AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಯಿಲೆಗಳೇ ಬರಬಾರದು ಅಂದ್ರೆ ಸದ್ಗುರು ತಿಳಿಸಿರುವ ಈ 4 ಬಗೆಯ ಆಹಾರಗಳಿಂದ ದೂರವಿರಿ

ಇತ್ತೀಚಿನ ದಿನಗಳಲ್ಲಿ ಆರೋಗ್ಯವಾಗಿರುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಯಾವ ರೀತಿಯ ಆಹಾರಗಳನ್ನು ಸೇವಿಸಬೇಕು? ಯಾವುದನ್ನು ಸೇವನೆ ಮಾಡಬಾರದು ಎಂಬುದೇ ಗೊಂದಲ ಹುಟ್ಟಿಸುತ್ತದೆ. ಹಾಗಾಗಿಯೇ ಆರೋಗ್ಯ ಕಾಪಾಡಿಕೊಳ್ಳಲು ಸದ್ಗುರುಗಳು ಈ ನಾಲ್ಕು ರೀತಿಯ ಆಹಾರ ಸೇವನೆ ಮಾಡುವುದನ್ನು ತಪ್ಪಿಸುವುದರ ಬಗ್ಗೆ ವಿವರಿಸಿದ್ದು, ಆರೋಗ್ಯ ಕಾಪಾಡಿಕೊಳ್ಳಲು ಯಾವ ರೀತಿಯ ಆಹಾರ ಸೇವನೆ ಮಾಡಬೇಕು? ಯಾಕೆ ಈ 4 ಬಗೆಯ ಆಹಾರ ಒಳ್ಳೆಯದಲ್ಲ? ಇದನ್ನು ಸೇವನೆ ಮಾಡಬಾರದು ಎನ್ನುವುದಕ್ಕೆ ಕಾರಣವೇನು? ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಕಾಯಿಲೆಗಳೇ ಬರಬಾರದು ಅಂದ್ರೆ ಸದ್ಗುರು ತಿಳಿಸಿರುವ ಈ 4 ಬಗೆಯ ಆಹಾರಗಳಿಂದ ದೂರವಿರಿ
Foods To Avoid For Healthy Life
ಪ್ರೀತಿ ಭಟ್​, ಗುಣವಂತೆ
|

Updated on: Sep 05, 2025 | 5:29 PM

Share

ಆರೋಗ್ಯವಾಗಿರಲು ಏನು ಮಾಡಬೇಕು? ಈ ಪ್ರಶ್ನೆಗೆ ಹಲವು ಉತ್ತರಗಳಿವೆ. ಕೆಲವರು ವ್ಯಾಯಾಮ ಮಾಡುವುದಕ್ಕೆ ಹೇಳುತ್ತಾರೆ. ಇನ್ನು ಕೆಲವರು ಪ್ರತಿದಿನ ಒಂದಲ್ಲ ಒಂದು ರೀತಿಯ ದೈಹಿಕ ಚಟುವಟಿಕೆಯನ್ನು ಮಾಡಿ ಎನ್ನುತ್ತಾರೆ. ಕೆಲವರು ಪ್ರೋಟೀನ್ ಭರಿತ ಆಹಾರವನ್ನು ಸೇವಿಸಲು ಶಿಫಾರಸು ಮಾಡುತ್ತಾರೆ. ಆದರೆ, ಸದ್ಗುರುಗಳು (Sadhguru) ಒಂದು ಪ್ರಮುಖ ವಿಷಯವನ್ನು ಉಲ್ಲೇಖಿಸಿದ್ದು ಆರೋಗ್ಯವಾಗಿರಲು ನಿಖರವಾಗಿ ನಾಲ್ಕು ರೀತಿಯ ಆಹಾರ ಪದಾರ್ಥಗಳಿಂದ ದೂರವಿದ್ದರೆ ಸಾಕು ಎಂದಿದ್ದಾರೆ. ಏಕೆಂದರೆ ಅವರ ಪ್ರಕಾರ, ಹೊಟ್ಟೆ ತುಂಬುವ ಎಲ್ಲಾ ಆಹಾರಗಳು ನಿಮಗೆ ಶಕ್ತಿ ನೀಡುವುದಿಲ್ಲ ಅಂತೆಯೇ, ಕೆಲವು ಆಹಾರಗಳು ನಿಮ್ಮ ಆರೋಗ್ಯವನ್ನು ಕೂಡ ಬೇಗನೆ ಕೆಡಿಸಬಹುದು ಎಂದು ಹೇಳಿದ್ದಾರೆ. ಹಾಗಾದರೆ ಆರೋಗ್ಯ ಕಾಪಾಡಿಕೊಳ್ಳಲು ಯಾವ ರೀತಿಯ ಆಹಾರ (Food) ಸೇವನೆ ಮಾಡಬೇಕು? ಯಾಕೆ ಈ 4 ಬಗೆಯ ಆಹಾರ ಒಳ್ಳೆಯದಲ್ಲ? ಇದನ್ನು ಸೇವನೆ ಮಾಡಬಾರದು ಎನ್ನುವುದಕ್ಕೆ ಕಾರಣವೇನು? ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಆಹಾರದ ಬಗ್ಗೆ ಸದ್ಗುರು ನೀಡಿರುವ ಸಲಹೆಗಳೇನು?

ಸಕ್ಕರೆ

ಕೆಲವರು ಸೇವನೆ ಮಾಡುವ ಆಹಾರದಲ್ಲಿ ಸಕ್ಕರೆ ವಿಶೇಷವಾಗಿ ಅಧಿಕವಾಗಿರುತ್ತದೆ. ಇದು ಅವರ ಹೊಟ್ಟೆ ತುಂಬುತ್ತದೆ ಆದರೆ ಅಗತ್ಯವಾಗಿ ಬೇಕಾದಂತಹ ಶಕ್ತಿ ಸಿಗುವುದಿಲ್ಲ. ಆರೋಗ್ಯಕ್ಕೂ ಹಾನಿ ಮಾಡಬಹುದು. ಜೊತೆಗೆ ಅತಿಯಾಗಿ ತಿನ್ನುವುದು ಅನಗತ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ, ಸದ್ಗುರುಗಳು ಸಕ್ಕರೆ ಸೇವನೆ ಮಾಡುವುದನ್ನು ಅಗತ್ಯವಾಗಿ ತಪ್ಪಿಸಿ ಎಂದು ಸಲಹೆ ನೀಡುತ್ತಾರೆ. ಏಕೆಂದರೆ ಇವುಗಳಿಂದ ಯಾವುದೇ ರೀತಿಯ ಕ್ಯಾಲೊರಿಗಳು ಸಿಗುವುದಿಲ್ಲ. ಇದನ್ನು ಸಂಸ್ಕರಿಸಿದಾಗ, ಅದರಲ್ಲಿರುವ ಎಲ್ಲಾ ಅಗತ್ಯ ಜೀವಸತ್ವಗಳು ಮತ್ತು ಖನಿಜಗಳು ಕರಗಿ ಹೋಗುತ್ತವೆ. ಇದರರ್ಥ ನೀವು ಈ ಸಕ್ಕರೆಯನ್ನು ಸೇವಿಸಿದರೂ ಅದು ಪ್ರಯೋಜನಕಾರಿಯಲ್ಲ. ಇದು ಕೇವಲ ನಿಮ್ಮ ನಾಲಿಗೆಗೆ ರುಚಿ ನೀಡುವುದಕ್ಕೆ ಮಾತ್ರ ಉಪಯುಕ್ತವಾಗಿರುತ್ತದೆ. ಹಾಗಾಗಿ ಆರೋಗ್ಯವಾಗಿರಲು ಉತ್ತಮ ಆಹಾರ ಸೇವನೆ ಮಾಡುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು.

ಹಾಲು

ಸಾಮಾನ್ಯವಾಗಿ ಹಾಲನ್ನು ಕುಡಿಯದಿರುವ ಮನುಷ್ಯನೇ ಇಲ್ಲ. ಹಾಲು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದರೆ ಕೆಲವರು ಆಶ್ಚರ್ಯಪಡಬಹುದು. ಆದರೆ ಸದ್ಗುರುಗಳು ಹಾಲನ್ನು ಏಕೆ ಕುಡಿಯಬಾರದು ಎಂಬುದನ್ನು ವಿವರಿಸಿದ್ದಾರೆ. ವಾಸ್ತವದಲ್ಲಿ ಸದ್ಗುರು ಹೇಳುವ ಪ್ರಕಾರ, ಮೂರು ವರ್ಷದೊಳಗಿನ ಮಕ್ಕಳು ಮಾತ್ರ ಹಾಲನ್ನು ಜೀರ್ಣಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಇದರರ್ಥ ಅವರಿಗೆ ಅದಕ್ಕೆ ಅಗತ್ಯವಿರುವ ಜೀರ್ಣಕಾರಿ ಕಿಣ್ವಗಳಿವೆ. ಈ ಕಿಣ್ವಗಳಿಂದಾಗಿ ಅವರು ಕುಡಿಯುವಷ್ಟು ಹಾಲನ್ನು ಸುಲಭವಾಗಿ ಜೀರ್ಣಿಸಿಕೊಳ್ಳಬಹುದು. ಆದರೆ, ದೊಡ್ಡವರ ದೇಹದಲ್ಲಿ ಈ ಕಿಣ್ವಗಳು ಕಡಿಮೆ ಪ್ರಮಾಣದಲ್ಲಿ ಇರುತ್ತವೆ. ಅದಕ್ಕಾಗಿಯೇ ಒಂದು ಲೋಟ ಹಾಲು ಕುಡಿಯುವುದರಿಂದ ಹೊಟ್ಟೆ ತುಂಬಿದಂತೆ ಭಾಸವಾಗುತ್ತದೆ. ಹೆಚ್ಚುವರಿ, ಹಸಿವು ಉಂಟಾಗುವುದಿಲ್ಲ. ಆದರೆ ಹಾಲು ಸರಿಯಾಗಿ ಜೀರ್ಣವಾಗದಿದ್ದರೆ, ಅದು ಅಜೀರ್ಣಕ್ಕೆ ಕಾರಣವಾಗಬಹುದು. ಮಾತ್ರವಲ್ಲ ಮಲಬದ್ಧತೆಗೆ ಕಾರಣವಾಗಬಹುದು. ಹಾಗಾಗಿ ಅವುಗಳಲ್ಲಿ ಕ್ಯಾಲ್ಸಿಯಂ ಇದ್ದರೂ, ಹಾಲಿನ ಬದಲು ಇತರ ಆಹಾರಗಳ ಮೂಲಕ ಈ ಪೋಷಕಾಂಶವನ್ನು ಪಡೆಯುವುದು ಉತ್ತಮ ಎಂದು ಸದ್ಗುರುಗಳು ಸಲಹೆ ನೀಡುತ್ತಾರೆ.

ಇದನ್ನೂ ಓದಿ: ಕಾಫಿ ಕುಡಿಯುತ್ತಾ ಈ ಆಹಾರಗಳ ಸೇವನೆ ಮಾಡುತ್ತೀರಾ? ಹಾಗಿದ್ರೆ ಇವತ್ತಿನಿಂದಲೇ ಅವುಗಳಿಂದ ದೂರವಿರಿ

ಸಂಸ್ಕರಿಸಿದ ಧಾನ್ಯಗಳು

ಧಾನ್ಯಗಳು ಫೈಬರ್ ಜೊತೆಗೆ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತವೆ. ಅಷ್ಟೇ ಅಲ್ಲ, ಅವು ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಅನ್ನು ಸಹ ಹೇರಳವಾಗಿ ಹೊಂದಿರುತ್ತವೆ. ಆದರೆ ಧಾನ್ಯಗಳನ್ನು ಸಂಸ್ಕರಿಸಿದಾಗ, ಅವುಗಳಲ್ಲಿರುವ ಎಲ್ಲಾ ಅಗತ್ಯ ಪೋಷಕಾಂಶಗಳನ್ನು ಹೋಗುತ್ತದೆ. ಇದರರ್ಥ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳು ಸಿಗುವುದಿಲ್ಲ. ಪಿಷ್ಟ ಪದಾರ್ಥ ಮಾತ್ರ ಉಳಿಯುತ್ತದೆ. ಧಾನ್ಯಗಳನ್ನು ಸಂಸ್ಕರಿಸಿದಾಗಲೆಲ್ಲಾ ಅವುಗಳ ಪ್ರಮಾಣ ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಇವುಗಳನ್ನು ಸೇವಿಸುವುದರಿಂದಲೂ ಯಾವುದೇ ರೀತಿಯ ಪ್ರಯೋಜನವಿರುವುದಿಲ್ಲ ನಾರಿನಂಶ ಕಡಿಮೆಯಾಗುವುದರಿಂದ ಜೀರ್ಣಕ್ರಿಯೆಯ ಸಮಸ್ಯೆಗಳಿಗೂ ಕಾರಣವಾಗುತ್ತದೆ. ಅದಕ್ಕಾಗಿಯೇ, ಸಾಧ್ಯವಾದಷ್ಟು, ಸಂಸ್ಕರಿಸಿದ ಧಾನ್ಯಗಳನ್ನು ಸೇವನೆ ಮಾಡುವುದನ್ನು ತಪ್ಪಿಸಬೇಕು ಎಂದು ಸದ್ಗುರು ಹೇಳುತ್ತಾರೆ.

ಟೀ, ಕಾಫಿ

ಚಹಾ ಮತ್ತು ಕಾಫಿಯನ್ನು. ಅತಿಯಾಗಿ ಸೇವಿಸುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಅವುಗಳಲ್ಲಿರುವ ಕೆಫೀನ್ ಮನಸ್ಥಿತಿಯ ತಾತ್ಕಾಲಿಕ ಬದಲಾವಣೆಗೆ ಕಾರಣವಾಗಬಹುದು. ಮಾತ್ರವಲ್ಲ ಶಕ್ತಿಯ ಮಟ್ಟ ಕಡಿಮೆಯಾಗಬಹುದು. ಪ್ರತಿನಿತ್ಯ ಅತಿಯಾಗಿ ಸೇವನೆ ಮಾಡುವುದರಿಂದ ತ್ರಾಣವೂ ಕಡಿಮೆಯಾಗಬಹುದು. ಇವುಗಳ ಜೊತೆಗೆ ತಂಪು ಪಾನೀಯಗಳು ಮತ್ತು ಸಂಸ್ಕರಿಸಿದ ಆಹಾರಗಳನ್ನು ತಪ್ಪಿಸುವುದು ಕೂಡ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ