AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿದ್ರೆ ಮಾಡುವಾಗ ಈ ಸ್ಲೀಪಿಂಗ್ ಪೊಸಿಷನ್ ಆಯ್ಕೆ ಮಾಡಿಕೊಳ್ಳಿ! ಗೊತ್ತಿರಬೇಕಾದ ಆರೋಗ್ಯದ ಮಾಹಿತಿ

ಎಲ್ಲರಿಗೂ ಒಂದೇ ಸ್ಲೀಪಿಂಗ್ ಪೊಸಿಷನ್ ಅತ್ಯುತ್ತಮ ಎಂದು ಹೇಳಲು ಸಾಧ್ಯವಿಲ್ಲ. ನಿಮ್ಮ ದೇಹಕ್ಕೆ ಆರಾಮ ನೀಡುವ, ನೋವು ಅಥವಾ ಉಸಿರಾಟದ ಸಮಸ್ಯೆ ಉಂಟುಮಾಡದ ಭಂಗಿಯನ್ನು ಆಯ್ಕೆ ಮಾಡುವುದು ಮುಖ್ಯ. ಎಡಬದಿಯ ಮಗ್ಗುಲಿನಲ್ಲಿ ಮಲಗುವುದು ಅನೇಕರಿಗೆ ಉತ್ತಮ ಆಯ್ಕೆ ಎನಿಸಬಹುದು, ಆದರೆ ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಸರಿಯಾದ ಭಂಗಿಯನ್ನು ಆಯ್ಕೆ ಮಾಡುವುದು ಅತ್ಯಂತ ಮುಖ್ಯ. ಈ ಬಗ್ಗೆ ಹೆಚ್ಚಿನ ಮಾಹಿತಿ ಸ್ಟೋರಿಯಲ್ಲಿದೆ.

ನಿದ್ರೆ ಮಾಡುವಾಗ ಈ ಸ್ಲೀಪಿಂಗ್ ಪೊಸಿಷನ್ ಆಯ್ಕೆ ಮಾಡಿಕೊಳ್ಳಿ! ಗೊತ್ತಿರಬೇಕಾದ ಆರೋಗ್ಯದ ಮಾಹಿತಿ
Best Sleeping PositionImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on:Aug 10, 2026 | 8:29 PM

Share

ಉತ್ತಮ ಆರೋಗ್ಯಕ್ಕೆ ಸಾಕಷ್ಟು ನಿದ್ರೆ ಎಷ್ಟು ಮುಖ್ಯವೋ, ಮಲಗುವ ಭಂಗಿಯೂ ಅಷ್ಟೇ ಮುಖ್ಯವಾಗುತ್ತದೆ. ಕೆಲವರು ಒಂದೇ ಮಗ್ಗಲಿನಲ್ಲಿ ಮಲಗಲು ಇಷ್ಟಪಡುತ್ತಾರೆ, ಇನ್ನೂ ಕೆಲವರು ಬೆನ್ನಿನ ಮೇಲೆ ಅಥವಾ ಹೊಟ್ಟೆಯ ಮೇಲೆ ಮಲಗುತ್ತಾರೆ. ಆದರೆ ಯಾವ ಭಂಗಿಯಲ್ಲಿ ಮಲಗಿದರೆ ದೇಹಕ್ಕೆ ಹೆಚ್ಚು ಆರಾಮ ಸಿಗುತ್ತದೆ ಎಂಬ ಬಗ್ಗೆ ಹಲವರಿಗೆ ಗೊಂದಲವಿರುತ್ತದೆ. ವಾಸ್ತವವಾಗಿ, ಎಲ್ಲರಿಗೂ ಒಂದೇ ಸ್ಲೀಪಿಂಗ್ ಪೊಸಿಷನ್ ಸೂಕ್ತವಾಗಿರಬೇಕೆಂದಿಲ್ಲ. ವ್ಯಕ್ತಿಯ ವಯಸ್ಸು, ದೇಹದ ಸ್ಥಿತಿ, ಗರ್ಭಾವಸ್ಥೆ, ಬೆನ್ನು ಅಥವಾ ಕುತ್ತಿಗೆ ನೋವು, ಗೊರಕೆ ಮತ್ತು ಸ್ಲೀಪ್ ಅಪ್ನಿಯಾ ಸೇರಿದಂತೆ ಹಲವು ಅಂಶಗಳ ಮೇಲೆ ಮಲಗುವ ಭಂಗಿ ಬದಲಾಗಬಹುದು. ಹಾಗಾದರೆ ಯಾವ ಭಂಗಿಯಲ್ಲಿ ಮಲಗುವುದು ಒಳ್ಳೆಯದು ಮತ್ತು ಚೆನ್ನಾಗಿ ನಿದ್ರೆ ಮಾಡಲು ಯಾವ ರೀತಿಯ ಸಲಹೆಗಳನ್ನು ಅನುಸರಿಸಬೇಕು ಎಂದು ಸ್ಟೋರಿ ಓದಿ.

ಹೆಚ್ಚಿನ ಆರೋಗ್ಯವಂತ ವಯಸ್ಕರಿಗೆ ಯಾವುದಾದರೂ ಒಂದು ಮಗ್ಗಲಲ್ಲಿ ಮಲಗುವುದು ಅಂದರೆ ಎಡಬದಿಯಲ್ಲಿ ಮಲಗುವುದು ಆರಾಮದಾಯಕ ಆಯ್ಕೆಯಾಗಿರುತ್ತದೆ. ವಿಶೇಷವಾಗಿ ಕೆಲವರಲ್ಲಿ ಈ ರೀತಿ ಮಲಗುವುದರಿಂದ ಚೆನ್ನಾಗಿ ಉಸಿರಾಡುವುದಕ್ಕೆ ಸಹಾಯವಾಗಬಹುದು. ಇದರಿಂದ ಗೊರಕೆ ಮತ್ತು ಸ್ಲೀಪ್ ಅಪ್ನಿಯಾ ಸಮಸ್ಯೆಯ ಲಕ್ಷಣಗಳು ಕಡಿಮೆಯಾಗುವ ಸಾಧ್ಯತೆ ಇದೆ. ಯಾರಿಗೆ ಬೆನ್ನಿನ ಮೇಲೆ ಅಂದರೆ ಅಂಗಾತ ಮಲಗಿದಾಗ ಗೊರಕೆ ಹೆಚ್ಚಾಗುತ್ತದೆಯೋ, ಅವರಿಗೆ ಮಗ್ಗುಲು ಬದಲಿಸಿ ಮಲಗುವುದು ಹೆಚ್ಚು ಅನುಕೂಲಕರವಾಗಿರಬಹುದು.

ಗರ್ಭಿಣಿಯರು ಯಾವ ಭಂಗಿಯಲ್ಲಿ ಮಲಗಬೇಕು?

ಗರ್ಭಾವಸ್ಥೆಯ ಕೊನೆಯ ಹಂತಗಳಲ್ಲಿ ಎಡಬದಿಯಲ್ಲಿ ಮಲಗುವುದು ಅಥವಾ ಮಗ್ಗಲು ಬದಲಿಸಿ ಒಂದೇ ಬದಿಯಲ್ಲಿ ಮಲಗುವುದು ಸಾಮಾನ್ಯವಾಗಿ ಹೆಚ್ಚು ಆರಾಮದಾಯಕವಾಗಿರುತ್ತದೆ. ವಿಶೇಷವಾಗಿ ದೇಹದ ಮೇಲೆ ಹೆಚ್ಚಾಗುವ ಒತ್ತಡವನ್ನು ಕಡಿಮೆ ಮಾಡಲು ಮತ್ತು ಆರಾಮವಾಗಿ ನಿದ್ರೆ ಮಾಡಲು ಇದು ಸಹಾಯ ಮಾಡಬಹುದು. ಆದರೆ ಗರ್ಭಾವಸ್ಥೆಯಲ್ಲಿ ನಿದ್ರೆ ಅಥವಾ ಮಲಗುವ ಭಂಗಿಗೆ ಸಂಬಂಧಿಸಿದ ಯಾವುದೇ ನಿರ್ದಿಷ್ಟ ಸಮಸ್ಯೆ ಇದ್ದರೆ, ವೈದ್ಯರ ಸಲಹೆ ಪಡೆಯುವುದು ಉತ್ತಮ.

ಬೆನ್ನಿನ ಮೇಲೆ ಮಲಗುವುದರಿಂದ ಏನಾಗಬಹುದು?

ಸಾಮಾನ್ಯವಾಗಿ ನೇರವಾಗಿ ಅಥವಾ ಬೆನ್ನಿನ ಮೇಲೆ ಮಲಗುವುದು ಕೆಲವರಿಗೆ ಬೆನ್ನು ಮತ್ತು ಕುತ್ತಿಗೆಗೆ ಆರಾಮ ನೀಡಬಹುದು. ಸರಿಯಾದ ದಿಂಬು ಮತ್ತು ಹಾಸಿಗೆಯನ್ನು ಬಳಸಿದರೆ ದೇಹವನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳಬಹುದು. ಆದರೆ ಕೆಲವರಿಗೆ ಬೆನ್ನಿನ ಮೇಲೆ ಅಂದರೆ ನೇರವಾಗಿ ಮಲಗಿದಾಗ ಗೊರಕೆ ಅಥವಾ ಸ್ಲೀಪ್ ಅಪ್ನಿಯಾ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ತಲೆನೋವು ಕಡಿಮೆ ಮಾಡಲು ಕಾಫಿ ಸಹಾಯ ಮಾಡುತ್ತದೆಯೇ? ಈ ಬಗ್ಗೆ ವೈದ್ಯರ ಅಭಿಪ್ರಾಯವೇನು?

ಹೊಟ್ಟೆ ಮೇಲೆ ಮಲಗುವುದು ಯಾಕೆ ಸೂಕ್ತವಲ್ಲ?

ಸಾಮಾನ್ಯವಾಗಿ ಹೊಟ್ಟೆಯ ಮೇಲೆ ಮಲಗುವಾಗ ಕುತ್ತಿಗೆಯನ್ನು ಒಂದು ಬದಿಗೆ ತಿರುಗಿಸಬೇಕಾಗುತ್ತದೆ. ಇದರಿಂದ ಕುತ್ತಿಗೆ ಮತ್ತು ಬೆನ್ನುಮೂಳೆಯ ಮೇಲೆ ಹೆಚ್ಚುವರಿ ಒತ್ತಡ ಬೀಳಬಹುದು. ದೀರ್ಘಕಾಲ ಈ ಭಂಗಿಯಲ್ಲಿ ಮಲಗುವ ಕೆಲವರಿಗೆ ಬೆಳಗ್ಗೆ ಎದ್ದಾಗ ಕುತ್ತಿಗೆ, ಭುಜ ಅಥವಾ ಬೆನ್ನಿನಲ್ಲಿ ನೋವು ಮತ್ತು ಬಿಗಿತದ ಅನುಭವವಾಗಬಹುದು. ಹೀಗಾಗಿ ಹೊಟ್ಟೆಯ ಮೇಲೆ ಮಲಗುವುದಕ್ಕಿಂತ ಬೇರೆ ಭಂಗಿಯನ್ನು ಆಯ್ಕೆ ಮಾಡುವುದು ಸೂಕ್ತ.

ಸರಿಯಾದ ದಿಂಬು ಮತ್ತು ಹಾಸಿಗೆ ಕೂಡ ಮುಖ್ಯ

ಕೇವಲ ಮಲಗುವ ಭಂಗಿಯಷ್ಟೇ ಅಲ್ಲ, ದಿಂಬು ಮತ್ತು ಹಾಸಿಗೆಯ ಆಯ್ಕೆಯೂ ನಿದ್ರೆಯ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಅತಿಯಾಗಿ ಮೃದುವಾದ ಅಥವಾ ಅತಿಯಾಗಿ ಗಟ್ಟಿಯಾದ ಹಾಸಿಗೆ ಕೆಲವರಿಗೆ ಬೆನ್ನು ಮತ್ತು ಕೀಲು ನೋವನ್ನು ಉಂಟುಮಾಡಬಹುದು. ಆದ್ದರಿಂದ ದೇಹಕ್ಕೆ ಆರಾಮ ನೀಡುವ ಹಾಸಿಗೆ ಆಯ್ಕೆ ಮಾಡುವುದು ಉತ್ತಮ.

ಉತ್ತಮ ನಿದ್ರೆಗಾಗಿ ಈ ಅಭ್ಯಾಸ ರೂಢಿಸಿಕೊಳ್ಳಿ

  • ಪ್ರತಿದಿನ ಒಂದೇ ಸಮಯಕ್ಕೆ ಮಲಗಲು ಮತ್ತು ಏಳುವ ಅಭ್ಯಾಸವನ್ನು ರೂಢಿಸಿಕೊಳ್ಳಿ.
  • ಮಲಗುವ ಕೋಣೆಯನ್ನು ಶಾಂತ ಮತ್ತು ಆರಾಮದಾಯಕವಾಗಿರಿಸಿ.
  • ಮಲಗುವ ಮುನ್ನ ಮೊಬೈಲ್, ಲ್ಯಾಪ್‌ಟಾಪ್ ಮತ್ತು ಇತರ ಸ್ಕ್ರೀನ್‌ಗಳ ಬಳಕೆಯನ್ನು ಕಡಿಮೆ ಮಾಡಿ.
  • ರಾತ್ರಿ ತುಂಬಾ ಭಾರವಾದ ಆಹಾರ ಸೇವಿಸುವುದನ್ನು ತಪ್ಪಿಸಿ.
  • ಸಂಜೆ ಮತ್ತು ರಾತ್ರಿ ಹೆಚ್ಚು ಕ್ಯಾಫೀನ್ ಸೇವಿಸುವುದನ್ನು ಕಡಿಮೆ ಮಾಡಿ.
  • ದೇಹಕ್ಕೆ ಸೂಕ್ತವಾದ ದಿಂಬು ಮತ್ತು ಹಾಸಿಗೆಯನ್ನು ಬಳಸಿ.

ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು?

ನಿದ್ರೆಯ ವೇಳೆ ಉಸಿರಾಟ ನಿಲ್ಲುವಂತೆ ಆಗುವುದು, ತುಂಬಾ ಜೋರಾಗಿ ಗೊರಕೆ ಹೊಡೆಯುವುದು, ರಾತ್ರಿ ಪದೇಪದೇ ಎಚ್ಚರಗೊಳ್ಳುವುದು, ಬೆಳಗ್ಗೆ ಎದ್ದಾಗ ತೀವ್ರ ತಲೆನೋವು ಅಥವಾ ದಿನವಿಡೀ ಅತಿಯಾದ ನಿದ್ರೆ ಕಾಣಿಸಿಕೊಳ್ಳುತ್ತಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:50 pm, Mon, 10 August 26

Follow Us
ರಾಸಾಯನಿಕ ತ್ಯಾಜ್ಯ: 3 ಕೈಗಾರಿಕೆ ಮುಚ್ಚಲು ಈಶ್ವರ ಖಂಡ್ರೆ ಸೂಚನೆ
ರಾಸಾಯನಿಕ ತ್ಯಾಜ್ಯ: 3 ಕೈಗಾರಿಕೆ ಮುಚ್ಚಲು ಈಶ್ವರ ಖಂಡ್ರೆ ಸೂಚನೆ
ಮಕ್ಕಳ ಪಿಕ್ಕಿ ಈಟಿಂಗ್ ಕಡಿಮೆ ಮಾಡೋದು ಹೇಗೆ?
ಮಕ್ಕಳ ಪಿಕ್ಕಿ ಈಟಿಂಗ್ ಕಡಿಮೆ ಮಾಡೋದು ಹೇಗೆ?
ಜೆಡಿಎಸ್ ಪಾದಯಾತ್ರೆ ಬಗ್ಗೆ ಪಿಸು ಮಾತು ವೈರಲ್: ಸ್ಪಷ್ಟನೆ ನೀಡಿದ ವಿಜಯೇಂದ್ರ
ಜೆಡಿಎಸ್ ಪಾದಯಾತ್ರೆ ಬಗ್ಗೆ ಪಿಸು ಮಾತು ವೈರಲ್: ಸ್ಪಷ್ಟನೆ ನೀಡಿದ ವಿಜಯೇಂದ್ರ
ಕೊಡಗು: ಪ್ರವಾಸಿಗರ ಬಸ್ ಪಲ್ಟಿ; 22ಕ್ಕೂ ಹೆಚ್ಚು ಜನರಿಗೆ ಗಾಯ
ಕೊಡಗು: ಪ್ರವಾಸಿಗರ ಬಸ್ ಪಲ್ಟಿ; 22ಕ್ಕೂ ಹೆಚ್ಚು ಜನರಿಗೆ ಗಾಯ
ಜೆಡಿಎಸ್ ಪಾದಯಾತ್ರೆ ತಡೆದ ಪೊಲೀಸರು: ಭಾರಿ ಹೈಡ್ರಾಮಾ
ಜೆಡಿಎಸ್ ಪಾದಯಾತ್ರೆ ತಡೆದ ಪೊಲೀಸರು: ಭಾರಿ ಹೈಡ್ರಾಮಾ
ಬೆಂಗಳೂರಲ್ಲಿ ಅಬ್ಬರಿಸಿದ ವರುಣ: ಕೆರೆಗಳಂತಾದ ರಸ್ತೆಗಳು; ಸವಾರರು ಪರದಾಟ
ಬೆಂಗಳೂರಲ್ಲಿ ಅಬ್ಬರಿಸಿದ ವರುಣ: ಕೆರೆಗಳಂತಾದ ರಸ್ತೆಗಳು; ಸವಾರರು ಪರದಾಟ
ಕಾವೇರಿ ನೀರು ವಿವಾದ: ತಮಿಳುನಾಡು ಅರ್ಜಿ ವಿಚಾರಣೆಗೆ ಸುಪ್ರೀಂ ಸಮ್ಮತಿ
ಕಾವೇರಿ ನೀರು ವಿವಾದ: ತಮಿಳುನಾಡು ಅರ್ಜಿ ವಿಚಾರಣೆಗೆ ಸುಪ್ರೀಂ ಸಮ್ಮತಿ
ಬಿಡದಿ ಟೌನ್​ಶಿಪ್​ ಯೋಜನೆಯ ಹಿಂದಿನ ಉದ್ದೇಶ ಏನು? ಸಿಎಂಗೆ ದೇವೇಗೌಡ ಪ್ರಶ್ನೆ
ಬಿಡದಿ ಟೌನ್​ಶಿಪ್​ ಯೋಜನೆಯ ಹಿಂದಿನ ಉದ್ದೇಶ ಏನು? ಸಿಎಂಗೆ ದೇವೇಗೌಡ ಪ್ರಶ್ನೆ
ಸಂಪುಟದಿಂದ ವಜಾಕ್ಕೆ ಆಗ್ರಹಗಳ ಮಧ್ಯೆ ಸಚಿವ ನಾಗೇಂದ್ರಗೆ ಬಿಗ್ ರಿಲೀಫ್​
ಸಂಪುಟದಿಂದ ವಜಾಕ್ಕೆ ಆಗ್ರಹಗಳ ಮಧ್ಯೆ ಸಚಿವ ನಾಗೇಂದ್ರಗೆ ಬಿಗ್ ರಿಲೀಫ್​
ಸ್ಟಾರ್ ಹೋಟೆಲ್​​​​​ ಬೆನ್ನಲ್ಲೇ ಕಾಸ್ಮೆಟಿಕ್ಸ್ ಅಂಗಡಿಗಳ ಮೇಲೆ ದಾಳಿ
ಸ್ಟಾರ್ ಹೋಟೆಲ್​​​​​ ಬೆನ್ನಲ್ಲೇ ಕಾಸ್ಮೆಟಿಕ್ಸ್ ಅಂಗಡಿಗಳ ಮೇಲೆ ದಾಳಿ