ಕೆಮ್ಮು, ಶೀತ ಇರುವಾಗ ಬಾಳೆಹಣ್ಣಿನ ಸೇವನೆ ಒಳ್ಳೆಯದಲ್ಲವೇ? ಆಯುರ್ವೇದ ತಜ್ಞರ ಅಭಿಪ್ರಾಯವೇನು?

ಯಾರಿಗಾದರೂ ಕೆಮ್ಮು ಅಥವಾ ಶೀತದ ಸಮಸ್ಯೆ ಇದ್ದರೆ, ಅವರು ಬಾಳೆಹಣ್ಣು ತಿನ್ನಬಾರದೆಂದು ಸಲಹೆ ನೀಡಲಾಗುತ್ತದೆ, ಆದರೆ ನಿಜವಾಗಿಯೂ ಬಾಳೆಹಣ್ಣು ತಿನ್ನುವುದು ಒಳ್ಳೆಯುದಲ್ಲವೇ? ವೈದ್ಯರು ಈ ಬಗ್ಗೆ ಏನು ಹೇಳುತ್ತಾರೆ ಎಂಬುದನ್ನು ತಿಳಿಯುವುದು ಬಹಳ ಮುಖ್ಯವಾಗುತ್ತದೆ. ಡಾ. ದೀಪಕ್ ಸುಮನ್ ಈ ಬಗ್ಗೆ ಕೆಲವು ಮಾಹಿತಿ ಹಂಚಿಕೊಂಡಿದ್ದು ಯಾರಿಗೆ ಒಳ್ಳೆಯದಲ್ಲ, ಯಾಕೆ ಸೇವನೆ ಮಾಡಬಾರದು? ಕಫ ಸಮಸ್ಯೆ ಇದ್ದರೆ, ಬಾಳೆಹಣ್ಣು ತಿನ್ನುವುದರಿಂದ ಕಫ ಹೆಚ್ಚಾಗುತ್ತದೆಯೇ ಎಂಬುದರ ಬಗ್ಗೆ ಮಾಹಿತಿ ನೀಡಿದ್ದಾರೆ.

ಕೆಮ್ಮು, ಶೀತ ಇರುವಾಗ ಬಾಳೆಹಣ್ಣಿನ ಸೇವನೆ ಒಳ್ಳೆಯದಲ್ಲವೇ? ಆಯುರ್ವೇದ ತಜ್ಞರ ಅಭಿಪ್ರಾಯವೇನು?
Eating Banana During Cold And Cough
Image Credit source: Getty Images

Updated on: Feb 28, 2026 | 3:15 PM

ಸಾಮಾನ್ಯವಾಗಿ ಬಾಳೆಹಣ್ಣು (Banana) ಎಲ್ಲಾ ಋತುವಿನಲ್ಲಿ ಸಿಗುವಂತಹ ಹಣ್ಣಾಗಿದ್ದರೂ ಕೂಡ ಕೆಮ್ಮು ಅಥವಾ ಶೀತ ಇರುವವರು, ಬಾಳೆಹಣ್ಣು ತಿನ್ನಬಾರದು ಎಂದು ಸಲಹೆ ನೀಡಲಾಗುತ್ತದೆ. ಏಕೆಂದರೆ ಅವು ಸ್ವಭಾವತಃ ಶೀತ ಸ್ವಭಾವದ್ದಾಗಿದ್ದು ದೇಹದಲ್ಲಿ ಲೋಳೆಯನ್ನು ಹೆಚ್ಚಿಸಬಹುದು ಎಂದು ಹೇಳಲಾಗುತ್ತದೆ. ಆದರೆ ಇದು ನಿಜವೇ? ವೈದ್ಯರು ಈ ಬಗ್ಗೆ ಏನು ಹೇಳುತ್ತಾರೆ ಎಂಬುದನ್ನು ತಿಳಿಯುವುದು ಬಹಳ ಮುಖ್ಯವಾಗುತ್ತದೆ. ಡಾ. ದೀಪಕ್ ಸುಮನ್ ಹೇಳುವ ಪ್ರಕಾರ, ಬಾಳೆಹಣ್ಣಿನಲ್ಲಿ ವಿಟಮಿನ್ ಬಿ6 ಮಾತ್ರವಲ್ಲದೆ ಉತ್ತಮ ಪ್ರಮಾಣದ ಪೊಟ್ಯಾಸಿಯಮ್ ಕೂಡ ಇದ್ದು ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಬಾಳೆಹಣ್ಣು ತಿನ್ನುವುದರಿಂದ ಶೀತ ಉಂಟಾಗುತ್ತದೆ ಅಥವಾ ಶೀತ ಸಮಸ್ಯೆಗಳು ಉಲ್ಬಣಗೊಳ್ಳುತ್ತವೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಹೌದು, ಯಾರಿಗಾದರೂ ಕಫ ಸಮಸ್ಯೆ ಇದ್ದರೆ, ಬಾಳೆಹಣ್ಣು ತಿನ್ನುವುದರಿಂದ ಕಫ ಹೆಚ್ಚಾಗುತ್ತದೆ ಎಂಬುದು ನಿಜ. ಆದರೆ ಬಾಳೆಹಣ್ಣುಗಳು ಕೆಮ್ಮು ಅಥವಾ ಶೀತವನ್ನು ನೇರವಾಗಿ ಉಲ್ಬಣಗೊಳಿಸುವುದಿಲ್ಲ. ಆದರೆ ಮಲಬದ್ಧತೆ ಸಮಸ್ಯೆ ಇರುವವರು ಮಾತ್ರ ಬಾಳೆಹಣ್ಣಿನ ಸೇವನೆ ಮಾಡುವುದನ್ನು ತಪ್ಪಿಸುವುದು ಒಳ್ಳೆಯದು ಎಂದಿದ್ದಾರೆ. ಈ ಬಗೆಗಿನ ಮತ್ತಷ್ಟು ಮಾಹಿತಿ ಸ್ಟೋರಿಯಲ್ಲಿದೆ.

ಈ ಬಗ್ಗೆ ಆಯುರ್ವೇದ ಏನು ಹೇಳುತ್ತದೆ?

ಆಯುರ್ವೇದದಲ್ಲಿ ಬಾಳೆಹಣ್ಣು ಕಫವನ್ನು ಹೆಚ್ಚಿಸುತ್ತದೆ ಎಂದು ಪರಿಗಣಿಸಲಾಗುತ್ತದೆ. ಈ ಕಾರಣಕ್ಕಾಗಿ, ಶೀತ ವಾತಾವರಣದಲ್ಲಿ ಬಾಳೆಹಣ್ಣುಗಳನ್ನು ತಿನ್ನದಂತೆ ಸಲಹೆ ನೀಡಲಾಗುತ್ತದೆ. ಆಯುರ್ವೇದದ ಪ್ರಕಾರ, ಶೀತ ಸ್ವಭಾವದ ದೇಹವುಳ್ಳ ಜನರು ಬಾಳೆಹಣ್ಣುಗಳನ್ನು ತಿನ್ನುವುದರಿಂದ ಶೀತ ಮತ್ತು ಕೆಮ್ಮು ಹೆಚ್ಚಾಗುತ್ತದೆ ಎಂದು ಕಂಡುಕೊಳ್ಳಬಹುದು. ಆದರೆ ಸಾಮಾನ್ಯ ಸ್ವಭಾವದ ವ್ಯಕ್ತಿಗೆ ಸಾಮಾನ್ಯ ದಿನಗಳಲ್ಲಿ ಬಾಳೆಹಣ್ಣು ತಿಂದರೆ ಕೆಮ್ಮು- ಶೀತ ಬರುತ್ತದೆ ಅಥವಾ ಬಾಳೆಹಣ್ಣು ಕೆಮ್ಮು- ಶೀತವನ್ನು ಇನ್ನಷ್ಟು ಹದಗೆಡಿಸುತ್ತದೆ ಎಂಬುದು ನಿಜವಲ್ಲ.

ಇದನ್ನೂ ಓದಿ: ದಿನಕ್ಕೆ ಕೇವಲ 2 ಬಾಳೆಹಣ್ಣು ತಿನ್ನಿ ಎಷ್ಟೆಲ್ಲಾ ಪ್ರಯೋಜನವಾಗುತ್ತೆ ನೋಡಿ

ಬಾಳೆಹಣ್ಣು ಯಾರಿಗೆ ಒಳ್ಳೆಯದಲ್ಲ?

  • ಕಫ ಹೆಚ್ಚಾಗುವವರಿಗೆ
  • ಅಲರ್ಜಿಕ್ ರಿನಿಟಿಸ್ ರೋಗಿಗಳು
  • ಗಂಟಲಿನ ಸೋಂಕು ಅಥವಾ ಟಾನ್ಸಿಲ್ ಸಮಸ್ಯೆ ಇರುವವರಿಗೆ ಒಳ್ಳೆಯದಲ್ಲ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
Follow Us