Astrology: ನಿಮ್ಮ ಸ್ವತಂತ್ರ ಯೋಚನೆಯಿಂದ ಯಶಸ್ಸು ಸಿಗಲಿದೆ

ರಾಶಿ ಭವಿಷ್ಯ ಬುಧವಾರ(ಆ. 28): ಇಂದು ನಿಮಗೆ ಹಿರಿಯರ ಆಸೆಯನ್ನು ಪೂರೈಸಿದ ಸಂತೃಪ್ತಿ ಇರುವುದು. ಧನವ್ಯವಹಾರವನ್ನು ಜಾಗರೂಕತೆಯಿಂದ ಮಾಡಿ. ವ್ಯಾಪರವು ಮಧ್ಯಮಫಲದಿಂದ ಇರಲಿದೆ. ಹೆಚ್ಚು ಪರಿಶ್ರಮದಿಂದ ನಿಮಗೆ ಆಯಾಸವಾದೀತು.ಹಾಗಾದರೆ ಆಗಸ್ಟ್​ 28ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Astrology: ನಿಮ್ಮ ಸ್ವತಂತ್ರ ಯೋಚನೆಯಿಂದ ಯಶಸ್ಸು ಸಿಗಲಿದೆ
ದಿನಭವಿಷ್ಯ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 28, 2024 | 12:30 AM

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಮಘಾ, ಮಾಸ: ಶ್ರಾವಣ, ಪಕ್ಷ: ಕೃಷ್ಣ, ವಾರ: ಬುಧ, ತಿಥಿ: ದಶಮೀ, ನಿತ್ಯನಕ್ಷತ್ರ: ಆರ್ದ್ರಾ, ಯೋಗ: ವ್ಯಾಘಾತ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 21 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:45 ಗಂಟೆ, ರಾಹು ಕಾಲ ಮಧ್ಯಾಹ್ನ 12:34 ರಿಂದ 14:07, ಯಮಘಂಡ ಕಾಲ ಬೆಳಗ್ಗೆ 07:55 ರಿಂದ 09:28ರ ವರೆಗೆ, ಗುಳಿಕ ಕಾಲ 11:01 ರಿಂದ12:34ರ ವರೆಗೆ.

ಧನು ರಾಶಿ : ನಿಮಗೆ ಇಂದು ಮುಖ್ಯ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಸಾಧ್ಯವಾಗದು. ನಿಮ್ಮ ಹೇಳಿಕೆಗಳು ಮತ್ಯಾರಿಗೋ ಅಪಾಯವನ್ನು ಕೊಡುವುದು. ನಿಮ್ಮ ನಡತೆಯನ್ನು ನೀವೇ ಗಮನಿಸಿಕೊಂಡು ಸರಿ ಮಾಡಿಕೊಳ್ಳುವುದು ಉತ್ತಮ. ನಿಮ್ಮ ಕಾರ್ಯ ವೈಫಲ್ಯಕ್ಕೆ ಇನ್ನೊಬ್ಬರನ್ನು ದೂರುವುದು ಸರಿಯಲ್ಲ. ನಿಮ್ಮ ಮಾತು ಔಚಿತ್ಯಪೂರ್ಣವಾಗಿ ಇರಲಿ. ಕಳೆದು ಕೊಂಡ ಮಾನವನ್ನು ಮರಳಿ ಪಡೆಯಲಾಗದು. ಒಂದೇ ಕಾರ್ಯವನ್ನು ನಂಬಿರುವುದು ಕಷ್ಟ. ನಿಮ್ಮ ವೃತ್ತಿಯ ಕ್ಷೇತ್ರದಲ್ಲಿ ನಿಮಗೆ ಸ್ವಲ್ಪ ಅಗೌರವವೂ ಇರಬಹುದು. ಆರ್ಥಿಕತೆಯನ್ನು ನೀವು ಬೆಳೆಸಿಕೊಳ್ಳಲು ಹೆಚ್ಚು ಶ್ರಮವು ಅವಶ್ಯಕ. ಸಹೋದ್ಯೋಗಿಯನ್ನು ನೀವು ಮಿತ್ರರನ್ನಾಗಿ ಪಡೆಯುವಿರಿ. ಇನ್ನೊಬ್ಬರಿಂದ ಒಳ್ಳೆಯದನ್ನು ಕಲಿಯುವಿರಿ. ಅವಸರಕ್ಕೆ ಒಳಗಾಗಿ ಏನನ್ನಾದರೂ ಮಾಡಿಕೊಂಡೀರ, ಜಾಗರೂಕರಾಗಿರಿ. ಸರಳ ಜೀವನವನ್ನು ನೀವು ಇಷ್ಟಪಡುವಿರಿ. ದುರಭ್ಯಾಸವನ್ನು ರೂಢಿಸಿಕೊಳ್ಳುವ ಸಂಭವವು ಬರಬಹುದು.

ಮಕರ ರಾಶಿ : ಇಂದು ನಿಮ್ಮ ವಿವಾಹದ ಇಚ್ಛೆಯನ್ನು ಮನೆಯಲ್ಲಿ ಹೇಳುವಿರಿ. ಸರ್ಕಾರಿ ಕೆಲಸದಲ್ಲಿ ನಿಮಗೆ ಇಂದು ಹಿನ್ನಡೆಯಾಗಲಿದೆ. ಸೋಲನ್ನು ಒಪ್ಪಿಕೊಳ್ಳಲು ನೀವು ಹಿಂದೇಟು ಹಾಕುವಿರಿ. ದುರಭ್ಯಾಸವನ್ನು ನೀವು ಮಿತ್ರರಿಂದ ಪಡೆಯುವಿರಿ. ನೀವು ಮಾಡಿದ ಸಹಾಯವು ನಿಮಗೇ ಬರುವುದು. ಎಲ್ಲರೆದುರು ಮಾತನಾಡುವ ಸಂದರ್ಭ ಬರಲಿದ್ದು ನೀವು ಮುಜಗರಗೊಳ್ಳುವಿರಿ. ವ್ಯವಹಾರದ ಕಾರಣದಿಂದ ಆರೋಗ್ಯದ ಹದವು ತಪ್ಪಬಹುದು. ನಿಮ್ಮ ಮೇಲೆ ಸಿಟ್ಟಾಗುವ ಸಾಧ್ಯತೆಯೂ ಇದೆ. ಹೆಚ್ಚಿನ ಸಮಯವನ್ನು ಇಂದು ಪ್ರಯಾಣದಲ್ಲಿಯೇ ಕಳೆಯುವಿರಿ. ಅಸ್ವಾಭಾವಿಕ‌ ನಡೆಗಳಿಂದ ನಿಮ್ಮವರಿಗೆ ಅನುಮಾನ ಬರಬಹುದು. ತಂದೆಯ ಮಾತನ್ನು ನೀವು ಖಂಡಿಸುವಿರಿ. ಶತ್ರುಗಳ ಭಯವು ನಿಮ್ಮನ್ನು ಕಾಡಬಹುದು.‌ ಯಾರಿಂದಲೋ ಸಿಕ್ಕ ವಸ್ತುಗಳನ್ನು ಜೋಪಾನ ಮಾಡುವಿರಿ. ಈ ದಿನ ನೀವು ಶಾರೀರಿಕ ಕಾಳಜಿಯನ್ನು ಹೆಚ್ಚು ಮಾಡಬೇಕಾದೀತು. ಸಂಗಾತಿಯ ಎದುರು ಏನನ್ನೂ ಹೇಳದೇ ಸುಮ್ಮನಿರುವಿರಿ.

ಕುಂಭ ರಾಶಿ : ನಿಮ್ಮ ಸ್ವತಂತ್ರ ಯೋಚನೆಯಿಂದ ಯಶಸ್ಸು ಸಿಗಲಿದೆ. ಆರ್ಥಿಕತೆಯ ಪ್ರಗತಿಗೆ ಯಾರದ್ದಾದರೂ ಸಹಕಾರ ಪಡೆಯುವಿರಿ. ತುರ್ತಾಗಿ ಹಣದ ಅಗತ್ಯ ಕಂಡುಬಂದು, ಸಾಲ ಮಾಡಬೇಕಾಗಿ ಬರುವುದು. ಅಹಂಕಾರದಿಂದ ಕೂಡಿದ ಮನಸ್ಸಿನ ಜೊತೆ ಯಾರೂ ಬರುವುದಿಲ್ಲ. ನೀವು ಒಂಟಿಯಾಗುವಿರಿ. ಸರಿಯಾದ ವಿಚಾರವನ್ನು ತಿಳಿದು ಮಾತನಾಡುವುದು ಉತ್ತಮ. ಸ್ನೇಹಿತರನ್ನು ನೀವು ಕಳೆದುಕೊಳ್ಳುವಿರಿ. ನಿಮ್ಮ ಕಾರಣದಿಂದ ಕುಟುಂಬ ನೆಮ್ಮದಿಯಿಂದ ಇದೆ ಎಂದು ಭಾವಿಸುವರು. ಯಾವ ಕ್ಷಣವನ್ನೂ ನೀವು ಮನಸ್ಸು ಖಾಲಿಯಾಗದಂತೆ ನೋಡಿಕೊಳ್ಳಿ. ಆರ್ಥಿಕ ಸಹಾಯಕ್ಕೆ ಸಿಗುವವರು ನಿಮ್ಮಿಂದ ಮತ್ತೇನನ್ನೋ ಬಯಸುವರು. ನಿಮ್ಮ ಮಾತು ನೇರವಾಗಿರಲಿ. ಅರ್ಥವತ್ತಾಗಿರಲಿ. ಇಂದು ನಿಮ್ಮ ಆಪ್ತರನ್ನು ಕಡೆಗಣಿಸುವಿರಿ. ಅಪರಿಚಿತರ ಜೊತೆ ಅನುಚಿತ ವರ್ತನೆ ಬೇಡ. ನಿಮ್ಮ ಸಿದ್ಧಾಂತವನ್ನು ಇನ್ನೊಬ್ಬರ ಮೇಲೆ ಹೇರುವುದು ಬೇಡ. ಶುಭ ಸುದ್ದಿಯು ನಿಮ್ಮನ್ನು ಪ್ರೋತ್ಸಾಹಿಸಬಹುದು. ನಿಮ್ಮ ಗುಣವನ್ನು ಅಪಾರ್ಥ ಮಾಡಿಕೊಂಡಾರು.

ಮೀನ ರಾಶಿ : ಇಂದು ನಿಮಗೆ ಹಿರಿಯರ ಆಸೆಯನ್ನು ಪೂರೈಸಿದ ಸಂತೃಪ್ತಿ ಇರುವುದು. ಧನವ್ಯವಹಾರವನ್ನು ಜಾಗರೂಕತೆಯಿಂದ ಮಾಡಿ. ವ್ಯಾಪರವು ಮಧ್ಯಮಫಲದಿಂದ ಇರಲಿದೆ. ಹೆಚ್ಚು ಪರಿಶ್ರಮದಿಂದ ನಿಮಗೆ ಆಯಾಸವಾದೀತು. ವಿಶ್ರಾಂತಿಯನ್ನು ಒಡೆದು ಮುಂದುವರಿಯುವುದು ಉತ್ತಮ. ಯೋಜಿತ ಕಾರ್ಯದಲ್ಲಿ ಅತಿಯಾದ ಫಲಾಪೇಕ್ಷೆ ಬೇಡ. ವಿದ್ಯಾರ್ಥಿಗಳು ತಮ್ಮ ಕ್ಷೇತ್ರದಲ್ಲಿ ಖುಷಿಯಿಂದ ತೊಡಗಿಕೊಳ್ಳುವರು. ಎಲ್ಲವನ್ನೂ ನಿಮ್ಮ ಮೂಲಕವೇ ನಡೆಯಬೇಕು ಎಂಬ ಮಾನಸಿಕ ಸ್ಥಿತಿಯು ಒಳ್ಳೆಯದಲ್ಲ. ನಿಮ್ಮ ಜವಾಬ್ದಾರಿಯ‌ ಕೆಲಸಗಳು ಸರಿಯಾಗಿ ನಡೆತುತ್ತಿದೆಯೇ ಎಂಬುದನ್ನು ಗಮನಸಿ. ಸರ್ಕಾರಿ ಕೆಲಸವನ್ನು ಅಲ್ಲಿರುವ ಆಪ್ತರ ಮೂಲಕ ಮಾಡಿಸಿಕೊಳ್ಳುವಿರಿ. ಆಪ್ತರ ಜೊತೆ ಹಳೆಯ ನೆನಪನ್ನು ಹಂಚಿಕೊಳ್ಳುವಿರಿ. ಸೌಂದರ್ಯಕ್ಕೆ ಹೆಚ್ಚು ಮಹತ್ವವನ್ನು ಕೊಡಲಿದ್ದೀರಿ. ಮನೆಯವರ ಮನ ನೋಯಿಸಿ ಕಾರ್ಯ ಮಾಡಲಾಗದು. ಪ್ರತಿಯೊಂದು ಕ್ಷಣವನ್ನೂ ಆನಂದಿಸುವಿರಿ. ಹಿಂದಿನ ತಪ್ಪುಗಳು ಪಾಠವಾಗುವುದು.

-ಲೋಹಿತ ಹೆಬ್ಬಾರ್ – 8762924271 (what’s app only)

ಬಂದ್​​ ಗತಿ ಕಾಣಿಸುತ್ತೇವೆ: ಗೃಹ ಸಚಿವ ಜಿ ಪರಮೇಶ್ವರ್​ ಹೀಗೆ ಹೇಳಿದ್ದೇಕೆ?
ಬಂದ್​​ ಗತಿ ಕಾಣಿಸುತ್ತೇವೆ: ಗೃಹ ಸಚಿವ ಜಿ ಪರಮೇಶ್ವರ್​ ಹೀಗೆ ಹೇಳಿದ್ದೇಕೆ?
ಜೈಲಿಂದ ಹೊರಬಂದ ಅರವಿಂದ್ ಕೇಜ್ರಿವಾಲ್​ಗೆ ಹೂಮಳೆ ಸುರಿಸಿ ಅದ್ದೂರಿ ಸ್ವಾಗತ
ಜೈಲಿಂದ ಹೊರಬಂದ ಅರವಿಂದ್ ಕೇಜ್ರಿವಾಲ್​ಗೆ ಹೂಮಳೆ ಸುರಿಸಿ ಅದ್ದೂರಿ ಸ್ವಾಗತ
ಮಹಿಳಾ ಅಧಿಕಾರಿಯ ಕೂದಲು ಹಿಡಿದು ಎಳೆದಾಡಿದ ಹೆಂಗಸು; ವಿಡಿಯೋ ವೈರಲ್
ಮಹಿಳಾ ಅಧಿಕಾರಿಯ ಕೂದಲು ಹಿಡಿದು ಎಳೆದಾಡಿದ ಹೆಂಗಸು; ವಿಡಿಯೋ ವೈರಲ್
ದರ್ಶನ್​ಗೆ ಕೆಟ್ಟ ಸಮಯ ನಡೆಯುತ್ತಿದೆ, ಫೆಬ್ರವರಿಗೆ ಸರಿಹೋಗುತ್ತೆ: ಕೆ ಮಂಜು
ದರ್ಶನ್​ಗೆ ಕೆಟ್ಟ ಸಮಯ ನಡೆಯುತ್ತಿದೆ, ಫೆಬ್ರವರಿಗೆ ಸರಿಹೋಗುತ್ತೆ: ಕೆ ಮಂಜು
ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು:ವಿಡಿಯೋ ನೋಡಿ
ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು:ವಿಡಿಯೋ ನೋಡಿ
ಸಚಿವ ಸೋಮಣ್ಣನವರಿಗೆ ಹಾಕಿದ್ದ ಸೇಬು ಹಾರಕ್ಕಾಗಿ ಮುಗಿಬಿದ್ದ ಜನ!
ಸಚಿವ ಸೋಮಣ್ಣನವರಿಗೆ ಹಾಕಿದ್ದ ಸೇಬು ಹಾರಕ್ಕಾಗಿ ಮುಗಿಬಿದ್ದ ಜನ!
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ ದಿನಾಂಕ ಯಾವುದು ಗೊತ್ತಾ?
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ ದಿನಾಂಕ ಯಾವುದು ಗೊತ್ತಾ?
ಮಸೀದಿ ಮುಂದೆ ಪಟಾಕಿ ಸಿಡಿಸಿದ್ದಕ್ಕೆ ಹಿಂದೂ ಕಾರ್ಯಕರ್ತರ ವಿರುದ್ಧ ಎಫ್​ಐಆರ್
ಮಸೀದಿ ಮುಂದೆ ಪಟಾಕಿ ಸಿಡಿಸಿದ್ದಕ್ಕೆ ಹಿಂದೂ ಕಾರ್ಯಕರ್ತರ ವಿರುದ್ಧ ಎಫ್​ಐಆರ್
ಆರ್​ಎಸ್ಎಸ್, ಬಿಜೆಪಿ ವಿರುದ್ಧ ಎಂ ಲಕ್ಷ್ಮಣ್ ಗಂಭೀರ ಆರೋಪ
ಆರ್​ಎಸ್ಎಸ್, ಬಿಜೆಪಿ ವಿರುದ್ಧ ಎಂ ಲಕ್ಷ್ಮಣ್ ಗಂಭೀರ ಆರೋಪ
ವಿಡಿಯೋ ನೋಡಿ - ಪಪ್ಪಾಯಿ ಹಣ್ಣಿನಲ್ಲಿ ವಿಚಿತ್ರ ವಿನಾಯಕ!
ವಿಡಿಯೋ ನೋಡಿ - ಪಪ್ಪಾಯಿ ಹಣ್ಣಿನಲ್ಲಿ ವಿಚಿತ್ರ ವಿನಾಯಕ!