AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mango Seed: ಮಾವಿನ ಗೊರಟೆ ಅಥವಾ ಮಾವಿನ ಬೀಜದ ಮಹಿಮೆ ತಿಳಿದುಕೊಳ್ಳಿ

Health benefits of Mango Seed: ಈ ಬೀಜಗಳನ್ನು ಚಿಕ್ಕ ಚಿಕ್ಕ ಚೂರುಗಳಾಗಿ ಕತ್ತರಿಸಿ, ಕತ್ತರಿಸಿದ ಚೂರುಗಳನ್ನು ಸ್ವಲ್ಪ ತುಪ್ಪ ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಿರಿ. ಹುರಿದ ಈ ಚೂರುಗಳಿಗೆ ಕರಿ ಉಪ್ಪು ಸೇರಿಸಿ. ಊಟದ ನಂತರ ಒಂದಿಷ್ಟು ಚೂರುಗಳನ್ನು ತಿಂದರೆ ಜೀರ್ಣಕ್ರಿಯೆ ಸರಿಯಾಗಿ ಆಗುತ್ತದೆ.

Mango Seed: ಮಾವಿನ ಗೊರಟೆ ಅಥವಾ ಮಾವಿನ ಬೀಜದ ಮಹಿಮೆ ತಿಳಿದುಕೊಳ್ಳಿ
ಮಾವಿನ ಗೊರಟೆ ಅಥವಾ ಮಾವಿನ ಬೀಜದ ಮಹಿಮೆ ತಿಳಿದುಕೊಳ್ಳಿ
TV9 Web
| Edited By: |

Updated on: May 18, 2022 | 6:06 AM

Share

ಹಣ್ಣುಗಳ ರಾಜ ಮಾವು ಈಗ ಮಾರುಕಟ್ಟೆಯಲ್ಲಿ ನಳನಳಿಸುತ್ತಿದೆ. ಮಾವಿನ ಹಣ್ಣು ತಿಂದ ನಂತರ ಗೊರಟೆಗಳನ್ನು (Mango Seed) ಕಸವೆಂದು ಬಿಸಾಡದೆ ಈ ರೀತಿ ಉಪಯೋಗಿಸಿ (Health benefits of Mango Seed).

* ಮಾವಿನ ಗೊರಟೆಗಳನ್ನು ( ಗುಟ್ಟಲಿ) ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಬೇಕು. * ಗೊರಟೆಯಯೊಳಗಿನ ಬೀಜಗಳನ್ನು ಬೇರ್ಪಡಿಸಿಕೊಂಡು, ಕುದಿಯುವ ನೀರಿಗೆ ಸ್ವಲ್ಪ ಉಪ್ಪು ಹಾಕಿ ಬೇಯಿಸಿ, ನಂತರ ಮೇಲಿನ ಕಪ್ಪು ಸಿಪ್ಪೆಯನ್ನು ತೆಗೆದು ನೆರಳಲ್ಲಿ ಒಣಗಿಸಿ. * ಈ ಬೀಜಗಳನ್ನು ಚಿಕ್ಕ ಚಿಕ್ಕ ಚೂರುಗಳಾಗಿ ಕತ್ತರಿಸಿ, ಕತ್ತರಿಸಿದ ಚೂರುಗಳನ್ನು ಸ್ವಲ್ಪ ತುಪ್ಪ ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಿರಿ. * ಹುರಿದ ಈ ಚೂರುಗಳಿಗೆ ಕರಿ ಉಪ್ಪು ಸೇರಿಸಿ. * ಊಟದ ನಂತರ ಒಂದಿಷ್ಟು ಚೂರುಗಳನ್ನು ತಿಂದರೆ ಜೀರ್ಣಕ್ರಿಯೆ ಸರಿಯಾಗಿ ಆಗುತ್ತದೆ. * ಈ ಬೀಜಗಳನ್ನು ಕೊಬ್ಬರಿ ಎಣ್ಣೆ ಅಥವಾ ಸಾಸಿವೆ ಎಣ್ಣೆಯಲ್ಲಿ ಕುದಿಸಿ ಶೋಧಿಸಿ ಇಟ್ಟುಕೊಳ್ಳಿ. ಈ ಎಣ್ಣೆಯನ್ನು ಉಪಯೋಗಿಸಿದರೆ ಕೂದಲು ಸೊಂಪಾಗಿ ಬೆಳೆಯುತ್ತದೆ. ಕೂದಲಿಗೆ ಹೊಳಪು ಬರುತ್ತದೆ. * ಬೀಜಗಳ ಪೌಡರ್ 10 ಗ್ರಾಂ ನಷ್ಟು ಬೆಳಿಗ್ಗೆ ಮೊಸರಿನಲ್ಲಿ ತೆಗೆದುಕೊಂಡರೆ ಅತಿಸಾರ ಭೇದಿ ಕಡಿಮೆಯಾಗುತ್ತದೆ. * ಚಿಕ್ಕ ಮಕ್ಕಳ ಭೇದಿ ತಡೆಗಟ್ಟಲು ಹುರಿದ ಪೌಡರ್ 05 ಗ್ರಾಂ ನಷ್ಟು ಜೇನುತುಪ್ಪ ಸೇರಿಸಿ ಕೊಡಬಹುದು. * ಹೊಟ್ಟೆ ನೋವಿಗೆ ಮಜ್ಜಿಗೆಯಲ್ಲಿ ಬೆರೆಸಿ ಕುಡಿಯಬೇಕು. * ಹುರಿದ ಬೀಜಗಳ ಚೂರುಗಳ ಸೇವನೆ ಮಧುಮೇಹಿಗಳಿಗೆ ಕೂಡ ಉತ್ತಮ. * ಒಂದು ಬಾರಿಗೆ 5 ಗ್ರಾಂ ನಷ್ಟು ಉಪಯೋಗಿಸಬಹುದು. * ತುಪ್ಪದಲ್ಲಿ ಹುರಿದ ಚೂರುಗಳಿಗೆ ಸಿಹಿ ಬೇಕಾದರೆ ಜೇಷ್ಠ ಮಧು ಪೌಡರ್ ಉಪಯೋಗಿಸಬಹುದು. * ಒಣಗಿದ ಮಾವಿನ ಎಲೆಗಳು ಮತ್ತು ಈ ಬೀಜಗಳನ್ನು ಸೇರಿಸಿ ನಯವಾದ ಪುಡಿ ಮಾಡಿ ಸೋಸಿಕೊಳ್ಳಿ. ಈ ಪುಡಿಯಿಂದ ಹಲ್ಲು ಉಜ್ಜಿದರೆ ವಸಡುಗಳು ಗಟ್ಟಿಯಾಗಿ ಹಲ್ಲುಗಳು ಕೂಡ ಸ್ವಚ್ಛವಾಗಿ, ಬಾಯಿಯ ದುರ್ಗಂಧ ಕೂಡ ದೂರವಾಗುತ್ತದೆ. * ಸಂಗ್ರಹಿಸಿದ ವಿವಿಧ ಜಾತಿಯ ಮಾವಿನ ಗೊರಟೆಗಳಿಂದ ಮಾವಿನ ಸಸಿಗಳನ್ನು ಕೂಡ ತಯಾರಿಸಬಹುದು. (ಮಾಹಿತಿ ಲೇಖನ -ಎಸ್​ ಹೆಚ್​ ನದಾಫ್)

ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ