Nipah Virus: ಕೇರಳದಲ್ಲಿ ಮತ್ತೆ ನಿಫಾ ವೈರಸ್ ಆತಂಕ, ಕೊರೊನಾದಷ್ಟೇ ಅಪಾಯಕಾರಿಯೇ?

Nipah Virus: ಕೇರಳದಲ್ಲಿ ಮತ್ತೆ ನಿಫಾ ವೈರಸ್ (Nipah Virus) ಆತಂಕ ಶುರುವಾಗಿದೆ. ಕೊರೊನಾಗಿಂತಲೂ ನಿಫಾ ವೈರಸ್ ಹೆಚ್ಚು ಅಪಾಯಕಾರಿ ಎಂದು ಹೇಳಲಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿ ಪ್ರಕಾರ, ಕೋವಿಡ್‌ ಸಾವಿನ ಪ್ರಮಾಣ 1% ಕ್ಕೆ ಹೋಲಿಸಿದರೆ ನಿಫಾ ಮರಣ (Death) ಪ್ರಮಾಣವು 40 ರಿಂದ 75% ರಷ್ಟಿದೆ

Nipah Virus: ಕೇರಳದಲ್ಲಿ ಮತ್ತೆ ನಿಫಾ ವೈರಸ್ ಆತಂಕ, ಕೊರೊನಾದಷ್ಟೇ ಅಪಾಯಕಾರಿಯೇ?
ನಿಫಾ ವೈರಸ್
Follow us
| Updated By: ನಯನಾ ರಾಜೀವ್

Updated on: May 12, 2022 | 1:13 PM

ಕೇರಳದಲ್ಲಿ ಮತ್ತೆ ನಿಫಾ ವೈರಸ್ (Nipah Virus) ಆತಂಕ ಶುರುವಾಗಿದೆ. ಕೊರೊನಾಗಿಂತಲೂ ನಿಫಾ ವೈರಸ್ ಹೆಚ್ಚು ಅಪಾಯಕಾರಿ ಎಂದು ಹೇಳಲಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿ ಪ್ರಕಾರ, ಕೋವಿಡ್‌ ಸಾವಿನ ಪ್ರಮಾಣ 1% ಕ್ಕೆ ಹೋಲಿಸಿದರೆ ನಿಫಾ ಮರಣ (Death) ಪ್ರಮಾಣವು 40 ರಿಂದ 75% ರಷ್ಟಿದೆ. ಕಳೆದ ವರ್ಷ ಎರ್ನಾಕುಲಂನಲ್ಲಿ ವೈರಸ್ ಪತ್ತೆಯಾಗಿದೆ, ಆದರೆ ಯಾರೂ ಸಾವನ್ನಪ್ಪಲಿಲ್ಲ. ಕೊನೆಯದಾಗಿ ವರದಿಯಾದ ಪ್ರಕರಣವು 2021 ರಲ್ಲಿ, ಕೋಳಿಕ್ಕೋಡ್​ನ 12 ವರ್ಷದ ಬಾಲಕ ಮೃತಪಟ್ಟಿದ್ದ. ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ, ಸಂತ್ರಸ್ತರ ಮನೆಗಳ ಸುತ್ತಮುತ್ತಲಿನ ಬಾವಲಿಗಳಿಂದ ಸಂಗ್ರಹಿಸಲಾದ ಮಾದರಿಗಳಲ್ಲಿ ನಿಫಾ ವಿರುದ್ಧ ಪ್ರತಿಕಾಯಗಳನ್ನು ಪತ್ತೆಹಚ್ಚಿದೆ.

ನಿಫಾ ವೈರಸ್ ಕುರಿತು ಮಾಹಿತಿ ನಿಫಾ ವೈರಸ್ ಬಗ್ಗೆ ಕೇರಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಈ ಸಾಂಕ್ರಾಮಿಕವು ಪ್ರಾಣಿಗಳು ಮತ್ತು ಜನರ ನಡುವೆ ಹರಡಬಹುದು, ಅಂದರೆ, ಇದು ಜನೆಟಿಕ್ ಆಗಿದೆ. ಬಾವಲಿಗಳು ವೈರಸ್ ಹರಡುವಿಕೆಯನ್ನು ಹೆಚ್ಚು ಮಾಡುತ್ತದೆ. ಇದು ಎನ್ಐವಿ ಪ್ರಾಣಿಗಳಿಂದ (ಬಾವಲಿ ಅಥವಾ ಹಂದಿಗಳು) ಮಾನವರಿಗೆ ಅಥವಾ ಸೋಂಕಿತ ವ್ಯಕ್ತಿಯಿಂದ ಇನ್ನೊಂದಕ್ಕೆ ಹರಡುತ್ತದೆ. ವೈರಸ್ ಹಂದಿಗಳು ಮತ್ತು ಇತರ ಪ್ರಾಣಿಗಳಲ್ಲಿ ಗಂಭೀರ ರೋಗವನ್ನು ಉಂಟುಮಾಡಬಹುದು. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಹೆಚ್ಒ) ಹೇಳುವಂತೆ ಪ್ಯಾಟ್ರೋಪಸ್ ಬಾವಲಿಗಳು ವೈರಸ್ ಹರಡುವ ಜೀವಿಗಳು.

ನಿಫಾ ವೈರಸ್ ಹರಡುವುದು ಹೇಗೆ? ಬಾವಲಿಗಳಮೂತ್ರ ಅಥವಾ ಲಾಲಾರಸದಿಂದ ಕಲುಷಿತಗೊಂಡಿರುವ, ಖರ್ಜೂರ, ಪೇರಳೆ, ಮಾವಿನ ಹಣ್ಣು ಮತ್ತು ಲಿಚಿಯಂತಹ ಹಣ್ಣುಗಳನ್ನು ಸೇವಿಸಿದರೆ ಮಾನವರಿಗೆ ಸೋಂಕುಗಳು ಉಂಟಾಗುವ ಸಾಧ್ಯತೆಯಿದೆ. ಆದುದರಿಂದ ಈ ಸಮಯದಲ್ಲಿ ಹಣ್ಣುಗಳನ್ನು ಸೇವಿಸುವುದನ್ನು ಸಾಧ್ಯವಾದಷ್ಟು ತಪ್ಪಿಸಿ.

ನಿಫಾ ವೈರಸ್ ಲಕ್ಷಣಗಳು -ಕೆಮ್ಮು -ಜ್ವರ -ತಲೆನೋವು -ಕೋಮಾ -ಗಂಟಲು ನೋವು -ಉಸಿರಾಟದಲ್ಲಿ ತೊಂದರೆ

ಭಾರತದಲ್ಲಿ ಮೊದಲ ಬಾರಿಗೆ ನಿಫಾ ಪತ್ತೆಯಾಗಿದ್ದು ಯಾವಾಗ? ಭಾರತದಲ್ಲಿ ಮೊದಲ ನಿಫಾ ಹರಡುವಿಕೆಯನ್ನು ಮೇ 19, 2018ರಂದು ಕೋಳಿಕ್ಕೋಡ್ ಜಿಲ್ಲೆಯಲ್ಲಿ ದಾಖಲಾಗಿತ್ತು. ಅಂದಿನಿಂದ, ಜೂನ್ 1, 2018 ರವರೆಗೆ 17 ಸಾವುಗಳು ಮತ್ತು 18 ದೃಢೀಕೃತ ಪ್ರಕರಣಗಳು ದಾಖಲಾಗಿವೆ. ನಂತರ ಇದನ್ನು ನಿಯಂತ್ರಿಸಲಾಯಿತು. ಜೂನ್ 2019ರಲ್ಲಿ, 23ವರ್ಷದ ವಿದ್ಯಾರ್ಥಿಗೆ ಕೊಚ್ಚಿಯಲ್ಲಿ ಸೋಂಕು ಉಂಟಾಗಿತ್ತು.

ಇತ್ತೀಚಿನ ಪ್ರಕರಣವು ಭಾರತದಲ್ಲಿ ಐದನೇ ಬಾರಿಗೆ ಮತ್ತು ಕೇರಳದಲ್ಲಿ ಮೂರನೇ ಬಾರಿಗೆ ಪತ್ತೆಯಾಗಿದೆ.ಕೆಲವು ಸಂದರ್ಭಗಳಲ್ಲಿ, ತೀವ್ರ ಉಸಿರಾಟದ ಸಿಂಡ್ರೋಮ್ ಅಥವಾ ಎಪಿಪಿಲ್ಲೆ ನ್ಯುಮೋನಿಯಾ ಸಹ ಸಂಭಾವ್ಯ ರೋಗಲಕ್ಷಣಗಳಾಗಿವೆ. ಅಷ್ಟೇ ಅಲ್ಲ, ಎನ್ ಐವಿ ಮೆದುಳಿನ ಉರಿಯೂತಕ್ಕೆ ಕಾರಣವಾಗುತ್ತದೆ ಮತ್ತು ಮಧ್ಯಮ ಮತ್ತು ಗಂಭೀರ ಕಾಯಿಲೆಗೆ ಕಾರಣವಾಗಬಹುದು, ಸಾವು ಸಹ ಸಂಭವಿಸಬಹುದು.

ಸೋಂಕಿಗೆ ಪರಿಹಾರವಿದೆಯೇ? ಈ ಸೋಂಕಿಗೆ ಯಾವುದೇ ರೀತಿಯ ಚಿಕಿತ್ಸೆ ಇಲ್ಲ, ಜನರು ಚೇತರಿಸಿಕೊಳ್ಳಲು ಕಾಳಜಿಯೊಂದೇ ಮಾರ್ಗ. ವಿಶ್ರಾಂತಿ, ಹೈಡ್ರೇಟಿಂಗ್ ಮತ್ತು ರೋಗಲಕ್ಷಣಗಳು ಉದ್ಭವಿಸಿದಾಗ ತಕ್ಷಣದ ಚಿಕಿತ್ಸೆ ಸೇರಿದಂತೆ ಸ್ವಯಂ ಆರೈಕೆ ಮಾಡಿಕೊಳ್ಳಬೇಕಾಗುತ್ತದೆ.

ಆರೋಗ್ಯ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ