AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ನೀವು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೆ ಬೀಟ್​ರೂಟ್ ಉಪಯೋಗದ ಬಗ್ಗೆ ತಿಳಿಯಲೇಬೇಕು..

ಬಾಹ್ಯ ನಾಳೀಯ (Peripheral Vascular) ಕಾಯಿಲೆಗಳು ಅಂದರೆ ಕಾಲು, ತೋಳುಗಳು, ಹೊಟ್ಟೆ, ಕಿಡ್ನಿಗಳಿಗೆ ರಕ್ತ ಸಾಗಿಸುವ ನಾಳಗಳಿಗೆ ಸಂಬಂಧಪಟ್ಟ ಕಾಯಿಲೆಗಳಿಂದ ಬಳಲುತ್ತಿರುವವರಿಗೂ ಬೀಟ್​ರೂಟ್ ಜ್ಯೂಸ್​ ತುಂಬ ಅನುಕೂಲ.

Health Tips: ನೀವು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೆ ಬೀಟ್​ರೂಟ್ ಉಪಯೋಗದ ಬಗ್ಗೆ ತಿಳಿಯಲೇಬೇಕು..
ಬೀಟ್​ರೂಟ್​ ಜ್ಯೂಸ್​
TV9 Web
| Updated By: Lakshmi Hegde|

Updated on:Jul 21, 2021 | 8:06 AM

Share

ಬೀಟ್​ರೂಟ್ (Beetroot)​ನಿಂದ ಉಪಯೋಗಗಳು ಹತ್ತಾರು. ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚು ಮಾಡುವಲ್ಲಿಂದ ಹಿಡಿದು, ಸೌಂದರ್ಯ ವೃದ್ಧಿಯವರೆಗೆ ಹಲವು ಉಪಯೋಗಗಳು ಈ ಬೀಟ್​ರೂಟ್​ನಿಂದ ಇವೆ. ಇದೀಗ ಬೀಟ್​ರೂಟ್​ಗೆ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವ ಶಕ್ತಿಯೂ ಇದೆ ಎಂಬುದು ಹೊಸದೊಂದು ಅಧ್ಯಯನದಿಂದ ಗೊತ್ತಾಗಿದೆ. ಈ ಬಗ್ಗೆ ಜರ್ನಲ್ ಆಫ್​ ನ್ಯೂಟ್ರಿಷಿಯನ್ ವರದಿ ಮಾಡಿದೆ. ಪ್ರತಿದಿನ ನಿಯಮಿತವಾಗಿ ಒಂದು ಗ್ಲಾಸ್​ ಬೀಟ್​ರೂಟ್​ ಜ್ಯೂಸ್​ ಕುಡಿಯುವುದಿಂದ ಬ್ಲಡ್​ ಪ್ರೆಷರ್​ (ರಕ್ತದ ಒತ್ತಡ) ನಿಯಂತ್ರಣಕ್ಕೆ ಬರುತ್ತದೆ ಎಂದು ಅಧ್ಯಯನದಿಂದ ಸಾಬೀತಾಗಿದ್ದಾಗಿ ಹೇಳಲಾಗಿದೆ. ಅಂದರೆ ಕೆಲವರಲ್ಲಿ ಅತ್ಯಧಿಕ ಪ್ರಮಾಣದಲ್ಲಿ ರಕ್ತದೊತ್ತಡ ಇದ್ದು, ಔಷಧದಿಂದಲೂ ಅದು ನಿಯಂತ್ರಣ ಆಗುವ ಹಂತ ಕಳೆದುಹೋಗಿರುತ್ತದೆ. ಅಂಥವರು ಪ್ರತಿನಿತ್ಯ ಒಂದು ಗ್ಲಾಸ್​ ಬೀಟ್​ರೂಟ್ ಜ್ಯೂಸ್​ ಕುಡಿದರೆ ಕ್ರಮೇಣ ರಕ್ತದೊತ್ತಡ ನಿಯಂತ್ರಣವಾಗುತ್ತದೆ ಎಂಬುದನ್ನು ಅಧ್ಯಯನ ಸಾಬೀತುಪಡಿಸಿದ್ದಾಗಿ ಜರ್ನಲ್​ ಆಫ್​ ಹೈಪರ್​ಟೆನ್ಷನ್​ ಕೂಡ ವರದಿ ಮಾಡಿದೆ.

ಹಾಗೇ ಇನ್ನೊಂದು ಅಧ್ಯಯನದ ಬಗ್ಗೆ ಜರ್ನಲ್​ ಆಫ್​ ಅಪ್ಲೈಡ್​ ಸೈಕಾಲಜಿ ವರದಿ ಮಾಡಿದ್ದು ಅದರಲ್ಲಿ, ಬಾಹ್ಯ ನಾಳೀಯ (Peripheral Vascular) ಕಾಯಿಲೆಗಳು ಅಂದರೆ ಕಾಲು, ತೋಳುಗಳು, ಹೊಟ್ಟೆ, ಕಿಡ್ನಿಗಳಿಗೆ ರಕ್ತ ಸಾಗಿಸುವ ನಾಳಗಳಿಗೆ ಸಂಬಂಧಪಟ್ಟ ಕಾಯಿಲೆಗಳಿಂದ ಬಳಲುತ್ತಿರುವವರಿಗೂ ಬೀಟ್​ರೂಟ್ ಜ್ಯೂಸ್​ ತುಂಬ ಅನುಕೂಲ ಎಂದು ಹೇಳಿದೆ.

ಅಧಿಕರಕ್ತದೊತ್ತಡವನ್ನು ಬೀಟ್​ರೂಟ್​ ಹೇಗೆ ಕಡಿಮೆ ಮಾಡುತ್ತದೆ? ಬೀಟ್​ರೂಟ್​ನಲ್ಲಿ ಇರುವ ನೈಟ್ರಿಕ್ ಆಕ್ಸೈಡ್​ ಅಂಶದಿಂದ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ ಎಂಬುದನ್ನು ಅಧ್ಯಯನಗಳು ಹೇಳಿವೆ. ಈ ನೈಟ್ರಿಕ್​ ಆಕ್ಸೈಡ್​ ಒಂದು ಅಣು ಆಗಿದ್ದು, ದೇಹದಾದ್ಯಂತ ಸಂಕೇತಗಳನ್ನು ರವಾನಿಸುತ್ತದೆ ಮತ್ತು ದೇಹದಲ್ಲಿ ಕೋಶಗಳು ಪರಸ್ಪರ ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡಲು ಸಹಕಾರಿಯಾಗಿದೆ. ಬೀಟ್​ರೂಟ್​ನಲ್ಲಿರುವ ಉತ್ಕರ್ಷಣ ನಿರೋಧಕಗಳು (antioxidants) ಕೊಬ್ಬಿನ ಅಂಶವನ್ನು ಕಡಿಮೆ ಮಾಡುತ್ತವೆ ಮತ್ತು ರಕ್ತದ ಒತ್ತಡವನ್ನು ನಿಯಂತ್ರಿಸುತ್ತವೆ ಎಂದು ಡಿ.ಕೆ.ಪ್ರಕಾಶನದ ಹೀಲಿಂಗ್​ ಆಫ್​ ಫುಡ್ ಪುಸ್ತಕದಲ್ಲಿ ಬರೆಯಲಾಗಿದೆ. ಹಾಗೇ ಇದರಲ್ಲಿರುವ ಬಿ ವಿಟಮಿನ್​ಗಳು ನರಗಳ ಕಾರ್ಯವನ್ನು ಸುಗಮಗೊಳಿಸುತ್ತವೆ. ಇದರಿಂದಾಗಿ ಹೃದಯ ಬಡಿತವೂ ನಿಯಮಿತವಾಗಿ ಆಗುತ್ತದೆ. ಬೀಟ್​ರೂಟ್​​ನಲ್ಲಿರುವ ಕಬ್ಬಿಣಾಂಶ ಮತ್ತು ಉತ್ಕರ್ಷಣ ನಿರೋಧಕಗಳು ರಕ್ತ ಶುದ್ಧೀಕರಣವನ್ನು ಸುಗಮಗೊಳಿಸಿ, ಅನೀಮಿಯಾವನ್ನು ತಡೆಗಟ್ಟುತ್ತವೆ. ರಕ್ತಸಂಚಾರ ಸುಗಮವಾದಷ್ಟೂ ರಕ್ತದೊತ್ತಡ ಸಹಜವಾಗಿಯೇ ನಿಯಂತ್ರಿತವಾಗಿರುತ್ತದೆ. ಹೀಗಾಗಿ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬೀಟ್​ರೂಟ್​ ಅತ್ಯುತ್ತಮ ತರಕಾರಿ ಎಂದು ಹಲವು ಅಧ್ಯಯನಗಳು ಹೇಳಿವೆ.

ಇದನ್ನೂ ಓದಿ: ಸಬ್ಬಸಿಗೆ ಸೊಪ್ಪು: ಮಲಬದ್ಧತೆ ಸಮಸ್ಯೆಯ ನಿವಾರಣೆಯ ಜತೆಗೆ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ತಿಳಿಯಿರಿ

Health tips Beetroot Can help to control hypertension

Published On - 8:05 am, Wed, 21 July 21

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?