AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: PCOD ಸಮಸ್ಯೆಯನ್ನು ಆಯುರ್ವೇದದಿಂದ ಗುಣಪಡಿಸಬಹುದೇ?

ಪಿಸಿಒಡಿ ಅಂದರೆ ಪಾಲಿಸಿಸ್ಟಿಕ್​ ಓವರಿ ಡಿಸಾರ್ಡರ್​ ಎಂದರ್ಥ. ಸಾಮಾನ್ಯವಾಗಿ 12-45 ವರ್ಷದೊಳಿಗಿನ ಮಹಿಳೆಯರಲ್ಲಿ ಕಂಡು ಬರುವ ಒಂದು ಸ್ಥಿತಿ. ಪಿಸಿಒಡಿಯ ಮೂಲ ಕಾರಣವೆಂದರೆ ಹಾರ್ಮೋನುಗಳ ಅಸಮತೋಲನ. ಪಿಸಿಒಡಿಯಿಂದ ಬಳಲುತ್ತಿರುವ ಮಹಿಳೆಯರು ಮಕ್ಕಳಿಲ್ಲದ ಸಮಸ್ಯೆಯನ್ನು ಸಹ ಎದುರಿಸಬಹುದು. PCOD ಏಕೆ ಸಂಭವಿಸುತ್ತದೆ? ಇದರ ಆರಂಭಿಕ ಲಕ್ಷಣಗಳೇನು ಮತ್ತು ಆಯುರ್ವೇದದಲ್ಲಿ ಇದಕ್ಕೆ ಚಿಕಿತ್ಸೆ ಇದೆಯೇ? ಈ ಬಗ್ಗೆ ತಜ್ಞರಿಂದ ತಿಳಿದುಕೊಳ್ಳೋಣ.

Health Tips: PCOD ಸಮಸ್ಯೆಯನ್ನು ಆಯುರ್ವೇದದಿಂದ ಗುಣಪಡಿಸಬಹುದೇ?
Pcod Be Cured With Ayurveda
ಪ್ರೀತಿ ಭಟ್​, ಗುಣವಂತೆ
| Edited By: |

Updated on:Dec 29, 2024 | 12:55 PM

Share

ಪಿಸಿಓಡಿ ಮಹಿಳೆಯರಲ್ಲಿ ಕಂಡುಬರುವ ಸಮಸ್ಯೆಯಾಗಿದ್ದು, ಇದು ಸಂತಾನೋತ್ಪತ್ತಿ ವ್ಯವಸ್ಥೆಗೆ ಸಂಬಂಧಿಸಿದೆ. ಪಿಸಿಓಡಿ ಸಮಸ್ಯೆ ಇರುವ ಮಹಿಳೆಯರಿಗೆ ಮುಖದಲ್ಲಿ ಕೂದಲು, ಮೊಡವೆ ಇತ್ಯಾದಿ ಕಾಣಿಸಿಕೊಳ್ಳುವುದು ಸಾಮಾನ್ಯ. ಆನುವಂಶಿಕ ಕಾಯಿಲೆಗಳು ಅಥವಾ ಹಾರ್ಮೋನುಗಳ ಬದಲಾವಣೆಗಳಿಂದಾಗಿ ಈ ಸಮಸ್ಯೆ ಸಂಭವಿಸುತ್ತದೆ. ಪಿಸಿಒಡಿಯಿಂದ ಬಳಲುತ್ತಿರುವ ಮಹಿಳೆಯರು ಮಕ್ಕಳಿಲ್ಲದ ಸಮಸ್ಯೆಯನ್ನು ಸಹ ಎದುರಿಸಬಹುದು. PCOD ಏಕೆ ಸಂಭವಿಸುತ್ತದೆ? ಇದರ ಆರಂಭಿಕ ಲಕ್ಷಣಗಳೇನು ಮತ್ತು ಆಯುರ್ವೇದದಲ್ಲಿ ಇದಕ್ಕೆ ಚಿಕಿತ್ಸೆ ಇದೆಯೇ? ಈ ಬಗ್ಗೆ ತಜ್ಞರಿಂದ ತಿಳಿದುಕೊಳ್ಳೋಣ.

ಪಿಸಿಒಡಿಯ ಮೂಲ ಕಾರಣವೆಂದರೆ ಹಾರ್ಮೋನುಗಳ ಅಸಮತೋಲನ. ಸಾಮಾನ್ಯವಾಗಿ ಅಂಡಾಂಶಗಳು ಈಸ್ಟರೊಜೆನ್​, ಪ್ರೊಜೆಸ್ಟರಾನ್​ ಮತ್ತು ಟೆಸ್ಟೋಸ್ಟೆರಾನ್​ ಅನ್ನು ಉತ್ಪಾದಿಸುತ್ತವೆ. ಪಿಸಿಒಡಿಯಲ್ಲಿ ಆಂಡ್ರೊಜೆನ್​ ಅಂಡಾಂಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ. ಇದನ್ನು ಹೈಪರಾಂಡ್ರೊಜೆನಿಸಮ್​ ಎಂದು ಕರೆಯಲಾಗುತ್ತದೆ. ಇದು ಋತು ಚಕ್ರಕ್ಕೆ ತೊಂದರೆಯನ್ನು ಉಂಟು ಮಾಡುತ್ತದೆ. ಹಾಗಿರುವಾಗ ಹೆಣ್ಣು ಮಕ್ಕಳು ಅಥವಾ ಯುವತಿಯರು ಇದರ ಬಗ್ಗೆ ಹೆಚ್ಚು ಗಮನಹರಿಸಲೇ ಬೇಕು.

ಸ್ತ್ರೀರೋಗ ತಜ್ಞ ಹಾಗೂ ಆಯುರ್ವೇದ ತಜ್ಞ ಡಾ. ಚಂಚಲ್ ಶರ್ಮಾ ಈ ಕುರಿತು ಟಿವಿ9 ಜೊತೆ ಮಾತನಾಡಿ, ಆಧುನಿಕ ಕಾಲದಲ್ಲಿ ಪಿಸಿಒಡಿಗೆ ಹಲವು ವಿಧಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಅವುಗಳಲ್ಲಿ ಪಿಸಿಒಡಿಗೆ ಆಯುರ್ವೇದ ಚಿಕಿತ್ಸೆಯೇ ಅತ್ಯುತ್ತಮವಾಗಿದೆ. ಪಿಸಿಓಡಿ ಹಾರ್ಮೋನ್ ಬದಲಾವಣೆಗೆ ಸಂಬಂಧಿಸಿದ ಸಮಸ್ಯೆಯಾಗಿದ್ದು ಅದು ಮಹಿಳೆಯರ ಅಂಡಾಶಯದ ಮೇಲೆ ಪರಿಣಾಮ ಬೀರುತ್ತದೆ ಎಂದು ವಿವರಿಸುತ್ತಾರೆ. ಇದರಿಂದ ಬಳಲುತ್ತಿರುವ ಮಹಿಳೆಯರು ಅಧಿಕ ಪುರುಷ ಹಾರ್ಮೋನುಗಳನ್ನು ಹೊಂದಿರುವುದು ಕಂಡುಬರುತ್ತದೆ, ಇದರಿಂದಾಗಿ ಅವರ ಅವಧಿಗಳು ಅನಿಯಮಿತವಾಗುತ್ತವೆ ಮತ್ತು ಭವಿಷ್ಯದಲ್ಲಿ ತಾಯಿಯಾಗಲು ಕಷ್ಟವಾಗಬಹುದು.

PCODಗೆ ಆಯುರ್ವೇದ ಚಿಕಿತ್ಸೆ:

ಪಿಸಿಓಡಿಗೆ ಆಯುರ್ವೇದ ಚಿಕಿತ್ಸೆಯಲ್ಲಿ, ರೋಗಿಯನ್ನು ಮೊದಲು ವಾಂತಿ ಮೂಲಕ ಶುದ್ಧೀಕರಿಸಲಾಗುತ್ತದೆ, ನಂತರ ಬಸ್ತಿ ಅಂದರೆ ಔಷಧೀಯ ಎನಿಮಾದ ಮೂಲಕ ದೇಹದಿಂದ ವಿಷಕಾರಿ ವಸ್ತುಗಳನ್ನು ತೆಗೆದುಹಾಕಲಾಗುತ್ತದೆ. ಇದು ಗರ್ಭಾಶಯ ಮತ್ತು ಇತರ ಅಂಗಗಳಲ್ಲಿ ಇರುವ ಕಫ ಮತ್ತು ವಿಷತ್ವವನ್ನು ಹೊರಹಾಕುತ್ತದೆ. ಆಯುರ್ವೇದ ಚಿಕಿತ್ಸೆಯೊಂದಿಗೆ ಪಿಸಿಓಡಿ ಚಿಕಿತ್ಸೆಗೆ ಸುಮಾರು 1 ತಿಂಗಳು ಬೇಕಾಗುತ್ತದೆ. ಪಂಚಕರ್ಮ ಚಿಕಿತ್ಸೆಯ ಸಂಪೂರ್ಣ ಪ್ರಕ್ರಿಯೆಯಲ್ಲಿ, ಕೆಲವು ಆಯುರ್ವೇದ ಔಷಧಗಳನ್ನು ಸಹ ರೋಗಿಗೆ ನೀಡಲಾಗುತ್ತದೆ. ಇದರೊಂದಿಗೆ, ರೋಗಿಯ ಆಹಾರ ಮತ್ತು ಜೀವನಶೈಲಿಯಲ್ಲಿ ಅಗತ್ಯಕ್ಕೆ ಅನುಗುಣವಾಗಿ ಬದಲಾವಣೆಗಳನ್ನು ಮಾಡಲಾಗುತ್ತದೆ.

ಇದನ್ನೂ ಓದಿ: ಹೃದ್ರೋಗಿಗಳು ಚಳಿಗಾಲದಲ್ಲಿ ಯಾವ ಆಹಾರ ಪದಾರ್ಥಗಳನ್ನು ತಿನ್ನಬಾರದು?

ಆಹಾರ ಮತ್ತು ಜೀವನಶೈಲಿಯಲ್ಲಿ ಬದಲಾವಣೆ:

PCOD ರೋಗಿಗಳ ತೂಕವು ಬಹಳ ವೇಗವಾಗಿ ಹೆಚ್ಚಾಗುತ್ತದೆ, ಆದ್ದರಿಂದ ಇದನ್ನು ನಿಯಂತ್ರಿಸಲು, ರೋಗಿಯು ಪೌಷ್ಟಿಕ ಆಹಾರವನ್ನು ಸೇವಿಸಲು ಸಲಹೆ ನೀಡಲಾಗುತ್ತದೆ. ಇದು ತೂಕ ನಷ್ಟದ ಜೊತೆಗೆ ವಾತ ಮತ್ತು ಕಫ ದೋಷಗಳನ್ನು ಸಮತೋಲನಗೊಳಿಸುತ್ತದೆ. ದಾಲ್ಚಿನ್ನಿ, ಅರಿಶಿನ, ತಾಜಾ ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯಗಳು ಇತ್ಯಾದಿಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಪಿಸಿಓಡಿ ಇರುವ ಮಹಿಳೆಯರು ಕೆಫೀನ್, ಜಂಕ್, ಸಂಸ್ಕರಿಸಿದ ಮತ್ತು ಸಿಹಿ ಆಹಾರ ಇತ್ಯಾದಿಗಳನ್ನು ಸೇವಿಸುವುದನ್ನು ತಪ್ಪಿಸಬೇಕು. ಪಿಸಿಓಡಿ ಇರುವ ಮಹಿಳೆಯರು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು. ಅವರು ಸಾಕಷ್ಟು ನಿದ್ರೆ ಮತ್ತು ವ್ಯಾಯಾಮ ಮಾಡಬೇಕು.

PCOD ಲಕ್ಷಣಗಳು:

  • ತೂಕ ಹೆಚ್ಚಾಗುವುದು
  • ಮುಟ್ಟಿನ ಸಮಯದಲ್ಲಿ ತೀವ್ರವಾದ ಹೊಟ್ಟೆ ನೋವು
  • ಅನಿಯಮಿತ ಅವಧಿಗಳು
  • ಅನಗತ್ಯ ಮುಖದ ಕೂದಲು ಮತ್ತು ಮೊಡವೆ
  • ಅತಿಯಾದ ಕೂದಲು ಉದುರುವಿಕೆ

ಮತ್ತಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 12:54 pm, Sun, 29 December 24

ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ: ವಿಷಾದ ವ್ಯಕ್ತಪಡಿಸಿದ ಹೆಬ್ಬಾಳ್ಕರ್
ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ: ವಿಷಾದ ವ್ಯಕ್ತಪಡಿಸಿದ ಹೆಬ್ಬಾಳ್ಕರ್
ಜೈಲಲ್ಲಿ ಖಾಕಿ ಕಾರ್ಯಾಚರಣೆಗೆ ಪತರುಗುಟ್ಟಿದ ಕೈದಿಗಳು
ಜೈಲಲ್ಲಿ ಖಾಕಿ ಕಾರ್ಯಾಚರಣೆಗೆ ಪತರುಗುಟ್ಟಿದ ಕೈದಿಗಳು
ಬೆಂಗಳೂರಿನಲ್ಲಿ ಶಿಲ್ಪಾ ಶೆಟ್ಟಿ ಒಡೆತನದ ಬ್ಯಾಸ್ಟಿಯನ್ ಪಬ್ ಮೇಲೆ ಐಟಿ ದಾಳಿ
ಬೆಂಗಳೂರಿನಲ್ಲಿ ಶಿಲ್ಪಾ ಶೆಟ್ಟಿ ಒಡೆತನದ ಬ್ಯಾಸ್ಟಿಯನ್ ಪಬ್ ಮೇಲೆ ಐಟಿ ದಾಳಿ
2026 ಮೇಷ ರಾಶಿಯವರಿಗೆ ಮಹತ್ತರವಾದ ಬದಲಾವಣೆಯ ವರ್ಷ
2026 ಮೇಷ ರಾಶಿಯವರಿಗೆ ಮಹತ್ತರವಾದ ಬದಲಾವಣೆಯ ವರ್ಷ
ಜೈಲುಗಳಲ್ಲಿ ಅಕ್ರಮ ತಡೆಗಟ್ಟಲು ಎಐ ತಂತ್ರಜ್ಞಾನ ಬಳಕೆ!
ಜೈಲುಗಳಲ್ಲಿ ಅಕ್ರಮ ತಡೆಗಟ್ಟಲು ಎಐ ತಂತ್ರಜ್ಞಾನ ಬಳಕೆ!