AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nipah Virus: ಕೇರಳದಲ್ಲಿ ಮತ್ತೆ ನಿಫಾ ವೈರಸ್ ಆತಂಕ, ಕೊರೊನಾದಷ್ಟೇ ಅಪಾಯಕಾರಿಯೇ?

Nipah Virus: ಕೇರಳದಲ್ಲಿ ಮತ್ತೆ ನಿಫಾ ವೈರಸ್ (Nipah Virus) ಆತಂಕ ಶುರುವಾಗಿದೆ. ಕೊರೊನಾಗಿಂತಲೂ ನಿಫಾ ವೈರಸ್ ಹೆಚ್ಚು ಅಪಾಯಕಾರಿ ಎಂದು ಹೇಳಲಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿ ಪ್ರಕಾರ, ಕೋವಿಡ್‌ ಸಾವಿನ ಪ್ರಮಾಣ 1% ಕ್ಕೆ ಹೋಲಿಸಿದರೆ ನಿಫಾ ಮರಣ (Death) ಪ್ರಮಾಣವು 40 ರಿಂದ 75% ರಷ್ಟಿದೆ

Nipah Virus: ಕೇರಳದಲ್ಲಿ ಮತ್ತೆ ನಿಫಾ ವೈರಸ್ ಆತಂಕ, ಕೊರೊನಾದಷ್ಟೇ ಅಪಾಯಕಾರಿಯೇ?
ನಿಫಾ ವೈರಸ್
Follow us
TV9 Web
| Updated By: ನಯನಾ ರಾಜೀವ್

Updated on: May 12, 2022 | 1:13 PM

ಕೇರಳದಲ್ಲಿ ಮತ್ತೆ ನಿಫಾ ವೈರಸ್ (Nipah Virus) ಆತಂಕ ಶುರುವಾಗಿದೆ. ಕೊರೊನಾಗಿಂತಲೂ ನಿಫಾ ವೈರಸ್ ಹೆಚ್ಚು ಅಪಾಯಕಾರಿ ಎಂದು ಹೇಳಲಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿ ಪ್ರಕಾರ, ಕೋವಿಡ್‌ ಸಾವಿನ ಪ್ರಮಾಣ 1% ಕ್ಕೆ ಹೋಲಿಸಿದರೆ ನಿಫಾ ಮರಣ (Death) ಪ್ರಮಾಣವು 40 ರಿಂದ 75% ರಷ್ಟಿದೆ. ಕಳೆದ ವರ್ಷ ಎರ್ನಾಕುಲಂನಲ್ಲಿ ವೈರಸ್ ಪತ್ತೆಯಾಗಿದೆ, ಆದರೆ ಯಾರೂ ಸಾವನ್ನಪ್ಪಲಿಲ್ಲ. ಕೊನೆಯದಾಗಿ ವರದಿಯಾದ ಪ್ರಕರಣವು 2021 ರಲ್ಲಿ, ಕೋಳಿಕ್ಕೋಡ್​ನ 12 ವರ್ಷದ ಬಾಲಕ ಮೃತಪಟ್ಟಿದ್ದ. ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ, ಸಂತ್ರಸ್ತರ ಮನೆಗಳ ಸುತ್ತಮುತ್ತಲಿನ ಬಾವಲಿಗಳಿಂದ ಸಂಗ್ರಹಿಸಲಾದ ಮಾದರಿಗಳಲ್ಲಿ ನಿಫಾ ವಿರುದ್ಧ ಪ್ರತಿಕಾಯಗಳನ್ನು ಪತ್ತೆಹಚ್ಚಿದೆ.

ನಿಫಾ ವೈರಸ್ ಕುರಿತು ಮಾಹಿತಿ ನಿಫಾ ವೈರಸ್ ಬಗ್ಗೆ ಕೇರಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಈ ಸಾಂಕ್ರಾಮಿಕವು ಪ್ರಾಣಿಗಳು ಮತ್ತು ಜನರ ನಡುವೆ ಹರಡಬಹುದು, ಅಂದರೆ, ಇದು ಜನೆಟಿಕ್ ಆಗಿದೆ. ಬಾವಲಿಗಳು ವೈರಸ್ ಹರಡುವಿಕೆಯನ್ನು ಹೆಚ್ಚು ಮಾಡುತ್ತದೆ. ಇದು ಎನ್ಐವಿ ಪ್ರಾಣಿಗಳಿಂದ (ಬಾವಲಿ ಅಥವಾ ಹಂದಿಗಳು) ಮಾನವರಿಗೆ ಅಥವಾ ಸೋಂಕಿತ ವ್ಯಕ್ತಿಯಿಂದ ಇನ್ನೊಂದಕ್ಕೆ ಹರಡುತ್ತದೆ. ವೈರಸ್ ಹಂದಿಗಳು ಮತ್ತು ಇತರ ಪ್ರಾಣಿಗಳಲ್ಲಿ ಗಂಭೀರ ರೋಗವನ್ನು ಉಂಟುಮಾಡಬಹುದು. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಹೆಚ್ಒ) ಹೇಳುವಂತೆ ಪ್ಯಾಟ್ರೋಪಸ್ ಬಾವಲಿಗಳು ವೈರಸ್ ಹರಡುವ ಜೀವಿಗಳು.

ನಿಫಾ ವೈರಸ್ ಹರಡುವುದು ಹೇಗೆ? ಬಾವಲಿಗಳಮೂತ್ರ ಅಥವಾ ಲಾಲಾರಸದಿಂದ ಕಲುಷಿತಗೊಂಡಿರುವ, ಖರ್ಜೂರ, ಪೇರಳೆ, ಮಾವಿನ ಹಣ್ಣು ಮತ್ತು ಲಿಚಿಯಂತಹ ಹಣ್ಣುಗಳನ್ನು ಸೇವಿಸಿದರೆ ಮಾನವರಿಗೆ ಸೋಂಕುಗಳು ಉಂಟಾಗುವ ಸಾಧ್ಯತೆಯಿದೆ. ಆದುದರಿಂದ ಈ ಸಮಯದಲ್ಲಿ ಹಣ್ಣುಗಳನ್ನು ಸೇವಿಸುವುದನ್ನು ಸಾಧ್ಯವಾದಷ್ಟು ತಪ್ಪಿಸಿ.

ನಿಫಾ ವೈರಸ್ ಲಕ್ಷಣಗಳು -ಕೆಮ್ಮು -ಜ್ವರ -ತಲೆನೋವು -ಕೋಮಾ -ಗಂಟಲು ನೋವು -ಉಸಿರಾಟದಲ್ಲಿ ತೊಂದರೆ

ಭಾರತದಲ್ಲಿ ಮೊದಲ ಬಾರಿಗೆ ನಿಫಾ ಪತ್ತೆಯಾಗಿದ್ದು ಯಾವಾಗ? ಭಾರತದಲ್ಲಿ ಮೊದಲ ನಿಫಾ ಹರಡುವಿಕೆಯನ್ನು ಮೇ 19, 2018ರಂದು ಕೋಳಿಕ್ಕೋಡ್ ಜಿಲ್ಲೆಯಲ್ಲಿ ದಾಖಲಾಗಿತ್ತು. ಅಂದಿನಿಂದ, ಜೂನ್ 1, 2018 ರವರೆಗೆ 17 ಸಾವುಗಳು ಮತ್ತು 18 ದೃಢೀಕೃತ ಪ್ರಕರಣಗಳು ದಾಖಲಾಗಿವೆ. ನಂತರ ಇದನ್ನು ನಿಯಂತ್ರಿಸಲಾಯಿತು. ಜೂನ್ 2019ರಲ್ಲಿ, 23ವರ್ಷದ ವಿದ್ಯಾರ್ಥಿಗೆ ಕೊಚ್ಚಿಯಲ್ಲಿ ಸೋಂಕು ಉಂಟಾಗಿತ್ತು.

ಇತ್ತೀಚಿನ ಪ್ರಕರಣವು ಭಾರತದಲ್ಲಿ ಐದನೇ ಬಾರಿಗೆ ಮತ್ತು ಕೇರಳದಲ್ಲಿ ಮೂರನೇ ಬಾರಿಗೆ ಪತ್ತೆಯಾಗಿದೆ.ಕೆಲವು ಸಂದರ್ಭಗಳಲ್ಲಿ, ತೀವ್ರ ಉಸಿರಾಟದ ಸಿಂಡ್ರೋಮ್ ಅಥವಾ ಎಪಿಪಿಲ್ಲೆ ನ್ಯುಮೋನಿಯಾ ಸಹ ಸಂಭಾವ್ಯ ರೋಗಲಕ್ಷಣಗಳಾಗಿವೆ. ಅಷ್ಟೇ ಅಲ್ಲ, ಎನ್ ಐವಿ ಮೆದುಳಿನ ಉರಿಯೂತಕ್ಕೆ ಕಾರಣವಾಗುತ್ತದೆ ಮತ್ತು ಮಧ್ಯಮ ಮತ್ತು ಗಂಭೀರ ಕಾಯಿಲೆಗೆ ಕಾರಣವಾಗಬಹುದು, ಸಾವು ಸಹ ಸಂಭವಿಸಬಹುದು.

ಸೋಂಕಿಗೆ ಪರಿಹಾರವಿದೆಯೇ? ಈ ಸೋಂಕಿಗೆ ಯಾವುದೇ ರೀತಿಯ ಚಿಕಿತ್ಸೆ ಇಲ್ಲ, ಜನರು ಚೇತರಿಸಿಕೊಳ್ಳಲು ಕಾಳಜಿಯೊಂದೇ ಮಾರ್ಗ. ವಿಶ್ರಾಂತಿ, ಹೈಡ್ರೇಟಿಂಗ್ ಮತ್ತು ರೋಗಲಕ್ಷಣಗಳು ಉದ್ಭವಿಸಿದಾಗ ತಕ್ಷಣದ ಚಿಕಿತ್ಸೆ ಸೇರಿದಂತೆ ಸ್ವಯಂ ಆರೈಕೆ ಮಾಡಿಕೊಳ್ಳಬೇಕಾಗುತ್ತದೆ.

ಆರೋಗ್ಯ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕೃಷ್ಣಾ ನದಿ ಪ್ರವಾಹಕ್ಕೆ ಚಿಕ್ಕೋಡಿ ಸುತ್ತಮುತ್ತ 7 ಸೇತುವೆಗಳು ಜಲಾವೃತ
ಕೃಷ್ಣಾ ನದಿ ಪ್ರವಾಹಕ್ಕೆ ಚಿಕ್ಕೋಡಿ ಸುತ್ತಮುತ್ತ 7 ಸೇತುವೆಗಳು ಜಲಾವೃತ
ಮಂಗಳೂರಿನಲ್ಲಿ ನಿಗೂಢವಾಗಿ ಸಾವನ್ನಪ್ಪುತ್ತಿವೆ ಜಾನುವಾರುಗಳು
ಮಂಗಳೂರಿನಲ್ಲಿ ನಿಗೂಢವಾಗಿ ಸಾವನ್ನಪ್ಪುತ್ತಿವೆ ಜಾನುವಾರುಗಳು
ಮಂಡ್ಯ: ಮಾನಸಿಕ ಅಸ್ವಸ್ಥ ತಾಯಿಯನ್ನು ಬೀದಿಯಲ್ಲಿ ಬಿಟ್ಟು ಹೋದ ಮಗ
ಮಂಡ್ಯ: ಮಾನಸಿಕ ಅಸ್ವಸ್ಥ ತಾಯಿಯನ್ನು ಬೀದಿಯಲ್ಲಿ ಬಿಟ್ಟು ಹೋದ ಮಗ
ಮನೆಯಲ್ಲಿ ದೇವರ ವಿಗ್ರಹಗಳನ್ನು ಪಶ್ಚಿಮಾಭಿಮುಖವಾಗಿ ಇಡಬಹುದಾ?
ಮನೆಯಲ್ಲಿ ದೇವರ ವಿಗ್ರಹಗಳನ್ನು ಪಶ್ಚಿಮಾಭಿಮುಖವಾಗಿ ಇಡಬಹುದಾ?
Daily horoscope: ರವಿ ಮಿಥುನ ರಾಶಿಯಲ್ಲಿ, ಚಂದ್ರ ವೃಷಭ ರಾಶಿಯಲ್ಲಿ ಸಂಚಾರ
Daily horoscope: ರವಿ ಮಿಥುನ ರಾಶಿಯಲ್ಲಿ, ಚಂದ್ರ ವೃಷಭ ರಾಶಿಯಲ್ಲಿ ಸಂಚಾರ
ಬೆಂಗಳೂರಿನಲ್ಲಿ ಮತ್ತೆ ಮಳೆ: ವೀಕೆಂಡ್​ನಲ್ಲಿ ಸಿಲಿಕಾನ್​ ಸಿಟಿ ಕೂಲ್​ ಕೂಲ್
ಬೆಂಗಳೂರಿನಲ್ಲಿ ಮತ್ತೆ ಮಳೆ: ವೀಕೆಂಡ್​ನಲ್ಲಿ ಸಿಲಿಕಾನ್​ ಸಿಟಿ ಕೂಲ್​ ಕೂಲ್
ತುಮಕೂರು: ಹಾಡಹಗಲೇ ಕಾರಿನ ಗಾಜು ಒಡೆದು 1 ಲಕ್ಷ ರೂ. ಕಳವು
ತುಮಕೂರು: ಹಾಡಹಗಲೇ ಕಾರಿನ ಗಾಜು ಒಡೆದು 1 ಲಕ್ಷ ರೂ. ಕಳವು
ದರ್ಶನ್ ಮನೆ ಪಕ್ಕವೇ ನಾಗಶೇಖರ್ ಮನೆ; ಹೇಗಿದೆ ಇಬ್ಬರ ನಡುವಿನ ನಂಟು?
ದರ್ಶನ್ ಮನೆ ಪಕ್ಕವೇ ನಾಗಶೇಖರ್ ಮನೆ; ಹೇಗಿದೆ ಇಬ್ಬರ ನಡುವಿನ ನಂಟು?
ಅವರೇ ದೊಡ್ಡವರು, ನಾನು ಕೆಟ್ಟವನು, ಕಾಲವೇ ನಿರ್ಧರಿಸಲಿ: ನಿರ್ದೇಶಕ ನಾಗಶೇಖರ್
ಅವರೇ ದೊಡ್ಡವರು, ನಾನು ಕೆಟ್ಟವನು, ಕಾಲವೇ ನಿರ್ಧರಿಸಲಿ: ನಿರ್ದೇಶಕ ನಾಗಶೇಖರ್
17 ಕೋಟಿ ರೂ. ಮಾಹಿತಿ ಇಲ್ಲ: ಮತ್ತೊಂದು ಬಾಂಬ್ ಸಿಡಿಸಿದ ಬಿಆರ್ ಪಾಟೀಲ್
17 ಕೋಟಿ ರೂ. ಮಾಹಿತಿ ಇಲ್ಲ: ಮತ್ತೊಂದು ಬಾಂಬ್ ಸಿಡಿಸಿದ ಬಿಆರ್ ಪಾಟೀಲ್