AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೂತ್ರಪಿಂಡದ ಕಾಯಿಲೆ ಇರುವ ವ್ಯಕ್ತಿ ನೆಫ್ರಾಲಜಿಸ್ಟ್ ಬಳಿಗೆ ಹೋಗಬೇಕೇ ಅಥವಾ ಯುರಾಲಜಿಸ್ಟ್ ಬಳಿಗೆ ಹೋಗಬೇಕೇ? ತಜ್ಞರ ಉತ್ತರ ಇಲ್ಲಿದೆ

ನೆನಪಿಡಬೇಕಾದ ಅಂಶವೆಂದರೆ ಯಾವುದೇ ಮೂತ್ರಪಿಂಡದ ಸಮಸ್ಯೆ ಇದ್ದಲ್ಲಿ, ಮೊದಲು ಸಂಪರ್ಕಿಸಬೇಕಾದದ್ದು ನೆಫ್ರಾಲಜಿಸ್ಟ್​ನ್ನು. ರೋಗಲಕ್ಷಣಗಳ ಪ್ರಕಾರ, ಅವರು ಪರೀಕ್ಷೆಗಳನ್ನು ಸೂಚಿಸುತ್ತಾರೆ.

ಮೂತ್ರಪಿಂಡದ ಕಾಯಿಲೆ ಇರುವ ವ್ಯಕ್ತಿ ನೆಫ್ರಾಲಜಿಸ್ಟ್ ಬಳಿಗೆ ಹೋಗಬೇಕೇ ಅಥವಾ ಯುರಾಲಜಿಸ್ಟ್ ಬಳಿಗೆ ಹೋಗಬೇಕೇ? ತಜ್ಞರ ಉತ್ತರ ಇಲ್ಲಿದೆ
ಕಿಡ್ನಿ
TV9 Web
| Edited By: |

Updated on:Apr 12, 2022 | 10:23 PM

Share

ಸಂಪಾದಕರ ಟಿಪ್ಪಣಿ: ನಿಮ್ಮ ರೋಗದ ಸರಿಯಾದ ರೋಗನಿರ್ಣಯವು ಸರಿಯಾದ ಚಿಕಿತ್ಸೆಯನ್ನು ಖಾತ್ರಿಪಡಿಸುವುದಕ್ಕೆ ಅಗತ್ಯ. ಸರಿಯಾದ ವೈದ್ಯರಿಂದ ರೋಗನಿರ್ಣಯ ಮಾಡುವುದು ರೋಗಿಯು ತನ್ನ ರೋಗದ ವಿರುದ್ಧದ ಅರ್ಧ ಯುದ್ಧವನ್ನು ಗೆದ್ದಂತೆ ಎಂದು ತಜ್ಞರು ಹೇಳುತ್ತಾರೆ. ವೈದ್ಯಕೀಯ ವಿಭಾಗಗಳು ವಿಲೀನಗೊಳ್ಳುವುದರೊಂದಿಗೆ, ಸಾಮಾನ್ಯ ಜನರು ತಮ್ಮ ಕಾಯಿಲೆಗೆ ಸಮಾಲೋಚಿಸಲು ಸರಿಯಾದ ತಜ್ಞರು ಯಾರು ಎಂದು ಗುರುತಿಸುವುದು ಕಷ್ಟ. ಯಾರನ್ನು ಮತ್ತು ಯಾವಾಗ ಸಮಾಲೋಚಿಸಬೇಕು ಎಂಬುದನ್ನು ತಿಳಿಸಿಕೊಡುವ ಲೇಖನ ಇದಾಗಿದೆ.

ಈ ಆತಂಕಕಾರಿ ಅಂಕಿಅಂಶಗಳಿಂದ ಮೂತ್ರಪಿಂಡದ ಕಾಯಿಲೆ(kidney disease) ಹೊರೆಯನ್ನು ಅಳೆಯಬಹುದು. ಭಾರತದಲ್ಲಿ, ಮಧುಮೇಹ (diabetes) ಮತ್ತು ಅಧಿಕ ರಕ್ತದೊತ್ತಡವು 40-60 ಪ್ರತಿಶತದಷ್ಟು ದೀರ್ಘಕಾಲದ ಮೂತ್ರಪಿಂಡ ಕಾಯಿಲೆ (CKD) ಪ್ರಕರಣಗಳಿಗೆ ಕಾರಣವಾಗಿದೆ ಎಂದು ಕ್ಲಿನಿಕಲ್ ನೆಫ್ರಾಲಜಿ ಮತ್ತು ರೆನಲ್ ಕೇರ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನವು ಹೇಳಿದೆ. ಜನರು ಎಲ್ಲಿಗೆ ಹೋಗಬೇಕೆಂದು ತಿಳಿಯದಿರುವುದು ಸಮಸ್ಯೆಗಳ ಹೊರೆಯನ್ನು ಹೆಚ್ಚಿಸುತ್ತದೆ. ಈ ಬಗ್ಗೆ ಗುರುಗ್ರಾಮದ ಮಣಿಪಾಲ್ ಆಸ್ಪತ್ರೆಯ ಸಮಾಲೋಚಕ-ನೆಫ್ರಾಲಜಿಸ್ಟ್ ಡಾ ಸುಮೀತ್ ಮಂಡಲ್ ಅವರು ನ್ಯೂಸ್ 9 ನೊಂದಿಗೆ ಮಾತನಾಡಿದ್ದಾರೆ.

ಒಬ್ಬ ವ್ಯಕ್ತಿಗೆ ಮೂತ್ರಪಿಂಡದ (ಕಿಡ್ನಿ) ಸಮಸ್ಯೆ ಇದ್ದರೆ ಯಾವ ತಜ್ಞರನ್ನು ಸಂಪರ್ಕಿಸಬೇಕು? ಅಂಥವರು ಖಂಡಿತವಾಗಿಯೂ ಮೂತ್ರಪಿಂಡಶಾಸ್ತ್ರಜ್ಞರ ಬಳಿಗೆ ಹೋಗಬೇಕು. ಆದಾಗ್ಯೂ, ಮೂತ್ರಶಾಸ್ತ್ರಜ್ಞರ ಬಳಿಗೆ ಹೋಗಬಹುದಾದ ಕೆಲವು ಸಂದರ್ಭಗಳಿವೆ. ಮೂತ್ರಪಿಂಡದ ಕಲ್ಲುಗಳನ್ನು ಹೊಂದಿದ್ದರೆ, ಮೂತ್ರನಾಳದ ಅಡಚಣೆಗಳಿಂದ ಮೂತ್ರಪಿಂಡಕ್ಕೆ ತೊಂದರೆಯಾಗುತ್ತಿದ್ದರೆ, ಮೂತ್ರಪಿಂಡದ ಗೆಡ್ಡೆಗಳು ಮತ್ತು ಮೂತ್ರಪಿಂಡದಲ್ಲಿ ಬಾವುಗಳಿದ್ದರೆ ಅಂತಹ ಸಂದರ್ಭಗಳಲ್ಲಿ ಮೂತ್ರಶಾಸ್ತ್ರಜ್ಞರನ್ನು (Urologist ) ಸಂಪರ್ಕಿಸಬೇಕು. ಮೂತ್ರಪಿಂಡ ವೈಫಲ್ಯ, ಹೆಚ್ಚಿನ ಯೂರಿಯಾ-ಕ್ರಿಯೇಟಿನೈನ್ ಮತ್ತು ಮೂತ್ರದಲ್ಲಿ ರಕ್ತದ ಉಪಸ್ಥಿತಿಯಂತಹ ಎಲ್ಲಾ ಇತರ ಮೂತ್ರಪಿಂಡದ ಸಂಬಂಧಿತ ಸಮಸ್ಯೆಗಳಿಗೆ, ಮೂತ್ರಪಿಂಡಶಾಸ್ತ್ರಜ್ಞರನ್ನು (Nephrologist) ಸಂಪರ್ಕಿಸಬೇಕು.

ಕಾಯಿಲೆ ಏನೆಂಬುದು ಜನರಿಗೆ ತಿಳಿದಿರುವುದಿಲ್ಲ. ಹಾಗಾದರೆ ಏನು ಮಾಡಬೇಕು? ನೆನಪಿಡಬೇಕಾದ ಅಂಶವೆಂದರೆ ಯಾವುದೇ ಮೂತ್ರಪಿಂಡದ ಸಮಸ್ಯೆ ಇದ್ದಲ್ಲಿ, ಮೊದಲು ಸಂಪರ್ಕಿಸಬೇಕಾದದ್ದು ನೆಫ್ರಾಲಜಿಸ್ಟ್​ನ್ನು. ರೋಗಲಕ್ಷಣಗಳ ಪ್ರಕಾರ, ಅವರು ಪರೀಕ್ಷೆಗಳನ್ನು ಸೂಚಿಸುತ್ತಾರೆ ಮತ್ತು ಫಲಿತಾಂಶಗಳ ಆಧಾರದ ಮೇಲೆ, ಯುರಾಲಜಿಸ್ಟ್ ನ್ನು ಸಂಪರ್ಕಿಸುವ ಅಗತ್ಯವಿದೆಯೇ ಎಂದು ಅವರು ನಿರ್ಧರಿಸುತ್ತಾರೆ.

ಯುರಾಲಜಿಸ್ಟ್ ಮತ್ತು ನೆಫ್ರಾಲಜಿಸ್ಟ್ ನಡುವಿನ ಗಡಿರೇಖೆಯು ರೋಗಿಗೆ ವ್ಯತ್ಯಾಸವನ್ನುಂಟುಮಾಡುತ್ತದೆಯೇ? ಯುರಾಲಜಿಸ್ಟ್ ಸರ್ಜನ್ ಆಗಿರುತ್ತಾರೆ, ಹೆಚ್ಚಿನ ಮೂತ್ರಪಿಂಡದ ಕಾಯಿಲೆಗಳಲ್ಲಿ, ಶಸ್ತ್ರಚಿಕಿತ್ಸೆ ಅಗತ್ಯವಿಲ್ಲ. ಆದ್ದರಿಂದ, ಒಬ್ಬ ವ್ಯಕ್ತಿಯು ಮೊದಲು ಯುರಾಲಜಿಸ್ಟ್ ನ್ನು ಸಂಪರ್ಕಿಸುವ ಅಗತ್ಯವಿಲ್ಲ. ಕಿಡ್ನಿಯಲ್ಲಿ ಸ್ಟೆಂಟ್ ಹಾಕಬೇಕು ಅಥವಾ ಕಿಡ್ನಿ ಕಲ್ಲುಗಳು ಅಥವಾ ಟ್ಯೂಮರ್ ತೆಗೆಯಬೇಕಾದರೆ ಸ್ಪೆಷಲೈಸ್ಡ್ ವೈದ್ಯರ ಅಗತ್ಯವಿರುತ್ತದೆ . ಶಸ್ತ್ರಚಿಕಿತ್ಸೆಯ ಅಗತ್ಯವಿದೆಯೇ ಅಥವಾ ಇಲ್ಲವೇ ಎಂಬುದನ್ನು ನೆಫ್ರಾಲಜಿಸ್ಟ್ ನಿರ್ಣಯಿಸುತ್ತಾರೆ.

ಕೊವಿಡ್ ಮೂತ್ರಪಿಂಡ ರೋಗಿಗಳ ಮೇಲೆ ಹೇಗೆ ಪರಿಣಾಮ ಬೀರಿತು? ಮೂತ್ರಪಿಂಡದ ಕಾಯಿಲೆ ಇರುವ ಜನರಲ್ಲಿ ಕೊವಿಡ್‌ನ ತೀವ್ರತೆ ಹೆಚ್ಚು. ಇತ್ತೀಚಿನ ದಿನಗಳಲ್ಲಿ ವೈರಲ್ ಸೋಂಕಿನಿಂದ ಬಳಲುತ್ತಿರುವ ರೋಗಿಗಳಲ್ಲಿ ಯೂರಿಯಾ-ಕ್ರಿಯೇಟಿನೈನ್ ಹೆಚ್ಚಾಗುವುದನ್ನು ನಾವು ನೋಡಿದ್ದೇವೆ. ನಮ್ಮ ಕೆಲವು ರೋಗಿಗಳು ಗಂಭೀರ ಅಲ್ಲದಿದ್ದರೂ ವೈರಲ್ಸ್ ನಿಂದಾಗಿ ಡಯಾಲಿಸಿಸ್ ಬೇಕಾಗಿ ಬಂತು. ಮೇಲಿನ ಎಲ್ಲಾ ಪರಿಸ್ಥಿತಿಗಳಲ್ಲಿ, ನೆಫ್ರಾಲಜಿಸ್ಟ್ ಚಿಕಿತ್ಸೆಯನ್ನು ಒದಗಿಸುತ್ತಾರೆ ಅಥವಾ ಯುರಾಲಜಿಸ್ಟ್ ನ್ನು ಭೇಟಿ ಮಾಡಲು ಶಿಫಾರಸು ಮಾಡುತ್ತಾರೆ ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ.

ಇದನ್ನೂ ಓದಿ: ಜೂನ್ ತಿಂಗಳಲ್ಲಿ ಕೊರೊನಾ 4ನೇ ಅಲೆ ಸಾಧ್ಯತೆ; ಮತ್ತೆ ಜಿನೋಮಿಕ್ ಸೀಕ್ವೆನ್ಸಿಂಗ್ ಟೆಸ್ಟಿಂಗ್ ನಡೆಸಲು ನಿರ್ಧರಿಸಿದ ಆರೋಗ್ಯ ಇಲಾಖೆ

Published On - 9:40 pm, Tue, 12 April 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ