AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Running: ಹೆಚ್ಚು ಓಡುವುದರಿಂದ ನಿಮ್ಮನ್ನು ಈ ಸಮಸ್ಯೆಗಳು ಕಾಡಬಹುದು

ಬೆಳಗ್ಗೆ ಜಾಗಿಂಗ್ ಮಾಡುವುದು ಓಡುವ ಅಭ್ಯಾಸ ಸಾಮಾನ್ಯವಾಗಿ ಬಹಳಷ್ಟು ಮಂದಿಗಿದೆ. ಆದರೆ ಅತಿಯಾಗಿ ಓಡುವುದರಿಂದ ಹಲವು ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಹೆಚ್ಚು ಓಡುವುದು ನಿಮ್ಮ ಸ್ನಾಯುಗಳ ಮೇಲೆ ಪರಿಣಾಮ ಬೀರಬಹುದು. ಅವು ದುರ್ಬಲಗೊಂಡು ಗಾಯಗೊಳ್ಳುತ್ತವೆ.

Running: ಹೆಚ್ಚು ಓಡುವುದರಿಂದ ನಿಮ್ಮನ್ನು ಈ ಸಮಸ್ಯೆಗಳು ಕಾಡಬಹುದು
Running
Follow us
TV9 Web
| Updated By: ನಯನಾ ರಾಜೀವ್

Updated on:Jun 01, 2022 | 4:08 PM

ಬೆಳಗ್ಗೆ ಜಾಗಿಂಗ್ ಮಾಡುವುದು ಓಡುವ ಅಭ್ಯಾಸ ಸಾಮಾನ್ಯವಾಗಿ ಬಹಳಷ್ಟು ಮಂದಿಗಿದೆ. ಆದರೆ ಅತಿಯಾಗಿ ಓಡುವುದರಿಂದ ಹಲವು ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಹೆಚ್ಚು ಓಡುವುದು ನಿಮ್ಮ ಸ್ನಾಯುಗಳ ಮೇಲೆ ಪರಿಣಾಮ ಬೀರಬಹುದು. ಅವು ದುರ್ಬಲಗೊಂಡು ಗಾಯಗೊಳ್ಳುತ್ತವೆ.

ಇದಲ್ಲದೇ ದಿನನಿತ್ಯ ಹೆಚ್ಚು ಓಡುವವರಲ್ಲಿ ದೈಹಿಕ ಬಳಲಿಕೆಯೂ ಹೆಚ್ಚಾಗಿರುತ್ತದೆ ಮತ್ತು ಇಂತಹ ಪರಿಸ್ಥಿತಿಯಲ್ಲಿ ಅವರು ಪ್ಲಾಂಟರ್ ಫ್ಯಾಸಿಟಿಸ್, ಸ್ನಾಯುಗಳ ಉರಿಯೂತಕ್ಕೆ ಗುರಿಯಾಗಬಹುದು. ಜೊತೆಗೆ, ಇದು ಹಿಮ್ಮಡಿಯಲ್ಲಿ ಅತಿಯಾದ ನೋವು ಉಂಟಾಗಬಹುದು.

ದೇಹ ಬೆಚ್ಚಗಿರಿಸಲು ಓಡಬೇಡಿ: ವಾರ್ಮ್ ಅಪ್ ಎಂದರೆ ವ್ಯಾಯಾಮ ಅಥವಾ ಯಾವುದೇ ಚಟುವಟಿಕೆಗಾಗಿ ದೇಹದ ಸ್ನಾಯುಗಳನ್ನು ಸಿದ್ಧಪಡಿಸುವುದು. ಇದರಿಂದ ದೇಹವು ಬೆಚ್ಚಗಾಗುತ್ತದೆ ಮತ್ತು ಚಟುವಟಿಕೆಯ ಸಮಯದಲ್ಲಿ ಕೈ ಕಾಲು ನೋವು ಬರುವುದಿಲ್ಲ.

ಜಿಮ್‌ನಲ್ಲಿ ಕೆಲವರು ಬೆಚ್ಚಗಾಗಲು ಓಡಲು ಪ್ರಾರಂಭಿಸುವುದನ್ನು ನೀವು ಹೆಚ್ಚಾಗಿ ನೋಡಿರಬಹದು. ಅದು ತಪ್ಪು. ಓಡುವುದರಿಂದ ದೇಹ ಬೆಚ್ಚಗಾಗುವುದಿಲ್ಲ. ಟ್ರೆಡ್ ಮಿಲ್, ನೆಲದ ಅಥವಾ ಟ್ರ್ಯಾಕ್ನಲ್ಲಿ ಓಡುವ ಮೊದಲು, ಬೆಚ್ಚಗಾಗುವುದು ಅವಶ್ಯಕ.

ಓಡುವ ಮೊದಲು ದೇಹ ಬೇಗನೇ ಬೆಚ್ಚಗಾದರೆ ಜನರು ಆಯಾಸಗೊಳ್ಳುತ್ತಾರೆ. ಅಂಗಾಂಗಳಲ್ಲಿ ನೋವು ಕಾಣಿಸಿಕೊಳ್ಳಬಹುದು. 10-15 ನಿಮಿಷ ಜಾಗಿಂಗ್ ಮಾಡಿ ಇಲ್ಲವೆ ನಡೆಯಿರಿ. ಇದು ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ.

ಓಡುವ ಮೊದಲು ಕಾರ್ಬೋಹೈಡ್ರೇಟ್‌ ಪದಾರ್ಥ ಸೇವಿಸಿ: ರನ್ನಿಂಗ್ ಮಾಡುವಾಗ ಸಾಕಷ್ಟು ಶಕ್ತಿಯ ಅಗತ್ಯವಿರುತ್ತದೆ. ಸಾಮಾನ್ಯವಾಗಿ ಜನರು ಬೆಳಗ್ಗೆ ಓಡಲು ಹೋದಾಗ ಅವರು ಖಾಲಿ ಹೊಟ್ಟೆಯಲ್ಲಿ ಹೋಗುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ದೇಹದಲ್ಲಿ ಶಕ್ತಿಯಿರುವುದಿಲ್ಲ. ಹೀಗಾಗಿ ಬೇಗನೆ ದಣಿವಾಗುತ್ತದೆ.ರಾತ್ರಿ ಸೇವಿಸಿದ ಆಹಾರವು ರಾತ್ರಿಯಿಡೀ ಶಕ್ತಿಯನ್ನು ನೀಡುತ್ತದೆ. ಬೆಳಗ್ಗೆ ಶಕ್ತಿಯನ್ನು ಪಡೆಯಲು ಓಡುವ 30 ನಿಮಿಷಗಳ ಮೊದಲು ಕಾರ್ಬೋಹೈಡ್ರೇಟ್ ಆಹಾರವನ್ನು ಸೇವಿಸಿ., ಇದರಿಂದ ಶಕ್ತಿ ದೊರೆಯುತ್ತದೆ. ಆದರೆ ಅತಿಯಾಗಿ ತಿನ್ನಬೇಡಿ.

ರೋಗನಿರೋಧಕ ಶಕ್ತಿ ಕಮ್ಮಿಯಾಗುತ್ತದೆ ಓಡುವುದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆದರೆ ನೀವು ಪ್ರತಿದಿನ ಅತಿಯಾಗಿ ಓಡಲು ಪ್ರಾರಂಭಿಸಿದರೆ, ಅದರಿಂದ ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆ ಆಯಾಸಕ್ಕೆ ಒಳಗಾಗಿ, ದುರ್ಬಲಗೊಳ್ಳಲು ಕಾರಣವಾಗಬಹುದು

ನಿಮ್ಮ ಉಸಿರಾಟವನ್ನು ನಿಯಂತ್ರಿಸಿ: ಓಡುವಾಗ ಹೃದಯ ಬಡಿತ ಹೆಚ್ಚಾದಾಗ ಉಸಿರಾಟದ ಪ್ರಮಾಣವೂ ಹೆಚ್ಚುತ್ತದೆ. ಉಸಿರಾಟ ವೇಗವಾದಾಗ ದೇಹವು ಹೆಚ್ಚಿನ ಪ್ರಮಾಣದ ಕಾರ್ಬನ್ ಡೈಆಕ್ಸೈಡ್ ಅನ್ನು ಹೊರಸೂಸುತ್ತದೆ. ಇದರಿಂದ ಆಮ್ಲಜನಕವನ್ನು ಸರಿಯಾಗಿ ತೆಗೆದುಕೊಳ್ಳಲು ಕಷ್ಟವಾಗುತ್ತದೆ.

ಮಧ್ಯಂತರ ತರಬೇತಿ: ನೀವು ಸುಸ್ತಾಗದೆ ಹೆಚ್ಚು ಸಮಯ ಓಡಲು ಬಯಸಿದರೆ, ನಿಮ್ಮ ತರಬೇತಿಗೆ ಮಧ್ಯಂತರ ತರಬೇತಿಯನ್ನು ಸೇರಿಸುವುದು ಉತ್ತಮ ಪ್ರಯೋಜನವನ್ನು ನೀಡುತ್ತದೆ. ದೇಹವನ್ನು ವಿವಿಧ ರೀತಿಯಲ್ಲಿ ಹುರಿಗೊಳಿಸುವುದು ವೇಗ, ಸಹಿಷ್ಣುತೆ ಮತ್ತು ತ್ರಾಣವನ್ನು ಹೆಚ್ಚಿಸುತ್ತದೆ.

ಮೂಡ್ ಸ್ವಿಂಗ್ ಹೆಚ್ಚಾಗುತ್ತದೆ: ನೀವು ಹೆಚ್ಚು ಓಡಿದಾಗ ಎಂಡಾರ್ಫಿನ್‌ ಪ್ರಭಾವಕ್ಕೆ ಒಳಗಾಗಿ ಆಯಾಸ ಮತ್ತು ನಿದ್ರೆಯ ಮೇಲೆ ಪರಿಣಾಮ ಉಂಟಾಗುತ್ತದೆ. ಈ ಹಾರ್ಮೋನುಗಳ ಅಸಮತೋಲನ ಉಂಟಾಗಿ ಅದು ಮೂಡ್ ಸ್ವಿಂಗ್ಗೆ ಕಾರಣವಾಗುತ್ತದೆ. ವ್ಯಾಯಾಮವು ನಿಮ್ಮ ಮೆದುಳಿನಲ್ಲಿ ಧನಾತ್ಮಕ ಪ್ರತಿಕ್ರಿಯೆಯನ್ನು ಪ್ರಚೋದಿಸುವ ಎಂಡಾರ್ಫಿನ್‌ ಹಾರ್ಮೊನಿನ ಉತ್ಪತ್ತಿಗೆ ಕಾರಣವಾಗುತ್ತದೆ.

ಈ ಮೇಲಿನ ಲೇಖನ ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನಾಧರಿಸಿರುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:08 pm, Wed, 1 June 22

ರಚಿತಾ ರಾಮ್ ಮೇಲೆ ವಾಣಿಜ್ಯ ಮಂಡಳಿ ಅಧ್ಯಕ್ಷರು ಗರಂ; ಕಾರಣ ಏನು?
ರಚಿತಾ ರಾಮ್ ಮೇಲೆ ವಾಣಿಜ್ಯ ಮಂಡಳಿ ಅಧ್ಯಕ್ಷರು ಗರಂ; ಕಾರಣ ಏನು?
ಇಸ್ರೇಲ್‌ನಲ್ಲಿ ಇರಾನಿನ ಕ್ಷಿಪಣಿ ದಾಳಿಯ ಭೀಕರ ದೃಶ್ಯ ಇಲ್ಲಿದೆ
ಇಸ್ರೇಲ್‌ನಲ್ಲಿ ಇರಾನಿನ ಕ್ಷಿಪಣಿ ದಾಳಿಯ ಭೀಕರ ದೃಶ್ಯ ಇಲ್ಲಿದೆ
ಗವಾಸ್ಕರ್ ಎಷ್ಟೇ ಕೇಳಿಕೊಂಡರು ಜಗ್ಗದ ರಿಷಭ್ ಪಂತ್
ಗವಾಸ್ಕರ್ ಎಷ್ಟೇ ಕೇಳಿಕೊಂಡರು ಜಗ್ಗದ ರಿಷಭ್ ಪಂತ್
ಕೃಷ್ಣ ಭೈರೇಗೌಡ, ಹೆಚ್ ಕೆ ಪಾಟೀಲರನ್ನೂ ತರಾಟೆಗೆ ತೆಗೆದುಕೊಂಡ ಕುಮಾರಸ್ವಾಮಿ
ಕೃಷ್ಣ ಭೈರೇಗೌಡ, ಹೆಚ್ ಕೆ ಪಾಟೀಲರನ್ನೂ ತರಾಟೆಗೆ ತೆಗೆದುಕೊಂಡ ಕುಮಾರಸ್ವಾಮಿ
ರಾಜಕೀಯ ಪಿತೂರಿ, ಉಳಿದ ಸಂಗತಿಗಳ ಬಗ್ಗೆ ಈಗ್ಲೇ ಮಾತಾಡಲ್ಲ: ಡಿಕೆ ಸುರೇಶ್
ರಾಜಕೀಯ ಪಿತೂರಿ, ಉಳಿದ ಸಂಗತಿಗಳ ಬಗ್ಗೆ ಈಗ್ಲೇ ಮಾತಾಡಲ್ಲ: ಡಿಕೆ ಸುರೇಶ್
22 ಲಕ್ಷ ರೂ. ವಂಚನೆ: ನಿರ್ದೇಶಕ ನಂದ ಕಿಶೋರ್ ವಿರುದ್ಧ ದೂರು ನೀಡಿದ ಶಬರೀಶ್
22 ಲಕ್ಷ ರೂ. ವಂಚನೆ: ನಿರ್ದೇಶಕ ನಂದ ಕಿಶೋರ್ ವಿರುದ್ಧ ದೂರು ನೀಡಿದ ಶಬರೀಶ್
ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ ಮತ್ತೋರ್ವ ಕೈ ಶಾಸಕ
ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ ಮತ್ತೋರ್ವ ಕೈ ಶಾಸಕ
ವ್ಯಕ್ತಿ ಆರೋಪಿಸುತ್ತಿರೋದು ನಿಜವೇ ಆಗಿದ್ದರೆ ಅಧಿಕಾರಿಯಿಂದ ಅಪರಾಧ ನಡೆದಿದೆ
ವ್ಯಕ್ತಿ ಆರೋಪಿಸುತ್ತಿರೋದು ನಿಜವೇ ಆಗಿದ್ದರೆ ಅಧಿಕಾರಿಯಿಂದ ಅಪರಾಧ ನಡೆದಿದೆ
ಜಮೀರ್ ಜೊತೆ ಸಿಎಂ ಸಹ ನೈತಿಕ ಹೊಣೆಹೊತ್ತು ರಾಜೀನಾಮೆ ಸಲ್ಲಿಸಲಿ: ಅಶೋಕ
ಜಮೀರ್ ಜೊತೆ ಸಿಎಂ ಸಹ ನೈತಿಕ ಹೊಣೆಹೊತ್ತು ರಾಜೀನಾಮೆ ಸಲ್ಲಿಸಲಿ: ಅಶೋಕ
ಮೈ ಕೈ ಮುಟ್ಟಿ ಎಳೆದಾಡಿದ ಗಾಂಜಾ ಗ್ಯಾಂಗ್​, ಭಯಾನಕ ಸಂಗತಿ ಬಿಚ್ಚಿಟ್ಟ ಯುವತಿ
ಮೈ ಕೈ ಮುಟ್ಟಿ ಎಳೆದಾಡಿದ ಗಾಂಜಾ ಗ್ಯಾಂಗ್​, ಭಯಾನಕ ಸಂಗತಿ ಬಿಚ್ಚಿಟ್ಟ ಯುವತಿ