Tobacco Side Effects: ತಂಬಾಕಿನಿಂದ ಬಾಯಿ ಮಾತ್ರವಲ್ಲ ಈ ಅಂಗಗಳಿಗೂ ಕ್ಯಾನ್ಸರ್ ಅಪಾಯವಿದೆ! ತಡೆಯುವುದು ಹೇಗೆ?

ತಂಬಾಕನ್ನು ಎರಡು ರೀತಿಯಲ್ಲಿ ಸೇವಿಸಲಾಗುತ್ತದೆ. ಒಂದು ಧೂಮಪಾನ ಮಾಡುವ ಮೂಲಕ. ಮತ್ತೊಂದು ಬಾಯಿಯಲ್ಲಿ ಜಗಿದು ತಿನ್ನುವುದು. ಹಾಗಾದರೆ ತಂಬಾಕಿನಿಂದಾಗಿ ನಮ್ಮ ದೇಹದ ಯಾವ ಅಂಗಗಳಿಗೆ ಕ್ಯಾನ್ಸರ್ ಅಪಾಯವಿದೆ. ಅದನ್ನು ತಡೆಯಲು ಯಾವ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ತಿಳಿಯಿರಿ.

Tobacco Side Effects: ತಂಬಾಕಿನಿಂದ ಬಾಯಿ ಮಾತ್ರವಲ್ಲ ಈ ಅಂಗಗಳಿಗೂ ಕ್ಯಾನ್ಸರ್ ಅಪಾಯವಿದೆ! ತಡೆಯುವುದು ಹೇಗೆ?
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: May 31, 2024 | 1:00 PM

ತಂಬಾಕು ಸೇವನೆ ವಿಷಕ್ಕೆ ಸಮಾನ ಆದರೂ ಜನರು ಅದರ ವ್ಯಸನದಿಂದಾಗಿ ಜೀವಕ್ಕೆ ಅಪಾಯ ತಂದುಕೊಳ್ಳುತ್ತಾರೆ. ಧೂಮಪಾನ ಅಥವಾ ತಂಬಾಕಿಗೆ ಸಂಬಂಧಿಸಿದ ಇತರ ಮಾದಕವಸ್ತುಗಳ ಸೇವನೆಯು ನಮ್ಮ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಬೀಡಿ, ಸಿಗರೇಟ್ ಅಥವಾ ಗುಟ್ಕಾ ಸೇವನೆಯು ನಮ್ಮ ದೇಹದ ಅನೇಕ ಭಾಗಗಳಿಗೆ ಹಾನಿಯನ್ನುಂಟು ಮಾಡುತ್ತದೆ. ಅದರಲ್ಲಿಯೂ ಭಾರತ ಅತಿ ಹೆಚ್ಚು ತಂಬಾಕು ಸೇವನೆ ಮಾಡುವ ರಾಷ್ಟ್ರವಾಗಿದ್ದು, ಸುಮಾರು 26 ಕೋಟಿ ತಂಬಾಕು ಬಳಕೆ ಮಾಡಲಾಗುತ್ತದೆ. ಇವರಲ್ಲಿ ಸಿಗರೇಟ್, ಹುಕ್ಕಾ, ತಾಂಬೂಲ, ಗುಟ್ಕಾ ಮತ್ತು ಖೈನಿ.. ಹೀಗೆ ಎಲ್ಲ ರೀತಿಯ ತಂಬಾಕು ಬಳಕೆದಾರರಿದ್ದಾರೆ. ಜೊತೆಗೆ ತಂಬಾಕನ್ನು ಎರಡು ರೀತಿಯಲ್ಲಿ ಸೇವಿಸಲಾಗುತ್ತದೆ. ಒಂದು ಧೂಮಪಾನ ಮಾಡುವ ಮೂಲಕ. ಮತ್ತೊಂದು ಬಾಯಿಯಲ್ಲಿ ಜಗಿದು ತಿನ್ನುವುದು. ಹಾಗಾದರೆ ತಂಬಾಕಿನಿಂದಾಗಿ ನಮ್ಮ ದೇಹದ ಯಾವ ಅಂಗಗಳಿಗೆ ಕ್ಯಾನ್ಸರ್ ಅಪಾಯವಿದೆ. ಅದನ್ನು ತಡೆಯಲು ಯಾವ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ತಿಳಿಯಿರಿ.

ತಂಬಾಕಿನಿಂದ ಬರುವ ರೋಗಗಳು;

ಡಾ. ಚೌಧರಿ ಅವರು “ತಂಬಾಕು ಮತ್ತು ಅದರ ವಿವಿಧ ಉತ್ಪನ್ನಗಳ ಬಳಕೆಯು ನಮ್ಮ ದೇಹದಲ್ಲಿ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಹೇಳುತ್ತಾರೆ. ಈ ಕಾರಣದಿಂದಾಗಿ, ಬಾಯಿ ಮಾತ್ರವಲ್ಲದೆ ಗಂಟಲಿನ ಮೇಲ್ಭಾಗ, ಮೂಗಿನ ನಾಳದ, ಸೈನಸ್, ತುಟಿ, ಧ್ವನಿಪೆಟ್ಟಿಗೆ, ಬಾಯಿ, ಗಂಟಲು, ಅನ್ನನಾಳ ಮತ್ತು ಕರುಳು ಈ ಎಲ್ಲಾ ಭಾಗಗಳಲ್ಲಿ ಕ್ಯಾನ್ಸರ್ ಕಾಣಿಸಿಕೊಳ್ಳಬಹುದು. ಇದರಿಂದ ಮೇದೊಜೀರಕಾಂಗದಲ್ಲಿ, ಗರ್ಭಕಂಠದಲ್ಲಿ, ಅಂಡಾಶಯ, ಕೊಲೆರೆಕ್ಟಮ್‌ನಲ್ಲಿ, ಮೂತ್ರಪಿಂಡಗಳಲ್ಲಿ, ಹೊಟ್ಟೆ ಭಾಗದಲ್ಲಿ ಹಾಗೂ ರಕ್ತಕಣಗಳಲ್ಲಿಯೂ (ಲ್ಯುಕೆಮಿಯಾ) ಕ್ಯಾನ್ಸರ್ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಅವರು ಹೇಳುತ್ತಾರೆ. ಇನ್ನು ಜಗಿದು ತಿನ್ನುವ ಅಥವಾ ಧೂಮಪಾನವಲ್ಲದ ತಂಬಾಕು ಸೇವನೆಯಿಂದ ಅನ್ನನಾಳ, ಬಾಯಿ, ಗಂಟಲು ಮತ್ತು ಮೇದೊಜೀರಕಾಂಗದಲ್ಲಿ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ. ಸಂಶೋಧನೆಗಳ ಪ್ರಕಾರ ಧೂಮಪಾನಕ್ಕಿಂತಲೂ ಜಗಿದು ತಿನ್ನುವ ತಂಬಾಕು ಅತ್ಯಂತ ಅಪಾಯಕಾರಿಯಾಗಿದೆ ಎಂದು ತಜ್ಞರು ಹೇಳುತ್ತಾರೆ. ಅಲ್ಲದೆ ಕಳೆದ ವರ್ಷಗಳಲ್ಲಿ ಹೃದಯಾಘಾತ ಪ್ರಕರಣಗಳ ಹೆಚ್ಚಳಕ್ಕೆ ಧೂಮಪಾನವೂ ಒಂದು ಪ್ರಮುಖ ಕಾರಣವಾಗಿದೆ ಎಂದು ಹೇಳಿರುವ ಅನೇಕ ಸಂಶೋಧನೆಗಳು ಬೆಳಕಿಗೆ ಬಂದಿವೆ. ಈ ಕಾರಣದಿಂದ ತಂಬಾಕು ಸೇವನೆಯಿಂದ ಉಂಟಾಗುವ ಹಾನಿಯ ಬಗ್ಗೆ ಜನರಿಗೆ ಅರಿವು ಮೂಡಿಸಲು ಪ್ರತಿವರ್ಷ ಮೇ 31 ರಂದು ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ; ಅತಿಯಾದ ತಲೆ‌ ನೋವಿದ್ರೆ ಹೀಗೆ ಮಾಡಿ ತಕ್ಷಣ ಕಡಿಮೆಯಾಗುತ್ತೆ, ತಜ್ಞರ ಸಲಹೆ

ತಂಬಾಕನ್ನು ತ್ಯಜಿಸುವುದು ಹೇಗೆ?

ಡಾ. ಅಂಶುಮಾನ್ ಕುಮಾರ್ ಅವರು ಹೇಳುವ ಪ್ರಕಾರ, “ಪ್ರತಿದಿನ ನೀವು ಮಾಡುವ ಕೆಲಸದಲ್ಲಿ ನಿಮ್ಮನ್ನು ಸರಿಯಾಗಿ ತೊಡಗಿಸಿಕೊಳ್ಳಿ, ಜೊತೆಗೆ ಇದರಿಂದ ಮುಕ್ತಿ ಪಡೆಯಲು ತಜ್ಞರು ಶಿಫಾರಸು ಮಾಡಿದ ನಿಕೋಟಿನ್ ಇನ್ಹೇಲರ್ ಅನ್ನು ಬಳಸಿ” ಎಂದು ಅವರು ಸಲಹೆ ನೀಡಿದ್ದಾರೆ. ಜೊತೆಗೆ ತಂಬಾಕು ಸೇವನೆ ಮಾಡುವವರಿಂದ ದೂರವಿರಿ. ಇದೆಲ್ಲದರ ಹೊರತಾಗಿ ಧೂಮಪಾನ ಅಥವಾ ತಂಬಾಕಿನಿಂದ ಮುಕ್ತಿ ಪಡೆಯಲು ವ್ಯಾಯಾಮವು ಉತ್ತಮ ಆಯ್ಕೆಯಾಗಿದೆ. ಇದು ನಿಮ್ಮ ಆರೋಗ್ಯವನ್ನು ಸುಧಾರಿಸುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ತಾಜಾ ಸುದ್ದಿ
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು