AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mango Seed: ಮಾವಿನ ಗೊರಟೆ ಅಥವಾ ಮಾವಿನ ಬೀಜದ ಮಹಿಮೆ ತಿಳಿದುಕೊಳ್ಳಿ

Health benefits of Mango Seed: ಈ ಬೀಜಗಳನ್ನು ಚಿಕ್ಕ ಚಿಕ್ಕ ಚೂರುಗಳಾಗಿ ಕತ್ತರಿಸಿ, ಕತ್ತರಿಸಿದ ಚೂರುಗಳನ್ನು ಸ್ವಲ್ಪ ತುಪ್ಪ ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಿರಿ. ಹುರಿದ ಈ ಚೂರುಗಳಿಗೆ ಕರಿ ಉಪ್ಪು ಸೇರಿಸಿ. ಊಟದ ನಂತರ ಒಂದಿಷ್ಟು ಚೂರುಗಳನ್ನು ತಿಂದರೆ ಜೀರ್ಣಕ್ರಿಯೆ ಸರಿಯಾಗಿ ಆಗುತ್ತದೆ.

Mango Seed: ಮಾವಿನ ಗೊರಟೆ ಅಥವಾ ಮಾವಿನ ಬೀಜದ ಮಹಿಮೆ ತಿಳಿದುಕೊಳ್ಳಿ
ಮಾವಿನ ಗೊರಟೆ ಅಥವಾ ಮಾವಿನ ಬೀಜದ ಮಹಿಮೆ ತಿಳಿದುಕೊಳ್ಳಿ
TV9 Web
| Edited By: |

Updated on: May 18, 2022 | 6:06 AM

Share

ಹಣ್ಣುಗಳ ರಾಜ ಮಾವು ಈಗ ಮಾರುಕಟ್ಟೆಯಲ್ಲಿ ನಳನಳಿಸುತ್ತಿದೆ. ಮಾವಿನ ಹಣ್ಣು ತಿಂದ ನಂತರ ಗೊರಟೆಗಳನ್ನು (Mango Seed) ಕಸವೆಂದು ಬಿಸಾಡದೆ ಈ ರೀತಿ ಉಪಯೋಗಿಸಿ (Health benefits of Mango Seed).

* ಮಾವಿನ ಗೊರಟೆಗಳನ್ನು ( ಗುಟ್ಟಲಿ) ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಬೇಕು. * ಗೊರಟೆಯಯೊಳಗಿನ ಬೀಜಗಳನ್ನು ಬೇರ್ಪಡಿಸಿಕೊಂಡು, ಕುದಿಯುವ ನೀರಿಗೆ ಸ್ವಲ್ಪ ಉಪ್ಪು ಹಾಕಿ ಬೇಯಿಸಿ, ನಂತರ ಮೇಲಿನ ಕಪ್ಪು ಸಿಪ್ಪೆಯನ್ನು ತೆಗೆದು ನೆರಳಲ್ಲಿ ಒಣಗಿಸಿ. * ಈ ಬೀಜಗಳನ್ನು ಚಿಕ್ಕ ಚಿಕ್ಕ ಚೂರುಗಳಾಗಿ ಕತ್ತರಿಸಿ, ಕತ್ತರಿಸಿದ ಚೂರುಗಳನ್ನು ಸ್ವಲ್ಪ ತುಪ್ಪ ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಿರಿ. * ಹುರಿದ ಈ ಚೂರುಗಳಿಗೆ ಕರಿ ಉಪ್ಪು ಸೇರಿಸಿ. * ಊಟದ ನಂತರ ಒಂದಿಷ್ಟು ಚೂರುಗಳನ್ನು ತಿಂದರೆ ಜೀರ್ಣಕ್ರಿಯೆ ಸರಿಯಾಗಿ ಆಗುತ್ತದೆ. * ಈ ಬೀಜಗಳನ್ನು ಕೊಬ್ಬರಿ ಎಣ್ಣೆ ಅಥವಾ ಸಾಸಿವೆ ಎಣ್ಣೆಯಲ್ಲಿ ಕುದಿಸಿ ಶೋಧಿಸಿ ಇಟ್ಟುಕೊಳ್ಳಿ. ಈ ಎಣ್ಣೆಯನ್ನು ಉಪಯೋಗಿಸಿದರೆ ಕೂದಲು ಸೊಂಪಾಗಿ ಬೆಳೆಯುತ್ತದೆ. ಕೂದಲಿಗೆ ಹೊಳಪು ಬರುತ್ತದೆ. * ಬೀಜಗಳ ಪೌಡರ್ 10 ಗ್ರಾಂ ನಷ್ಟು ಬೆಳಿಗ್ಗೆ ಮೊಸರಿನಲ್ಲಿ ತೆಗೆದುಕೊಂಡರೆ ಅತಿಸಾರ ಭೇದಿ ಕಡಿಮೆಯಾಗುತ್ತದೆ. * ಚಿಕ್ಕ ಮಕ್ಕಳ ಭೇದಿ ತಡೆಗಟ್ಟಲು ಹುರಿದ ಪೌಡರ್ 05 ಗ್ರಾಂ ನಷ್ಟು ಜೇನುತುಪ್ಪ ಸೇರಿಸಿ ಕೊಡಬಹುದು. * ಹೊಟ್ಟೆ ನೋವಿಗೆ ಮಜ್ಜಿಗೆಯಲ್ಲಿ ಬೆರೆಸಿ ಕುಡಿಯಬೇಕು. * ಹುರಿದ ಬೀಜಗಳ ಚೂರುಗಳ ಸೇವನೆ ಮಧುಮೇಹಿಗಳಿಗೆ ಕೂಡ ಉತ್ತಮ. * ಒಂದು ಬಾರಿಗೆ 5 ಗ್ರಾಂ ನಷ್ಟು ಉಪಯೋಗಿಸಬಹುದು. * ತುಪ್ಪದಲ್ಲಿ ಹುರಿದ ಚೂರುಗಳಿಗೆ ಸಿಹಿ ಬೇಕಾದರೆ ಜೇಷ್ಠ ಮಧು ಪೌಡರ್ ಉಪಯೋಗಿಸಬಹುದು. * ಒಣಗಿದ ಮಾವಿನ ಎಲೆಗಳು ಮತ್ತು ಈ ಬೀಜಗಳನ್ನು ಸೇರಿಸಿ ನಯವಾದ ಪುಡಿ ಮಾಡಿ ಸೋಸಿಕೊಳ್ಳಿ. ಈ ಪುಡಿಯಿಂದ ಹಲ್ಲು ಉಜ್ಜಿದರೆ ವಸಡುಗಳು ಗಟ್ಟಿಯಾಗಿ ಹಲ್ಲುಗಳು ಕೂಡ ಸ್ವಚ್ಛವಾಗಿ, ಬಾಯಿಯ ದುರ್ಗಂಧ ಕೂಡ ದೂರವಾಗುತ್ತದೆ. * ಸಂಗ್ರಹಿಸಿದ ವಿವಿಧ ಜಾತಿಯ ಮಾವಿನ ಗೊರಟೆಗಳಿಂದ ಮಾವಿನ ಸಸಿಗಳನ್ನು ಕೂಡ ತಯಾರಿಸಬಹುದು. (ಮಾಹಿತಿ ಲೇಖನ -ಎಸ್​ ಹೆಚ್​ ನದಾಫ್)

ಬಿಗ್ ಬಾಸ್: ಬಂಗಾರದ ಅಂಗಡಿಯಲ್ಲಿ ಕಾವ್ಯಾ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ
ಬಿಗ್ ಬಾಸ್: ಬಂಗಾರದ ಅಂಗಡಿಯಲ್ಲಿ ಕಾವ್ಯಾ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್