AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏನಿದು ಹೈಪೋಥರ್ಮಿಯಾ? ಇದರ ರೋಗಲಕ್ಷಣಗಳೇನು? ಈ ಕಾಯಿಲೆ ಬಾರದಂತೆ ತಡೆಯಲು ತಜ್ಞರು ನೀಡುವ ಸಲಹೆಗಳೇನು?

Hypothermia: ದೇಹದ ಉಷ್ಣತೆಯು ಸಾಮಾನ್ಯ ಸ್ಥಿತಿಗಿಂತ ಕಡಿಮೆಯಿದ್ದರೆ ಅದನ್ನು ಹೈಪೋಥರ್ಮಿಯಾ ಎಂದು ಕರೆಯುತ್ತಾರೆ. ಈ ವೇಳೆ ವ್ಯಕ್ತಿಗೆ ಸರಿಯಾದ ಚಿಕಿತ್ಸೆ ನೀಡದೇ ಹೋದರೆ ಹೃದಯಾಘಾತ ಅಥವಾ ಸಾವು ಕೂಡ ಸಂಭವಿಸಬಹುದು ಎನ್ನುತ್ತಾರೆ ತಜ್ಞರು. ಹಾಗಾದ್ರೆ ಈ ಹೈಪೋಥರ್ಮಿಯಾ ರೋಗಲಕ್ಷಣಗಳೇನು? ಹಾಗೂ ಈ ರೋಗಬಾರದಂತೆ ತೆಗೆದುಕೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಬಗ್ಗೆ ತಜ್ಞರು ಹೇಳುವುದೇನು? ಎನ್ನುವ ಮಾಹಿತಿಯು ಈ ಕೆಳಗಿದೆ.

ಏನಿದು ಹೈಪೋಥರ್ಮಿಯಾ? ಇದರ ರೋಗಲಕ್ಷಣಗಳೇನು? ಈ ಕಾಯಿಲೆ ಬಾರದಂತೆ ತಡೆಯಲು ತಜ್ಞರು ನೀಡುವ ಸಲಹೆಗಳೇನು?
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on:Dec 31, 2024 | 11:20 AM

Share

ಚಳಿಗಾಲ ಆರಂಭವಾಗಿದ್ದು ಕೆಲವು ಪ್ರದೇಶಗಳಲ್ಲಿ ವಿಪರೀತ ಚಳಿಯ ವಾತಾವರಣವಿದೆ. ಈ ಋತುವಿನಲ್ಲಿ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಹಜ. ಈ ಶೀತ ವಾತಾವರಣದಲ್ಲಿ ಬೆಚ್ಚಗಿನ ಆಹಾರವನ್ನು ದೇಹ ಬಯಸುತ್ತದೆ. ಬೆಚ್ಚಗಿನ ಆಹಾರವು ದೇಹವನ್ನು ನಾನಾ ರೀತಿಯ ಆರೋಗ್ಯ ಸಮಸ್ಯೆಯಿಂದ ನಮ್ಮನ್ನು ರಕ್ಷಿಸುತ್ತದೆ. ಆದರೆ, ಕೆಲವೊಮ್ಮೆ ದೇಹದ ಉಷ್ಣತೆಯು 95 ಡಿಗ್ರಿ ಫ್ಯಾರನ್‌ಹೀಟ್ (35 ಡಿಗ್ರಿ ಸೆಲ್ಸಿಯಸ್) ಗಿಂತ ಕಡಿಮೆಯಾದಾಗ ಸಂಭವಿಸುವ ಸ್ಥಿತಿಯೇ ಈ ಹೈಪೋಥರ್ಮಿಯಾ ಆಗಿದೆ. ಈ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಯು ತಕ್ಷಣವೇ ಚಿಕಿತ್ಸೆಯನ್ನು ಪಡೆಯಬೇಕು. ಇಲ್ಲದಿದ್ದರೆ ಹೃದಯ ಸ್ತಂಭನವಾಗಿ ಸಾವು ಸಂಭವಿಸುವ ಸಾಧ್ಯತೆಯೇ ಹೆಚ್ಚು ಎನ್ನುತ್ತಾರೆ ತಜ್ಞರು.

ಹೈಪೋರ್ಮಿಯಾ ಕಾಯಿಲೆ ಎಷ್ಟು ಅಪಾಯಕಾರಿ?

ಲೇಡಿ ಹಾರ್ಡಿಂಜ್ ಮೆಡಿಕಲ್ ಕಾಲೇಜಿನ ಮೆಡಿಸಿನ್ ವಿಭಾಗದ ಡಾ.ಎಲ್.ಎಚ್. ​​ಘೋಟೆಕರ್, ಟಿವಿ 9 ಭಾರತ್ ವರ್ಷ್ ಸುದ್ದಿ ವಾಹಿನಿಯೊಂದಿಗೆ ಮಾತನಾಡಿ, ದೇಹದ ಉಷ್ಣತೆಯು ಕಡಿಮೆಯಿದ್ದಾಗ ಹೈಪೋಥರ್ಮಿಯಾ ಕಾಯಿಲೆಯು ಕಾಣಿಸಿಕೊಳ್ಳುತ್ತದೆ. ಈ ವೇಳೆಯಲ್ಲಿ ಹೃದಯ, ನರಮಂಡಲ ಮತ್ತು ಇತರ ಅಂಗಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುವುದಿಲ್ಲ. ಸರಿಯಾದ ಚಿಕಿತ್ಸೆ ನೀಡದಿದ್ದರೆ ಹೃದಯ ಸ್ತಂಭನವಾಗಿ ಸಾವು ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಚಳಿಗಾಲದಲ್ಲಿ ಹೆಚ್ಚು ಹೊತ್ತು ಮನೆಯಿಂದ ಹೊರಗಿರುವವರಿಗೆ ಈ ಕಾಯಿಲೆ ಬರುವ ಅಪಾಯ ಹೆಚ್ಚು. ಶೀತ ವಾತಾವರಣಕ್ಕೆ ಮೈಯೊಡ್ಡಿ ಉಂಟಾಗುವ ಬಹುತೇಕ ಸಾವುಗಳಿಗೆ ಈ ಹೈಪೋಥರ್ಮಿಯಾ ಪ್ರಮುಖ ಕಾರಣವಾಗಿದೆ. ಈ ಋತುವಿನಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಆರೋಗ್ಯ ಕಾಳಜಿ ವಹಿಸುವುದು ಅತ್ಯಗತ್ಯ ಎಂದು ತಿಳಿಸಿದ್ದಾರೆ.

ಹೈಪೋಥರ್ಮಿಯಾ ಏಕೆ ಸಂಭವಿಸುತ್ತದೆ?

* ಚಳಿಗಾಲದಲ್ಲಿ ಹೆಚ್ಚು ಸಮಯ ಶೀತವಾತಾವರಣಕ್ಕೆ ಮೈಯೊಡ್ದುವುದು.

* ಶೀತ ವಾತಾವರಣದಲ್ಲಿ ಬೆಚ್ಚಗಿನ ಬಟ್ಟೆಗಳನ್ನು ಧರಿಸದೇ ಇರುವುದು.

* ದೀರ್ಘಕಾಲದಿಂದ ಕಡಿಮೆ ಉಷ್ಣತೆಯಲ್ಲಿ ಬಳಲುತ್ತಿರುವುದು.

ಇದನ್ನೂ ಓದಿ: ಬೆಳಿಗ್ಗೆ, ಸಂಜೆ ಅಥವಾ ರಾತ್ರಿ: ಮೊಟ್ಟೆಗಳನ್ನು ತಿನ್ನಲು ಸರಿಯಾದ ಸಮಯ ಯಾವುದು?

ಹೈಪೋಥರ್ಮಿಯಾ ಕಾಯಿಲೆಯ ಲಕ್ಷಣಗಳು

* ಮೈನಡುಕ

* ಅತಿಯಾದ ಚಳಿಯ ಭಾವನೆ

* ತೀವ್ರ ತಲೆನೋವು

* ಪ್ರಜ್ಞಾಹೀನತೆ

* ಸುಸ್ತು, ಆಯಾಸ

* ಅಸ್ಪಷ್ಟ ಮಾತು

* ಹೈಪೋಥರ್ಮಿಯಾ ಕಾಯಿಲೆ ಬಾರದಂತೆ ತಡೆಯುವುದು ಹೇಗೆ?*

* ಸಾಧ್ಯವಾದಷ್ಟು ದೇಹವನ್ನು ಬೆಚ್ಚಗಿರಿಸುವ ಆಹಾರವನ್ನು ಸೇವಿಸುವುದು.

* ಬೆಳಗ್ಗೆ ಮತ್ತು ಸಂಜೆಯ ವೇಳೆ ಕಡಿಮೆ ತಾಪಮಾನದಲ್ಲಿ ಹೊರಗೆ ಹೋಗುವುದನ್ನು ತಪ್ಪಿಸುವುದು.

* ದೇಹವನ್ನು ಬೆಚ್ಚಗಿಡಲು ನಿಯಮಿತ ವ್ಯಾಯಾಮ ಮಾಡುವುದು.

* ಚಳಿಗಾಲಕ್ಕೆ ಮೈ ಬೆಚ್ಚಗೆ ಇರಿಸುವ ಸೂಕ್ತವಾದ ಬಟ್ಟೆಗಳನ್ನು ಧರಿಸುವುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:59 am, Tue, 31 December 24

ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ
ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು