
ಸಾಮಾನ್ಯವಾಗಿ ನವೆಂಬರ್ ತಿಂಗಳಿನಿಂದ ಫೆಬ್ರವರಿ ಅಂತ್ಯದವರೆಗೂ ಚಳಿಗಾಲವಿರುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅಲ್ನಿನೊ ಪರಿಣಾಮದಿಂದ ಕಾಲಗಳಲ್ಲಿ ಅನಿಯಮಿತತೆ ಕಂಡುಬರುತ್ತಿದೆ. ಇದಕ್ಕೆ ಮಾನವ ಚಟುವಟಿಕೆಗಳು ಪ್ರಮುಖ ಕಾರಣ. ಈ ವರ್ಷ ಮಳೆಗಾಲ ವಿಸ್ತರಿಸಿದಂತೆ ವಾತಾವರಣ ಬದಲಾವಣೆಗಳು ಮುಂದುವರಿಯುತ್ತಿವೆ. ಪರಿಸರ ನಾಶವನ್ನು ತಡೆಯಲು ಸಾಮೂಹಿಕ ಪ್ರಯತ್ನ ಈಗಲೇ ಪ್ರಾರಂಭವಾಗಬೇಕು.
ಪ್ರಸ್ತುತ ಚಳಿ ಸ್ವಲ್ಪ ಮಟ್ಟಿಗೆ ಬಿದ್ದಿದ್ದರೂ, ಮುಂದಿನ ದಿನಗಳಲ್ಲಿ ಉತ್ತಮ ಚಳಿಗಾಲ ಬರುವ ನಿರೀಕ್ಷೆಯಿದೆ. ಈ ಋತುವಿನಲ್ಲಿ ದೇಹ ಮತ್ತು ಮನಸ್ಸಿನ ಆರೋಗ್ಯ ಕಾಪಾಡಿಕೊಳ್ಳಲು ಕೆಲವು ಪ್ರಮುಖ ಸಲಹೆಗಳು ಇಲ್ಲಿವೆ. ಸರ್ಕಾರದ ಮಾಹಿತಿ ಅನುಮಾನದಂತೆ ಈ ವರ್ಷ ಸ್ವಲ್ಪ ಚಳಿಯ ಪ್ರಮಾಣ ಹೆಚ್ಚಾಗಬಹುದು ಎಂಬ ಅನುಮಾನ ಈಗಾಗಲೇ ಇದ್ದೇ ಇದೆ.
ಹಾಲು, ತುಪ್ಪಮೆಂತ್ಯೆ, ಶುಂಠಿ, ಮೆಣಸಿನಕಾಯಿ,ಗೋಧಿ, ಜೋಳ, ನವಣೆ,ಬಿಸಿ ಸೂಪುಗಳು, ಲಘು ಆಹಾರ,ಸೂರ್ಯನ ಬೆಳಕಿನಲ್ಲಿ ಒಣಗಿಸಿದ ಹಣ್ಣುಗಳು (ಡ್ರೈ ಫ್ರೂಟ್ಸ್). ಚಳಿಗಾಲದಲ್ಲಿ ನೀರು ಕುಡಿಯುವ ಇಚ್ಛೆ ಕಡಿಮೆಯಾದರೂ, ರೂಢಿಯಷ್ಟು ನೀರು ಕುಡಿಯುವುದು ಅತ್ಯಗತ್ಯ. ವಾತಾವರಣದಿಂದ ದೇಹದ ತೇವಾಂಶ ಕಡಿಮೆಯಾಗುತ್ತದೆ.ತೀಕ್ಷ್ಣ, ಉಷ್ಣ ಆಹಾರ ಸೇವನೆ ಹೆಚ್ಚಾಗುತ್ತದೆ.ನೀರು ಕಡಿಮೆಯಾದರೆ ರಕ್ತಸಂಚಾರ ಮತ್ತು ಪೋಷಕಾಂಶ ಶೋಷಣೆ ಕುಸಿಯುತ್ತದೆ
ಹಿರಿಯರು ಮತ್ತು ಮಕ್ಕಳು ಚಳಿ ತಾಳುವ ಶಕ್ತಿ ಕಡಿಮೆ ಇರುತ್ತದೆ.ಬೆಚ್ಚಗಿನ ಹಾಸಿಗೆ, ಬಿಸಿ ನೀರಿನ ಚೀಲ ಉಪಯೋಗಿಸಬೇಕು
ರಾತ್ರಿ ತಡವಾಗಿ ಹೊರ ಹೋಗುವುದನ್ನು ತಪ್ಪಿಸಬೇಕು. ಸೂರ್ಯನ ಬೆಳಕಿನಲ್ಲಿ ದಿನಕ್ಕೆ ಕನಿಷ್ಠ 15 ನಿಮಿಷ ಕುಳಿತುಕೊಳ್ಳುವುದು.
ಚಳಿಗಾಲದಲ್ಲಿ ಮಲಗುವ ಆಕರ್ಷಣೆ ಹೆಚ್ಚಾದರೂ, ವ್ಯಾಯಾಮ ತಪ್ಪಬಾರದು. ಯೋಗಾಸನ, ಪ್ರಾಣಾಯಾಮ, ಸೂರ್ಯನಮಸ್ಕಾರ.ಬೆಳಿಗ್ಗೆ ಎದ್ದು ಬಿಸಿ ನೀರಿನ ಕುಟುಕು ಕುಡಿಯಿರಿ. ಧ್ಯಾನದಿಂದ ಮನಸ್ಸಿಗೆ ಶಾಂತಿ. ರಕ್ತಸಂಚಾರ ಸುಧಾರಣೆ, ದೇಹದ ಉಷ್ಣತೆ ಮತ್ತು ರೋಗನಿರೋಧಕ ಶಕ್ತಿ ವೃದ್ಧಿ.
ಇದನ್ನೂ ಓದಿ: ಚಿಕ್ಕ ಮಕ್ಕಳ ಕೆಮ್ಮು ಬೇಗ ಕಡಿಮೆ ಆಗಬೇಕು ಅಂದ್ರೆ ಆಯುರ್ವೇದದಲ್ಲಿ ತಿಳಿಸಿರುವ ಈ ಮದ್ದನ್ನೊಮ್ಮೆ ಟ್ರೈ ಮಾಡಿ
ಈ ಮಾಹಿತಿಯು ಸಾಮಾನ್ಯ ಮಾರ್ಗದರ್ಶನಕ್ಕಾಗಿ ಮಾತ್ರ. ಯಾವುದೇ ನಿರ್ದಿಷ್ಟ ಆರೋಗ್ಯ ಸಮಸ್ಯೆಗಳಿಗೆ ವೈದ್ಯರನ್ನು ಸಂಪರ್ಕಿಸಿ.
ಲೇಖನ: ಡಾ. ರವಿಕಿರಣ ಪಟವರ್ಧನ, ಆಯುರ್ವೇದ ವೈದ್ಯ, ಶಿರಸಿ
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ