image
ಧ್ಯಾನ ಮಾಡೋದ್ರಿಂದ ಮೆದುಳಿನ ವಯಸ್ಸು ಕಡಿಮೆಯಾಗುತ್ತಾ?

ಎಕ್ಸ್​​​ ಪೋಸ್ಟ್​​ ಇಲ್ಲಿದೆ ನೋಡಿ:

ಇನ್ನು ಅವರು ಎಕ್ಸ್​​ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋಗೆ ಅನೇಕರು ಕಮೆಂಟ್​​ನಲ್ಲಿ ಕೆಲವೊಂದು ಪ್ರಶ್ನೆಗಳನ್ನು ಕೇಳಿದ್ದು, ಅತಿಯಾದ ವ್ಯಾಯಾಮವು ನಿಜಕ್ಕೂ ಸಮಸ್ಯೆಯಾಗಬಹುದು, ಇದು ಹೃದಯ ಸ್ತಂಭನಕ್ಕೆ ಕಾರಣವಾಗಬಹುದು ಎಂದು ಅವರು ಉತ್ತರಿಸಿದ್ದಾರೆ. ಇನ್ನೊಬ್ಬ ಬಳಕೆದಾರ ಪ್ರೋಟೀನ್ ಶೇಕ್‌ಗಳ ಬಗ್ಗೆ ಕೇಳಿದ್ದು,, ಇದಕ್ಕೆ ಉತ್ತರಿಸಿದ ಅವರು ವಿಷಕಾರಿ ವಸ್ತುಗಳಿಂದ ಕಲಬೆರಕೆಯಾದಾಗ ಮಾತ್ರ ಈ ಘಟನೆಗಳು ನಡೆಯುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಊಟದ ನಂತರ ಯೋಗ ಮಾಡಬಹುದೇ? ಯೋಗದ ಮೊದಲು ಹಾಗೂ ನಂತರ ಯಾವ ಆಹಾರ ಸೇವಿಸಬೇಕು

ಅನೇಕ ಸೆಲೆಬ್ರಿಟಿಗಳು ಜಿಮ್​​​ನಲ್ಲಿ ವರ್ಕ್​​​ಔಟ್​​​ ಮಾಡಿಯೇ ಸಾವನ್ನಪ್ಪಿದ್ದಾರೆ. ವ್ಯಾಯಾಮದ ಸಮಯದಲ್ಲಿ ಅವರು ಕುಸಿದು ಬಿದ್ದ ಸಾವನ್ನಪ್ಪಿದ್ದಾರೆ. ಹಾಸ್ಯನಟ ರಾಜು ಶ್ರೀವಾಸ್ತ, ಸಲ್ಮಾನ್ ಖಾನ್ ಅವರು ಸ್ನೇಹಿತ ಸಾಗರ್ ಪಾಂಡೆ ಕೂಡ ವರ್ಕ್​​​​ಔಟ್​​ ಮಾಡುವ ವೇಳೆಯೇ ಸಾವನ್ನಪ್ಪಿದ್ದಾರೆ. ಕನ್ನಡದ ಸೂಪರ್‌ಸ್ಟಾರ್ ಪುನೀತ್ ರಾಜ್‌ಕುಮಾರ್, ನಟರಾದ ದೀಪೇಶ್ ಭನ್ ಮತ್ತು ಅಬೀರ್ ಗೋಸ್ವಾಮಿ ಕೂಡ ಈ ವರ್ಕ್​​ ಔಟ್​​ ಮಾಡುವ ವೇಳೆಯೇ ಸಾವನ್ನಪ್ಪಿದ್ದಾರೆ. ಇದು ಹೆಚ್ಚು ಹೊತ್ತು ವ್ಯಾಯಮ ಮಾಡಿದ ಕಾರಣ ಈ ಸಾವುನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ಉಜ್ಬೇಕಿಸ್ತಾನದಲ್ಲಿ ಭಾರತೀಯ ಸಂಸ್ಕೃತಿಯ ಕಂಪು ಪಸರಿಸಿದ ಪಿಎಂ ಮೋದಿ
ಉಜ್ಬೇಕಿಸ್ತಾನದಲ್ಲಿ ಭಾರತೀಯ ಸಂಸ್ಕೃತಿಯ ಕಂಪು ಪಸರಿಸಿದ ಪಿಎಂ ಮೋದಿ
CID ತನಿಖೆ ವೇಳೆ ಹಲವು ಸ್ಫೋಟಕ ಅಂಶಗಳು ಪತ್ತೆ
CID ತನಿಖೆ ವೇಳೆ ಹಲವು ಸ್ಫೋಟಕ ಅಂಶಗಳು ಪತ್ತೆ