AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Multiple personality disorder: ಕಾಡುವ ಬಹುವ್ಯಕ್ತಿತ್ವ ಅಸ್ವಸ್ಥತೆಯ ಲಕ್ಷಣಗಳ ಬಗ್ಗೆ ಇಲ್ಲಿದೆ ಮಾಹಿತಿ

ಮಾನಸಿಕ ಅನಾರೋಗ್ಯಕ್ಕೆ ಮೊದಲ ಕಾರಣ ಎಂದರೆ ಒತ್ತಡ. ಕೆಲಸದ ಒತ್ತಡ, ಜೀವನದಲ್ಲಿ ಎದುರಾಗುವ ಸಮಸ್ಯೆಗಳ ಒತ್ತಡಗಳು ಹೀಗೇ ಒಂದೊಂದೆ ಬೆಸೆದು ಮನಸ್ಸು ಬಗ್ಗಡವಾಗುತ್ತದೆ. ಇದರಿಂದ ಬಹುವ್ಯಕ್ತಿತ್ವ ಅಸ್ವಸ್ಥತೆ ಕಾಡುತ್ತದೆ.

Multiple personality disorder: ಕಾಡುವ ಬಹುವ್ಯಕ್ತಿತ್ವ ಅಸ್ವಸ್ಥತೆಯ ಲಕ್ಷಣಗಳ ಬಗ್ಗೆ ಇಲ್ಲಿದೆ ಮಾಹಿತಿ
ಸಾಂಕೇತಿಕ ಚಿತ್ರ
Follow us
TV9 Web
| Updated By: Pavitra Bhat Jigalemane

Updated on: Mar 05, 2022 | 11:19 AM

ಮಾನಸಿಕ ಆರೋಗ್ಯ (Mental Health) ಎಲ್ಲಕ್ಕಿಂತ ಮುಖ್ಯ. ಬದುಕಿನ ಪ್ರತೀ ಹಂತದ , ಪ್ರತೀ ಕ್ಷಣದಲ್ಲಿಯೂ ಮಾನಸಿಕವಾಗಿ ಸಬಲತೆ ಹೊಂದಿದ್ದರೆ ದೈಹಿಕವಾಗಿಯೂ ಆರೋಗ್ಯವಾಗಿರಲು ಸಾಧ್ಯ. ಕೆಲಸದ ಒತ್ತಡ, ಕೀಳರಿಮೆ, ಆತಂಕ ಎಲ್ಲವೂ ಮಾನಸಿಕ ಅನರೋಗ್ಯಕ್ಕೆ ಕಾರಣವಾಗುತ್ತದೆ. ಚಂಚಲ ಮನಸ್ಥಿತಿಯಿಂದ ಸಮಸ್ಯೆಗಳೇ ಹೆಚ್ಚು. ಅದನ್ನು ಬಹುವ್ಯಕ್ತಿತ್ವ ಅಸ್ವಸ್ಥತೆ (Multiple personality disorder) ಎಂದು ಕರೆಯುತ್ತಾರೆ. ಒಂದೇ ತೆರನಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗದೇ ಇರುವುದು, ಕ್ಷಣ ಕ್ಷಣಕ್ಕೂ ನಿರ್ಧಾರಗಳನ್ನು ಬದಲಿಸುವುದು. ಒಂದೇ ವ್ಯಕ್ತಿ ಒಂದೇ ಸಮಯದಲ್ಲಿ ಎರಡು ರೀತಿಯಲ್ಲಿ ವರ್ತಿಸುವುದನ್ನು ಬಹುವ್ಯಕ್ತಿತ್ವ ಮಾನಸಿಕ ಅಸ್ವಸ್ಥತೆ ಎಂದು ಕರೆಯುತ್ತಾರೆ. ಮಾನಸಿಕ ಆರೋಗ್ಯದ ಮಹತ್ವನ್ನು ತಿಳಿಸಲು ಪ್ರತೀ ವರ್ಷ ಮಾರ್ಚ್​ 5 ರಂದು  ಬಹುವ್ಯಕ್ತಿತ್ವ ಅಸ್ವಸ್ಥತೆ  ದಿನ (Multiple personality disorder day 2022) ಎಂದು ಆಚರಿಸಲಾಗುತ್ತದೆ. ಹಾಗಾದರೆ ಈ ಬಹುವ್ಯಕ್ತಿತ್ವ ಸಮಸ್ಯೆಯುಳ್ಳವರು ಯಾವೆಲ್ಲಾ ಲಕ್ಷಣಗಳನ್ನು ಹೊಂದಿರುತ್ತಾರೆ ಎನ್ನುವುದನ್ನು ತಿಳಿದುಕೊಳ್ಳಿ. ಇಲ್ಲಿದೆ ಮಾಹಿತಿ,

ಪ್ರಪಂಚದಿಂದ ಹೊರಗುಳಿದ ಅನುಭವ: ಬಹುವ್ಯಕ್ತಿತ್ವ ಅಸ್ವಸ್ಥತೆಯನ್ನು ಹೊಂದಿರುವ ವ್ಯಕ್ತಿಗಳು ಪ್ರಪಂಚದಿಂದ ಹೊರಗುಳಿದಂತೆ ಯೋಚಿಸುತ್ತಾರೆ.  ತಮ್ಮ ಸುತ್ತಮುತ್ತಲು ಏನಾಗುತ್ತಿದೆ ಎನ್ನುವುದನ್ನು ಮರೆತು ತಮ್ಮದೇ ದೃಷ್ಟಿಕೋನದಲ್ಲಿ ಯೋಚಿಸುತ್ತಾರೆ. ಸದಾ ಕಾಲ ಯೋಚನೆ, ಸುತ್ತಮುತ್ತಲಿನ ಪ್ರಪಂಚದಿಂದ ದೂರವುಳಿಯಲು ಬಯಸುತ್ತಾರೆ. ಇದು ಅಸ್ವಸ್ಥತೆಯನ್ನು ಹೊಂದಿರುವವರಲ್ಲಿ ಕಾಣಿಸಿಕೊಳ್ಳುವ ಮೊದಲ ಲಕ್ಷಣವಾಗಿದೆ.

ಒತ್ತಡದಿಂದ ಕುಗ್ಗುವುದು: ಮಾನಸಿಕ ಅನಾರೋಗ್ಯಕ್ಕೆ ಮೊದಲ ಕಾರಣ ಎಂದರೆ ಅದು ಒತ್ತಡ. ಕೆಲಸದ ಒತ್ತಡ, ಜೀವನದಲ್ಲಿ ಎದುರಾಗುವ ಸಮಸ್ಯೆಗಳ ಒತ್ತಡಗಳು ಹೀಗೇ ಒಂದೊಂದೆ ಬೆಸೆದು ಮನಸ್ಸು ಬಗ್ಗಡವಾಗುತ್ತದೆ. ಇದರಿಂದ ಬಹುವ್ಯಕ್ತಿತ್ವ ಅಸ್ವಸ್ಥತೆ ಕಾಡುತ್ತದೆ. ಆದ್ದರಿಂದ ಅತಿ ಹೆಚ್ಚು ಒತ್ತಡದಿಂದ ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡು ವರ್ತಿಸುವುದು ಕೂಡ ಈ ರೀತಿಯ ಸಮಸ್ಯೆ ಉಂಟಾಗಲು ಕಾರಣವಾಗುತ್ತದೆ.

ಅತಿಯಾದ ಯೋಚನೆ: ಮಾನಸಿಕವಾಗಿ ಕುಗ್ಗಿದಾಗ ಬೇಡದ ಆಲೋಚನೆಗಳೇ ಹೆಚ್ಚು ಒಳನುಸುಳುತ್ತವೆ. ಮಾನಸಿಕ ಅಸ್ವಸ್ಥತೆ ಹೊಂದಿರುವ ವ್ಯಕ್ತಿಗಳು ಅದರಲ್ಲಿಯೂ  ಬಹುವ್ಯಕ್ತಿತ್ವವನ್ನು ಹೊಂದಿರುವ ಜನರು ಸದಾ ಕಾಲ ನಕಾರಾತ್ಮಕ ಯೋಚನೆಗಳನ್ನು ಹೊಂದಿರುತ್ತಾರೆ.

ಭಯ: ಬಹುವ್ಯಕ್ತಿತ್ವ ಮಾನಸಿಕ ಅಸ್ವಸ್ಥತೆ ಹೊಂದಿರುವ ವ್ಯಕ್ತಿಗಳಲ್ಲಿ ಅವ್ಯಕ್ತ ಭಯ ಕಾಡುತ್ತದೆ. ಪ್ರತೀ ಕೆಲಸದಲ್ಲಿ ಹೇಳಿಕೊಳ್ಳಲಾಗದ ಭಯ ಆವರಿಸುತ್ತದೆ.  ಅಂತಹ ವ್ಯಕ್ತಿಗಳು ಒಂಟಿಯಾಗಿರಲು ಭಯ ಪಡುತ್ತಾರೆ, ಕತ್ತಲೆ ನೀರು ಹೀಗೆ ಸಣ್ಣ ವಿಚಾರಗಳಿಗೂ ಹೆಚ್ಚು ಭಯಗೊಳ್ಳುತ್ತಾರೆ. ಇದು ಬಹುವ್ಯಕ್ತಿತ್ವ ಮಾನಸಿಕ ಅಸ್ವಸ್ಥತೆಯ ತೀವ್ರವಾದ ಹಂತವಾಗಿದೆ. ಹೀಗಾಗಿ ಆರಂಭದಲ್ಲಿಯೇ ವ್ಯದ್ಯರನ್ನು ಸಂಪರ್ಕಿಸುವುದು ಒಳಿತು ಎನ್ನುತ್ತಾರೆ ತಜ್ಞರು.

ಇದನ್ನೂ ಓದಿ:

ಆರೋಗ್ಯ ಕಾಪಾಡುವ ಬಾಳೆಹಣ್ಣಿನ ಮಹತ್ವವನ್ನು ತಿಳಿದುಕೊಳ್ಳಿ

Daily Devotional: ಅಸಹಾಯಕರ ಶಾಪ ಹೇಗೆ ಪರಿಣಾಮ ಬೀರುತ್ತೆ ಗೊತ್ತಾ?
Daily Devotional: ಅಸಹಾಯಕರ ಶಾಪ ಹೇಗೆ ಪರಿಣಾಮ ಬೀರುತ್ತೆ ಗೊತ್ತಾ?
ಈ ರಾಶಿಯವರಿಗೆ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಆರ್ಥಿಕ ಲಾಭ, ಸಂತೋಷ
ಈ ರಾಶಿಯವರಿಗೆ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಆರ್ಥಿಕ ಲಾಭ, ಸಂತೋಷ
ಇದು ಆತ್ಮದ ಹಾಡು; ‘ಶಿವಂ ಶಿವಂ ಸನಾತನಂ’ ಬಗ್ಗೆ ವಿಜಯ್ ಪ್ರಕಾಶ್ ಮಾತು
ಇದು ಆತ್ಮದ ಹಾಡು; ‘ಶಿವಂ ಶಿವಂ ಸನಾತನಂ’ ಬಗ್ಗೆ ವಿಜಯ್ ಪ್ರಕಾಶ್ ಮಾತು
ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಮಾಡಿದ್ದಾನೆ: ಮಡೆನೂರು ಮನು ಮೇಲೆ ಆರೋಪ
ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಮಾಡಿದ್ದಾನೆ: ಮಡೆನೂರು ಮನು ಮೇಲೆ ಆರೋಪ
ಕೆಣಕ್ಕಿದ ಸಿರಾಜ್​ಗೆ ಪೂರನ್ ನೀಡಿದ ಉತ್ತರ ಹೇಗಿತ್ತು ಗೊತ್ತಾ?
ಕೆಣಕ್ಕಿದ ಸಿರಾಜ್​ಗೆ ಪೂರನ್ ನೀಡಿದ ಉತ್ತರ ಹೇಗಿತ್ತು ಗೊತ್ತಾ?
ಗುಜರಾತ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಮಿಚೆಲ್ ಮಾರ್ಷ್
ಗುಜರಾತ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಮಿಚೆಲ್ ಮಾರ್ಷ್
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ