World Day of the Sick: ವಿಶ್ವ ಅಸ್ವಸ್ಥರ ದಿನದ ಇತಿಹಾಸ ಮತ್ತು ಮಹತ್ವದ ಕುರಿತು ಮಾಹಿತಿ ಇಲ್ಲಿದೆ

ವಿಶ್ವ ಅಸ್ವಸ್ಥರ ದಿನ(World Day of the Sick) ವನ್ನು ಪ್ರತಿ ವರ್ಷ ಫೆಬ್ರವರಿ 11 ರಂದು ಆಚರಿಸಲಾಗುತ್ತದೆ. ಕ್ರಿಶ್ಚಿಯನ್ ಧರ್ಮದಲ್ಲಿ ಈ ದಿನವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ವೈದ್ಯಕೀಯ ಆರೈಕೆ ಮತ್ತು ಸಾಂತ್ವನ ನೀಡುವ ದಿನ ಎಂದು ಕೂಡ ಕರೆಯಬಹುದಾಗಿದೆ.

World Day of the Sick: ವಿಶ್ವ ಅಸ್ವಸ್ಥರ ದಿನದ ಇತಿಹಾಸ ಮತ್ತು ಮಹತ್ವದ ಕುರಿತು ಮಾಹಿತಿ ಇಲ್ಲಿದೆ
ವಿಶ್ವ ಅಸ್ವಸ್ಥರ ದಿನImage Credit source: Unique News Online
Follow us
|

Updated on:Feb 11, 2023 | 11:06 AM

ವಿಶ್ವ ಅಸ್ವಸ್ಥರ ದಿನ(World Day of the Sick) ವನ್ನು ಪ್ರತಿ ವರ್ಷ ಫೆಬ್ರವರಿ 11 ರಂದು ಆಚರಿಸಲಾಗುತ್ತದೆ. ಈ ದಿನ ಅನಾರೋಗ್ಯದಿಂದ ಅಂದರೆ ಮಾನಸಿಕವಾಗಿ ಅಥವಾ ದೈಹಿಕವಾಗಿ ಬಳಲುತ್ತಿರುವವರಿಗೆ ತಮ್ಮ ಸಮಸ್ಯೆಯ ವಿರುದ್ಧ ಹೋರಾಡಲು ಹಾಗೂ ನೀವು ಅವರೊಂದಿಗೆ ಜೊತೆಯಾಗಿ ಬೆಂಬಲವಾಗಿ ನಿಲ್ಲಲು ಈ ದಿನವನ್ನು ಆಚರಿಸಲಾಗುತ್ತದೆ. ಕ್ರಿಶ್ಚಿಯನ್ ಧರ್ಮದಲ್ಲಿ ಈ ದಿನವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ವೈದ್ಯಕೀಯ ಆರೈಕೆ ಮತ್ತು ಸಾಂತ್ವನ ನೀಡುವ ದಿನ ಎಂದು ಕೂಡ ಕರೆಯಬಹುದಾಗಿದೆ.

ವಿಶ್ವ ಅಸ್ವಸ್ಥರ ದಿನದ ಮಹತ್ವ:

ಕ್ರಿಶ್ಚಿಯನ್ ಧರ್ಮದಲ್ಲಿ ಮತ್ತು ವಿಶೇಷವಾಗಿ ಪೋಪ್ ಜಾನ್ ಪಾಲ್ II ರ ಬೋಧನೆಗಳಲ್ಲಿ ಬೆಂಬಲ ಪ್ರಮುಖ ವಿಷಯವಾಗಿದೆ. ಸಂಕಟವು ಮನುಷ್ಯನ ಅತಿರೇಕಕ್ಕೆ ಸೇರಿದೆ ಎಂದು ಹೇಳುತ್ತದೆ. ಅನಾರೋಗ್ಯ ಹಾಗೂ ದುಃಖದಿಂದ ಬಳಲುತ್ತಿರುವವರಿಗೆ ನಂಬಿಕೆ ಮತ್ತು ಭರವಸೆಯನ್ನು ನೀಡಲು ಈ ದಿನವನ್ನು ಸ್ಥಾಪಿಸಲಾಯಿತು. ಕ್ರಿಶ್ಚಿಯನ್ ಧರ್ಮದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಪ್ರಾರ್ಥಿಸುವುದು ಈ ದಿನದ ಮುಖ್ಯ ಉದ್ದೇಶ.

ವಿಶ್ವ ಅಸ್ವಸ್ಥರ ದಿನದ ಇತಿಹಾಸ:

ವಿಶ್ವ ಅಸ್ವಸ್ಥರ ದಿನವನ್ನು 1992 ರಲ್ಲಿ ಪೋಪ್ ಜಾನ್ ಪಾಲ್ II ಪ್ರಾರಂಭಿಸಿದರು. ಕ್ಯಾಥೋಲಿಕ್ ಚರ್ಚ್‌ನ ಮುಖ್ಯಸ್ಥರು ನಡುಕ, ಬಿಗಿತ, ನಡಿಗೆಯಲ್ಲಿ ತೊಂದರೆ, ಅರಿವಿನ ಸಮಸ್ಯೆಗಳನ್ನು ಉಂಟುಮಾಡುವ ನರ-ಕ್ಷೀಣಗೊಳ್ಳುವ ಪಾರ್ಕಿನ್ಸನ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದರು. ಆದ್ದರಿಂದ ಮೇ 13, 1992 ರಂದು ಪೋಪ್ ಜಾನ್ ಪಾಲ್ II ಈ ದಿನವನ್ನು ಪ್ರಾರಂಭಿಸಿದರು. ಆದರೆ ಫೆಬ್ರವರಿ 11 ರಂದು ಅವರ್ ಲೇಡಿ ಆಫ್ ಲೂರ್ಡ್ಸ್ ಅವರ ಸ್ಮರಣಾರ್ಥ ದಿನವಾದ್ದರಿಂದ ಜಾಗೃತಿ ಕಾರ್ಯಕ್ರಮಕ್ಕೆ ದಿನಾಂಕವಾಗಿ ಆಯ್ಕೆ ಮಾಡಲಾಗಿದೆ.

ಇದನ್ನೂ ಓದಿ: ಹಕ್ಕಿ ಜ್ವರ ಮನುಷ್ಯರಿಗೂ ತಗುಲಬಹುದು; ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

ವಿಶ್ವ ಅಸ್ವಸ್ಥರ ದಿನದ ವಿಷಯವು ಪ್ರತಿ ವರ್ಷವೂ ಬದಲಾಗುತ್ತದೆ, ಆದರೆ ಇದು ಸಾಮಾನ್ಯವಾಗಿ ಆರೋಗ್ಯ ಮತ್ತು ಅನಾರೋಗ್ಯದ ನಿರ್ದಿಷ್ಟ ಅಂಶಗಳ ಮೇಲೆ ಕೇಂದ್ರೀಕರಿಸುತ್ತದೆ, ಉದಾಹರಣೆಗೆ ವೈದ್ಯಕೀಯ ಆರೈಕೆ, ಉಪಶಾಮಕ ಆರೈಕೆ ಮತ್ತು ರೋಗಿಗಳ ಜೊತೆಗಿನ ಪ್ರಾಮುಖ್ಯತೆ. ರೋಗಿಗಳ ಆರೈಕೆಯಲ್ಲಿ ಮತ್ತು ಅಗತ್ಯವಿರುವವರಿಗೆ ಸಾಂತ್ವನ ಮತ್ತು ಬೆಂಬಲವನ್ನು ನೀಡುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುವ ಆರೋಗ್ಯ ಪೂರೈಕೆದಾರರ ಪಾತ್ರವನ್ನು ಪ್ರತಿಬಿಂಬಿಸುವ ದಿನವಾಗಿದೆ.

ವಿಶ್ವ ರೋಗಿಗಳ ದಿನ 2023 ಧ್ಯೇಯ:

ಅನಾರೋಗ್ಯ, ನೋವು ಪ್ರತಿಯೊಬ್ಬರ ಜೀವನದ ಒಂದು ಭಾಗವಾಗಿದೆ. ಆದರೆ ಈ ಸಮಯದಲ್ಲಿ ಕಾಳಜಿ ಮತ್ತು ಸಹಾನುಭೂತಿ ಅತ್ಯಂತ ಅಗತ್ಯವಾಗಿದೆ. ಆದ್ದರಿಂದ ಯಾವುದೇ ವ್ಯಕ್ತಿ ದುರ್ಬಲವಾಗುತ್ತಿದ್ದಾನೆ ಎಂದರೆ ಅದು ಮಾನಸಿಕವಾಗಿಯೂ ಅಥವಾ ದೈಹಿಕವಾಗಿಯೂ ಇರಬಹುದು,ಆ ಸಮಯದಲ್ಲಿ ನೀವು ಬೆಂಬಲ ನೀಡುವುದು ಅಗತ್ಯವಾಗಿದೆ ಎಂಬುದು ಈ ವರ್ಷದ ಧ್ಯೇಯವಾಗಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

Published On - 11:05 am, Sat, 11 February 23

ತಾಜಾ ಸುದ್ದಿ
ನಮಗಿರುವ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದರೆ ಸಾಕು: ಕೃಷ್ಣ ಭೈರೇಗೌಡ
ನಮಗಿರುವ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದರೆ ಸಾಕು: ಕೃಷ್ಣ ಭೈರೇಗೌಡ
ಪವಿತ್ರಾ ಗೌಡ ಗೆಳತಿ ಸಮತಾ ದರ್ಶನ್​ರನ್ನು ಭೇಟಿಯಾಗಬೇಕೆಂದಾಗ ನಟ ಒಪ್ಪಿದರು
ಪವಿತ್ರಾ ಗೌಡ ಗೆಳತಿ ಸಮತಾ ದರ್ಶನ್​ರನ್ನು ಭೇಟಿಯಾಗಬೇಕೆಂದಾಗ ನಟ ಒಪ್ಪಿದರು
ಚಿತ್ರೀಕರಣದ ಸಮಯದಲ್ಲಿ ಪವಿತ್ರಾ ಗೌಡರ ವರ್ತನೆ ಹೇಗಿರುತ್ತಿತ್ತು: ನಿರ್ದೇಶಕಿ
ಚಿತ್ರೀಕರಣದ ಸಮಯದಲ್ಲಿ ಪವಿತ್ರಾ ಗೌಡರ ವರ್ತನೆ ಹೇಗಿರುತ್ತಿತ್ತು: ನಿರ್ದೇಶಕಿ
ಸಿದ್ದರಾಮಯ್ಯ ಸರ್ಕಾರ ಹಗರಣ, ಭ್ರಷ್ಟಾಚಾರಗಳಲ್ಲಿ ಮುಳುಗಿದೆ: ಸುನೀಲ ಕುಮಾರ್
ಸಿದ್ದರಾಮಯ್ಯ ಸರ್ಕಾರ ಹಗರಣ, ಭ್ರಷ್ಟಾಚಾರಗಳಲ್ಲಿ ಮುಳುಗಿದೆ: ಸುನೀಲ ಕುಮಾರ್
ಸಿಎಂ ಪತ್ನಿಯವರ ಜಮೀನು ಸ್ವಾಧೀನ ಆಗಿದ್ದು ಬಿಜೆಪಿ ಅಧಿಕಾರದಲ್ಲಿ: ಶಿವಕುಮಾರ್
ಸಿಎಂ ಪತ್ನಿಯವರ ಜಮೀನು ಸ್ವಾಧೀನ ಆಗಿದ್ದು ಬಿಜೆಪಿ ಅಧಿಕಾರದಲ್ಲಿ: ಶಿವಕುಮಾರ್
ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯ ಉದ್ದೇಶಿಸಿ ಮೋದಿ ಮಾತು
ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯ ಉದ್ದೇಶಿಸಿ ಮೋದಿ ಮಾತು
ಪ್ರಜ್ವಲ್ ಭೇಟಿಯಾಗಲ್ಲ; ನಮಗೆ ದೇವರು, ನ್ಯಾಯಾಂಗವೇ ಗತಿಯೆಂದ ರೇವಣ್ಣ
ಪ್ರಜ್ವಲ್ ಭೇಟಿಯಾಗಲ್ಲ; ನಮಗೆ ದೇವರು, ನ್ಯಾಯಾಂಗವೇ ಗತಿಯೆಂದ ರೇವಣ್ಣ
ಸಿದ್ದರಾಮಯ್ಯ ಏಯ್ ಭೀಮ ಅಂತ ಕೂಗಿದಾಗ ಓಡಿಬಂದಿದ್ದು ಕೋಟುಧಾರಿ ಕೆಎನ್ ರಾಜಣ್ಣ
ಸಿದ್ದರಾಮಯ್ಯ ಏಯ್ ಭೀಮ ಅಂತ ಕೂಗಿದಾಗ ಓಡಿಬಂದಿದ್ದು ಕೋಟುಧಾರಿ ಕೆಎನ್ ರಾಜಣ್ಣ
ನನ್ನ ಮಗ ಸೂರಜ್ ದೈವಭಕ್ತ, ತಾಯಿ ಚಾಮುಂಶೇಶ್ವರಿ ಕೃಪೆ ಅವನ ಮೇಲಿದೆ: ರೇವಣ್ಣ
ನನ್ನ ಮಗ ಸೂರಜ್ ದೈವಭಕ್ತ, ತಾಯಿ ಚಾಮುಂಶೇಶ್ವರಿ ಕೃಪೆ ಅವನ ಮೇಲಿದೆ: ರೇವಣ್ಣ
ಮೇಲ್ಮನೆ ಮತ್ತು ಕೆಳಮನೆಗೆ ಯೋಗ್ಯ ಪ್ರತಿಪಕ್ಷ ನಾಯಕರ ಅಯ್ಕೆಯಾಗಲಿ:ತೇಜಸ್ವಿನಿ
ಮೇಲ್ಮನೆ ಮತ್ತು ಕೆಳಮನೆಗೆ ಯೋಗ್ಯ ಪ್ರತಿಪಕ್ಷ ನಾಯಕರ ಅಯ್ಕೆಯಾಗಲಿ:ತೇಜಸ್ವಿನಿ