AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gemini Yearly Horoscope 2024: ಮಿಥುನ ರಾಶಿ ವರ್ಷ ಭವಿಷ್ಯ: ಆರೋಗ್ಯ ಕೆಡಬಹುದು; ಧನ್ವಂತರಿಯ ಉಪಾಸನೆಯೇ ಪರಿಹಾರ

ಮಿಥುನ ರಾಶಿ ವರ್ಷ ಭವಿಷ್ಯ 2024: ಮಿಥುನ ರಾಶಿಯು ರಾಶಿ ಚಕ್ರದ ಮೂರನೆ ರಾಶಿಯಾಗಿದೆ.‌ ಬುಧ ರಾಶ್ಯಾಧಿಪತಿ. ವರ್ಷಾರಂಭದಲ್ಲಿ ಆರೋಗ್ಯ ಕೆಡಬಹುದು, ಧನ್ವಂತರಿಯ ಉಪಾಸನೆ ಮಾಡಿ ಸಮಸ್ಯೆ ಪರಿಹಾರ ಮಾಡಿಕೊಳ್ಳಬಹುದು.

Gemini Yearly Horoscope 2024: ಮಿಥುನ ರಾಶಿ ವರ್ಷ ಭವಿಷ್ಯ: ಆರೋಗ್ಯ ಕೆಡಬಹುದು; ಧನ್ವಂತರಿಯ ಉಪಾಸನೆಯೇ ಪರಿಹಾರ
Gemini Yearly Horoscope 2024
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Dec 11, 2023 | 4:22 PM

Share

ಮಿಥುನ ರಾಶಿಯು ರಾಶಿ ಚಕ್ರದ ಮೂರನೆ ರಾಶಿಯಾಗಿದೆ.‌ ಇದರ ಅಧಿಪತಿ ಬುಧನಾಗಿದ್ದಾನೆ. ವರ್ಷಾರಂಭದಲ್ಲಿ ಬುಧನು ಷಷ್ಠದಲ್ಲಿ ಇದ್ದು ನಿಮ್ಮ ಆರೋಗ್ಯವನ್ನು ಕೆಡಿಸುವನು. ಧನ್ವಂತರಿಯ ಉಪಾಸನೆಯನ್ನು ಹೆಚ್ಚು ಮಾಡುವುದು ಸೂಕ್ತ. ಈ ವರ್ಷ ಎಲ್ಲ ಗ್ರಹರೂ ಶುಭವಾದ ಏಕಾದಶ ಸ್ಥಾನದ ಫಲವನ್ನೇ ಕೊಡಲಿದ್ದಾರೆ.

2024ರಲ್ಲಿ ಮಿಥುನ ರಾಶಿಯವರ ಫಲ

ಈ ವರ್ಷ ಮಧ್ಯವಾಧಿಯ ವರೆಗೆ ಸುಖ, ನೆಮ್ಮದಿ, ಸಂಪತ್ತು, ಅಧಿಕಾರಗಳನ್ನು ಪಡೆದುಕೊಳ್ಳುವ ಅವಕಾಶವು ಇರಲಿದೆ. ಅನಂತರ ಇದು ಕಷ್ಟವಾಗುವುದು. ಸೋಮವಾರದಿಂದ ಆರಂಭವಾಗಲಿದೆ ಈ ವರ್ಷ. ಚಂದ್ರನಿಗೆ ಬುಧನು ಮಿತ್ರನಾದರೂ ಬೋಧನಿಗೆ ಚಂದ್ರನು ಶತ್ರು. ಹಾಗಾಗಿ ಈ ರಾಶಿಯಲ್ಲಿ ಪರಸ್ಪರ ವೈಮನಸ್ಯವು ಆಗಾಗ ಕಾಣಿಸಿಕೊಳ್ಳುವುದು.

ಮಿಥುನ ರಾಶಿಯವರ ಧನಾಗಮನ:

ಧನಸ್ಥಾನಾಧಿಪತಿಯು ಚಂದ್ರನಾಗಿದ್ದು ಸ್ತ್ರೀಯರಿಂದ ಸಂಪತ್ತು ಸಿಗುವ ಸಾಧ್ಯತೆ ಇದೆ. ಇದು ನಿಮಗೆ ಇಷ್ಟವಾಗದೇ ಇರಬಹುದು. ಇನ್ನು ಏಕಾದಶಾಧಿಪತಿಯಾದ ಕುಜನು ವರ್ಷಾರಂಭದಲ್ಲಿ ಉತ್ತಮ ಸ್ಥಾನದಲ್ಲಿ ಇರುವ ಕಾರಣ ಹಣಕಾಸಿಗೆ ಏಪ್ರಿಲ್‌ವರೆಗೆ ತೊಂದರೆಯಾಗದು.

ಮಿಥುನ ರಾಶಿಯವರ ಪ್ರೀತಿ ಮತ್ತು ವಿವಾಹ:

ಸಪ್ತಮದ ಅಧಿಪತಿ ಗುರುವು ಏಕಾದಶದಲ್ಲಿ ಇರುವ ಕಾರಣ ಆದಷ್ಟು ಶೀಘ್ರವಾಗಿ ವಿವಾಹವನ್ನು ಮುಗಿಸಿಕೊಳ್ಳಿ. ಪ್ರೀತಿಯನ್ನು ಮಾಡುತ್ತಿರುವವರೂ ಆಪ್ತರ ಬಳಿ ಹೇಳಿ ಒಪ್ಪಿಗೆ ಪಡೆದು ವಿವಾಹವಾಗುವುದು ಸೂಕ್ತ. ಮುಂದೂಡಿದರೆ ನಿಮಗೇ ಕಷ್ಟವಾಗಬಹುದು. ಮತ್ತು ಉತ್ತಮ ಸಮಯವೂ ಸದ್ಯಕ್ಕೆ ಇರದು.

ಮಿಥುನ ರಾಶಿಯವರ ವೃತ್ತಿ:

ವೃತ್ತಿಯಲ್ಲಿ ಸದ್ಯಕ್ಕೆ ಯಾವುದೇ ತೊಂದರೆ ಕಾಣಿಸದು.‌ ಆದರೆ ದಶಮದಲ್ಲಿ ರಾಹುವಿರುವ ಕಾರಣ ತಂತ್ರಜ್ಞರಿಗೆ, ಶಿಕ್ಷಣಕ್ಷೇತ್ರಲ್ಲಿ ಇರುವವರಿಗೆ ಮಾನಸಿಕ‌ ಕಿರಿಕಿರಿ, ವಾರ್ಗಾವಣೆ, ಓಡಾಟ, ಒತ್ತಡಗಳು ಅಧಿಕವಾಗುವುದು. ಹೆಚ್ಚು ಕೆಲಸ, ಆದರೆ ಸಂಪಾದನೆ ಕಡಿಮೆ ಎನಿಸಬಹುದು.

ಮಿಥುನ ರಾಶಿಯವರ ಆರೋಗ್ಯ ಸ್ಥಿತಿ:

ರಾಶಿಯ ಅಧಿಪತಿ ಷಷ್ಠದಲ್ಲಿ ಇರುವ ಕಾರಣ ದೇಹಕ್ಕೆ ಆಗಾಗ ಒಂದೊಂದೇ ಪೀಡೆಗಳು ಬರಬಹುದು. ಉತ್ತಮ‌ ಚಿಕಿತ್ಸೆಯ ಜೊತೆ, ದೇವತಾರಾಧನೆಯನ್ನು ಹೆಚ್ಚು ಮಾಡುವುದು ಒಳ್ಳೆಯದು. ಬುಧನು ಮೀನರಾಶಿಗೆ ಬಂದಾಗ ದೇಹ ಪೀಡೆಯು ಹೆಚ್ಚಾಗುವುದು. ಸರಿಯಾದ ಚಿಕಿತ್ಸೆಯ ಕಡೆಗೆ ಗಮನವಿರಲಿ.

ಮಿಥುನ ರಾಶಿಯವರ ವಿದೇಶ ಪ್ರಯಾಣ:

ವಿದೇಶಕ್ಕೆ ಹೋಗುವ ಯೋಜನೆ ಇದ್ದರೆ, ಮುಂದೂಡದೇ ಬೇಗ ಹೋಗಿಬನ್ನಿ. ಸಂಶೋಧಕರು, ಕಲಾವಿದರು, ಸಾಧಕರಿಗೆ ವಿದೇಶ ಪ್ರಯಾಣದ ಯೋಗವು ಬರುವುದು. ಮೇ ಒಳಗೆ ಇದೆಲ್ಲವನ್ನು ಪಡೆದು ಸಂತೋಷದಿಂದ ಇರುವಿರಿ.

-ಲೋಹಿತ ಹೆಬ್ಬಾರ್​, ಇಡುವಾಣಿ

Follow Us
Lohitha Hebbar
Lohitha Hebbar

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?