AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Red Rock Candy: ಕಲ್ಲು ಸಕ್ಕರೆ ಸವಿದರೆ ಇದೆ ಹತ್ತಾರು ಆರೋಗ್ಯಕಾರಿ ಪ್ರಯೋಜನಗಳು! ಆದರೂ ಇರಲಿ ಎಚ್ಚರಾ

ಕಲ್ಲು ಸಕ್ಕರೆ ಎಲ್ಲರಿಗೂ ಗೊತ್ತು. ಕಲ್ಲು ಸಕ್ಕರೆ ಅಂದರೆ ಬರೀ ಸಿಹಿಯಲ್ಲ ಜೊತೆಗೆ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಸಂಸ್ಕೃತ ಭಾಷೆಯಲ್ಲಿ ಶೀತ, ಕಂದ ಶರ್ಕರ ಎಂದೂ ಹಿಂದಿ ಹಾಗೂ ಉರ್ದು ಭಾಷೆಯಲ್ಲಿ ಖಡಿ ಶಕ್ಕರ್ ಎಂದೂ ಆಂಗ್ಲ ಭಾಷೆಯಲ್ಲಿ Rock sugar, Red Rock Candy ಎಂದು ಕರೆಯುವುದುಂಟು.

Red Rock Candy: ಕಲ್ಲು ಸಕ್ಕರೆ ಸವಿದರೆ ಇದೆ ಹತ್ತಾರು ಆರೋಗ್ಯಕಾರಿ ಪ್ರಯೋಜನಗಳು! ಆದರೂ ಇರಲಿ ಎಚ್ಚರಾ
ಕಲ್ಲು ಸಕ್ಕರೆಯ ಸವಿದರೆ ಇದೆ ಹತ್ತಾರು ಆರೋಗ್ಯಕಾರಿ ಪ್ರಯೋಜನಗಳು! ಆದರೂ ಇರಲಿ ಎಚ್ಚರಾ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​| Edited By: |

Updated on:Sep 10, 2026 | 10:28 AM

Share

ಕಲ್ಲು ಸಕ್ಕರೆ ಎಲ್ಲರಿಗೂ ಗೊತ್ತು. ಕಲ್ಲು ಸಕ್ಕರೆ ಅಂದರೆ ಬರೀ ಸಿಹಿಯಲ್ಲ ಜೊತೆಗೆ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಸಂಸ್ಕೃತ ಭಾಷೆಯಲ್ಲಿ ಶೀತ, ಕಂದ ಶರ್ಕರ ಎಂದೂ ಹಿಂದಿ ಹಾಗೂ ಉರ್ದು ಭಾಷೆಯಲ್ಲಿ ಖಡಿ ಶಕ್ಕರ್ ಎಂದೂ ಆಂಗ್ಲ ಭಾಷೆಯಲ್ಲಿ Rock sugar, Red Rock Candy ಎಂದು ಕರೆಯುವುದುಂಟು. ಈ ಕಲ್ಲು ಸಕ್ಕರೆಯನ್ನು ಕಬ್ಬಿನ ಹಾಲನ್ನು ಘನೀಕೃತಗೊಳಿಸಿ ಯಾವುದೇ ರಾಸಾಯನಿಕ ವಸ್ತು ಸೇರಿಸದೆ ಹರಳುಗಳ ರೂಪದಲ್ಲಿ ತಯಾರಿಸಲಾಗುತ್ತದೆ! ಇನ್ನು, ಕೆಂಪು ಕಲ್ಲು ಸಕ್ಕರೆ ತಾಳೆ ಮರದ ಹಾಲಿನಿಂದ ತಯಾರಿಸಲಾಗುತ್ತದೆ. ಇದರ ಬೆಲೆ ಜಾಸ್ತಿ , ಸಿಗುವುದು ಅಪರೂಪ. ಕಲ್ಲುಸಕ್ಕರೆ ತಂಪು ಗುಣ ಹೊಂದಿದ್ದು ಶರೀರಕ್ಕೆ ಪುಷ್ಟಿದಾಯಕವಾಗಿದೆ. ಕಲ್ಲು ಸಕ್ಕರೆ, ಒಣ ಕೊಬ್ಬರಿ, ಒಣ ಖರ್ಜೂರ, ಬದಾಮಿ, ಗೋಡಂಬಿ ಚೂರು ಮಾಡಿ ಒಣ ದ್ರಾಕ್ಷಿ ಸೇರಿಸಿ ಬೆಳೆಯುವ ಮಕ್ಕಳಿಗೆ ತಿನ್ನಿಸಬೇಕು. ಕಲ್ಲು ಸಕ್ಕರೆಯ ಹತ್ತಾರು ಪ್ರಯೋಜನಗಳು ಹೀಗಿವೆ:

  1. ಅಕ್ರೋಟ (Walnut) ಹಾಗೂ ಕಲ್ಲು ಸಕ್ಕರೆಯನ್ನು ಒಟ್ಟಾಗಿ ಸೇವಿಸಿದರೆ ಮೆದುಳಿಗೆ ಶಕ್ತಿದಾಯಕ. * ಸೋಂಪು ಕಾಳು ಮತ್ತು ಕಲ್ಲು ಸಕ್ಕರೆಯ ಸೇವನೆಯು ಕಣ್ಣುಗಳ ದೃಷ್ಟಿ ಸಾಮರ್ಥ್ಯ ಹೆಚ್ಚಿಸುತ್ತದೆ. * ಕಾಳುಮೆಣಸಿನ ಪುಡಿ ಮತ್ತು ಕಲ್ಲು ಸಕ್ಕರೆಯ ಸೇವನೆಯು ಕೆಮ್ಮು ನಿವಾರಿಸುತ್ತದೆ. ಗಂಟಲಿಗೂ ಹಿತಕರ.
  2. ಮೂಗಿನಿಂದ ರಕ್ತ ಸೋರುತ್ತಿದ್ದರೆ ಕಲ್ಲು ಸಕ್ಕರೆ ಪುಡಿಯನ್ನು ಮೂಗಿನ ಹತ್ತಿರ ಹಿಡಿದು ವಾಸನೆಯನ್ನು ಆಘ್ರಾಣಿಸಬೇಕು. * ಬಾಯಿ ಹುಣ್ಣಿಗೆ ಕಲ್ಲು ಸಕ್ಕರೆ ಮತ್ತು ಜೀರಿಗೆ ರಾಮಬಾಣ. ಏಲಕ್ಕಿ ಪುಡಿಯನ್ನೂ ಸೇರಿಸಿಕೊಂಡು ತಿನ್ನಬಹುದು. * ಧ್ವನಿ ಒಡೆದಾಗ ಒಣ ಶುಂಠಿ, ಕಲ್ಲು ಸಕ್ಕರೆ ಪುಡಿ ಮಾಡಿ ಸೇವನೆ ಮಾಡಬಹುದು.
  3. ಬಿಳಿ ಈರುಳ್ಳಿ ರಸದಲ್ಲಿ ಕಲ್ಲು ಸಕ್ಕರೆ ಸೇರಿಸಿ ಕುಡಿದರೆ ಕಿಡ್ನಿ ಸ್ಟೋನ್ ಕರಗಿಸಲು ಸಹಕಾರಿಯಾಗಿದೆ. * ಗಂಟಲು ನೋವಿಗೆ ಗಸಗಸೆ ಮತ್ತು ಕಲ್ಲು ಸಕ್ಕರೆ ಸೇವನೆ ಒಳ್ಳೆಯದು. * ಮೂಲವ್ಯಾಧಿಗೆ ನಾಗಕೇಸರ ಕಲ್ಲು ಸಕ್ಕರೆ ಸೇವನೆ ಮಾಡಬಹುದು.
  4. ಭೇದಿಗೆ ಧನಿಯ ಪೌಡರ್ ಬೆರೆಸಿ ಸೇವಿಸಬೇಕು. * ಹೊಟ್ಟೆ ನೋವಿಗೆ 10ರಿಂದ15 ಬೇವಿನ ಎಲೆಗಳ ರಸದಲ್ಲಿ ಕಲ್ಲು ಸಕ್ಕರೆ ಸೇರಿಸಿ ಕುಡಿದರೆ ಉತ್ತಮ. * ಕಲ್ಲು ಸಕ್ಕರೆ ಬೆಳೆಯುವ ಮಕ್ಕಳಿಗೆ ತಿನ್ನಿಸಬೇಕು. ಇದರಿಂದ ದೇಹಕ್ಕೆ ಬಲ ಬರುತ್ತದೆ. ಮೆದುಳಿಗೂ ಒಳ್ಳೆಯದು.
  5. ನಿಂಬು ಶರಬತ್ತು ತಯಾರಿಸುವಾಗ ಕಲ್ಲು ಸಕ್ಕರೆ ಬಳಸುವುದರಿಂದ ವಿಶೇಷ ರುಚಿ ನೀಡುತ್ತದೆ. ಹಾಗೂ ಗುಲಾಬ್ ಜಾಮೂನು ತಯಾರಿಸುವಾಗ ಸಕ್ಕರೆ ಬದಲು ಕಲ್ಲು ಸಕ್ಕರೆಯ ಪಾಕ ಉತ್ತಮ.
  6. 15 ಗ್ರಾಂ ಕಲ್ಲು ಸಕ್ಕರೆ 60 ಕ್ಯಾಲೊರಿ ಹೊಂದಿದೆ ಎಂದು ಹೇಳಲಾಗುತ್ತದೆ. ಆದ್ಯವಾಗಿ ಗಮನಿಸಿ ಮಧುಮೇಹಿಗಳಿಗೆ ಇದು ಸೂಕ್ತವಲ್ಲ. ದೇಹಕ್ಕೆ ತಂಪು ನೀಡುವುದಲ್ಲದೆ ಬಲವನ್ನೂ ನೀಡುವ ಈ ಕಲ್ಲು ಸಕ್ಕರೆ ಯನ್ನು ಹಿತಮಿತವಾಗಿ ಬಳಸುವುದು ಒಳ್ಳೆಯದು ಅಲ್ಲವಾ!? (ಸಂಗ್ರಹ: ಎಸ್​ಹೆಚ್​ ನದಾಫ್​)

Published On - 6:06 am, Tue, 15 March 22

Follow Us
ತಮ್ಮದೇ ನಟನೆ ಸಿನಿಮಾ ನೋಡಿ ಕಣ್ಣೀರು ಹಾಕಿದ ನಟಿ ಮೋನಿಷಾ: ವಿಡಿಯೋ
ತಮ್ಮದೇ ನಟನೆ ಸಿನಿಮಾ ನೋಡಿ ಕಣ್ಣೀರು ಹಾಕಿದ ನಟಿ ಮೋನಿಷಾ: ವಿಡಿಯೋ
ದಕ್ಷಿಣ ಕನ್ನಡ ಜಿಲ್ಲೆ ಹೆಸರು ಬದಲಾವಣೆಗೆ ಮುಂದಾದ ಸರ್ಕಾರ
ದಕ್ಷಿಣ ಕನ್ನಡ ಜಿಲ್ಲೆ ಹೆಸರು ಬದಲಾವಣೆಗೆ ಮುಂದಾದ ಸರ್ಕಾರ
ತುಳು 2ನೇ ಭಾಷೆಯನ್ನಾಗಿ ಘೋಷಣೆ: ಕುಣಿದು ಕುಪ್ಪಳಿಸಿದ ಶಾಸಕ ಅಶೋಕ್ ರೈ
ತುಳು 2ನೇ ಭಾಷೆಯನ್ನಾಗಿ ಘೋಷಣೆ: ಕುಣಿದು ಕುಪ್ಪಳಿಸಿದ ಶಾಸಕ ಅಶೋಕ್ ರೈ
ಆ ಕಾಲದಲ್ಲೇ ಹಿಂದಿಯವರು ಅನಂತ್ ನಾಗ್ ಬಗ್ಗೆ ಮಾತಾಡುತ್ತಿದ್ದರು: ಉಪೇಂದ್ರ
ಆ ಕಾಲದಲ್ಲೇ ಹಿಂದಿಯವರು ಅನಂತ್ ನಾಗ್ ಬಗ್ಗೆ ಮಾತಾಡುತ್ತಿದ್ದರು: ಉಪೇಂದ್ರ
ಟಿ. ನರಸಿಪುರದಲ್ಲಿ ಗಣೇಶ ಮೂರ್ತಿ ಶೋಭಾಯಾತ್ರೆ ನೇರಪ್ರಸಾರ
ಟಿ. ನರಸಿಪುರದಲ್ಲಿ ಗಣೇಶ ಮೂರ್ತಿ ಶೋಭಾಯಾತ್ರೆ ನೇರಪ್ರಸಾರ
ತುಳು ರಾಜ್ಯದ 2ನೇ ಭಾಷೆ:ಮಂಗಳೂರಿನಲ್ಲಿ ಮುಗಿಲು ಮುಟ್ಟಿದ ಸಂಭ್ರಮ
ತುಳು ರಾಜ್ಯದ 2ನೇ ಭಾಷೆ:ಮಂಗಳೂರಿನಲ್ಲಿ ಮುಗಿಲು ಮುಟ್ಟಿದ ಸಂಭ್ರಮ
ಉಪೇಂದ್ರ ಹುಟ್ಟುಹಬ್ಬದ ಸಂಭ್ರಮ; ಹೊಸ ಸಿನಿಮಾ ಪೋಸ್ಟರ್ ಬಿಡುಗಡೆ
ಉಪೇಂದ್ರ ಹುಟ್ಟುಹಬ್ಬದ ಸಂಭ್ರಮ; ಹೊಸ ಸಿನಿಮಾ ಪೋಸ್ಟರ್ ಬಿಡುಗಡೆ
ಸಚಿವ ಸಂಪುಟ ಸಭೆ ಅಂತ್ಯ: ಸಿಎಂ ಡಿಕೆ ಶಿವಕುಮಾರ್ ಸುದ್ದಿಗೋಷ್ಠಿ ನೇರಪ್ರಸಾರ
ಸಚಿವ ಸಂಪುಟ ಸಭೆ ಅಂತ್ಯ: ಸಿಎಂ ಡಿಕೆ ಶಿವಕುಮಾರ್ ಸುದ್ದಿಗೋಷ್ಠಿ ನೇರಪ್ರಸಾರ
ಮೋಸ ಮಾಡಿ ರೆಡ್ ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಗಗನ್ ಚಿನ್ನಪ್ಪ
ಮೋಸ ಮಾಡಿ ರೆಡ್ ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಗಗನ್ ಚಿನ್ನಪ್ಪ
ಲೂಟಿ ಹಣದಲ್ಲಿ ಗೆಳತಿಗ ಲಕ್ಷಾಂತರ ರೂ. ಚಿನ್ನಾಭರಣ ಕೊಡಿಸಿದ್ದ ಜ್ಞಾನೇಂದ್ರ!
ಲೂಟಿ ಹಣದಲ್ಲಿ ಗೆಳತಿಗ ಲಕ್ಷಾಂತರ ರೂ. ಚಿನ್ನಾಭರಣ ಕೊಡಿಸಿದ್ದ ಜ್ಞಾನೇಂದ್ರ!