AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Aquarius Yearly Horoscope 2025: ಈ ರಾಶಿಯವರಿಗೆ 2025ನೇ ವರ್ಷ ಫುಲ್ ಹ್ಯಾಪಿ, ಆದರೆ ಈ ನಾಲ್ಕು ವಿಚಾರದ ಬಗ್ಗೆ ಇರಲಿ ಗಮನ

ಕುಂಭ ರಾಶಿ ವರ್ಷ ಭವಿಷ್ಯ 2025: ಈ ವರ್ಷ ನಿಮಗೆ ಅನೇಕ ಶುಭಗಳು ಇದ್ದರೂ ಅಶುಭವೂ ಕಾಣಿಸುವುದು. ಆದರೆ ಅದನ್ನು ದಾಟುವ ಮನಃಸ್ಥಿತಿ ನಿಮ್ಮದಾಗಲಿದೆ. ದೈವಾನುಗ್ರಹವೂ ನಿಮ್ಮ ಜೊತೆಗಿರಲು ಹನುಮಾನ್ ಚಾಲೀಸ್ ಪಠಣ, ಸುವಸ್ತುಗಳ ದಾನದಿಂದ ಸಾಧ್ಯ. ಮನಸ್ಸಿಗೆ ಅತಿಯಾಗಿ ಕಿರಿ ಕಿರಿ ಎನಿಸಿದರೆ ನಾಗದೇವರಿಗೆ ಪೂಜೆ ಸಲ್ಲಿಸಿ. ಮುಖ್ಯವಾಗಿ ಈ ನಾಲ್ಕು ವಿಚಾರದ ಬಗ್ಗೆ ಹೆಚ್ಚು ಗಮನ ಇರಲಿ.

Aquarius Yearly Horoscope 2025: ಈ ರಾಶಿಯವರಿಗೆ 2025ನೇ ವರ್ಷ ಫುಲ್ ಹ್ಯಾಪಿ, ಆದರೆ ಈ ನಾಲ್ಕು ವಿಚಾರದ ಬಗ್ಗೆ ಇರಲಿ ಗಮನ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jan 03, 2025 | 2:19 PM

Share

ರಾಶಿ ಚಕ್ರದ ಹನ್ನೊಂದನೆ ರಾಶಿಯವರಿಗೆ ಈ ವರ್ಷ ಮಿಶ್ರಫಲ. ಪಂಚಮಕ್ಕೆ ಹೋಗುವ ಗುರುವಿನ ಬಲ ಮತ್ತು ದೃಷ್ಟಿ ಎರಡೂ ಇರಲಿದೆ. ಸಾಡೆಸಾಥ್ ನ ಅಂತ್ಯ ಭಾಗ ಆರಂಭವಾಗಲಿದೆ. ಶನಿಯು ತನ್ನ ರಾಶಿಯನ್ನು ಬಿಟ್ಟು ದ್ವಿತೀಯ ಸ್ಥಾನಕ್ಕೆ ಹೋಗುವನು. ರಾಹುವು ನಿಮ್ಮ ರಾಶಿಗೆ ಬರಲಿದ್ದಾನೆ. ಕೇತುವು ಸಪ್ತಮಕ್ಕೆ ಹೋಗುವನು. ಆರ್ಥಿಕ ಹಾಗು ಆರೋಗ್ಯಕ್ಕೆ ಅಷ್ಟು ಪೂರಕವಾದುದಲ್ಲ. ಒಟ್ಟಾರೆ ನಿಮ್ಮ ವರ್ಷ ಸಂತೋಷಮಯವಾಗಿ ಇರಲಿದೆ.

ಆರೋಗ್ಯ :

ಈ ವರ್ಷ ನಿಮಗೆ ಆರೋಗ್ಯ ಬಗ್ಗೆ ಆರಂಭದ ದಿನಗಳಲ್ಲಿ ಗಮನ ಕೊಡದೇ ಇದ್ದರೂ ಅನಂತರ ಬೇಕು. ವಿಶೇಷವಾಗಿ ಮಾನಸಿಕ ಅರೋಗ್ಯ ಬಹಳ ಮುಖ್ಯ. ವಿವಿಧ ಕ್ಲೇಶವನ್ನು ಸಹಿಸುವ ಮನೋಧರ್ಮವಿರಬೇಕು. ರಾಹು ದಶೆಯಾದರೆ ಕಷ್ಟವಾಗುವುದು.

ಪ್ರೇಮ ಮತ್ತು ವಿವಾಹ :

ಮೇ ತಿಂಗಳ ಅನಂತರ ವಿವಾಹವಾಗಲು ಯೋಜನೆ ಮಾಡಬಹುದು, ಗುರುಬಲವಿದೆ. ಪ್ರೇಮವು ನಿಮ್ಮನ್ನು ಗೊಂದಲಕ್ಕೆ ಒಯ್ಯುವುದು. ತೀರ್ಮಾನ ಕಷ್ಟ. ಅನೇಕ ಕಟ್ಟುಪಾಡುಗಳನ್ನು ಒಪ್ಪಬೇಕು. ರವಿದಶೆಯವರಿಗೆ ಅನುಕೂಲತೆ ಹೆಚ್ಚು. ದಾಂಪತ್ಯದಲ್ಲಿ ಅಸಮಾಧಾನ ಬರುವುದು, ಹಿರಿಯರ ಜೊತೆ ಕುಳಿತು ಮನಸ್ತಾಪವನ್ನು ಸರಿಮಾಡಿಕೊಳ್ಳಬಹುದು.

ಉದ್ಯೋಗ ಮತ್ತು ಆರ್ಥಿಕತೆ :

ಆರಂಭಿಕ ದಿನಗಳಲ್ಲಿ ಉದ್ಯೋಗದಲ್ಲಿ ಅಧಿಕ ಆದಾಯವನ್ನೋ ಅಥವಾ ಸ್ಥಾನಮಾನವನ್ನೋ ನಿರೀಕ್ಷಿಸಲು ಸಾಧ್ಯವಿಲ್ಲ. ಆದರೆ ಅನಂತರ ವೃದ್ಧಿಯನ್ನು ಕಾಣುವಿರಿ. ತಂತ್ರಜ್ಞ, ಯಂತ್ರಜ್ಞರಿಗೆ ಅನುಕೂಲಕರ ವರ್ಷ. ಆರ್ಥಿಕತೆ ಸುಧಾರಣೆ ಆಗಿಲಿದೆ. ಹಣದ ಹರಿವನ್ನು ನೀವು ಕಾಣಬಹುದು.

ಕುಟುಂಬ ವ್ಯವಸ್ಥೆ :

ಹಿರಿಯ ಮಾರ್ಗದರ್ಶನ ಸಿಗುವ ಕಾರಣ ನೀವು ಅತಿಯಾಗಿ ಏನನ್ನೂ ಮಾಡುವುದಾಗಲಿ, ಹೇಳುವುದಾಗಲಿ ಮಾಡಲಾರಿರಿ. ಆನಂದದ ವಾತಾವರಣ ಮನೆಯಲ್ಲಿ ಇರಲಿದೆ. ಅದನ್ನು ಅನುಭವಿಸಿ, ಪಾಠವನ್ನು ಕಲಿಯುವಿರಿ.

ಶತ್ರುಬಾಧೆ :

ಆರಂಭದಲ್ಲಿ ಶತ್ರುವಿನಿಂದ ತೊಂದರೆ. ಕುಜ ದಶೆಯವರಿಗೆ ಬೇರೆ ಬೇರೆ ರೀತಿಯಲ್ಲಿ ಶತ್ರುಗಳನ್ನು ಎದುರಿಸಬೇಕಾಗುವುದು. ಉದ್ಯೋಗ, ವ್ಯವಹಾರ, ಕುಟುಂಬ ಎಲ್ಲದರಲ್ಲೂ ಶತ್ರುತ್ವ ಕಷ್ಟವಾಗುವುದು. ಎಲ್ಲಿಯೂ ಯಾರೂ ಎದುರಿಂದ ಮಾಡಲಾರರು. ಪರೋಕ್ಷವಾಗಿ ನಿಮ್ಮ ಎಲ್ಲ ಕೆಲಸಕ್ಕೆ ವಿಘ್ನ.

ಅದೃಷ್ಟ :

ಎಂತಹ ಕಷ್ಟಗಳು ಬಂದರೂ ಅದಕ್ಕೆ ಬೇಕಾದ ದಾರಿ ಸಿಗುವುದೇ ಅದೃಷ್ಟ. ಅದರಿಂದ ನೀವು ಸುರಕ್ಷಿತವಾಗುವಿರಿ. ಯಾವುದಾದರೂ ಒಂದು ರೀತಿಯಲ್ಲಿ ನಿಮಗೆ ಸುಖದ ದಾರಿ ಕಾಣಿಸುವುದು. ಶುಕ್ರದಶೆಯವರಿಗೆ ಅದೃಷ್ಟದ ಪರಿಣಾಮ ಅರಿವಿಗೆ ಬರುವುದು.

ಹೀಗೆ ಈ ವರ್ಷ ನಿಮಗೆ ಅನೇಕ ಶುಭಗಳು ಇದ್ದರೂ ಅಶುಭವೂ ಕಾಣಿಸುವುದು. ಆದರೆ ಅದನ್ನು ದಾಟುವ ಮನಃಸ್ಥಿತಿ ನಿಮ್ಮದಾಗಲಿದೆ. ದೈವಾನುಗ್ರಹವೂ ನಿಮ್ಮ ಜೊತೆಗಿರಲು ಹನುಮಾನ್ ಚಾಲೀಸ್ ಪಠಣ, ಸುವಸ್ತುಗಳ ದಾನದಿಂದ ಸಾಧ್ಯ. ಮನಸ್ಸಿಗೆ ಅತಿಯಾಗಿ ಕಿರಿ ಕಿರಿ ಎನಿಸಿದರೆ ನಾಗದೇವರಿಗೆ ಪೂಜೆ ಸಲ್ಲಿಸಿ.

– ಲೋಹಿತ ಹೆಬ್ಬಾರ್, ಇಡುವಾಣಿ

Follow Us
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​