AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೋಳಿ ಹಬ್ಬವನ್ನು ಆಚರಣೆ ಮಾಡುವ ಉದ್ದೇಶ ಏನು ಗೊತ್ತಾ ?

ಹೋಳಿ ಹಬ್ಬ ಎನ್ನುವುದು ಭಾರತದ ಸಂಸ್ಕೃತಿಯ ಸಂಕೇತವಾಗಿದೆ. ಈ ಹಬ್ಬವನ್ನು  ತುಂಬಾ ವಿಶಿಷ್ಟ ಹಾಗು ಅದ್ಧೂರಿಯಾಗಿ ಆಚರಣೆ ಮಾಡುತ್ತಾರೆ. ರಂಗು ರಂಗಿನ ಹೋಳಿ ಹಬ್ಬ, ಎಲ್ಲರ ಮನ-ಮನಸ್ಸಿಗಳನ್ನು ಪುಳಕಿತಗೊಳಿಸುವ ಹಬ್ಬವಾಗಿದೆ.  ಧರ್ಮ, ದೀಪೋತ್ಸವಗಳು ಮತ್ತು ಬಣ್ಣದ ಸೀಮೆಸುಣ್ಣದ ಸಮೃದ್ಧಿ  ಎಲ್ಲವೂ  ಭಾರತದ ಹೋಳಿ ಹಬ್ಬವು ಪ್ರಪಂಚದ ಅತ್ಯಂತ ಸುಂದರವಾದ ಆಚರಣೆಗಳಲ್ಲಿ ಒಂದಾಗಿದೆ. ಒಬ್ಬರು ಇನ್ನೊಬ್ಬರಿಗೆ ಬಣ್ಣದಿಂದ ಹೋಳಿ ಹಾಕುವುದು , ಮೈಗೆಲ್ಲ ಬಣ್ಣದ  ಕಲರವು ಆ ದಿನದ ಹೋಳಿ ಹಬ್ಬಕ್ಕೆ ಕಲೆಯನ್ನು ನೀಡುತ್ತಾದೆ.  ಹೋಳಿಯನ್ನು ಭಾರತದ ಪ್ರತಿ […]

ಹೋಳಿ ಹಬ್ಬವನ್ನು ಆಚರಣೆ ಮಾಡುವ ಉದ್ದೇಶ ಏನು ಗೊತ್ತಾ ?
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Mar 11, 2022 | 4:36 PM

ಹೋಳಿ ಹಬ್ಬ ಎನ್ನುವುದು ಭಾರತದ ಸಂಸ್ಕೃತಿಯ ಸಂಕೇತವಾಗಿದೆ. ಈ ಹಬ್ಬವನ್ನು  ತುಂಬಾ ವಿಶಿಷ್ಟ ಹಾಗು ಅದ್ಧೂರಿಯಾಗಿ ಆಚರಣೆ ಮಾಡುತ್ತಾರೆ. ರಂಗು ರಂಗಿನ ಹೋಳಿ ಹಬ್ಬ, ಎಲ್ಲರ ಮನ-ಮನಸ್ಸಿಗಳನ್ನು ಪುಳಕಿತಗೊಳಿಸುವ ಹಬ್ಬವಾಗಿದೆ.  ಧರ್ಮ, ದೀಪೋತ್ಸವಗಳು ಮತ್ತು ಬಣ್ಣದ ಸೀಮೆಸುಣ್ಣದ ಸಮೃದ್ಧಿ  ಎಲ್ಲವೂ  ಭಾರತದ ಹೋಳಿ ಹಬ್ಬವು ಪ್ರಪಂಚದ ಅತ್ಯಂತ ಸುಂದರವಾದ ಆಚರಣೆಗಳಲ್ಲಿ ಒಂದಾಗಿದೆ. ಒಬ್ಬರು ಇನ್ನೊಬ್ಬರಿಗೆ ಬಣ್ಣದಿಂದ ಹೋಳಿ ಹಾಕುವುದು , ಮೈಗೆಲ್ಲ ಬಣ್ಣದ  ಕಲರವು ಆ ದಿನದ ಹೋಳಿ ಹಬ್ಬಕ್ಕೆ ಕಲೆಯನ್ನು ನೀಡುತ್ತಾದೆ.  ಹೋಳಿಯನ್ನು ಭಾರತದ ಪ್ರತಿ ಭಾಗದಲ್ಲೂ  ಅದ್ಧೂರಿಯಾಗಿ ಆಚರಣೆ ಮಾಡುತ್ತಾರೆ. ಸಂಭ್ರಮದ ಕ್ಷಣವನ್ನು ಹೋಳಿ ದಿನದಂದು ಆಚರಣೆ  ಮಾಡುತ್ತಾರೆ. ಇದರ ಖುಷಿಗೆ ಮೀತಿಯಿಲ್ಲ. ಹೋಳಿ ಹಬ್ಬಕ್ಕೆ  ಜನಸಾಗರವನ್ನು ಸೇರುವ ಹಬ್ಬ, ಭಾರತದಲ್ಲಿ ಇಂತಹ ಆಚರಣೆಗಳನ್ನು ಮಾತ್ರ ಕಾಣಬಹುದು ಎಂಬುದಕ್ಕೆ ಈ ಹೋಳಿ ಹಬ್ಬ ಸಾಕ್ಷಿಯಾಗಿದೆ.

ಭಾರತದ ಪ್ರತಿ ಬೀದಿಯಲ್ಲೂ ಹೋಳಿ ಹಬ್ಬವೆನ್ನುವುದು ಒಂದು ಅದ್ಭುತ ಬಣ್ಣಗಳ ಕಾಮನಬಿಲ್ಲನ್ನು ಸೃಷ್ಟಿ ಮಾಡುವುದು. ಅದಕ್ಕೆ ಈ ಹಬ್ಬ ಭಾರತದ ವಿಶೇಷವನ್ನು ಪಡೆದುಕೊಂಡಿದೆ. ಹೋಳಿ ಹಬ್ಬದ ಹಿಂದಿನ ರಾತ್ರಿ ಹೋಲಿಕಾ ದೀಪೋತ್ಸವವನ್ನು ಹೊತ್ತಿಸಲಾಗುತ್ತದೆ, ನೃತ್ಯ ಮತ್ತು ಹಾಡುಗಳ ಈ ಕಾಲದಲ್ಲಿ ಸಂಜೆ ಹೊತ್ತಿಗೆ  ಎಲ್ಲ ಜನರು ಒಂದು ಕಡೆ ಸೇರುತ್ತಾರೆ . ಮರುದಿನ, ದೀಪೋತ್ಸವವು , ಇದರಲ್ಲಿ ಭಾಗವಹಿಸುವವರು ಬಣ್ಣದ ನೀರು ಮತ್ತು ಪುಡಿಯೊಂದಿಗೆ ಪರಸ್ಪರ ಎರಚ್ಚಿಕೊಂಡು ಆಡುತ್ತಾರೆ. ಹಬ್ಬದ ಉದ್ದೇಶವು ಅಪರಿಚಿತರನ್ನು ಒಟ್ಟುಗೂಡಿಸುವುದು, ಶ್ರೀಮಂತರು ಮತ್ತು ಬಡವರು, ಪುರುಷರು ಮತ್ತು ಮಹಿಳೆಯರು, ಮಕ್ಕಳು ಮತ್ತು ಹಿರಿಯರನ್ನು ಒಂದುಗೂಡಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

ಹೋಳಿ ಹಬ್ಬವನ್ನು ವಸಂತ ಋತುವಿನ ವಿಷುವತ್ ಸಂಕ್ರಾಂತಿಯ ಸಮೀಪದಲ್ಲಿ ಆಚರಿಸಲಾಗುತ್ತದೆ, ಇದು ಫಾಲ್ಗುಣ ಪೂರ್ಣಿಮೆಯಂದು ಮತ್ತು ಸಾಮಾನ್ಯವಾಗಿ ಫೆಬ್ರವರಿ ಕೊನೆಯಲ್ಲಿ ಅಥವಾ ಮಾರ್ಚ್ ಆರಂಭದಲ್ಲಿ ಈ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಹಬ್ಬವು ಕೆಟ್ಟದ್ದರ ಮೇಲೆ ಒಳ್ಳೆಯದ ವಿಜಯ, ವಸಂತಕಾಲದ ಆಗಮನ ಮತ್ತು ಚಳಿಗಾಲದ ಅಂತ್ಯ ಮತ್ತು ಇತರರನ್ನು ಭೇಟಿ ಮಾಡುವ ಅವಕಾಶವನ್ನು ಸೂಚಿಸುತ್ತದೆ. ಜನರನ್ನು ಆಟವಾಡಲು ಮತ್ತು ನಗಿಸಲು, ನೋವನ್ನು ಮರೆಯಲು ಮತ್ತು ಕ್ಷಮಿಸಲು, ಮುರಿದ ಸಂಬಂಧಗಳನ್ನು ಸರಿಪಡಿಸಲು ಈ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ.

ಹೋಳಿ ಹಬ್ಬವನ್ನು ಬಣ್ಣಗಳ ಹಬ್ಬ ಅಥವಾ ಪ್ರೀತಿಯ ಹಬ್ಬ ಎಂದು ಕರೆಯಲಾಗುತ್ತದೆ.  ಹೋಳಿ ಹಬ್ಬ ಪುರಾತನ ಹಿಂದೂ ಧಾರ್ಮಿಕ ಹಬ್ಬವಾಗಿ, ಹೋಳಿಯು ದಕ್ಷಿಣ ಏಷ್ಯಾದ ಹಿಂದೂಗಳಲ್ಲದವರಲ್ಲಿ ಮತ್ತು ಹೊರಗಿನ ಸಮುದಾಯಗಳಲ್ಲಿ ಜನಪ್ರಿಯವಾಗಿದೆ.  ಈ ಬಾರಿ ಹೋಳಿಯನ್ನು ಮಾರ್ಚ್ 18ರಂದು ಆಚರಣೆ ಮಾಡಲಾಗುತ್ತದೆ. ಈ ಹಿಂದೆ ಕೊರೊನಾ ಕಾಲದಲ್ಲಿ ಈ ಹಬ್ಬದ ಆಚರಣೆಗೆ ಅವಕಾಶ ಇರಲಿಲ್ಲ ಆದರೆ ಈ ಬಾರಿ ಹೋಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಲು ಹೋಳಿ ಪ್ರೀಯರು ಯೋಜನೆ ಹಾಕಿಕೊಂಡಿದ್ದಾರೆ.

Published On - 3:49 pm, Fri, 11 March 22

30 ವರ್ಷಗಳ ಬಳಿಕ ಭಾರತದ ಪ್ರಧಾನಿಯಿಂದ ಘಾನಾ ಭೇಟಿ;  ಮೋದಿಗೆ ಆತ್ಮೀಯ ಸ್ವಾಗತ
30 ವರ್ಷಗಳ ಬಳಿಕ ಭಾರತದ ಪ್ರಧಾನಿಯಿಂದ ಘಾನಾ ಭೇಟಿ;  ಮೋದಿಗೆ ಆತ್ಮೀಯ ಸ್ವಾಗತ
ಗ್ರಾಮೀಣ ಪ್ರದೇಶಗಳ ಸರ್ಕಾರೀ ಶಾಲೆಗಳಿಗೆ ಬೇಕಿದೆ ಕಾಯಕಲ್ಪ
ಗ್ರಾಮೀಣ ಪ್ರದೇಶಗಳ ಸರ್ಕಾರೀ ಶಾಲೆಗಳಿಗೆ ಬೇಕಿದೆ ಕಾಯಕಲ್ಪ
ಸರ್ಕಾರದ ಕೆಲಸಗಳನ್ನು ಮಾಧ್ಯಮಗಳಿಗೆ ತೋರಿಸುತ್ತೇನೆ ಎಂದ ಶಿವಕುಮಾರ್
ಸರ್ಕಾರದ ಕೆಲಸಗಳನ್ನು ಮಾಧ್ಯಮಗಳಿಗೆ ತೋರಿಸುತ್ತೇನೆ ಎಂದ ಶಿವಕುಮಾರ್
ನಾಳೆಯ ಅಮರನಾಥ ಯಾತ್ರೆಗೆ ತೆರಳಲು ಬಂದ ಭಕ್ತರಿಗೆ ಹೂವಿನ ಹಾರ ಹಾಕಿ ಸ್ವಾಗತ
ನಾಳೆಯ ಅಮರನಾಥ ಯಾತ್ರೆಗೆ ತೆರಳಲು ಬಂದ ಭಕ್ತರಿಗೆ ಹೂವಿನ ಹಾರ ಹಾಕಿ ಸ್ವಾಗತ
‘ನಾವು ಗೌಡ್ರು, ಮಾತು ಸ್ಮೂತ್ ಇಲ್ಲ’; ಯಶ್ ತಾಯಿ ಪುಷ್ಪಾ
‘ನಾವು ಗೌಡ್ರು, ಮಾತು ಸ್ಮೂತ್ ಇಲ್ಲ’; ಯಶ್ ತಾಯಿ ಪುಷ್ಪಾ
ಸಂಪುಟ ಸಭೆ ನಂತರ ಹೆಚ್​ಕೆ ಪಾಟೀಲ್ ಬದಲು ಸಿದ್ದರಾಮಯ್ಯರಿಂದ ಸುದ್ದಿಗೋಷ್ಠಿ
ಸಂಪುಟ ಸಭೆ ನಂತರ ಹೆಚ್​ಕೆ ಪಾಟೀಲ್ ಬದಲು ಸಿದ್ದರಾಮಯ್ಯರಿಂದ ಸುದ್ದಿಗೋಷ್ಠಿ
ಕಂಡಕ್ಟರ್ ಟಿಕೆಟ್ ಹಿಂದೆ ಚಿಲ್ಲರೆ ಹಣದ ಬಗ್ಗೆ ಬರೆಯದಿರುವುದು ಜಗಳದ ಮೂಲ
ಕಂಡಕ್ಟರ್ ಟಿಕೆಟ್ ಹಿಂದೆ ಚಿಲ್ಲರೆ ಹಣದ ಬಗ್ಗೆ ಬರೆಯದಿರುವುದು ಜಗಳದ ಮೂಲ
ಅಧಿಕಾರಾವಧಿಗೆ ಗ್ರಹಣ ಹಿಡಿಯುತ್ತಿರುವುದು ಸಿಎಂಗೆ ಗೊತ್ತಾಗಿದೆ: ಅಶೋಕ
ಅಧಿಕಾರಾವಧಿಗೆ ಗ್ರಹಣ ಹಿಡಿಯುತ್ತಿರುವುದು ಸಿಎಂಗೆ ಗೊತ್ತಾಗಿದೆ: ಅಶೋಕ
ಗೋಲ್ಡನ್ ಅವರ್ ಯಾವ ಕಾರಣಕ್ಕೂ ಮಿಸ್ ಆಗಬಾರದು: ಡಾ ಮಂಜುನಾಥ್
ಗೋಲ್ಡನ್ ಅವರ್ ಯಾವ ಕಾರಣಕ್ಕೂ ಮಿಸ್ ಆಗಬಾರದು: ಡಾ ಮಂಜುನಾಥ್
ಕಾರವಾರ: ರಸ್ತೆ ಇಲ್ಲವೆಂದು ಈ ಗ್ರಾಮದ ಯುವಕರಿಗೆ ಕನ್ಯೆ ಕೊಡ್ತಿಲ್ಲ
ಕಾರವಾರ: ರಸ್ತೆ ಇಲ್ಲವೆಂದು ಈ ಗ್ರಾಮದ ಯುವಕರಿಗೆ ಕನ್ಯೆ ಕೊಡ್ತಿಲ್ಲ