Astrology: ಇಂದು ನಿಮ್ಮ ಕೋಪದ ಮೇಲೆ ನಿಯಂತ್ರಣವಿರಲಿ

ರಾಶಿ ಭವಿಷ್ಯ ಬುಧವಾರ(ಸೆ. 11): ನಿಮ್ಮ ತಪ್ಪುಗಳಿಂದ ಪಶ್ಚಾತ್ತಾಪವಾಗಬೇಕೇ ಹೊರತೆ, ಅದನ್ನು ಸಮರ್ಥಿಸಿಕೊಂಡು ದೊಡ್ಡವರಾಗುವುದಿಲ್ಲ. ಇಂದು ಕೆಲಸದ ಸ್ಥಳದಲ್ಲಿ ಅನಗತ್ಯ ಓಡಾಟವನ್ನು ಮಾಡಬೇಕಾದೀತು. ನಿಮ್ಮ ಕೋಪದ ಮೇಲೆ ನಿಯಂತ್ರಣವಿರಲಿ. ಯಾವುದನ್ನೂ ನಿಮಗೆ ಗೊತ್ತಿಲ್ಲವೆಂದು ತೋರಿಸಿಕೊಳ್ಳಲಾರಿ ಹಾಗಾದರೆ ಸೆಪ್ಟೆಂಬರ್​ 11ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Astrology: ಇಂದು ನಿಮ್ಮ ಕೋಪದ ಮೇಲೆ ನಿಯಂತ್ರಣವಿರಲಿ
ದಿನಭವಿಷ್ಯ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 11, 2024 | 12:30 AM

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಪೂರ್ವಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ಅಷ್ಟಮೀ, ನಿತ್ಯನಕ್ಷತ್ರ: ಜ್ಯೇಷ್ಠಾ, ಯೋಗ: ಪ್ರೀತಿ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:35 ಗಂಟೆ, ರಾಹು ಕಾಲ ಬೆಳಿಗ್ಗೆ 12:29 ರಿಂದ ಸಂಜೆ 02:01, ಯಮಘಂಡ ಕಾಲ ಬೆಳಿಗ್ಗೆ 07:54 ರಿಂದ 09:26ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 10:57 ರಿಂದ 12:29ರ ವರೆಗೆ.

ಧನು ರಾಶಿ : ಇಂದು ಅನಗತ್ಯ ಓಡಾಟದಿಂದ ಆರಂಭ. ನೀವು ಕೆಲವು ಅಹಿತಕರ ಸುದ್ದಿಗಳು ನಿಮ್ಮನ್ನು ಕುಗ್ಗಿಸಬಹುದು. ಕೆಲಸದ ಪ್ರದೇಶದಲ್ಲಿ ವಿಪರೀತ ಕಾರ್ಯದ ಒತ್ತಡವಿರುವುದು. ಯಾವುದೇ ಪ್ರಮುಖ ಕಾರ್ಯದಲ್ಲಿ ಅಡಚಣೆ ಆಗುವ ಸಾಧ್ಯತೆ ಇದೆ. ಕೆಲವರಿಗೆ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗುವ ಅವಕಾಶ ಸಿಗಬಹುದು. ನೀವು ಇಷ್ಟಪಡುವ ವ್ಯಕ್ತಿಯೊಂದಿಗೆ ಮಾತನಾಡಲು ಪ್ರಯತ್ನಗಳು ಇಂದು ಪೂರ್ಣಗೊಳ್ಳಬಹುದು. ತಿರುಗಾಡುವ ಮೂಲಕ ನಿಮ್ಮ ವೃತ್ತಿಗೆ ಸ್ವಲ್ಪ ಆದಾಯ ಬರುವುದು. ಯಾರದೋ ತಂತ್ರಕ್ಕೆ ನೀವು ಬಲಿಯಾಗುವಿರಿ. ನಿಮಗೆ ಯಾವುದಾದರೂ ಕೆಟ್ಟದ್ದು ಎಂದು ಎನಿಸಿದರೆ ಅದರಿಂದ ದೂರವಿರಬೇಕು. ತಪ್ಪು ತಿಳುವಳಿಕೆಯನ್ನು ಪರಿಹರಿಸಲು ನಿಮ್ಮ ಸಂಗಾತಿಯೊಂದಿಗೆ ಮಾತನಾಡಿ. ಮುಂಬರುವ ತೊಂದರೆಗೆ ನೀವೇ ತಲೆಕೊಡಬೇಕಾದೀತು.

ಮಕರ ರಾಶಿ : ನೀವು ವಿವಿಧ ಕಡೆಯಿಂದ ಒಳ್ಳೆಯ ಸುದ್ದಿಗಳನ್ನು ಪಡೆಯುತ್ತೀರಿ. ವಿದೇಶದಿಂದ ಬಂದ ಬಂಧುಗಳಿಂದ ಉಡುಗೊರೆ ಸಿಗಲಿದೆ. ಉದ್ಯೋಗದಲ್ಲಿ ಉನ್ನತ ಅಧಿಕಾರಿಗಳ ಜೊತೆ ಆಪ್ತತೆ ಹೆಚ್ಚಾಗುತ್ತದೆ. ಕೆಲವರು ತಮ್ಮ ಕಠಿಣ ಪರಿಶ್ರಮಕ್ಕಾಗಿ ಪ್ರಶಂಸೆಯನ್ನು ಪಡೆಯಬಹುದು. ನಿಮ್ಮ ಸಂಬಂಧವನ್ನು ಬಲಪಡಿಸಲು ಇಂದು ಕ್ರಮಗಳನ್ನು ತೆಗೆದುಕೊಳ್ಳಿ. ಸಂವಹನದಲ್ಲಿ ದೃಢತೆ ಇರಲಿ. ವ್ಯಾಪಾರದಲ್ಲಿ ಹೊಸ ಗ್ರಾಹಕರ ಮೂಲಕ ಪರಿಸ್ಥಿತಿ ಸುಧಾರಣೆ ಕಾಣುತ್ತದೆ. ಸ್ನೇಹಿತರ ಜೊತೆ ಮನೋರಂಜನೆಯಲ್ಲಿ ತೊಡಗುವಿರಿ. ಉದ್ಯಮದಲ್ಲಿ ಸರ್ಕಾರದ ಸಹಾಯಕ್ಕೆ ಪ್ರಯತ್ನಿಸುವಿರಿ. ಕೆಲವು ಅಪೂರ್ಣ ಕೆಲಸಗಳು ಪೂರ್ಣಗೊಳ್ಳುವುದು. ರಾಜಕೀಯದ ನಾಯಕರಿಗೆ ಸಾರ್ವಜನಿಕ ಸಹಕಾರ ಮತ್ತು ಬೆಂಬಲ ಸಿಗುವುದು. ಯಾರ ನಕಾರಾತ್ಮಕ ಮಾತುಗಳೂ ನಿಮ್ಮ ಲೆಕ್ಕಕ್ಕೆ ಬಾರದು. ನಿರುದ್ಯೋಗಿಗಳಿಗೆ ಉದ್ಯೋಗದಲ್ಲಿ ಅವಕಾಶ ಪ್ರಾಪ್ತಿ. ಸಮಾಜಸೇವೆಯಲ್ಲಿ ತಾಳ್ಮೆಯಿಂದ ಚಿಂತನಶೀಲವಾಗಿ ವರ್ತಿಸಿ.

ಕುಂಭ ರಾಶಿ : ಯಾವುದೇ ವೃತ್ತಿಯಾಗಿದ್ದರೂ ಅವರ ಸಾಧನೆಗೆ ಗೌರವವು ಸಿಗಲಿದೆ‌ ಇಂದು ಅನಗತ್ಯವಾಗಿ ಜಗಳಕ್ಕೆ ಇಳಿಯುವ ಸಂದರ್ಭ ಬರಬಹುದು. ನಿಮ್ಮ ಸ್ಥಾನ ಸಮಯ ಇವುಗಳನ್ನು ಯೋಚಿಸಿ ನಿಮ್ಮ ಕಾರ್ಯವನ್ನು ಮುಂದುವರಿಸಿ. ಮಧ್ಯವರ್ತಿಗಳ ಜೊತೆ ಎಚ್ಚರಿಕೆಯಿಂದ ವ್ಯಾಪಾರ ಮಾಡಿ. ನೀವು ಇಂದು ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಸಮಯ ಕಳೆಯಬಹುದು. ಪ್ರಯಾಣ ಮಾಡುವವರಿಗೆ ಇಂದು ಉತ್ತಮ ದಿನ. ಯಾವುದೇ ರಿಸ್ಕ್ ಬೇಡ. ವೃತ್ತಿಯಲ್ಲಿ ನಿಮಗೆ ಗೊಂದಲ ಮತ್ತು ಆತಂಕದ ಸ್ಥಿತಿ ಬರುತ್ತದೆ. ನಿಮ್ಮ ನಿರ್ಧಾರವು ಪ್ರಬಲವಾಗಿರಲಿ. ಅದು ಜೀವನದಲ್ಲಿ ಬದಲಾವಣೆಯನ್ನೇ ತರಬಹುದು. ಪ್ರಮುಖ ಯೋಜನೆಗಳು ಅಜ್ಞಾತ ಕಾರಣಗಳಿಂದ ಮುಂದೂಡಬಹುದು. ಮಹಿಳೆಯರ ಸಮಯ ಹಾಸ್ಯದಲ್ಲಿ ಕಳೆಯಲಿದೆ. ಸ್ಪರ್ಧೆಯಲ್ಲಿ ಯಶಸ್ಸಿನ ಪೂರ್ಣ ಭರವಸೆ ಇದೆ. ಆದರೆ ಸಣ್ಣ ದೋಷವನ್ನೂ ಗಂಭೀರವಾಗಿ ಪಡೆದರೆ ಮಾತ್ರ ಸಾಧ್ಯವಾಗುವುದು. ಉನ್ನತ ಅಧಿಕಾರಿಗಳ ಮೇಲೆ ಸಿಟ್ಟು ಬಂದರೂ ಅದನ್ನು ಬೇರೆ ಕಡೆಯಲ್ಲಿ ಹೊರಹಾಕುವಿರಿ.

ಮೀನ ರಾಶಿ : ನಿಮ್ಮ ತಪ್ಪುಗಳಿಂದ ಪಶ್ಚಾತ್ತಾಪವಾಗಬೇಕೇ ಹೊರತೆ, ಅದನ್ನು ಸಮರ್ಥಿಸಿಕೊಂಡು ದೊಡ್ಡವರಾಗುವುದಿಲ್ಲ. ಇಂದು ಕೆಲಸದ ಸ್ಥಳದಲ್ಲಿ ಅನಗತ್ಯ ಓಡಾಟವನ್ನು ಮಾಡಬೇಕಾದೀತು. ನಿಮ್ಮ ಕೋಪದ ಮೇಲೆ ನಿಯಂತ್ರಣವಿರಲಿ. ಯಾವುದನ್ನೂ ನಿಮಗೆ ಗೊತ್ತಿಲ್ಲವೆಂದು ತೋರಿಸಿಕೊಳ್ಳಲಾರಿರಿ. ನಿಮ್ಮ ಸುಪರ್ದಿಯಲ್ಲಿರುವ ಬೆಲೆಬಾಳುವ ವಸ್ತು ಕಳ್ಳತನವಾಗುವ ಭಯವಿರುತ್ತದೆ. ವ್ಯವಹಾರದಲ್ಲಿ ನಿಮ್ಮ ವಿಶ್ವಾಸಾರ್ಹ ವ್ಯಕ್ತಿಯೇ ಮೋಸ ಮಾಡಬಹುದು. ನೀವು ಪ್ರೀತಿಪಾತ್ರರಿಂದ ದೂರ ಹೋಗಬೇಕಾಗಿ ಬರಬಹುದು. ಅನಪೇಕ್ಷಿತ ಪ್ರಯಾಣವನ್ನು ಕೈಗೊಳ್ಳುವಿರಿ. ರಾಜಕೀಯ ಕ್ಷೇತ್ರದಲ್ಲಿ ತೊಡಗುವ ಆಸಕ್ತಿ ತೋರುವಿರಿ. ಪ್ರಯಾಣದಲ್ಲಿ ಸ್ವಲ್ಪ ಒತ್ತಡವನ್ನು ಉಂಟುಮಾಡಬಹುದು. ಸ್ವಯಂ ಸ್ಫೂರ್ತಿಯಿಂದ ನಿಮ್ಮ ಕಾರ್ಯವನ್ನು ಸಾಧಿಸಿಕೊಳ್ಳುವಿರಿ. ಉದ್ಯೋಗ ಪಡೆಯುವ ನಿಮ್ಮ ಪ್ರಯತ್ನಗಳಲ್ಲಿ ವಿಫಲವಾದರೆ ನಿಮಗೆ ದುಃಖವಾಗುತ್ತದೆ. ವಿದೇಶ ಪ್ರವಾಸ ಹೋಗುವ ಅವಕಾಶವಿರುತ್ತದೆ. ನಿಮ್ಮ ಕೆಲಸದಲ್ಲಿ ನಿಮ್ಮ ಮೇಲಧಿಕಾರಿಯ ಕೋಪಕ್ಕೆ ನೀವು ಬಲಿಯಾಗಬಹುದು.

-ಲೋಹಿತ ಹೆಬ್ಬಾರ್-8762924271 (what’s app only)

ಧರ್ಮಸ್ಥಳ ಸಂಘದ ಬಗ್ಗೆ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ಆಘಾತಕಾರಿ ಹೇಳಿಕೆ
ಧರ್ಮಸ್ಥಳ ಸಂಘದ ಬಗ್ಗೆ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ಆಘಾತಕಾರಿ ಹೇಳಿಕೆ
ನಾವು ಸೇಡು ತೀರಿಸಿಕೊಂಡರೆ ಬಿಜೆಪಿಗೆ ಜೈಲುಗಳು ಸಾಕಾಗಲ್ಲ: ಹೆಬ್ಬಾಳ್ಕರ್
ನಾವು ಸೇಡು ತೀರಿಸಿಕೊಂಡರೆ ಬಿಜೆಪಿಗೆ ಜೈಲುಗಳು ಸಾಕಾಗಲ್ಲ: ಹೆಬ್ಬಾಳ್ಕರ್
‘ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಡ, ಇದರಿಂದ ಚಿತ್ರರಂಗಕ್ಕೆ ನಷ್ಟ’; ಗೋವಿಂದು
‘ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಡ, ಇದರಿಂದ ಚಿತ್ರರಂಗಕ್ಕೆ ನಷ್ಟ’; ಗೋವಿಂದು
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
‘ನನಗೂ ಕೆಟ್ಟ ಅನುಭವ ಆಗಿದೆ’; ನೀತು ಶೆಟ್ಟಿ ನೇರ ಮಾತು
‘ನನಗೂ ಕೆಟ್ಟ ಅನುಭವ ಆಗಿದೆ’; ನೀತು ಶೆಟ್ಟಿ ನೇರ ಮಾತು
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ