AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Aquarius Yearly Horoscope 2025: ಈ ರಾಶಿಯವರಿಗೆ 2025ನೇ ವರ್ಷ ಫುಲ್ ಹ್ಯಾಪಿ, ಆದರೆ ಈ ನಾಲ್ಕು ವಿಚಾರದ ಬಗ್ಗೆ ಇರಲಿ ಗಮನ

ಕುಂಭ ರಾಶಿ ವರ್ಷ ಭವಿಷ್ಯ 2025: ಈ ವರ್ಷ ನಿಮಗೆ ಅನೇಕ ಶುಭಗಳು ಇದ್ದರೂ ಅಶುಭವೂ ಕಾಣಿಸುವುದು. ಆದರೆ ಅದನ್ನು ದಾಟುವ ಮನಃಸ್ಥಿತಿ ನಿಮ್ಮದಾಗಲಿದೆ. ದೈವಾನುಗ್ರಹವೂ ನಿಮ್ಮ ಜೊತೆಗಿರಲು ಹನುಮಾನ್ ಚಾಲೀಸ್ ಪಠಣ, ಸುವಸ್ತುಗಳ ದಾನದಿಂದ ಸಾಧ್ಯ. ಮನಸ್ಸಿಗೆ ಅತಿಯಾಗಿ ಕಿರಿ ಕಿರಿ ಎನಿಸಿದರೆ ನಾಗದೇವರಿಗೆ ಪೂಜೆ ಸಲ್ಲಿಸಿ. ಮುಖ್ಯವಾಗಿ ಈ ನಾಲ್ಕು ವಿಚಾರದ ಬಗ್ಗೆ ಹೆಚ್ಚು ಗಮನ ಇರಲಿ.

Aquarius Yearly Horoscope 2025: ಈ ರಾಶಿಯವರಿಗೆ 2025ನೇ ವರ್ಷ ಫುಲ್ ಹ್ಯಾಪಿ, ಆದರೆ ಈ ನಾಲ್ಕು ವಿಚಾರದ ಬಗ್ಗೆ ಇರಲಿ ಗಮನ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jan 03, 2025 | 2:19 PM

Share

ರಾಶಿ ಚಕ್ರದ ಹನ್ನೊಂದನೆ ರಾಶಿಯವರಿಗೆ ಈ ವರ್ಷ ಮಿಶ್ರಫಲ. ಪಂಚಮಕ್ಕೆ ಹೋಗುವ ಗುರುವಿನ ಬಲ ಮತ್ತು ದೃಷ್ಟಿ ಎರಡೂ ಇರಲಿದೆ. ಸಾಡೆಸಾಥ್ ನ ಅಂತ್ಯ ಭಾಗ ಆರಂಭವಾಗಲಿದೆ. ಶನಿಯು ತನ್ನ ರಾಶಿಯನ್ನು ಬಿಟ್ಟು ದ್ವಿತೀಯ ಸ್ಥಾನಕ್ಕೆ ಹೋಗುವನು. ರಾಹುವು ನಿಮ್ಮ ರಾಶಿಗೆ ಬರಲಿದ್ದಾನೆ. ಕೇತುವು ಸಪ್ತಮಕ್ಕೆ ಹೋಗುವನು. ಆರ್ಥಿಕ ಹಾಗು ಆರೋಗ್ಯಕ್ಕೆ ಅಷ್ಟು ಪೂರಕವಾದುದಲ್ಲ. ಒಟ್ಟಾರೆ ನಿಮ್ಮ ವರ್ಷ ಸಂತೋಷಮಯವಾಗಿ ಇರಲಿದೆ.

ಆರೋಗ್ಯ :

ಈ ವರ್ಷ ನಿಮಗೆ ಆರೋಗ್ಯ ಬಗ್ಗೆ ಆರಂಭದ ದಿನಗಳಲ್ಲಿ ಗಮನ ಕೊಡದೇ ಇದ್ದರೂ ಅನಂತರ ಬೇಕು. ವಿಶೇಷವಾಗಿ ಮಾನಸಿಕ ಅರೋಗ್ಯ ಬಹಳ ಮುಖ್ಯ. ವಿವಿಧ ಕ್ಲೇಶವನ್ನು ಸಹಿಸುವ ಮನೋಧರ್ಮವಿರಬೇಕು. ರಾಹು ದಶೆಯಾದರೆ ಕಷ್ಟವಾಗುವುದು.

ಪ್ರೇಮ ಮತ್ತು ವಿವಾಹ :

ಮೇ ತಿಂಗಳ ಅನಂತರ ವಿವಾಹವಾಗಲು ಯೋಜನೆ ಮಾಡಬಹುದು, ಗುರುಬಲವಿದೆ. ಪ್ರೇಮವು ನಿಮ್ಮನ್ನು ಗೊಂದಲಕ್ಕೆ ಒಯ್ಯುವುದು. ತೀರ್ಮಾನ ಕಷ್ಟ. ಅನೇಕ ಕಟ್ಟುಪಾಡುಗಳನ್ನು ಒಪ್ಪಬೇಕು. ರವಿದಶೆಯವರಿಗೆ ಅನುಕೂಲತೆ ಹೆಚ್ಚು. ದಾಂಪತ್ಯದಲ್ಲಿ ಅಸಮಾಧಾನ ಬರುವುದು, ಹಿರಿಯರ ಜೊತೆ ಕುಳಿತು ಮನಸ್ತಾಪವನ್ನು ಸರಿಮಾಡಿಕೊಳ್ಳಬಹುದು.

ಉದ್ಯೋಗ ಮತ್ತು ಆರ್ಥಿಕತೆ :

ಆರಂಭಿಕ ದಿನಗಳಲ್ಲಿ ಉದ್ಯೋಗದಲ್ಲಿ ಅಧಿಕ ಆದಾಯವನ್ನೋ ಅಥವಾ ಸ್ಥಾನಮಾನವನ್ನೋ ನಿರೀಕ್ಷಿಸಲು ಸಾಧ್ಯವಿಲ್ಲ. ಆದರೆ ಅನಂತರ ವೃದ್ಧಿಯನ್ನು ಕಾಣುವಿರಿ. ತಂತ್ರಜ್ಞ, ಯಂತ್ರಜ್ಞರಿಗೆ ಅನುಕೂಲಕರ ವರ್ಷ. ಆರ್ಥಿಕತೆ ಸುಧಾರಣೆ ಆಗಿಲಿದೆ. ಹಣದ ಹರಿವನ್ನು ನೀವು ಕಾಣಬಹುದು.

ಕುಟುಂಬ ವ್ಯವಸ್ಥೆ :

ಹಿರಿಯ ಮಾರ್ಗದರ್ಶನ ಸಿಗುವ ಕಾರಣ ನೀವು ಅತಿಯಾಗಿ ಏನನ್ನೂ ಮಾಡುವುದಾಗಲಿ, ಹೇಳುವುದಾಗಲಿ ಮಾಡಲಾರಿರಿ. ಆನಂದದ ವಾತಾವರಣ ಮನೆಯಲ್ಲಿ ಇರಲಿದೆ. ಅದನ್ನು ಅನುಭವಿಸಿ, ಪಾಠವನ್ನು ಕಲಿಯುವಿರಿ.

ಶತ್ರುಬಾಧೆ :

ಆರಂಭದಲ್ಲಿ ಶತ್ರುವಿನಿಂದ ತೊಂದರೆ. ಕುಜ ದಶೆಯವರಿಗೆ ಬೇರೆ ಬೇರೆ ರೀತಿಯಲ್ಲಿ ಶತ್ರುಗಳನ್ನು ಎದುರಿಸಬೇಕಾಗುವುದು. ಉದ್ಯೋಗ, ವ್ಯವಹಾರ, ಕುಟುಂಬ ಎಲ್ಲದರಲ್ಲೂ ಶತ್ರುತ್ವ ಕಷ್ಟವಾಗುವುದು. ಎಲ್ಲಿಯೂ ಯಾರೂ ಎದುರಿಂದ ಮಾಡಲಾರರು. ಪರೋಕ್ಷವಾಗಿ ನಿಮ್ಮ ಎಲ್ಲ ಕೆಲಸಕ್ಕೆ ವಿಘ್ನ.

ಅದೃಷ್ಟ :

ಎಂತಹ ಕಷ್ಟಗಳು ಬಂದರೂ ಅದಕ್ಕೆ ಬೇಕಾದ ದಾರಿ ಸಿಗುವುದೇ ಅದೃಷ್ಟ. ಅದರಿಂದ ನೀವು ಸುರಕ್ಷಿತವಾಗುವಿರಿ. ಯಾವುದಾದರೂ ಒಂದು ರೀತಿಯಲ್ಲಿ ನಿಮಗೆ ಸುಖದ ದಾರಿ ಕಾಣಿಸುವುದು. ಶುಕ್ರದಶೆಯವರಿಗೆ ಅದೃಷ್ಟದ ಪರಿಣಾಮ ಅರಿವಿಗೆ ಬರುವುದು.

ಹೀಗೆ ಈ ವರ್ಷ ನಿಮಗೆ ಅನೇಕ ಶುಭಗಳು ಇದ್ದರೂ ಅಶುಭವೂ ಕಾಣಿಸುವುದು. ಆದರೆ ಅದನ್ನು ದಾಟುವ ಮನಃಸ್ಥಿತಿ ನಿಮ್ಮದಾಗಲಿದೆ. ದೈವಾನುಗ್ರಹವೂ ನಿಮ್ಮ ಜೊತೆಗಿರಲು ಹನುಮಾನ್ ಚಾಲೀಸ್ ಪಠಣ, ಸುವಸ್ತುಗಳ ದಾನದಿಂದ ಸಾಧ್ಯ. ಮನಸ್ಸಿಗೆ ಅತಿಯಾಗಿ ಕಿರಿ ಕಿರಿ ಎನಿಸಿದರೆ ನಾಗದೇವರಿಗೆ ಪೂಜೆ ಸಲ್ಲಿಸಿ.

– ಲೋಹಿತ ಹೆಬ್ಬಾರ್, ಇಡುವಾಣಿ

‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ