AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Patanjali: ಹೊಟ್ಟೆ ಕಟ್ಟುತ್ತಿದೆಯಾ? ಜೀರ್ಣ ಆಗುತ್ತಿಲ್ಲವಾ? ಈ ಚೂರ್ಣ ಒಮ್ಮೆ ಪ್ರಯತ್ನಿಸಿ

Patanjali Divya solutions for indigestion and constipation problem: ಇತ್ತೀಚಿನ ದಿನಗಳಲ್ಲಿ ಕಳಪೆ ಜೀರ್ಣಕ್ರಿಯೆ ಮತ್ತು ಮಲಬದ್ಧತೆ ಸಾಮಾನ್ಯವಾಗಿದೆ. ಅಲೋಪತಿ ಔಷಧಿಗಳು ಈ ಆರೋಗ್ಯ ಸಮಸ್ಯೆಗಳಿಗೆ ವಿವಿಧ ಪರಿಹಾರಗಳನ್ನು ನೀಡುತ್ತವೆ. ಆಯುರ್ವೇದಲ್ಲಿ ಒಳ್ಳೊಳ್ಳೆಯ ಪರಿಹಾರಗಳು ಲಭ್ಯ ಇವೆ. ಮಲಬದ್ಧತೆ ಸಮಸ್ಯೆಗೆ ಪರಿಹಾರ ನೀಡುವ ಚೂರ್ಣಗಳಿವೆ. ಪತಂಜಲಿಯ ಸಂಶೋಧನೆಯಲ್ಲೂ ಈ ಚೂರ್ಣ ಪರಿಣಾಮಕಾರಿ ಎಂಬುದು ಸಾಬೀತಾಗಿದೆ.

Patanjali: ಹೊಟ್ಟೆ ಕಟ್ಟುತ್ತಿದೆಯಾ? ಜೀರ್ಣ ಆಗುತ್ತಿಲ್ಲವಾ? ಈ ಚೂರ್ಣ ಒಮ್ಮೆ ಪ್ರಯತ್ನಿಸಿ
ಪತಂಜಲಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 06, 2025 | 4:44 PM

Share

ಜೀರ್ಣಕ್ರಿಯೆ (digestion) ಸುಗಮವಾಗಿದ್ದರೆ ದೇಹದ ಆರೋಗ್ಯ ಉತ್ತಮವಾಗಿ ಇರುತ್ತದೆ. ಆದರೆ, ಇವತ್ತಿನ ದಿನಗಳಲ್ಲಿ ಪಚನಕ್ರಿಯೆ ಮತ್ತು ಮಲಬದ್ಧತೆಯೇ ಬಹಳ ಸಾಮಾನ್ಯ ಸಮಸ್ಯೆಯಾಗಿದೆ. ಕಾನ್ಸ್​ಟಿಪಿಟೇಶನ್ ಅಥವಾ ಮಲಬದ್ಧತೆ (Constipation) ದೇಹದಲ್ಲಿ ಅನೇಕ ರೋಗಗಳಿಗೆ ಕಾರಣವಾಗುತ್ತದೆ. ಮಲಬದ್ಧತೆ ದೇಹದ ಅನೇಕ ಅಂಗಗಳಿಗೆ ಹಾನಿ ಮಾಡುತ್ತದೆ. ಇದು ದೀರ್ಘಕಾಲದವರೆಗೆ ಮುಂದುವರಿದರೆ ಕ್ಯಾನ್ಸರ್ ಅಪಾಯವೂ ಹೆಚ್ಚುತ್ತದೆ. ಮಲಬದ್ಧತೆಯನ್ನು ಸರಿಪಡಿಸಲು ಜನರು ಅನೇಕ ರೀತಿಯ ಔಷಧಿಗಳು ಮತ್ತು ಚೂರ್ಣಗಳನ್ನು ತೆಗೆದುಕೊಳ್ಳುತ್ತಾರೆ. ಪತಂಜಲಿಯ ದಿವ್ಯ ಚೂರ್ಣವು (Patanjali Divya Churna) ಮಲಬದ್ಧತೆ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ. ಪತಂಜಲಿ ಸಂಸ್ಥೆ ಈ ವಿಷಯವನ್ನು ತನ್ನ ಸಂಶೋಧನೆಯಿಂದ ಖಾತ್ರಿಪಡಿಸಿದೆ. ಸಂಶೋಧನೆಯ ಪ್ರಕಾರ, ಈ ಚೂರ್ಣವು ಮಲಬದ್ಧತೆ, ಗ್ಯಾಸ್, ಹೊಟ್ಟೆ ನೋವು ಮತ್ತು ಹಸಿವಿನ ಕೊರತೆಯಿಂದ ಪರಿಹಾರವನ್ನು ನೀಡುತ್ತದೆ.

ದಿವ್ಯ ಚೂರ್ಣವನ್ನು ನೈಸರ್ಗಿಕ ಗಿಡಮೂಲಿಕೆಗಳಿಂದ ತಯಾರಿಸಲಾಗುತ್ತದೆ. ಇದರಲ್ಲಿ ಸೆನ್ನಾ, ಇಂಗು, ಒಣ ಶುಂಠಿ, ಗುಲಾಬಿ ದಳಗಳು ಮತ್ತು ಕಲ್ಲುಪ್ಪು ಮುಂತಾದ ಔಷಧೀಯ ಗಿಡಮೂಲಿಕೆಗಳಿವೆ. ಈ ಗಿಡಮೂಲಿಕೆಗಳು ಒಟ್ಟಾಗಿ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತವೆ. ಪತಂಜಲಿಯ ಪ್ರಕಾರ, ಸೆನ್ನಾ ಮತ್ತು ಕಲಾದಾನದಂತಹ ಗಿಡಮೂಲಿಕೆಗಳು ಕರುಳನ್ನು ಸಕ್ರಿಯಗೊಳಿಸುತ್ತವೆ ಮತ್ತು ಹೊಟ್ಟೆಯನ್ನು ಶುದ್ಧೀಕರಿಸುತ್ತವೆ. ಈ ಪುಡಿ ಗ್ಯಾಸ್ ಮತ್ತು ಹೊಟ್ಟೆ ನೋವಿಗೆ ಸಹ ಪ್ರಯೋಜನಕಾರಿಯಾಗಿದೆ. ಇಂಗು ಮತ್ತು ಒಣ ಶುಂಠಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಕರುಳನ್ನು ಶುದ್ಧಗೊಳಿಸುತ್ತದೆ.

ಇದನ್ನೂ ಓದಿ: ಸರ್ವೈಕಲ್ ಸ್ಪಾಂಡಿಲೈಟಿಸ್, ಗರ್ಭಕಂಠದ ನೋವು ನಿವಾರಿಸಲು ಉಪಯುಕ್ತ ಯೋಗಾಸನಗಳು: ಬಾಬಾ ರಾಮದೇವ್ ಸಲಹೆ

ದಿವ್ಯ ಚೂರ್ಣವನ್ನು ಹೇಗೆ ಸೇವಿಸಬೇಕು?

ಪತಂಜಲಿಯ ಸಲಹೆ ಪ್ರಕಾರ, ಮಲಗುವ ಮುನ್ನ ಒಂದು ಟೀಚಮಚದಷ್ಟು ಈ ಚೂರ್ಣವನ್ನು ಉಗುರು ಬೆಚ್ಚಗಿನ ನೀರಿನಿಂದ ತೆಗೆದುಕೊಳ್ಳಬೇಕು. ವೈದ್ಯರ ಸಲಹೆಯ ಪ್ರಕಾರ ಡೋಸೇಜ್ ಅನ್ನು ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು. ಆದರೆ ವೈದ್ಯರನ್ನು ಸಂಪರ್ಕಿಸದೆ ಎಂದಿಗೂ ಚೂರ್ಣ ತೆಗೆದುಕೊಳ್ಳಬೇಡಿ. ಹಾಗೆ ಮಾಡುವುದು ಹಾನಿಕಾರಕವಾಗಬಹುದು.

ಈ ವಿಷಯಗಳು ಮನಸ್ಸಿನಲ್ಲಿರಲಿ

  • ಬಹಳ ದೀರ್ಘ ಸಮಯ ಇದನ್ನು ನಿರಂತರವಾಗಿ ಸೇವಿಸಬೇಡಿ. ಈ ಔಷಧದ ಮೇಲೆ ನಿಮ್ಮ ದೇಹವು ಅವಂಬಿತವಾಗಬಹುದು.
  • ಗರ್ಭಿಣಿಯರು, ಚಿಕ್ಕ ಮಕ್ಕಳು ಅಥವಾ ಹೃದಯ ರೋಗಿಗಳು ವೈದ್ಯರ ಸಲಹೆಯಿಲ್ಲದೆ ತೆಗೆದುಕೊಳ್ಳಬಾರದು.
  • ಔಷಧಿ ತೆಗೆದುಕೊಂಡಾಗ ಹೊಟ್ಟೆ ನೋವು, ದೌರ್ಬಲ್ಯ ಅಥವಾ ಅತಿಸಾರ ಕಂಡುಬಂದರೆ, ತಕ್ಷಣ ಅದರ ಸೇವನೆ ನಿಲ್ಲಿಸಿ.
  • ಕಾರಣವಿಲ್ಲದೆ ಅದನ್ನು ಸೇವಿಸಬೇಡಿ.

ಇನ್ನಷ್ಟು ಆರೋಗ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!