AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Weight Loss: ತೂಕ ಇಳಿಸಲು 7 ದಿನ ಈ ರೀತಿಯ ಆಹಾರ ಟ್ರೈ ಮಾಡಿ ನೋಡಿ

ಭಾರತೀಯ ಆಹಾರ ಹೇರಳವಾದ ಮಸಾಲೆಗಳಿಗೆ ಹೆಸರುವಾಸಿಯಾಗಿದೆ. ಭಾರತೀಯ ಆಹಾರವು ವ್ಯಾಪಕವಾದ ಸುವಾಸನೆ ಮತ್ತು ಬಣ್ಣಗಳನ್ನು ಹೊಂದಿರುತ್ತದೆ. ನಮ್ಮ ಅಡುಗೆಗಳಲ್ಲಿ ಬಳಸಲಾಗುವ ಪದಾರ್ಥಗಳು ದೇಹದ ಆರೋಗ್ಯಕ್ಕೆ ಬಹಳ ಉಪಯುಕ್ತವಾದುದಾಗಿದೆ.

Weight Loss: ತೂಕ ಇಳಿಸಲು 7 ದಿನ ಈ ರೀತಿಯ ಆಹಾರ ಟ್ರೈ ಮಾಡಿ ನೋಡಿ
ಬೆಳಗಿನ ಉಪಹಾರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Apr 30, 2022 | 3:44 PM

ತೂಕ ಇಳಿಸುವುದು (Weight Loss) ಹೇಗೆಂಬುದು ಅನೇಕ ಜನರ ತಲೆನೋವು. ಅದಕ್ಕಾಗಿ ಜಿಮ್, ಜಾಗಿಂಗ್, ಡಯೆಟ್ ಎಂದೆಲ್ಲ ಏನೇನೋ ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ, ನಾವು ತಿನ್ನುವ ಆಹಾರ ಕೂಡ ನಮ್ಮ ದೇಹದ ತೂಕದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ನಿಮಗೆ ಗೊತ್ತಿದೆಯಾ? ಸರಿಯಾದ ಸಂದರ್ಭದಲ್ಲಿ ಸರಿಯಾದ ಆಹಾರವನ್ನು ಸೇವಿಸಿದರೆ ಬಹಳ ಬೇಗ ತೂಕ ಕಡಿಮೆಯಾಗುತ್ತದೆ. ಅದರಲ್ಲೂ ಭಾರತೀಯ ಆಹಾರವು ಸಮತೋಲಿತ ಮಾತ್ರವಲ್ಲದೆ ಹಲವಾರು ಆರೋಗ್ಯ ಪ್ರಯೋಜನಗಳಿಂದ ಕೂಡಿದೆ. ಆದರೂ ಭಾರತೀಯ ಆಹಾರದ (Indian Food) ಮೇಲೆ ನಡೆದ ಹಲವಾರು ಅಧ್ಯಯನಗಳು ಭಾರತೀಯ ಪ್ರೋಟೀನ್ ಕೊರತೆ ಮತ್ತು ಕಾರ್ಬೋಹೈಡ್ರೇಟ್ ಮತ್ತು ಪಿಷ್ಟದಿಂದ ತುಂಬಿವೆ ಎಂದು ಹೇಳುತ್ತವೆ. ಹೀಗಾಗಿ, ನೀವು ಯಾವ ರೀತಿಯ ಭಾರತೀಯ ಆಹಾರವನ್ನು ಸೇವಿಸುತ್ತೀರಿ ಎಂಬುದು ಕೂಡ ಬಹಳ ಮುಖ್ಯವಾಗುತ್ತದೆ.

ಮಸಾಲೆಗಳು ಮತ್ತು ಗಿಡಮೂಲಿಕೆಗಳನ್ನು ಒಳಗೊಂಡಂತೆ ನಮ್ಮ ಆಹಾರವನ್ನು ರೂಪಿಸುವ ವಿವಿಧ ರೀತಿಯ ಆಹಾರ ಗುಂಪುಗಳು ಜಾಗತಿಕವಾಗಿ ಅತ್ಯಂತ ಆರೋಗ್ಯಕರ ಆಹಾರಗಳಲ್ಲಿ ಒಂದಾಗಿದೆ. ಭಾರತೀಯ ಸಾಂಪ್ರದಾಯಿಕ ಆಹಾರಗಳು ದೇಹವನ್ನು ಗುಣಪಡಿಸುವ ರಾಸಾಯನಿಕಗಳು, ಉತ್ಕರ್ಷಣ ನಿರೋಧಕಗಳು, ಆಹಾರದ ನಾರುಗಳು ಮತ್ತು ಪ್ರೋಬಯಾಟಿಕ್‌ಗಳಂತಹ ವಿವಿಧ ಕ್ರಿಯಾತ್ಮಕ ಘಟಕಗಳನ್ನು ಹೊಂದಿವೆ. ಆದ್ದರಿಂದ, ನಮ್ಮ ಪ್ರಮಾಣಿತ ಆಹಾರವು ತೂಕ ನಷ್ಟ, ರಕ್ತದಲ್ಲಿನ ಸಕ್ಕರೆ ನಿಯಂತ್ರಣ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯ ಬೆಂಬಲಕ್ಕೆ ಸಹಾಯ ಮಾಡುತ್ತದೆ.

ಭಾರತೀಯ ಆಹಾರ ಹೇರಳವಾದ ಮಸಾಲೆಗಳಿಗೆ ಹೆಸರುವಾಸಿಯಾಗಿದೆ. ಭಾರತೀಯ ಆಹಾರವು ವ್ಯಾಪಕವಾದ ಸುವಾಸನೆ ಮತ್ತು ಬಣ್ಣಗಳನ್ನು ಹೊಂದಿರುತ್ತದೆ. ನಮ್ಮ ಅಡುಗೆಗಳಲ್ಲಿ ಬಳಸಲಾಗುವ ಪದಾರ್ಥಗಳು ದೇಹದ ಆರೋಗ್ಯಕ್ಕೆ ಬಹಳ ಉಪಯುಕ್ತವಾದುದಾಗಿದೆ. ಅಡುಗೆಯಲ್ಲಿ ಬಳಸುವ ಅರಿಶಿನವು ಎದೆಯುರಿ, ಸಂಧಿವಾತ ಮತ್ತು ಆಲ್ಝೈಮರ್ ಕಾಯಿಲೆಯನ್ನು ಕಡಿಮೆ ಮಾಡುವ ಭಾರತೀಯ ಪಾಕವಿಧಾನಗಳಲ್ಲಿ ಬಳಸಲಾಗುವ ಅತ್ಯಗತ್ಯ ಅಂಶವಾಗಿದೆ. ಏಲಕ್ಕಿಯಂತಹ ಮಸಾಲೆಗಳು ಕರುಳಿನ ಮತ್ತು ಕರುಳಿನ ಕಾರ್ಯ ನಿರ್ವಹಣೆಯನ್ನು ಸುಧಾರಿಸಬಹುದು. ಭಾರತೀಯ ಅಡುಗೆಯಲ್ಲಿ ಬಳಸಲಾಗುವ ಶುಂಠಿ, ಬೆಳ್ಳುಳ್ಳಿ ಮತ್ತು ಮೆಣಸಿನಕಾಯಿಗಳು ಹೃದಯಕ್ಕೆ ಒಳ್ಳೆಯದು. ಭಾರತೀಯ ಆಹಾರದ ವಿವಿಧ ರೀತಿಯ ಸುವಾಸನೆ ಮತ್ತು ಬಣ್ಣಗಳು ಅದನ್ನು ಅತ್ಯಾಕರ್ಷಕಗೊಳಿಸುತ್ತದೆ.

ತೂಕ ಇಳಿಸಿಕೊಳ್ಳಲು 7 ದಿನದ ಚಾಲೆಂಜ್ ತೆಗೆದುಕೊಳ್ಳಿ:

ಯಾವುದೇ ಆಹಾರ ಪದ್ಧತಿಯ ಎಲ್ಲ ಅಂಶಗಳೂ ಆರೋಗ್ಯಕರವಾಗಿರುವುದಿಲ್ಲ ಎಂಬುದು ನಮಗೆಲ್ಲರಿಗೂ ತಿಳಿದಿರುವ ಸತ್ಯ. ಆದ್ದರಿಂದ, ತೂಕ ಇಳಿಸಿಕೊಳ್ಳಲು ನೀವು ಪ್ರತಿದಿನ ಏನನ್ನು ಸೇವಿಸುತ್ತೀರಿ ಎಂಬುದರ ಕುರಿತು ನೀವು ಜಾಗೃತರಾಗಿರಬೇಕು. ಮನಸಿಟ್ಟು ತಿನ್ನುವುದು ಮತ್ತು ನೀವು ಏನು, ಹೇಗೆ ಮತ್ತು ಎಲ್ಲಿ ತಿನ್ನುತ್ತೀರಿ ಎಂಬುದರ ಬಗ್ಗೆ ತೀವ್ರ ಗಮನ ಹರಿಸುವುದು ಬಹಳ ಮುಖ್ಯ.

ಆರೋಗ್ಯ ಕಾಪಾಡಿಕೊಳ್ಳಲು ಆಹಾರದ ಚಾರ್ಟ್​ ಇಲ್ಲಿದೆ. ಇವುಗಳು ಪ್ರಮಾಣಿತ ಶಿಫಾರಸುಗಳಾಗಿವೆ. ಆದರೂ ಇವುಗಳನ್ನು ಅನುಸರಿಸುವ ಮೊದಲು ನೀವು ವೃತ್ತಿಪರ ಪೌಷ್ಟಿಕತಜ್ಞರನ್ನು ಸಂಪರ್ಕಿಸಬೇಕು. ಏಕೆಂದರೆ ನಿಮ್ಮ ಆರೋಗ್ಯ ಪರಿಸ್ಥಿತಿಗಳು, ಪೋಷಕಾಂಶಗಳ ಅವಶ್ಯಕತೆ, ಜೀವನಶೈಲಿ ಅಭ್ಯಾಸಗಳು, ಎಷ್ಟು ಕೆಜಿ ತೂಕ ಇಳಿಸಿಕೊಳ್ಳಬೇಕೆಂಬುದು ಮತ್ತು ರುಚಿಯ ಆದ್ಯತೆಗಳ ಆಧಾರದ ಮೇಲೆ ಅವರು ನಿಮಗೆ ಸರಿಯಾದ ಆಹಾರವನ್ನು ಸೂಚಿಸುತ್ತಾರೆ.

ಮೊದಲ ದಿನ: ಮುಂಜಾನೆ ದಾಲ್ಚಿನ್ನಿ ಜೊತೆ 1 ಕಪ್ ಬೆಚ್ಚಗಿನ ನೀರು ಉಪಹಾರ 1 ಕಪ್ ಓಟ್ಸ್ ಗಂಜಿ, ಕೆನೆ ತೆಗೆದ ಹಾಲು ಮತ್ತು ವಾಲ್​ನಟ್ಸ್ (6 ಪೀಸ್) ಮಧ್ಯಾಹ್ನಕ್ಕೂ ಮೊದಲು ಹಬೆಯಲ್ಲಿ ಬೇಯಿಸಿದ 1 ಕಪ್ ಹಸಿರು ಬಟಾಣಿ ಮತ್ತು ಕ್ಯಾರೆಟ್ ಸಲಾಡ್ ಊಟ 1 ಕಪ್ ದಪ್ಪ ಮೇಥಿ/ಪಾಲಕ್ ದಾಲ್, 1 ಕಪ್ ಹಬೆಯಲ್ಲಿ ಬೇಯಿಸಿದ ಅನ್ನ ಚಹಾ ಸಮಯ 1 ಪೇರಲ (ಸೀಬೆ ಹಣ್ಣು) ಸಂಜೆ 1 ಕಪ್ ಮೊಸರು, ಸೇಬು, ಚಿಯಾ ಬೀಜಗಳು ಹಾಕಿದ ಸ್ಮೂಥಿ ಅಥವಾ ಲಸ್ಸಿ ಊಟ 3/4 ಕಪ್ ಪನೀರ್ ಹಾಕಿದ ಅಡುಗೆ, ರಾಗಿ ಪುಲಾವ್

ಎರಡನೇ ದಿನ: ಮುಂಜಾನೆ ಸಕ್ಕರೆ ಇಲ್ಲದ 1/2 ಕಪ್ ಮಸಾಲಾ ಟೀ/ಕಾಫಿ ಉಪಹಾರ 1/2 ಕಪ್ ವೆಜ್/ ಮಿಲೆಟ್ಸ್ ಉಪ್ಪಿಟ್ಟು, ಪನ್ನೀರು

ಮಧ್ಯಾಹ್ನಕ್ಕೂ ಮೊದಲು 1 ಸೇಬು, ವಾಲ್ನಟ್ 8 ಪೀಸ್ ಊಟ 1/2 ಕಪ್ ಅವರೆಕಾಳು / ಬಟಾಣಿ ಮತ್ತು ಪನ್ನೀರ್ ಮಸಾಲೆ, ಡ್ರೈ ರೋಟಿ. ಚಹಾ ಸಮಯ ಸಕ್ಕರೆ ಇಲ್ಲದ 1/2 ಕಪ್ ಮಸಾಲಾ ಟೀ/ಕಾಫಿ ಸಂಜೆ 1 ಕಪ್ ಮೊಸರು ಸೇಬು, ಚಿಯಾ ಸೀಡ್ಸ್ ಸ್ಮೂಥಿ/ ​​ಲಸ್ಸಿ ಊಟ ಟೊಮೆಟೊ, ಶುಂಠಿ ಚಟ್ನಿಯೊಂದಿಗೆ 2 ದೋಸೆ

3ನೇ ದಿನ: ಮುಂಜಾನೆ 1/2 ಕಪ್ ಅರಿಶಿನ ಪುಡಿ ಹಾಕಿದ ಹಾಲು

ಉಪಹಾರ 1/2 ಬೌಲ್ ಸಾಂಬಾರ್ ಜೊತೆಗೆ 2 ಪೀಸ್ ಇಡ್ಲಿ

ಮಧ್ಯಾಹ್ನಕ್ಕೂ ಮೊದಲು 1 ಕಪ್ ದಾಳಿಂಬೆ, ಮೊಳಕೆ ಬರಿಸಿದ ಕಾಳುಗಳ ಸಲಾಡ್ ಊಟ 1 ಕಪ್ ಅವರೆಕಾಳು / ಬಟಾಣಿ, ದಾಲಿಯಾ ಪುಲಾವ್ ಚಹಾ ಸಮಯ 1 ಕಪ್ ಮೊಸರು, ಸೇಬು, ಚಿಯಾ ಬೀಜಗಳು ಸ್ಮೂಥಿ/ ಲಸ್ಸಿ ಸಂಜೆ 1 ಕಪ್ ಪನೀರ್ ಜೊತೆಗೆ ತರಕಾರಿಗಳು ಊಟ 1 ಕಪ್ ಮಸಾಲಾ ಓಟ್ಸ್ ಮತ್ತು 1 ಕಪ್ ತರಕಾರಿ ಸೂಪ್

4ನೇ ದಿನ: ಮುಂಜಾನೆ 1/2 ಕಪ್ ಅರಿಶಿನ ಪುಡಿ ಹಾಕಿದ ಹಾಲು ಉಪಹಾರ ತುರಿದ ತರಕಾರಿಗಳೊಂದಿಗೆ 2 ಮೊಟ್ಟೆಯ ಬಿಳಿ ಆಮ್ಲೆಟ್ ಮಧ್ಯಾಹ್ನಕ್ಕೂ ಮೊದಲು ಬೇಯಿಸಿದ ಬಟಾಣಿ ಮತ್ತು ವಾಲ್​ನಟ್ಸ್ ಸಲಾಡ್​ನೊಂದಿಗೆ ಸೇಬು ಹಣ್ಣು ಊಟ ರಾಯ್​ತಾದೊಂದಿಗೆ 1 ಪಾಲಕ್/ ಮೇಥಿ ಪರಾಠ

ಚಹಾ ಸಮಯ 1 ಟೀ ಸ್ಪೂನ್ ಚಿಯಾ ಬೀಜಗಳೊಂದಿಗೆ ಶುಂಠಿ ನಿಂಬೆ ಜ್ಯೂಸ್, ಗ್ರೀನ್ ಟೀ ಸಂಜೆ 1 ಕಪ್ ಟೊಮೆಟೊ ಸೂಪ್ ಊಟ 3/4 ಕಪ್ ಮಸಾಲಾ ಓಟ್ಸ್, 200 ಗ್ರಾಂ ಸುಟ್ಟ ಮೀನು

5ನೇ ದಿನ: ಮುಂಜಾನೆ 1/2 ಕಪ್ ಅರಿಶಿನ ಪುಡಿ ಹಾಕಿದ ಹಾಲು ಉಪಹಾರ 1 ಕಪ್ ಮಸಾಲಾ ಓಟ್ಸ್ ಮತ್ತು ವಾಲ್​ನಟ್ಸ್ (8 ಪೀಸ್) ಮಧ್ಯಾಹ್ನಕ್ಕೂ ಮೊದಲು 1 ಕಪ್ ಕಡಲೆ (ಚನ್ನಾ) ಚಾಟ್ ಊಟ 1 ಕಪ್ ಪಲಾವ್ (ತರಕಾರಿಗಳು, ಬೇಯಿಸಿದ ಬಟಾಣಿ, ಮತ್ತು ಚೀಸ್ ಹಾಕಿದ ಪಲಾವ್) ಚಹಾ ಸಮಯ ಸಕ್ಕರೆ ಇಲ್ಲದ 1/2 ಕಪ್ ಮಸಾಲಾ ಟೀ/ಕಾಫಿ ಸಂಜೆ 1 ಕಪ್ ಸೇಬು, ಮೊಸರು, ಚಿಯಾ ಬೀಜಗಳ ಸ್ಮೂಥಿ ಊಟ 1 ಡ್ರೈ ಚಪಾತಿ, 3/4 ಕಪ್ ಯಾವುದೇ ತರಕಾರಿಗಳು.

6ನೇ ದಿನ: ಮುಂಜಾನೆ ಸಕ್ಕರೆ ಇಲ್ಲದ 1/2 ಕಪ್ ಮಸಾಲಾ ಟೀ/ಕಾಫಿ ಉಪಹಾರ ತರಕಾರಿಗಳು ಮತ್ತು 1/4 ನೇ ನಿಂಬೆ ತುಂಡು ಮತ್ತು 1 ಬೇಯಿಸಿದ ಮೊಟ್ಟೆಯ ಬಿಳಿಭಾಗದೊಂದಿಗೆ 3/4 ಕಪ್ ಪೋಹಾ ಮಧ್ಯಾಹ್ನಕ್ಕೂ ಮೊದಲು 1 ಕಿತ್ತಳೆ ಊಟ 1 ಕಪ್ ರಾಗಿ/ ದಾಲಿಯಾ ಪುಲಾವ್ ಜೊತೆಗೆ ತರಕಾರಿಗಳು, 1 ಸಣ್ಣ ಹೋಳು ಟೊಮೆಟೊ ಚಹಾ ಸಮಯ ಜೀರಿಗೆ (ಜೀರಾ) ಪುಡಿ ಮತ್ತು ಚಿಯಾ ಬೀಜಗಳೊಂದಿಗೆ 1 ಕಪ್ ಮಜ್ಜಿಗೆ ಸಂಜೆ ಈರುಳ್ಳಿ ಟೊಮ್ಯಾಟೊ ಮತ್ತು ಚಾಟ್ ಮಸಾಲಾದೊಂದಿಗೆ 3/4 ಕಪ್ ಮೊಳಕೆಗಳ ಚಾಟ್ ಊಟ 200 ಗ್ರಾಂ ಚಿಕನ್, ಬೇಯಿಸಿದ ತರಕಾರಿಗಳು

7ನೇ ದಿನ: ಮುಂಜಾನೆ ಸಕ್ಕರೆ ಇಲ್ಲದೆ 1/2 ಕಪ್ ಮಸಾಲಾ ಚಹಾ ಉಪಹಾರ ಟೊಮ್ಯಾಟೊ, ಶುಂಠಿ ಚಟ್ನಿಯೊಂದಿಗೆ 2 ದೋಸೆ/ ಚಪಾತಿ ಮಧ್ಯಾಹ್ನಕ್ಕೂ ಮೊದಲು 1 ಕಪ್ ದಾಳಿಂಬೆ ಮತ್ತು ಕ್ಯಾರೆಟ್ ಸಲಾಡ್ ಊಟ 2 ಡ್ರೈ ಫುಲ್ಕಾ, 100 ಗ್ರಾಂ ಕಡಿಮೆ ಕೊಬ್ಬಿನ ಚಿಕನ್ ಕರಿ (4 ಪೀಸ್​ಗಳು) ಚಹಾ ಸಮಯ ಸಕ್ಕರೆ ಇಲ್ಲದ 1/2 ಕಪ್ ಮಸಾಲಾ ಟೀ/ಕಾಫಿ ಸಂಜೆ 1 ಕಪ್ ಸೇಬು, ಮೊಸರು, ಚಿಯಾ ಬೀಜಗಳ ಸ್ಮೂಥಿ ಊಟ ಮೊಟ್ಟೆ, 100 ಗ್ರಾಂ ಚಿಕನ್‌,

ತೂಕ ಇಳಿಸಲು ಈ ಆಹಾರಗಳನ್ನು ಸೇವಿಸಬೇಡಿ: – ಸಕ್ಕರೆ ಪಾನೀಯಗಳು/ ಕೋಲಾಗಳು/ ಸೋಡಾಗಳು/ ಪ್ಯಾಕ್ ಮಾಡಿದ ಜ್ಯೂಸ್‌ಗಳು/ ಎನರ್ಜಿ ಡ್ರಿಂಕ್ಸ್ – ಕೇಕ್ ಮತ್ತು ಬಿಸ್ಕತ್ತುಗಳಂತಹ ಬೇಕರಿ ವಸ್ತುಗಳು – ಪಾಸ್ತಾ ಮತ್ತು ಬ್ರೆಡ್‌ನಂತಹ ಸಂಸ್ಕರಿಸಿದ ಆಹಾರಗಳು – ಹುರಿದ ಆಹಾರ – ಕೊಬ್ಬಿನ/ ಸಂಸ್ಕರಿಸಿದ ಕೆಂಪು ಮಾಂಸ – ಮದ್ಯ – ಹೆಚ್ಚಿನ ಟ್ರಾನ್ಸ್ ಕೊಬ್ಬುಗಳನ್ನು ಹೊಂದಿರುವ ರೆಸ್ಟೋರೆಂಟ್ ಆಹಾರಗಳು – ಚಾಕೊಲೇಟ್‌ಗಳು/ ಮಿಠಾಯಿಗಳು/ ಎನರ್ಜಿ ಬಾರ್‌ಗಳು – ಕ್ರ್ಯಾಕರ್ಸ್ ಮತ್ತು ಚಿಪ್ಸ್

ಆರೋಗ್ಯದ ಕುರಿತ ಹೆಚ್ಚಿನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಶ್ರಫ್ ಕೊಲೆ ಪ್ರಕರಣಕ್ಕೆ ನ್ಯಾಯ ಕೇಳಿದ ಮುಸ್ಲಿಂ ಮುಖಂಡರು
ಅಶ್ರಫ್ ಕೊಲೆ ಪ್ರಕರಣಕ್ಕೆ ನ್ಯಾಯ ಕೇಳಿದ ಮುಸ್ಲಿಂ ಮುಖಂಡರು
ಕನ್ನಡ ಚಿತ್ರರಂಗದಿಂದ ಸೋನು ನಿಗಂಗೆ ನಿಷೇಧ: ಉಮೇಶ್ ಬಣಕಾರ್ ಹೇಳಿದ್ದೇನು?
ಕನ್ನಡ ಚಿತ್ರರಂಗದಿಂದ ಸೋನು ನಿಗಂಗೆ ನಿಷೇಧ: ಉಮೇಶ್ ಬಣಕಾರ್ ಹೇಳಿದ್ದೇನು?
ಪ್ರವಾದಿ ಮೊಹಮ್ಮದ್ ವಿಷಯದಲ್ಲಿ ಯತ್ನಾಳ್ ಮಾತಾಡಿದ್ದು ತಪ್ಪು: ಎಂಬಿ ಪಾಟೀಲ್
ಪ್ರವಾದಿ ಮೊಹಮ್ಮದ್ ವಿಷಯದಲ್ಲಿ ಯತ್ನಾಳ್ ಮಾತಾಡಿದ್ದು ತಪ್ಪು: ಎಂಬಿ ಪಾಟೀಲ್
ಐಪಿಎಲ್ ಧಡೂತಿ ಲೀಗ್​ ಆಗಿ ಬದಲಾದ್ರೆ ಹೇಗಿರುತ್ತೆ? ಇಲ್ಲಿದೆ ವಿಡಿಯೋ
ಐಪಿಎಲ್ ಧಡೂತಿ ಲೀಗ್​ ಆಗಿ ಬದಲಾದ್ರೆ ಹೇಗಿರುತ್ತೆ? ಇಲ್ಲಿದೆ ವಿಡಿಯೋ
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ಚಿಕ್ಕಮಗಳೂರಿನಲ್ಲಿ ಬಿಗಿ ಬಂದೋಬಸ್ತ್
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ಚಿಕ್ಕಮಗಳೂರಿನಲ್ಲಿ ಬಿಗಿ ಬಂದೋಬಸ್ತ್
ಬನಸಗೌಡ ಯತ್ನಾಳ್ ಮಾಧ್ಯಮದವರ ಕೈಗೆ ಸಿಗುತ್ತಿಲ್ಲವಂತಲ್ಲ? ಜಮೀರ್ ಅಹ್ಮದ್
ಬನಸಗೌಡ ಯತ್ನಾಳ್ ಮಾಧ್ಯಮದವರ ಕೈಗೆ ಸಿಗುತ್ತಿಲ್ಲವಂತಲ್ಲ? ಜಮೀರ್ ಅಹ್ಮದ್
ಮೇ 6ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿಟ್ಟಿರುವ ದಕ್ಷಿಣ ಕನ್ನಡ ಜಿಲ್ಲಾಡಳಿತ
ಮೇ 6ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿಟ್ಟಿರುವ ದಕ್ಷಿಣ ಕನ್ನಡ ಜಿಲ್ಲಾಡಳಿತ
ಪಾಕಿಸ್ತಾನ ವಿರುದ್ಧ ಬಾಂಬ್ ಕಟ್ಕೊಂಡು ಯುದ್ಧಕ್ಕೆ ಹೋಗ್ತೀನಿ: ಸಚಿವ ಜಮೀರ್
ಪಾಕಿಸ್ತಾನ ವಿರುದ್ಧ ಬಾಂಬ್ ಕಟ್ಕೊಂಡು ಯುದ್ಧಕ್ಕೆ ಹೋಗ್ತೀನಿ: ಸಚಿವ ಜಮೀರ್
ಯುದ್ಧ ಮಾಡದೆಯೇ ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿದ ಭಾರತದ 9 ನಿರ್ಧಾರಗಳಿವು..
ಯುದ್ಧ ಮಾಡದೆಯೇ ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿದ ಭಾರತದ 9 ನಿರ್ಧಾರಗಳಿವು..
VIDEO: ವಿವಾದಕ್ಕೀಡಾದ ಶುಭ್​​ಮನ್ ಗಿಲ್ ರನೌಟ್
VIDEO: ವಿವಾದಕ್ಕೀಡಾದ ಶುಭ್​​ಮನ್ ಗಿಲ್ ರನೌಟ್