AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ಮಕ್ಕಳಲ್ಲಿ ಹೆಚ್ಚುತ್ತಿದೆ ‘ಐಬಿಡಿ’ ಜಠರಗಾತ್ರ ಸಮಸ್ಯೆ: ಜಂಕ್ ಫುಡ್‌, ಜೀವನಶೈಲಿಯೇ ಪ್ರಮುಖ ಕಾರಣ

ಬೆಂಗಳೂರಿನ ಮಕ್ಕಳಲ್ಲಿ ಜಠರಗಾತ್ರ ಉರಿಯೂತ (IBD) ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿವೆ. ಅನಾರೋಗ್ಯಕರ ಆಹಾರ ಪದ್ಧತಿ, ದೈಹಿಕ ಚಟುವಟಿಕೆ ಕೊರತೆ ಮತ್ತು ನಗರೀಕರಣ ಪ್ರಮುಖ ಕಾರಣಗಳು. ಸುದೀರ್ಘ ಹೊಟ್ಟೆ ನೋವು, ಅತಿಸಾರ, ತೂಕ ನಷ್ಟದಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಲು ಸಲಹೆ ನೀಡಲಾಗಿದೆ. ಮಕ್ಕಳ ಆರೋಗ್ಯಕ್ಕೆ ಉತ್ತಮ ಆಹಾರ ಮತ್ತು ಸಕ್ರಿಯ ಜೀವನಶೈಲಿ ಅತ್ಯಗತ್ಯ.

ಬೆಂಗಳೂರಿನ ಮಕ್ಕಳಲ್ಲಿ ಹೆಚ್ಚುತ್ತಿದೆ 'ಐಬಿಡಿ' ಜಠರಗಾತ್ರ ಸಮಸ್ಯೆ: ಜಂಕ್ ಫುಡ್‌, ಜೀವನಶೈಲಿಯೇ ಪ್ರಮುಖ ಕಾರಣ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Aug 10, 2026 | 3:52 PM

Share

ಬೆಂಗಳೂರು, ಆ.10 : ರಾಜಧಾನಿಯಲ್ಲಿ ಆರೋಗ್ಯ ಇಲಾಖೆ ಬೀದಿ ಬದಿ ಆಹಾರಗಳು ಹಾಗೂ 5 ಸ್ಟಾರ್​ ಹೋಟೆಲ್​​​ಗಳ ಮೇಲೆ ದಾಳಿಯನ್ನು ಮಾಡಿರುವ ವೇಳೆ ಮತ್ತೊಂದು ಮಹತ್ವದ ವರದಿಯೊಂದನ್ನು ನೀಡಲಾಗಿದೆ. ಬೆಂಗಳೂರಿನ ಮಕ್ಕಳಲ್ಲಿ ಜಠರಗಾತ್ರ ಉರಿಯೂತ (Inflammatory Bowel Disease – IBD) ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕಳೆದ ಒಂದು ದಶಕದಿಂದ ಈ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ ಎಂದು ತಜ್ಞ ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ. ರೋಗದ ಬಗ್ಗೆ ಹೆಚ್ಚುತ್ತಿರುವ ಜಾಗೃತಿ ಹಾಗೂ ಸುಧಾರಿತ ತಪಾಸಣಾ ಸೌಲಭ್ಯಗಳು ಈ ಪ್ರಕರಣಗಳನ್ನು ಬೇಗನೇ ಪತ್ತೆ ಹಚ್ಚಲು ನೆರವಾಗುತ್ತಿವೆಯಾದರೂ, ನಿಜವಾದ ರೋಗಿಗಳ ಸಂಖ್ಯೆಯಲ್ಲೂ ಏರಿಕೆಯಾಗಿದೆ ಎಂದು ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.

ಕಳೆದ ಆರು ತಿಂಗಳಲ್ಲಿ ಮಕ್ಕಳ IBD ಪ್ರಕರಣಗಳಲ್ಲಿ 12 ಪ್ರತಿಶತ ಹೆಚ್ಚಳ ದಾಖಲಾಗಿದೆ. ಕಳೆದ ಐದು ವರ್ಷಗಳಲ್ಲಿ ಈ ಒಂದೇ ಸಂಸ್ಥೆಯಲ್ಲಿ 886 ಮಕ್ಕಳಿಗೆ IBD ಇರುವುದು ದೃಢಪಟ್ಟಿದೆ. ರೆನ್ಬೋ ಚಿಲ್ಡ್ರನ್ಸ್ ಆಸ್ಪತ್ರೆಯ ಮಕ್ಕಳ ಜಠರಗಾತ್ರ ತಜ್ಞೆ ಡಾ. ಲಾವೇಣ್ಯ ಆರ್‌ಪಿ ಅವರ ಪ್ರಕಾರ, ದೇಶದಲ್ಲಿ ಕಳೆದ ಎರಡು ದಶಕಗಳಲ್ಲಿ ಮಕ್ಕಳ IBD ಗಮನಾರ್ಹವಾಗಿ ಹೆಚ್ಚಿದ್ದು, 6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲೂ ಇದು ಪತ್ತೆಯಾಗುತ್ತಿದೆ. ಡಾ. ಶಿವಕುಮಾರ್ ಸಂಬರ್ಗಿ ಅವರ ಪ್ರಕಾರ, ನಗರ ಪ್ರದೇಶದ ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚು ಕಂಡುಬರುತ್ತಿದ್ದು, ಅವರು ಪ್ರತಿ ವಾರ 3 ರಿಂದ 4 ಶಂಕಿತ ಪ್ರಕರಣಗಳನ್ನು ನೋಡುತ್ತಿದ್ದಾರೆ.

ಏರಿಕೆಗೆ ಪ್ರಮುಖ ಕಾರಣಗಳೇನು?

ಆಹಾರ ಪದ್ಧತಿ ಬದಲಾವಣೆ: ಅಲ್ಟ್ರಾ-ಪ್ರೊಸೆಸ್ಡ್ ಆಹಾರ, ಸಕ್ಕರೆಯುಕ್ತ ಪಾನೀಯಗಳು ಹಾಗೂ ಪ್ಯಾಕ್ ಮಾಡಿದ ಜಂಕ್ ಫುಡ್ ಬಳಕೆಯ ಹೆಚ್ಚಳ.

ದೈಹಿಕ ಚಟುವಟಿಕೆ ಕೊರತೆ: ಮಕ್ಕಳಿಗೆ ದೈಹಿಕ ವ್ಯಾಯಾಮ ಹಾಗೂ ಆಟೋಟಗಳ ಕೊರತೆ ಮತ್ತು ಹೊಟ್ಟೆಯ ಜೀರ್ಣಾಂಗ ಸೂಕ್ಷ್ಮಜೀವಿಗಳಲ್ಲಿ ಉಂಟಾಗುವ ಬದಲಾವಣೆಗಳು.

ನಗರೀಕರಣ ಮತ್ತು ಮಾಲಿನ್ಯ: ಕ್ಷಿಪ್ರ ನಗರೀಕರಣ, ವಾಯು ಮಾಲಿನ್ಯ, ಜೀವನಶೈಲಿ ಬದಲಾವಣೆ ಹಾಗೂ ಪರೋಕ್ಷ ಧೂಮಪಾನ ಅಪಾಯವನ್ನು ಹೆಚ್ಚಿಸುತ್ತಿವೆ.

ಪೋಷಕರಿಗೆ ವೈದ್ಯರ ಎಚ್ಚರಿಕೆ:

ಮಕ್ಕಳಲ್ಲಿ ಈ ಕೆಳಗಿನ ಲಕ್ಷಣಗಳು ಕಂಡುಬಂದರೆ ಸಾಮಾನ್ಯ ಹೊಟ್ಟೆಯ ಸೋಂಕು ಎಂದು ನಿರ್ಲಕ್ಷಿಸದೇ ತಕ್ಷಣ ತಜ್ಞ ವೈದ್ಯರನ್ನು ಸಂಪರ್ಕಿಸಲು ಸಲಹೆ ನೀಡಲಾಗಿದೆ:

ಸುದೀರ್ಘ ದಿನಗಳ ಹೊಟ್ಟೆ ನೋವು

ನಿರಂತರ ಅತಿಸಾರ/ಭೇದಿ ಮತ್ತು ಮಲದಲ್ಲಿ ರಕ್ತ ಬೀಳುವುದು

ನಿರೀಕ್ಷಿತ ಎತ್ತರ/ತೂಕ ಹೆಚ್ಚಾಗದಿರುವುದು ಮತ್ತು ತೂಕ ನಷ್ಟ

ಹಸಿವು ಕಡಿಮೆಯಾಗುವುದು.

ಇದನ್ನೂ ಓದಿ: ತಮಿಳುನಾಡು ಕಲಾಪದಲ್ಲಿ ಸರ್ವಾನುಮತದ ತೀರ್ಮಾನ: ಎಲ್ಲಾ ಸರ್ಕಾರಿ ಕಾರ್ಯಕ್ರಮಗಳಲ್ಲಿ ನಾಡಗೀತೆಯೇ ಮೊದಲು

ಸರ್ಕಾರದ ಕ್ರಮಕ್ಕೆ ಮೆಚ್ಚುಗೆ:

ಶಾಲಾ ಆವರಣಗಳ ಸುತ್ತಮುತ್ತ ಜಂಕ್ ಫುಡ್ ಮಾರಾಟ ಹಾಗೂ ಜಾಹೀರಾತುಗಳನ್ನು ನಿರ್ಬಂಧಿಸಲು ಮತ್ತು ಪೌಷ್ಟಿಕ ಆಹಾರ ಹಾಗೂ ದೈಹಿಕ ಚಟುವಟಿಕೆಯನ್ನು ಉತ್ತೇಜಿಸಲು ಕರ್ನಾಟಕ ಸರ್ಕಾರ ತೆಗೆದುಕೊಂಡಿರುವ ನಿರ್ಧಾರವನ್ನು ವೈದ್ಯರು ಮುಕ್ತಕಂಠದಿಂದ ಸ್ವಾಗತಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:15 pm, Mon, 10 August 26

Follow Us