AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮಗೆ ಮಕ್ಕಳಾಗುತ್ತಿಲ್ಲವೇ, ಜಾತಕದಲ್ಲಿ ಸಂತಾನ ದೋಷ ಮತ್ತು ಪರಿಹಾರ

ಸಂತಾನ ಎಂಬುದು ಪ್ರತಿಯೊಂದು ಜೀವದಲ್ಲೂ ಇರುವ ಅತೀ ಮೌಲ್ಯಯುತವಾದ ಅಂಶ, ಅದನ್ನು ಪಡೆಯುವುದರ ಮೇಲೆ ಮುಂದಿನ ಆ ಜೀವಿಯ ವಂಶದ ನಿರ್ಣಾಯವಾಗಿರುತ್ತದೆ. ಆದರೆ ಮನುಷ್ಯ ಜೀವಕ್ಕೆ ಇದು ವಿಶೇಷವಾಗಿರುತ್ತದೆ. ಮನುಷ್ಯ ದೈವಿಕವಾಗಿ, ಆಧ್ಯಾತ್ಮ ಆಚರಣೆಗಳಲ್ಲಿ ಬದುಕುವ ಕಾರಣ ಅವನಿಗೆ ಶಾಪ, ದೋಷಗಳು ಅವನ ಜೀವನಕ್ಕೆ ಅಂಟಿಕೊಂಡಿರುತ್ತದೆ. ಅದು ಬೇರೆ ಬೇರ ರೀತಿಯಲ್ಲಿ ಅವನ ವಂಶಕ್ಕೆ ಅನ್ವಯಿಸುತ್ತದೆ. ಶಾಪಗಳಿಂದ, ದೋಷಗಳಿಂದ ಮನುಷ್ಯನ ಸಂತಾನಕ್ಕೆ ದೊಡ್ಡ ಪೆಟ್ಟು ಬಿದ್ದಿರುತ್ತದೆ. ಹಿಂದೂ ಧರ್ಮದ ಪ್ರಕಾರ ಅದು ಅವರ ಜಾತಕ ಹಾಗೂ ಕರ್ಮಫಲದ ಮೇಲೆ ಇರುತ್ತದೆ. ಜಾತಕದಲ್ಲಿ ಬರುವ ಸಂತಾನ ದೋಷಕ್ಕೆ ಏನ್​​ ಮಾಡುವುದು, ಈ ಬಗ್ಗೆ ಇಲ್ಲಿ ತಿಳಿಸಲಾಗಿದೆ ನೋಡಿ.

ನಿಮಗೆ ಮಕ್ಕಳಾಗುತ್ತಿಲ್ಲವೇ, ಜಾತಕದಲ್ಲಿ ಸಂತಾನ ದೋಷ ಮತ್ತು ಪರಿಹಾರ
Trending News (9)
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 20, 2025 | 1:43 PM

ಸಂತಾನವು ಮಾನವ ಜೀವನದಲ್ಲಿ ದೈವಿಕ ಕರುಣೆ ಮತ್ತು ಪಿತೃಋಣದ ಪರಿಪೂರ್ತಿಯ ಸಾಧನವೆಂದು ಪರಿಗಣಿಸಲಾಗಿದೆ. ವೇದಗಳು, ಪುರಾಣಗಳು ಮತ್ತು ಜ್ಯೋತಿಷ್ಯ ಗ್ರಂಥಗಳು ಸಂತಾನ ಸುಖಕ್ಕೆ ಅಡ್ಡಿಯಾಗುವ ಕಾರಣಗಳನ್ನು ಗ್ರಹ-ನಕ್ಷತ್ರಗಳ ಸ್ಥಿತಿ, ಪಿತೃದೋಷ, ಕರ್ಮಬಂಧಗಳು ಮತ್ತು ಭೌತಿಕ ದೋಷಗಳೊಂದಿಗೆ ಸಂಬಂಧಿಸಿವೆ. ಇಲ್ಲಿ, ಜಾತಕದ ಪ್ರಮುಖ ಯೋಗಗಳು ಮತ್ತು ಶಾಸ್ತ್ರೋಕ್ತ ಪರಿಹಾರಗಳನ್ನು ವಿವರಿಸಲಾಗಿದೆ.

ಸಂತಾನ ಪ್ರತಿಬಂಧಕ ಯೋಗಗಳ ಕಾರಣಗಳು

ಗುರು (ಬೃಹಸ್ಪತಿ) ನೀಚಸ್ಥಾನ

ಜಾತಕದಲ್ಲಿ 5 ನೇ ಮನೆಯ ಅಧಿಪತಿ ಗ್ರಹ ನೀಚ ಸ್ಥಿತಿಯಲ್ಲಿ ಇದ್ದರೆ ಅಥವಾ ಜಾತಕದ 5ನೇ ಭಾವ (ಸಂತಾನ) ಭಾವದಲ್ಲಿ ಪಾಪ ಗ್ರಹಗಳಾದ ಶನಿ ಅಥವಾ ಕುಜ ಸ್ಥಿತ ಆಗಿದ್ದಲ್ಲಿ ಅಥವಾ ಸಂತಾನ ಕಾರಕ ಗುರು ನೀಚರಾಶಿಯಲ್ಲಿ (ಮಕರ) ಸ್ಥಿತನಾದರೆ, ಸಂತಾನ ಸಾಧನೆಗೆ ತೀವ್ರ ಅಡಚಣೆ ಉಂಟಾಗುತ್ತದೆ. ಗುರು ಸಂತಾನ ಕಾರಕನಾಗಿರುವುದರಿಂದ, ಅವನ ದುರ್ಬಲತೆ ಸಂತಾನ ಕೊರತೆಗೆ ಕಾರಣವಾಗುತ್ತದೆ. ಬೃಹತ್ ಪಾರಾಶರ ಹೋರಾ ಶಾಸ್ತ್ರದಲ್ಲಿ ಹೇಳಿದಂತೆ

“गुरौ नीचस्थिते जाते पुत्रदुःखं प्रजायते। पितृकोपाद् भवेद् वंध्यं श्राद्धतर्पणतत्परः॥

ಜಾತಕದಲ್ಲಿ ಗುರು (ಬೃಹಸ್ಪತಿ) ನೀಚಸ್ಥಾನದಲ್ಲಿದ್ದರೆ, ಸಂತಾನಕ್ಕೆ ಸಂಬಂಧಿಸಿದ ದುಃಖಗಳು ಉದ್ಭವಿಸುತ್ತವೆ ಅಷ್ಟೇ ಅಲ್ಲ ಗುರು ನೀಚಸ್ಥಾನದಲ್ಲಿದ್ದರೆ ಪಿತೃಗಳ ಕೋಪದಿಂದ ಸಂತಾನಹೀನತೆ ಉಂಟಾಗುತ್ತದೆ

2. ಶುಕ್ರ ದುರ್ಬಲತೆ ಮತ್ತು ವೀರ್ಯದೋಷ

ಶುಕ್ರ (ವೀರ್ಯ, ಪ್ರೀತಿ, ದಾಂಪತ್ಯ) ಕುಂಡಲಿಯ 7ನೇ ಭಾವದಲ್ಲಿ ಪಾಪಗ್ರಹಗಳ (ರಾಹು, ಕೇತು, ಶನಿ) ಸಂಯೋಗ ಅಥವಾ ನೀಚಸ್ಥಾನದಲ್ಲಿದ್ದರೆ, ವೀರ್ಯದ ಕೊರತೆ, ಗರ್ಭಪಾತ ಅಥವಾ ದಾಂಪತ್ಯ ಕಲಹಗಳಿಂದ ಸಂತಾನ ಸುಖ ತಡೆಯಾಗುತ್ತದೆ.

ಭಾವ ಪ್ರಕಾಶ ಗ್ರಂಥದ ಪ್ರಕಾರ

“शुक्रे पापयुते जाते बीजदोषो भवेद् ध्रुवम्। दाम्पत्यकलहाच्चैव गर्भो न स्थिरतां व्रजेत्॥

ಶ್ಲೋಕದ ಅರ್ಥ

ಜಾತಕದಲ್ಲಿ ಶುಕ್ರ (ವೀರ್ಯ, ಪ್ರೀತಿ) ಗ್ರಹವು ಪಾಪಗ್ರಹಗಳ (ರಾಹು, ಕೇತು, ಶನಿ) ಸಂಯೋಗದಲ್ಲಿದ್ದರೆ, ವೀರ್ಯದ ದೋಷಗಳು (ಬೀಜದೋಷ) ಖಂಡಿತವಾಗಿ ಉಂಟಾಗುತ್ತವೆ. ದಾಂಪತ್ಯ ಜೀವನದಲ್ಲಿ ಕಲಹಗಳು ಹೆಚ್ಚಾಗಿ, ಗರ್ಭ ಧಾರಣೆಯಾದರೂ ಅದು ಸ್ಥಿರವಾಗಿ ಬೆಳೆಯದು. ಈ ಸ್ಥಿತಿಯಲ್ಲಿ ಗರ್ಭಪಾತ ಅಥವಾ ಮಕ್ಕಳಿಲ್ಲದ ಸಮಸ್ಯೆಗಳು ಸಂಭವಿಸಬಹುದು.

3. ಸರ್ಪದೋಷ (ನಾಗದೋಷ)

ಪಿತೃವಂಶದಲ್ಲಿ ನಾಗರ ಹತ್ಯೆ ಅಥವಾ ಅಪಮಾನವಿದ್ದರೆ, ಸರ್ಪದೋಷ ಸಂತಾನಕ್ಕೆ ಅಡ್ಡಿ ಮಾಡುತ್ತದೆ. ಗರುಡ ಪುರಾಣದಲ್ಲಿ ಹೇಳಿದಂತೆ: “नागानामपमानेन वंशे वंध्यात्वमृच्छति। नागबलिं विना देवि पुत्रलाभो न जायते॥”

ನಾಗರ ಅಪಮಾನದಿಂದ ವಂಶವೃದ್ಧಿ ನಿಂತುಹೋಗುತ್ತದೆ; ನಾಗಬಲಿ ಇಲ್ಲದೆ ಸಂತಾನಲಾಭ ಸಾಧ್ಯವಿಲ್ಲ

4. ವಾಸ್ತು ದೋಷ

ಗೃಹದ ವಾಸ್ತು ಅಸಮತೋಲನ (ಉದಾ: ಪಶ್ಚಿಮ ದಿಕ್ಕಿನಲ್ಲಿ ಶೌಚಾಲಯ, ದಕ್ಷಿಣದಲ್ಲಿ ನೀರಿನ ಸಂಗ್ರಹ) ಗರ್ಭಸ್ಥಾಪನೆಗೆ ಅನಿಷ್ಟಕಾರಿ. ಮಯಮತಂ ಗ್ರಂಥದಲ್ಲಿ

“वास्तुदोषे कुले जाते गर्भो नैव प्रतिष्ठते। नैऋत्यां जलसंस्थानं पुत्रनाशाय जायते॥”

ಮನೆ ಅಥವಾ ಕುಟುಂಬದಲ್ಲಿ ವಾಸ್ತು ದೋಷ ಇದ್ದರೆ, ಗರ್ಭ ಸ್ಥಾಪನೆಗೆ ಅಡಚಣೆ ಉಂಟಾಗುತ್ತದೆ (ಗರ್ಭ ಧರಿಸಿದರೂ ಅದು ಸ್ಥಿರವಾಗಿ ಬೆಳೆಯದು)

ನೈಋತ್ಯ ದಿಕ್ಕಿನಲ್ಲಿ (ಸೌತ್-ವೆಸ್ಟ್) ನೀರಿನ ಸಂಗ್ರಹ (ಕೊಳ, ಬಾವಿ, ಒಳಚರಂಡಿ) ಇದ್ದರೆ, ಮಕ್ಕಳ ನಷ್ಟ ಅಥವಾ ಗರ್ಭಪಾತದ ಸಾಧ್ಯತೆ ಹೆಚ್ಚು.

5. ಪ್ರಾಗಾ ರಾಧಿತ ದೇವತೆಯ ಕೋಪ ಕುಟುಂಬದ ಇಷ್ಟದೇವತೆ ಅಥವಾ ಕುಲದೈವದ ಆರಾಧನೆಯಲ್ಲಿ ನಿರ್ಲಕ್ಷ್ಯ ಇದ್ದರೆ, ಅಥವಾ ಹರಕೆ ಹೊತ್ತು ಮರೆತಿದ್ದರೆ ಅವರ ಕೋಪ ಸಂತಾನಹೀನತೆಗೆ ಕಾರಣವಾಗುತ್ತದೆ. ಸ್ಕಂದ ಪುರಾಣದ ಪ್ರಕಾರ

“यस्य देवः कुपितो वै शापं दद्यात् कुलाधिपः। तस्य पुत्राश्च पौत्राश्च नश्यन्ते नात्र संशयः॥”

ಶ್ಲೋಕದ ತಾತ್ಪರ್ಯ ಯಾವನ ಕುಲದೇವತೆ/ಇಷ್ಟದೇವತೆ ಕೋಪಗೊಂಡು ಶಾಪ ನೀಡುತ್ತಾಳೋ, ಅವನ ಪುತ್ರರು ಮತ್ತು ಮೊಮ್ಮಕ್ಕಳು ನಾಶವಾಗುತ್ತಾರೆ. ಇದರಲ್ಲಿ ಯಾವುದೇ ಸಂದೇಹವಿಲ್ಲ.

6. ಚಂದ್ರ-ಸೂರ್ಯರ ದುರ್ಬಲತೆ

ಚಂದ್ರ (ಮನಸ್ಸು, ಗರ್ಭ) ಮತ್ತು ಸೂರ್ಯ (ಜೀವಶಕ್ತಿ) ಪಾಪಗ್ರಹಗಳಿಂದ ಪೀಡಿತರಾಗಿದ್ದರೆ, ಗರ್ಭಧಾರಣೆ ಸಾಧ್ಯವಾಗುವುದಿಲ್ಲ. ಫಲದೀಪಿಕಾಯಲ್ಲಿ ಹೇಳಿದೆ

“चन्द्रसूर्यौ यदा पापैः संयुक्तौ पीडितौ भवेत्। गर्भो न जायते तत्र नारीणां वंध्यतां व्रजेत्॥”

ಶಾಸ್ತ್ರೋಕ್ತ ಪರಿಹಾರಗಳು

ಗುರು ಶಾಂತಿ

ನೀಚಸ್ಥ ಗುರುದೋಷ ನಿವಾರಣೆಗೆ “ಬೃಹಸ್ಪತಿ ಯಾಗ” ಮಾಡಿಸಿ. ಹಳದಿ ಪುಷ್ಯರಾಗ ಧರಿಸಿ, ಗುರು ಮಂತ್ರ ಜಪಿಸಿ ಹಾಗೂ ದೇವೀ ಭಾಗವತದಲ್ಲಿ ಹೇಳಿದಂತೆ

“गुरुशांतिं विधायैव पुत्रलाभो भवेद् ध्रुवम्। पितृदेवप्रसादेन वंशवृद्धिः प्रजायते॥”

ಶುಕ್ರ ಬಲ ಪಡಿಸಿ

ಶುಕ್ರವನ್ನು ಬಲಪಡಿಸಲು ಶುಕ್ರವಾರದಂದು ದೇವಿ ಲಕ್ಷ್ಮೀ-ವಿಷ್ಣು ಪೂಜೆ ಮಾಡಿ. , ಶುಕ್ರ ಮಂತ್ರ ಜಪಿಸಿ

ರತ್ನಪರೀಕ್ಷಾ ಗ್ರಂಥದ ಪ್ರಕಾರ

“शुक्रशक्तिप्रदं वज्रं बीजदोषं व्यपोहति। दाम्पत्ये शांतिमायाति सन्तानं च प्रजायते॥

ಶ್ಲೋಕದ ಅರ್ಥ

ವಜ್ರ ರತ್ನವು ಶುಕ್ರ ಗ್ರಹದ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ವೀರ್ಯದ ದೋಷಗಳನ್ನು (ಬೀಜದೋಷ) ನಿವಾರಿಸುತ್ತದೆ. ಇದರಿಂದ ದಾಂಪತ್ಯ ಜೀವನದಲ್ಲಿ ಶಾಂತಿ ಉಂಟಾಗುತ್ತದೆ. ಶುಕ್ರ ಶಕ್ತಿ ಸುಧಾರಣೆಯಿಂದ ಸಂತಾನ ಪ್ರಾಪ್ತಿ ಸಾಧ್ಯವಾಗುತ್ತದೆ.

ಸರ್ಪದೋಷ ನಿವಾರಣೆ: ನಾಗಬಲಿ ಅಥವಾ ನಾಗಪ್ರತಿಷ್ಠೆ ಯಜ್ಞ ಮಾಡಿ. ನಾಗರ ಬಿಂಬವನ್ನು ಹಾಲು-ಹೂವಿನಿಂದ ಪೂಜಿಸಿ, ನಾಗ ಮಂತ್ರ ಜಪಿಸಿ: “”ಓಂ ನಮೋ ನಾಗಕುಲಾಯ ಧರಣೀಸುತಾಯ ಅನಂತಾಯ ಸರ್ಪರಾಜಾಯ ಸ್ವಾಹಾ॥

ಗರುಡ ಪುರಾಣದಲ್ಲಿ ಸೂಚಿಸಲಾಗಿದೆ

नागबलिं समाचर्य पितृदोषं व्यपोहयेत्। अष्टनागप्रसादेन पुत्रपौत्रान् प्रपद्यत ||

ನಾಗಬಲಿ ಯಜ್ಞವನ್ನು ಸರಿಯಾಗಿ ನಡೆಸಿದರೆ, ಪಿತೃದೋಷಗಳು ಪಿತೃಗಳ ಅಸಂತುಷ್ಟಿ ನಿವಾರಣೆಯಾಗುತ್ತದೆ. ಅಷ್ಟನಾಗಗಳ (ಎಂಟು ಪ್ರಮುಖ ಸರ್ಪದೇವತೆಗಳ) ಪ್ರಸಾದದಿಂದ, ಪುತ್ರ-ಪೌತ್ರರ ಸಂತಾನ ಸುಖ ಲಭಿಸುತ್ತದೆ.

ವಾಸ್ತು ದೋಷ ಪರಿಹಾರ

ವಾಸ್ತು ಪುರುಷನನ್ನು ತೃಪ್ತಿಪಡಿಸಲು ವಾಸ್ತು ಹೋಮ ಮಾಡಿ. ದಕ್ಷಿಣ-ಪಶ್ಚಿಮ ದಿಕ್ಕಿನಲ್ಲಿ ತುಳಸಿ ಗಿಡ ನೆಡಿ. ವಾಸ್ತು ಸಾರವಲಿಯ ಪ್ರಕಾರ:

वास्तुदोषं समुत्पन्नं होमैः शांतिं प्रयच्छति। तुलसीपूजनाच्चैव पुत्रदाः शुभदाः सदा॥

→ ಉದ್ಭವಿಸಿದ ವಾಸ್ತು ದೋಷಗಳನ್ನು ಹೋಮ(ಯಜ್ಞ) ಮಾಡಿ ಶಾಂತಗೊಳಿಸಬಹುದು. ತುಳಸಿ ಪೂಜೆಯಿಂದ ಸಂತಾನ ಪ್ರಾಪ್ತಿ ಮತ್ತು ಶುಭಕರ ಫಲಗಳು ಶಾಶ್ವತವಾಗಿ ಲಭಿಸುತ್ತವೆ. ಇದರಿಂದ ವಾಸ್ತು ದೋಷಗಳು ನಿವಾರಣೆಯಾಗಿ, ಕುಟುಂಬದಲ್ಲಿ ಸಮೃದ್ಧಿ ಮತ್ತು ಸುಖ-ಶಾಂತಿ ನೆಲೆಸುತ್ತದೆ.

ದೇವತಾ ಪ್ರಸಾದ

ಕುಲದೇವತೆ, ಇಷ್ಟದೇವತೆ ಅಥವಾ ಶ್ರೀ ಸಂತಾನ ಗೋಪಾಲನ ನಿತ್ಯ ಪೂಜೆ ಮಾಡಿ. ದೇವೀ ಭಾಗವತದಲ್ಲಿ ಹೇಳಿದಂತೆ

“सन्तानगोपालसेवा यः कुर्यात् भक्तिसंयुतः। तस्य पुत्रं प्रदास्यामि नात्र कार्या विचारणा॥

ಸಂತಾನ ಗೋಪಾಲನನ್ನು ಭಕ್ತಿಯಿಂದ ನಿಯಮಿತವಾಗಿ ಪೂಜಿಸುವವರಿಗೆ, ಅವನು ಪುತ್ರರತ್ನವನ್ನು ಪ್ರದಾನ ಮಾಡುತ್ತಾನೆ ಇದರಲ್ಲಿ ಯಾವುದೇ ಸಂದೇಹ ಅಥವಾ ವಿಚಾರಣೆ ಅನಾವಶ್ಯಕ

ಇದನ್ನೂ ಓದಿ: ಅಕ್ಷಯ ತೃತೀಯದಂದು ಅಪರೂಪದ ಯೋಗಗಳು; ಈ ಮೂರು ರಾಶಿಗೆ ಅದೃಷ್ಟದ ಸುರಿಮಳೆ

ಚಂದ್ರ-ಸೂರ್ಯ ಶಾಂತಿ

ಸೋಮವಾರದಂದು ಶಿವಲಿಂಗಕ್ಕೆ ಸಹಸ್ರನಾಮದಿಂದ ಪೂಜಿಸಿ ಅಥವಾ ಕ್ಷೀರಾಭಿಷೇಕ ಮಾಡಿಸಿ. ಸೂರ್ಯನಿಗೆ ಆದಿತ್ಯ ಹೃದಯ ಸ್ತೋತ್ರ ಪಠಿಸಿ. ಫಲ ದೀಪಿಕಾ ಗ್ರಂಥ ಪ್ರಕಾರ

चन्द्रार्कौ यदि दुर्बलौ स्यातां तत्र शिवार्चनम्। प्रजासौख्यप्रदं दिव्यं सन्तानं च प्रजायते॥

ಶ್ಲೋಕದ ತಾತ್ಪರ್ಯ

ಚಂದ್ರ-ಸೂರ್ಯರು ದುರ್ಬಲರಾಗಿದ್ದರೆ, ಶಿವಪೂಜೆಯಿಂದ ಸುಖಕರವಾದ ದಿವ್ಯ ಸಂತಾನ ಲಭಿಸುತ್ತದೆ. ಶಿವನ ಕೃಪೆಯಿಂದ ಸಂತಾನಹೀನತೆ ನಿವಾರಣೆಯಾಗಿ, ಕುಟುಂಬದಲ್ಲಿ ಆನಂದ ಮತ್ತು ಸಮೃದ್ಧಿ ತುಂಬುತ್ತದೆ.

ಯಾವುದೇ ಸಮಸ್ಯೆಗಳು ಇರಲಿ ಒಮ್ಮೆ ವಯಕ್ತಿಕ ಜಾತಕ ಪರಿಶೀಲನೆ ಅಥವಾ ಜನ್ಮ ವಿವರಗಳು ಲಭ್ಯ ಇಲ್ಲದಿದ್ದರೆ ಪ್ರಶ್ನ ಶಾಸ್ತ್ರ ಮುಖಾಂತರ ಪರಿಹಾರ ತಿಳಿದುಕೊಳ್ಳುವುದು ಉತ್ತಮ ಮಾರ್ಗ.

ವಾಯು ಪುರಾಣವು ಹೇಳುವಂತೆ

“कर्मणा मनसा वाचा यः शुद्धः सन्ततिं लभेत्। ईश्वरप्रेरितो जन्तुः पुत्रपौत्रैः सुखी भवेत्॥

ಕರ್ಮ, ಮನ ಮತ್ತು ವಾಣಿಯಿಂದ ಶುದ್ಧನಾದವನು ಸಂತಾನಸುಖ ಪಡೆಯುತ್ತಾನೆ ಆದ್ದರಿಂದ, ಜಾತಕದ ದೋಷಗಳನ್ನು ಗ್ರಹ ಶಾಂತಿಯಿಂದ ನಿವಾರಿಸಿ, ಸದ್ಧರ್ಮದಿಂದ ಜೀವನವನ್ನು ನಡೆಸಲಿ.

ಆಚಾರ್ಯ ಶ್ರೀ ವಿಠ್ಠಲ್ ಭಟ್

9113295125

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಾಜ್ಯ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ: ಕಾಗೇರಿ
ರಾಜ್ಯ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ: ಕಾಗೇರಿ
ಅಪಾರ್ಟ್​ಮೆಂಟ್​​ನಲ್ಲಿ ಬೆಂಕಿ ಅವಘಡ; ಮಹಡಿಯಿಂದ ಹಾರಿದ ತಂದೆ, ಮಕ್ಕಳ ಸಾವು
ಅಪಾರ್ಟ್​ಮೆಂಟ್​​ನಲ್ಲಿ ಬೆಂಕಿ ಅವಘಡ; ಮಹಡಿಯಿಂದ ಹಾರಿದ ತಂದೆ, ಮಕ್ಕಳ ಸಾವು
ಅಪ್ಪು ಇದ್ದ ಕಡೆ ನಗುವಿಗೆಲ್ಲಿ ಕೊರತೆ, ಅಪ್ಪು ಹಳೆ ವಿಡಿಯೋ
ಅಪ್ಪು ಇದ್ದ ಕಡೆ ನಗುವಿಗೆಲ್ಲಿ ಕೊರತೆ, ಅಪ್ಪು ಹಳೆ ವಿಡಿಯೋ
ಜಾತಿಗಣತಿಯ ಮರುಸರ್ವೇ ಮಾಡಿಸಲು ಹೈಕಮಾಂಡ್ ಸೂಚಿಸಿದೆ: ಸಿದ್ದರಾಮಯ್ಯ
ಜಾತಿಗಣತಿಯ ಮರುಸರ್ವೇ ಮಾಡಿಸಲು ಹೈಕಮಾಂಡ್ ಸೂಚಿಸಿದೆ: ಸಿದ್ದರಾಮಯ್ಯ
ಶಾಂತಿಯುತವಾಗಿ ಹೋರಾಟ ಮಾಡುವ ವಾಟಾಳ್ ಇವತ್ತು ಭಿನ್ನವಾಗಿ ಕಂಡರು
ಶಾಂತಿಯುತವಾಗಿ ಹೋರಾಟ ಮಾಡುವ ವಾಟಾಳ್ ಇವತ್ತು ಭಿನ್ನವಾಗಿ ಕಂಡರು
ಸಿದ್ದರಾಮಯ್ಯ ಬಚಾವಾಗಲು ಸಾಧ್ಯವೇ ಇಲ್ಲ ಎಂದ ಸ್ನೇಹಮಯಿ ಕೃಷ್ಣ
ಸಿದ್ದರಾಮಯ್ಯ ಬಚಾವಾಗಲು ಸಾಧ್ಯವೇ ಇಲ್ಲ ಎಂದ ಸ್ನೇಹಮಯಿ ಕೃಷ್ಣ
ಜಾತಿ ಗಣತಿ ವರದಿ, ಕಾಲ್ತುಳಿತದ ಬಗ್ಗೆ CM-DCMಗೆ ಹೈಕಮಾಂಡ್ ಖಡಕ್​ ಸೂಚನೆ
ಜಾತಿ ಗಣತಿ ವರದಿ, ಕಾಲ್ತುಳಿತದ ಬಗ್ಗೆ CM-DCMಗೆ ಹೈಕಮಾಂಡ್ ಖಡಕ್​ ಸೂಚನೆ
ಭೂಮಿಕ್ ಸಾಕುತ್ತಿದ್ದ ನಾಯಿ ಅನ್ನ-ನೀರು ಬಿಟ್ಟು ರೋದಿಸುತ್ತಿದೆ: ಅಶೋಕ
ಭೂಮಿಕ್ ಸಾಕುತ್ತಿದ್ದ ನಾಯಿ ಅನ್ನ-ನೀರು ಬಿಟ್ಟು ರೋದಿಸುತ್ತಿದೆ: ಅಶೋಕ
ಪುನಾರಚನೆ ಬಗ್ಗೆ ಗೊತ್ತಿಲ್ಲ, ನನಗೆ ಸಚಿವನಾಗುವ ಆಕಾಂಕ್ಷೆ ಇಲ್ಲ: ರಾಜು ಕಾಗೆ
ಪುನಾರಚನೆ ಬಗ್ಗೆ ಗೊತ್ತಿಲ್ಲ, ನನಗೆ ಸಚಿವನಾಗುವ ಆಕಾಂಕ್ಷೆ ಇಲ್ಲ: ರಾಜು ಕಾಗೆ
ಸ್ಟೇಡಿಯಂನಲ್ಲಿ ಕಾರ್ಯಕ್ರಮ ನಡೆಯಲು ಶಿವಕುಮಾರ್ ಕಾರಣ: ವಿಜಯೇಂದ್ರ
ಸ್ಟೇಡಿಯಂನಲ್ಲಿ ಕಾರ್ಯಕ್ರಮ ನಡೆಯಲು ಶಿವಕುಮಾರ್ ಕಾರಣ: ವಿಜಯೇಂದ್ರ