AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ಈ ಪೌಷ್ಟಿಕ ಆಹಾರಕ್ಕಾಗಿ ನಿಮಗೆ ಬೇಕಾಗಿರುವುದು ಕೇವಲ ‘ಮೂರು’ ಪದಾರ್ಥಗಳು

ಪೌಷ್ಟಿಕಾಂಶ ಆಹಾರ ಸೇವಿಸದೆ ಸಣ್ಣ ಪುಣ್ಣ ಕೆಲಸ ಮಾಡಿದ ತಕ್ಷಣ ಸುಸ್ತಾಗುತ್ತಾರೆ. ಪದೇ ಪದೇ ಹಸಿವಾಗುತ್ತದೆ. ಹಾಗಂತ ಖಾಲಿ ಹೊಟ್ಟೆಯಲ್ಲಿ ಮಲಗುವುದು ಆರೋಗ್ಯ ದೃಷ್ಟಿಯಲ್ಲಿ ಸರಿಯಲ್ಲ. ಹೆಚ್ಚು ರುಚಿ ಸಿಗದಿದ್ದರೂ ಆರೋಗ್ಯ ಕಾಪಾಡಿಕೊಳ್ಳಲು ಪೌಷ್ಟಿಕ ಆಹಾರವನ್ನು ಸೇವಿಸಲೇಬೇಕು.

Health Tips: ಈ ಪೌಷ್ಟಿಕ ಆಹಾರಕ್ಕಾಗಿ ನಿಮಗೆ ಬೇಕಾಗಿರುವುದು ಕೇವಲ ‘ಮೂರು’ ಪದಾರ್ಥಗಳು
ಪೌಷ್ಟಿಕ ಆಹಾರ ಸೇವಿಸಿ (ಸಾಂಕೇತಿಕ ಚಿತ್ರ)
TV9 Web
| Edited By: |

Updated on: Jul 19, 2021 | 7:28 AM

Share

ದುಡಿಯುವುದು ಮೂರು ಹೊತ್ತಿನ ಊಟಕ್ಕಾದರೂ, ಈಗಿನ ಜೀವನ ಶೈಲಿಯಲ್ಲಿ ಊಟಕ್ಕೂ ಸಮಯವಿಲ್ಲದಂತಾಗಿದೆ. ಕೆಲಸದ ಒತ್ತಡದಿಂದ ಬಹುತೇಕರು ಪೌಷ್ಟಿಕಾಂಶ ಆಹಾರ ತಿನ್ನುತ್ತಿಲ್ಲ. ಕಡಿಮೆ ಸಮಯದಲ್ಲಿ ಸಿದ್ಧವಾಗುವ ಬ್ರೆಡ್ ಆ್ಯಂಡ್ ಜಾಮ್ನಂತಹ ಆಹಾರವನ್ನು ಸೇವಿಸುವವರ ಸಂಖ್ಯೆ ಹೆಚ್ಚಾಗಿದೆ. ಆದರೆ ಈ ಪದ್ಧತಿ ಆರೋಗ್ಯ ದೃಷ್ಟಿಯಿಂದ ಒಳ್ಳೆಯದಲ್ಲ. ಕಡಿಮೆ ಸಮಯದಲ್ಲೇ ಪೌಷ್ಟಿಕಾಂಶ ಆಹಾರವನ್ನು ತಿಂದು ಆರೋಗ್ಯ ಕಾಪಾಡಿಕೊಳ್ಳಿ.

ಪೌಷ್ಟಿಕಾಂಶ ಆಹಾರ ಸೇವಿಸದೆ ಸಣ್ಣ ಪುಣ್ಣ ಕೆಲಸ ಮಾಡಿದ ತಕ್ಷಣ ಸುಸ್ತಾಗುತ್ತಾರೆ. ಪದೇ ಪದೇ ಹಸಿವಾಗುತ್ತದೆ. ಹಾಗಂತ ಖಾಲಿ ಹೊಟ್ಟೆಯಲ್ಲಿ ಮಲಗುವುದು ಆರೋಗ್ಯ ದೃಷ್ಟಿಯಲ್ಲಿ ಸರಿಯಲ್ಲ. ಹೆಚ್ಚು ರುಚಿ ಸಿಗದಿದ್ದರೂ ಆರೋಗ್ಯ ಕಾಪಾಡಿಕೊಳ್ಳಲು ಪೌಷ್ಟಿಕ ಆಹಾರವನ್ನು ಸೇವಿಸಲೇಬೇಕು.

ಸಾಮಾನ್ಯವಾಗಿ ಎಲ್ಲರಿಗೂ ಮೊಸರನ್ನ ತಿಳಿದಿದೆ. ಇದು ಬಡವರಿಗೆ ಬಾಡೂಟವಿದ್ದಂತೆ. ನಾಲಿಗೆಗೆ ತುಂಬಾ ರುಚಿ ಕೊಡುವ ಮೊಸರನ್ನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಸೇವಿಸಿದರೆ ಪದೇ ಪದೇ ಹಸಿವಾಗಲ್ಲ. ಊಟವೂ ತೃಪ್ತಿಯಾಗಿಸುತ್ತದೆ. ಅಲ್ಲದೆ ಬಹುಮುಖ್ಯವಾಗಿ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಾಗುವುದಿಲ್ಲ. ಜೀರ್ಣಕ್ರಿಯೆಯು ಚೆನ್ನಾಗಿ ಆಗುತ್ತದೆ. ಮೊಸರನ್ನದಲ್ಲಿ ಕ್ಯಾಲ್ಸಿಯಂ ಮತ್ತು ಉತ್ತಮ ಕೊಬ್ಬುಗಳು ಅಧಿಕವಾಗಿರುತ್ತದೆ. ಇದನ್ನು ಬೆಳಿಗ್ಗೆ ಬ್ರೇಕ್ ಫಾಸ್ಟ್, ಮಧ್ಯಾಹ್ನ ಊಟಕ್ಕೆ ಮತ್ತು ರಾತ್ರಿ ಊಟಕ್ಕೂ ತಿನ್ನಬಹುದು.

ಮೊಸರನ್ನ

ಮೊಸರನ್ನ ಮಾಡಲು ಬೇಕಾಗುವ ಪದಾರ್ಥಗಳು 1 ಬೌಲ್ ಅನ್ನ ಎರಡು ಚಮಚ ಮೊಸರು (ದೊಡ್ಡ ಚಮಚದಲ್ಲಿ) ರುಚಿಗೆ ತಕ್ಕಷ್ಟು ಉಪ್ಪು

ಅನ್ನ ಸ್ವಲ್ಪ ಮೆದು ಇರಬೇಕು. ಅನ್ನ ತಣ್ಣಗಾದ ಬಳಿಕ ಅದಕ್ಕೆ ಮೊಸರು ಹಾಕಿ. ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಕಲಸಿ. ಇದರೊಂದಿಗೆ ಉಪ್ಪಿನ ಕಾಯಿ ತಿಂದರೆ ರುಚಿ ಹೆಚ್ಚಾಗುತ್ತದೆ.

ಒಗ್ಗರಣೆ ಬೇಕೆನಿಸಿದರೆ ಚಿಕ್ಕ ಬಾಣಲಿಗೆ ಎರಡರಿಂದ ಮೂರು ಚಮಚ ಅಡುಗೆ ಎಣ್ಣೆ ಹಾಕಿ. ಎಣ್ಣೆ ಕಾದ ನಂತರ ಸಾಸಿವೆ ಹಾಕಿ. ಇನ್ನು ಇದಕ್ಕೆ 5 ರಿಂದ 6 ಎಲೆ ಬೇವಿನ ಸೊಪ್ಪು, ಒಂದೂವರೆ ಚಮಚ ಉದ್ದಿನ ಬೇಳೆ ಮತ್ತು ಕಡಲೆಬೇಳೆ ಹಾಕಿ. ಜೊತೆಗೆ ಎರಡರಿಂದ ಮೂರು ಒಣ ಮೆಣಸಿನಕಾಯಿ ಮುರಿದು ಹಾಕಿ. ಈ ಒಗ್ಗರಣೆಯನ್ನು ಮೊಸರನ್ನಕ್ಕೆ ಹಾಕಿ ಚೆನ್ನಾಗಿ ಕಲಸಿ ತಿನ್ನಿ.

ಪ್ರಯೋಜನಗಳು: * ಕರುಳಿಗೆ ಒಳ್ಳೆಯದು. * ದೈಹಿಕ ಸಾಮರ್ಥ್ಯ ಹೆಚ್ಚಾಗುತ್ತದೆ. * ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. * ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ.

ಇದನ್ನೂ ಓದಿ

Health Tips: ಮಳೆಗಾಲದ ಸಮಯದಲ್ಲಿ ಆರೋಗ್ಯ ದೃಷ್ಟಿಯಿಂದ ಈ ಕೆಲವು ವಿಷಯಗಳನ್ನು ನೀವು ಗಮನಿಸಲೇಬೇಕು

Health Tips: ಹುಣಸೆ ಹಣ್ಣಿನ ಸೇವನೆಯ ಆರೋಗ್ಯ ಪ್ರಯೋಜನಗಳನ್ನು ತಿಳಿಯಿರಿ

(How to make Curd Rice for good health in home)

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ