ಮಾನ್ಸೂನ್ ಟಿಪ್ಸ್: ಮುಂಗಾರು ಮಳೆಯಲ್ಲಿ ನಿಮ್ಮ ಪಾದಗಳನ್ನು ರಕ್ಷಿಸಲು ಇಲ್ಲಿವೆ 5 ಅದ್ಭುತ ಸಲಹೆಗಳು

ಮಾನ್ಸೂನ್ ವೇಳೆ ದೈನಂದಿನ ಕ್ರಮದಲ್ಲಿ ಪಾದದ ಆರೈಕೆ: ಮುಂಗಾರು ಸಮಯದಲ್ಲಿ ನಿಮ್ಮ ಚರ್ಮ ಮತ್ತು ಕೂದಲಿನ ಜೊತೆಗೆ ಪಾದಗಳಿಗೂ ವಿಶೇಷ ಕಾಳಜಿಯ ಅಗತ್ಯವಿರುತ್ತದೆ. ಪಾದಗಳು ಆಗಾಗ್ಗೆ ಮಳೆಯಲ್ಲಿ ಒದ್ದೆಯಾಗುತ್ತವೆ. ಈ ವೇಳೆ, ಶಿಲೀಂಧ್ರಗಳ ಸೋಂಕಿನಿಂದಾಗಿ ರಿಂಗ್ ವರ್ಮ್, ಪಾದಗಳಲ್ಲಿ ತುರಿಕೆ ಸಮಸ್ಯೆಗಳು ಎದುರಾಗುತ್ತವೆ.

ಮಾನ್ಸೂನ್ ಟಿಪ್ಸ್: ಮುಂಗಾರು ಮಳೆಯಲ್ಲಿ ನಿಮ್ಮ ಪಾದಗಳನ್ನು ರಕ್ಷಿಸಲು ಇಲ್ಲಿವೆ 5 ಅದ್ಭುತ ಸಲಹೆಗಳು
ಮುಂಗಾರು ಮಳೆಯಲ್ಲಿ ನಿಮ್ಮ ಪಾದಗಳನ್ನು ರಕ್ಷಿಸಲು ಇಲ್ಲಿವೆ 5 ಅದ್ಭುತ ಸಲಹೆಗಳು
Follow us
| Updated By: ಸಾಧು ಶ್ರೀನಾಥ್​

Updated on: Jul 09, 2022 | 6:06 AM

ಮಾನ್ಸೂನ್ ವೇಳೆ ದೈನಂದಿನ ಕ್ರಮದಲ್ಲಿ ಪಾದದ ಆರೈಕೆ: ಮುಂಗಾರು ಸಮಯದಲ್ಲಿ ನಿಮ್ಮ ಚರ್ಮ ಮತ್ತು ಕೂದಲಿನ ಜೊತೆಗೆ ಪಾದಗಳಿಗೂ ವಿಶೇಷ ಕಾಳಜಿಯ ಅಗತ್ಯವಿರುತ್ತದೆ. ಪಾದಗಳು ಆಗಾಗ್ಗೆ ಮಳೆಯಲ್ಲಿ ಒದ್ದೆಯಾಗುತ್ತವೆ. ಈ ವೇಳೆ, ಶಿಲೀಂಧ್ರಗಳ ಸೋಂಕಿನಿಂದಾಗಿ ರಿಂಗ್ ವರ್ಮ್, ಪಾದಗಳಲ್ಲಿ ತುರಿಕೆ ಸಮಸ್ಯೆಗಳು ಎದುರಾಗುತ್ತವೆ.

ಪಾದದ ಆರೈಕೆ ಸಲಹೆಗಳು: ಮಳೆಗಾಲ ಪ್ರಾರಂಭವಾದಾಗ, ಅನೇಕ ರೀತಿಯ ರೋಗಗಳು ಸುತ್ತಿಕೊಂಡು ಬರುತ್ತವೆ. ಆದರೆ ನೀವು ಅಂತಹ ಸಮಸ್ಯೆಗಳನ್ನು ತಪ್ಪಿಸಬೇಕೆಂದರೆ ಕೆಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಮಳೆಗಾಲದಲ್ಲಿ ನಿಮ್ಮ ತ್ವಚೆ ಮತ್ತು ಕೂದಲಿನ ಜೊತೆಗೆ ಪಾದಗಳಿಗೂ ವಿಶೇಷ ಕಾಳಜಿಯ ಅಗತ್ಯವಿದೆ. ಪಾದಗಳು ಆಗಾಗ್ಗೆ ಮಳೆಯಲ್ಲಿ ಒದ್ದೆಯಾಗುತ್ತವೆ. ಇದರಿಂದ ಫಂಗಲ್ ಇನ್ ಫೆಕ್ಷನ್, ರಿಂಗ್ ವರ್ಮ್, ತುರಿಕೆ ಸಮಸ್ಯೆ ಪಾದಗಳಲ್ಲಿ ಶುರುವಾಗುತ್ತದೆ. ಒದ್ದೆಯಾದ ಪಾದಗಳು ಕೆಲವೊಮ್ಮೆ ಕೆಟ್ಟ ವಾಸನೆಯನ್ನು ಹೊಂದಿರುತ್ತವೆ, ಅಲರ್ಜಿಯ ಕಾರಣದಿಂದಾಗಿ ಚರ್ಮವು ಕೆಂಪು ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಮುಖದ ಜೊತೆಗೆ, ನಿಮ್ಮ ಪಾದಗಳ ಆರೈಕೆಯನ್ನೂ ಸಹ ನೋಡಿಕೊಳ್ಳಿ. ಪಾದಗಳನ್ನು ಸುಂದರವಾಗಿ ಮತ್ತು ಸ್ವಚ್ಛವಾಗಿಡಲು, ನೀವು ಈ ಆರೈಕೆ ಸಲಹೆಗಳನ್ನು ಅನುಸರಿಸಬೇಕು.

  1. 1. ಪಾದಗಳನ್ನು ಸ್ವಚ್ಛವಾಗಿಡಿ.. ಮಳೆಯಲ್ಲಿ ನಿಮ್ಮ ಪಾದಗಳನ್ನು ಚೆನ್ನಾಗಿ ತೊಳೆದುಕೊಂಡು, ಒಣಗಿಸುವುದು ಬಹಳ ಮುಖ್ಯ. ಶಿಲೀಂಧ್ರಗಳ ಸೋಂಕು ತಾಕಬಾರದು ಅಂದರೆ ಪಾದಗಳನ್ನು ಯಾವಾಗಲೂ ಸ್ವಚ್ಛವಾಗಿಡಬೇಕು ಮತ್ತು ಒಣಗಿಸಬೇಕು. ಧೂಳು ಅನೇಕ ರೀತಿಯ ಪಾದದ ಸೋಂಕುಗಳಿಗೆ ಕಾರಣವಾಗಬಹುದು. ಕಛೇರಿಯಿಂದ ಬರುವಾಗ ಪಾದಗಳು ಒದ್ದೆಯಾಗಿದ್ದರೆ, ಬೂಟುಗಳು ಮತ್ತು ಸಾಕ್ಸ್‌ಗಳನ್ನು ತೆಗೆದ ತಕ್ಷಣ ಸೌಮ್ಯವಾದ ಸಾಬೂನು ಮತ್ತು ಬೆಚ್ಚಗಿನ ನೀರಿನಿಂದ ಪಾದಗಳನ್ನು ತೊಳೆಯಿರಿ. ಮಳೆಯಲ್ಲಿ ಬರಿಗಾಲಿನಲ್ಲಿ ನಡೆಯುವುದನ್ನು ತಪ್ಪಿಸಿ.
  2. 2. ಪಾದಗಳನ್ನು ಎಕ್ಸ್​ ಫೋಲಿಯೇಟ್ ಮಾಡಿ (exfoliate).. ಪಾದಗಳನ್ನು ಎಕ್ಸ್‌ಫೋಲಿಯೇಟ್ ಮಾಡುವುದು ಎಂದರೆ ಸತ್ತ ಚರ್ಮವನ್ನು ತೆಗೆದುಹಾಕಲು ನಿಮ್ಮ ಪಾದಗಳನ್ನು ಉಜ್ಜುವುದು. ಪಾದಗಳನ್ನು ಸ್ಕ್ರಬ್ ಮಾಡುವುದರಿಂದ ತುಂಬಾ ಹಿತವಾಗುತ್ತದೆ. ನೀವು ಪಾದ ರಕ್ಷಣೆ ಬಯಸಿದಲ್ಲಿ ಪಾದಗಳನ್ನು ಸ್ವಲ್ಪ ಸಮಯದವರೆಗೆ ಬೆಚ್ಚಗಿನ ನೀರಿನಲ್ಲಿ ನೆನೆಸಿ ನಂತರ ಸ್ಕ್ರಬ್ ಮಾಡಿ. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ. ನೋವು ಮತ್ತು ಊತದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.
  3. 3. ತೇವಗೊಳಿಸಿ (moisturize): ಪಾದಗಳನ್ನು ಒಣಗಿಸಿದ ನಂತರ, ಪಾದಗಳನ್ನು ಉತ್ತಮವಾದ ಪಾದದ ಕ್ರೀಮ್​ ನಿಂದ ಮಸಾಜ್ ಮಾಡುವುದರಿಂದ ಚರ್ಮವು ಮೃದುವಾಗುತ್ತದೆ. ಇದು ಬಿರುಕುಗಳು, ಅಲರ್ಜಿಗಳು, ಸತ್ತ ಜೀವಕೋಶಗಳನ್ನು ದೂರವಿರಿಸಲು ಸಹಾಯ ಮಾಡುತ್ತದೆ. ದಿನಕ್ಕೆ ಎರಡು ಬಾರಿಯಾದರೂ ಮಾಯಿಶ್ಚರೈಸರ್ ಬಳಸಿ. ನಿಮಗೆ ಸರಿಹೊಂದಿದರೆ ನೀವು ಯಾವುದೇ ಬ್ಯಾಕ್ಟೀರಿಯಾ ವಿರೋಧಿ ಟಾಲ್ಕಮ್ ಪೌಡರ್ ಅನ್ನು ಸಹ ಬಳಸಬಹುದು.
  4. 4. ಪಾದದ ಉಗುರುಗಳನ್ನು ಟ್ರಿಮ್ ಮಾಡಿ ಕಾಲ್ಬೆರಳ ಉಗುರುಗಳನ್ನು ನಿಯಮಿತವಾಗಿ ಟ್ರಿಮ್ ಮಾಡಬೇಕು. ಏಕೆಂದರೆ ಈ ಮಳೆಗಾಲದಲ್ಲಿ ಕಾಲ್ಬೆರಳ ಉಗುರುಗಳ ನಡುವೆ ಮರಳು, ಬುರುದೆ ಶೇಖರಣೆಯಾಗುತ್ತದೆ. ಇದು ಶಿಲೀಂಧ್ರಗಳ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ಅದೇ ಸಮಯದಲ್ಲಿ ಮಳೆಯಲ್ಲಿ ಬ್ಯೂಟಿ ಸಲೂನ್‌ಗೆ ತೆರಳಿ ಪಾದೋಪಚಾರ ಮಾಡಿಕೊಳ್ಳಿ. ಇದು ಪಾದಗಳಲ್ಲಿ ಅನೇಕ ರೀತಿಯ ಸೋಂಕುಗಳ ಅಪಾಯವನ್ನು ತಗ್ಗಿಸುತ್ತದೆ. ಜೊತೆಗೆ, ನೈಸರ್ಗಿಕ ಪದಾರ್ಥಗಳೊಂದಿಗೆ ಮನೆಯಲ್ಲಿ ಪಾದೋಪಚಾರವನ್ನು ಪಡೆಯಿರಿ.
  5. 5. ಸರಿಯಾದ ಪಾದರಕ್ಷೆಗಳ ಬಳಕೆ ಮಳೆಯಲ್ಲಿ ನೀವು ಸರಿಯಾದ ಪಾದರಕ್ಷೆಗಳನ್ನು ಬಳಸಬೇಕು. ಒದ್ದೆಯಾದಾಗ ಅವುಗಳಿಂದ ಪಾದಗಳಿಗೆ ಹಾನಿಯಾಗುತ್ತದೆ. ಮಳೆಗಾಲದಲ್ಲಿ ಕೊಳಕು ಬೂಟುಗಳನ್ನು ಧರಿಸುವುದನ್ನು ತಪ್ಪಿಸಿ. ಒದ್ದೆಯಾದಾಗ ಅವುಗಳನ್ನು ಧರಿಸಲು ಅಹಿತಕರವಾಗಿರುತ್ತದೆ. ಇದು ಪಾದಗಳನ್ನು ತೇವಗೊಳಿಸುವುದಲ್ಲದೆ ಫಂಗಲ್ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ನೀವು ರಬ್ಬರ್ ಶೂಗಳು, ಚಪ್ಪಲಿಗಳು, ಫ್ಲಿಪ್ ಫ್ಲಾಪ್​ ಗಳು, ಸ್ಯಾಂಡಲ್ಗಳನ್ನು ಧರಿಸಬಹುದು. (To read in Telugu click the link here)

ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು